Your Cart

Need help? Call +91 9535015489

📖 Print books shipping available only in India. ✈ Flat rate shipping

ಸಂಸ್ಕೃತದ ಕಂಪು ಪಸರಿಸಿದ ಪದ್ಮಶ್ರೀ ಕೃಷ್ಣಶಾಸ್ತ್ರಿ

ಸಂಸ್ಕೃತದ ಕಂಪು ಪಸರಿಸಿದ ಪದ್ಮಶ್ರೀ ಕೃಷ್ಣಶಾಸ್ತ್ರಿ ‘ಸೋತ್ಸಾಹಾನಾಂ ನಾಸ್ತಿ ಅಸಾಧ್ಯಂ ನರಾಣಾಂ’ ಎಂಬ ಸೂಳ್ನುಡಿ ಇದೆ. ಭಾಸ ಕವಿಯ ಪ್ರತಿಜ್ಞಾ ನಾಟಕದಲ್ಲಿ ಯೌಗಂಧರಾಯಣನೆಂಬ ಮಂತ್ರಿ ಹೇಳುವ ಮಾತಿದು. ‘ಯಾವುದೇ ಸಂದರ್ಭದಲ್ಲೂ ಇದು ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕೂರುವುದು ತರವಲ್ಲ; ಆಗಿಯೇ ಆಗುತ್ತದೆ, ಮಾಡಿಯೇ ತೀರುತ್ತೇನೆ’ ಎಂಬ ಉತ್ಸಾಹದಿಂದ ಮೇಲೆದ್ದರೆ, ಕಾರ್ಯಪ್ರವೃತ್ತರಾದರೆ ಆಗದೆ ಇರುವುದು ಯಾವುದೂ ಇಲ್ಲ ಎಂದರ್ಥ. ತನ್ನ ರಾಜನನ್ನು ಸೆರೆಹಿಡಿದ ಸಂಕಟದ ಸಂದರ್ಭದಲ್ಲಿ ಮಂತ್ರಿ ತನಗೆ ತಾನೇ ಹೇಳಿಕೊಳ್ಳುವ  ಮೇಲಿನ ಮಾತು. ತಂತ್ರಹೂಡಿ ರಾಜನನ್ನು ಆತ […]

ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೋದರಿ ನಿವೇದಿತಾರ ಕೊಡುಗೆ

ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೋದರಿ ನಿವೇದಿತಾರ ಕೊಡುಗೆ ಡಾ. ತೇಜಸ್ವಿನಿ ಯಕ್ಕುಂಡಿಮಠ ‘ಯಾವ ಭಾರತೀಯನೂ ಸಹ ನಿವೇದಿತಾ ಭಾರತವನ್ನು ಪ್ರೀತಿಸಿದ್ದಷ್ಟು ಪ್ರೀತಿಸಬಲ್ಲನೆ ಎಂಬುದು ನನ್ನ ಅನುಮಾನ’ ಎಂದು ಮಹಾನ್ ರಾಷ್ಟ್ರನಾಯಕ ಬಿಪಿನ್ ಚಂದ್ರಪಾಲ ಹೇಳಿದ್ದಾರೆ. ಭಾರತವನ್ನು ಬ್ರಿಟಿಷರಿಂದ ಬಂಧಮುಕ್ತಗೊಳಿಸಲು ಹೊರದೇಶಗಳಲ್ಲಿ ಜಾಗೃತಿಯನ್ನು ಮೂಡಿಸಿ, ಆಜಾದ್ ಹಿಂದ್ ಸೇನೆಯನ್ನು ಕಟ್ಟಿದ ವೀರ ಸೇನಾನಿ ನೇತಾಜಿ ಸುಭಾಷಚಂದ್ರ ಬೋಸರು ಬಂಗಾಳದ ಮಹಾನ್ ಕ್ರಾಂತಿಕಾರಿಯಾದ ಹೇಮಚಂದ್ರ ಘೋಷರವರಿಗೆ ‘ನಾನು ವಿವೇಕಾನಂದರನ್ನು ಅರ್ಥಮಾಡಿಕೊಂಡೆ’ ಎಂದಿದ್ದರಂತೆ. ಅಷ್ಟೇ ಅಲ್ಲ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ದಿಗ್ಗಜರುಗಳಾದ ಬಾಲ […]

ಗಡಿಯಾರ – ಶರಾಯಿ – ಕೋಲು – ಅಸು

ಗಡಿಯಾರ – ಶರಾಯಿ – ಕೋಲು – ಅಸು ಕಾಲಮಹಿಮೆ ಕಾಲನ ಕಿಂಕರರಿಗೆ ಕರುಣೆ ಎಂಬುದಿಲ್ಲ.. ಗಡಿಯಾರದ ಮುಳ್ಳುಗಳೆಂದೂ ಹಿಂದಕ್ಕೆ ಚಲಿಸುವದಿಲ್ಲ… ‘ಮೃತ್ಯುಂಜಯ’ ಎಂದು ಹೆಸರಿಟ್ಟುಕೊಂಡವನೂ ಒಂದಿಲ್ಲ ಒಂದು ದಿನ ಅಸು ನೀಗಲೇ ಬೇಕು…. ಹೆಸರು ‘ತರುಣ’ನೇ ಇರಬಹುದು… ಒಂದಿಲ್ಲ ಒಂದಿನ ಕೋಲು ಹಿಡಿಯಲೇಬೇಕು… ಶರಾಯಿಯ ಕಿಸೆಗಳಲ್ಲಿ ಝಣಗುಟ್ಟುವ ಹಣ ಇದುವರೆಗೂ ಹೆಣವಾಗುವದನ್ನು ತಪ್ಪಿಸಿದ ಒಂದೂ ಉದಾಹರಣೆ ಇಲ್ಲ…..

ಬದುಕಿಗೆ ಭಗವದ್ಗೀತೆ – ಹೇಗಾದರೂ ಮಾಡಿ ಇಂದ್ರಿಯಗಳನ್ನು ಗೆಲ್ಲು, ನನ್ನಲ್ಲಿ ನಿಲ್ಲು

ಬದುಕಿಗೆ ಭಗವದ್ಗೀತೆ – ಹೇಗಾದರೂ ಮಾಡಿ ಇಂದ್ರಿಯಗಳನ್ನು ಗೆಲ್ಲು, ನನ್ನಲ್ಲಿ ನಿಲ್ಲು ಬೇಕಾದಾಗ ಜೀವನ್ಮುಖಿಯಾಗಿ ಬದುಕು ನಡೆಸುತ್ತ, ಕರ್ತವ್ಯಗಳು ಮುಗಿದಾಗ, ಎಲ್ಲದರಿಂದಲೂ ಕಳಚಿಕೊಂಡು ಅಂತರ್ಮುಖನಾಗಿ ವಿರಮಿಸುವ ಕೌಶಲದ ಬಗ್ಗೆ ಶ್ರೀಕೃಷ್ಣನು ವಿವರಿಸುತ್ತಿದ್ದ. ಅದಕ್ಕೆ ಆಮೆಯ ಮುದ್ದು ನಿದರ್ಶನವನ್ನೂ ಕೊಟ್ಟ. ಯಯತೋಹ್ಯಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ I ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂಮನಃ II (ಅಂತರ್ಮುಖವಾಗಲು) ಯತ್ನಿಸುತ್ತಿರುವ ಚತುರ ಮನುಷ್ಯನ ಮನಸ್ಸನ್ನೂ ಕೂಡ (ಅದು ಭೋಗೇಚ್ಛೆಯ ದೌರ್ಬಲ್ಯದಿಂದ ಕೂಡಿರುವುದರಿಂದ) ಬಲವತ್ತರವಾದ ಇಂದ್ರಿಯಗಳು ಅಪಹರಿಸಿಬಿಡುತ್ತವೆ. ಸ್ಥಿತಪ್ರಜ್ಞನಾಗುವುದು ಅಷ್ಟು ಸುಲಭವಲ್ಲ. ನಮ್ಮನ್ನು […]

ಭಾರತೀಯ ಸಂಗೀತ ವಿದ್ಯಾಲಯ ಭಾಗ ೩

ಭಾರತೀಯ ಸಂಗೀತ ವಿದ್ಯಾಲಯ ಭಾಗ ೩ ದಿನಾಂಕ ೦೯/೧೨/೨೦೧೭ ರಂದು ಧಾರವಾಡದ ಸೃಜನ ರಂಗಮಂದಿರದಲ್ಲಿ ಜರುಗಿದ್ ಪಂಡಿತ್ ರಘುನಂದನ ಪಂಶೀಕರ್ ಇವರ ಗಾಯನ ಕಾರ್ಯಕ್ರಮದ ಮುದ್ರಿತ ಭಾಗ

ಭಾರತೀಯ ಸಂಗೀತ ವಿದ್ಯಾಲಯ ಭಾಗ ೨

ಭಾರತೀಯ ಸಂಗೀತ ವಿದ್ಯಾಲಯ ಭಾಗ ೨ ದಿನಾಂಕ ೦೯/೧೨/೨೦೧೭ ರಂದು ಧಾರವಾಡದ ಸೃಜನ ರಂಗಮಂದಿರದಲ್ಲಿ ಜರುಗಿದ್ ಪಂಡಿತ್ ರಘುನಂದನ ಪಂಶೀಕರ್ ಇವರ ಗಾಯನ ಕಾರ್ಯಕ್ರಮದ ಮುದ್ರಿತ ಭಾಗ

ಭಾರತೀಯ ಸಂಗೀತ ವಿದ್ಯಾಲಯ – ಭಾಗ ೧

ಭಾರತೀಯ ಸಂಗೀತ ವಿದ್ಯಾಲಯ – ಭಾಗ ೧ ದಿನಾಂಕ ೦೯/೧೨/೨೦೧೭ ರಂದು ಧಾರವಾಡದ ಸೃಜನ ರಂಗಮಂದಿರದಲ್ಲಿ ಜರುಗಿದ್ ಪಂಡಿತ್ ರಘುನಂದನ ಪಂಶೀಕರ್ ಇವರ ಗಾಯನ ಕಾರ್ಯಕ್ರಮದ ಮುದ್ರಿತ ಭಾಗ

ಜಯಂತಿಯ ಸುತ್ತಮುತ್ತ

ಜಯಂತಿಯ ಸುತ್ತಮುತ್ತ ಜಯಂತಿ ಅಂದಾಕ್ಷಣ 60ರ ಆಸುಪಾಸಿನವರಿಗೆ ಅದೂ ಕರ್ನಾಟಕದವರಿಗೆ ನೆನಪಾಗುವುದು ಎಡಕಲ್ಲು ಗುಡ್ಡದ ಮೇಲೆ, ಬೆಟ್ಟದ ಹುಲಿ, ಬಹಾದ್ದೂರ್ ಗಂಡು, ಕಸ್ತೂರಿ ನಿವಾಸದ ಅಭಿನೇತ್ರಿ ಜಯಂತಿಯೇ. ಬೆಟ್ಟದ ಹುಲಿಯ ಕಪ್ಪು ಬಿಳುಪಿನಲ್ಲಿಯೂ ‘ಏನೋ ತಲ್ಲಣ ಏಕೋ ಈ ದಿನಾ ಆಶೆಯೂ ಹೆಚ್ಚಿ ಸಾವಿರ ಯೋಚನೆ ಹಾಕಿ’ ಕಾವು ಏರಿಸಿದ ಜಯಂತಿಯ ಅಭಿನಯ ಮೈಮನಗಳಲ್ಲಿ ಮದ ಏರಿಸುವ ಅಂದಿನ ಮಾಟ ಎಂಥಹ ಸಮ್ಮೋಹಿನಿ ಬದಲಾವಣೆ ಮಾಡ್ತಿತ್ತು. ಇಂದಿನ ಜಯಂತಿಯ ಕಲ್ಪನೆಯಲ್ಲಿ ಸ್ವಲ್ಪ ಬದಲಾವಣೆ ಆ ಜಯಂತಿ ಬಗ್ಗೆ […]

ಒಳ್ಳೆ ಮನಸ್ಸುಗಳು ಬೇಕು

ಒಳ್ಳೆ ಮನಸ್ಸುಗಳು ಬೇಕು ಡಾ. ವಿ. ಕೆ.ಆರ್.ವಿ. ರಾವ್ ಭಾರತದ ಪ್ರಖ್ಯಾತ ಅರ್ಥಶಾಸ್ತ್ರಜ್ಞರು. ಭಾರತ ಯೋಜನಾ ಆಯೋಗದ ಸದಸ್ಯರಾಗಿ, ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ, ಸ್ಥಾಪಕರಾಗಿ, ದೆಹಲಿ ವಿಶ್ವವಿದ್ಯಾಲಯದ ಪ್ರಥಮ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ, ಉಪಕುಲಪತಿಯಾಗಿ ಹೆಸರಾದವರು ಹಾಗೂ ಸ್ವಾಮಿ ವಿವೇಕಾನಂದರ ಅನುಯಾಯಿಗಳು. ರಾವ್ ಅವರು ದೆಹಲಿ ಅರ್ಥಶಾಸ್ತ್ರ ವಿಭಾಗದಿಂದ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಒಂದು ಸಭಾಭವನವನ್ನು ನಿರ್ಮಿಸಲು ಸಂಕಲ್ಪಿಸಿದರು. ಭವನದ ನಿರ್ಮಾಣಕ್ಕೆ ಶ್ರೀಮಂತರಿಂದ ದೊಡ್ಡ ಪ್ರಮಾಣದ ಹಣ ಸಂಗ್ರಹ ಮಾಡದೆ, ಸಣ್ಣವರು ದೊಡ್ಡವರು ಎನ್ನದೆ ಪ್ರತಿಯೊಬ್ಬರಿಂದ ಕೇವಲ […]