ರಾಮಾಯಣವೆಂಬ ಮಹಾಕಾವ್ಯ ನಮ್ಮ ದೇಶದ ಮಹಾಕಾವ್ಯಗಳಲ್ಲಿ ಒಂದು ರಾಮಾಯಣ. ‘ರಾಮಾಯಣ’ ವು ರಾಮನ ಚರಿತ್ರೆ. ಅಂತೆಯೇ ಈ ‘ರಾಮಾಯಣ’ವು ‘ಸೀತೆಯ ಚರಿತ್ರೆ’ಯೂ ಕೂಡ. ರಾಮಾಯಣವಾಗಲೀ ಅದರ ನಾಯಕನಾದ ರಾಮನಾಗಲೀ ಇಂದು ಲೋಕಪ್ರಸಿದ್ಧಿಯನ್ನು ಪಡೆದಿರುವುದರಲ್ಲಿ ಸೀತೆಯ ಪಾತ್ರವೂ ಕೂಡ ಅಷ್ಟೇ ದೊಡ್ಡದು. ಅಷ್ಟೇ ಅಲ್ಲ, ಭಾರತದ ಎರಡು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದಲ್ಲಿ ಎಲ್ಲ ಸ್ತ್ರೀಪಾತ್ರಗಳ ಪ್ರಭಾವ ದೊಡ್ಡದು; ಕಥೆಯ ಸೌಂದರ್ಯಕ್ಕಾಗಿ ಮಾತ್ರವೇ ಅಲ್ಲ, ಆ ಮಹಾಕಾವ್ಯಗಳು ಪ್ರತಿನಿಧಿಸುವ ಮೌಲ್ಯಗಳ ಸಾಕಾರರೂಪವಾಗಿ ಕೂಡ ಸ್ತ್ರೀಪಾತ್ರಗಳ ಮೆರವಣಿಗೆಯನ್ನೇ ನಾವಿಲ್ಲಿ ನೋಡಬಹುದಾಗಿದೆ. […]
Month: April 2020

ಆವರ್ತಕ !
ಆವರ್ತಕ ! ಕೆಲ ದಶಕಗಳ ಹಿಂದೆ ಬೈಸಿಕಲ್ಲಿಗೆ ಹಿಂಬದಿಯ (ಕೆಲವೊಮ್ಮೆ ಮುಂದಿನ ಚಕ್ರಕ್ಕೆ) ಚಕ್ರದ ಹತ್ತಿರ ಡೈನಮೋ ಎಂದು ಕರೆಯುವ ಬಾಟಲಿ ಆಕಾರದ ಒಂದು ಸಾಧನವಿರುತ್ತಿತ್ತು. ಈ ಡೈನಮೋವನ್ನು ಆಲ್ಟರ್ನೇಟರ್ (ಆವರ್ತಕ) ಎನ್ನುವರು. ಆವರ್ತಕವು ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಒಂದು ವಿದ್ಯುತ್ಕಾಂತೀಯ ಸಾಧನ. ಪಕ್ಕದಲ್ಲೇ ಇರುವ ಒತ್ತುಗುಂಡಿಯನ್ನು ಅದುಮಿದರೆ ಈ ಡೈನಮೋದ ತುದಿಗೆ ಹೊಂದಿಸಿದ ಚಕ್ರವೊಣದು ಸೈಕಲ್ ಚಕ್ರದ ಟೈರ್ ಗೆ ತಾಗಿ ಚಕ್ರ ಚಲಿಸುವಾಗ ತಾನೂ ತಿರುಗುತ್ತಾ, ವಿದ್ಯುತ್ ಉತ್ಪಾದಿಸುತ್ತಿತ್ತು. ಈ ವಿದ್ಯುತ್ತನ್ನು […]

ಜನ ಮರುಳೋ…. ಜಾತ್ರೆ ಮರುಳೋ…
ಜನ ಮರುಳೋ…. ಜಾತ್ರೆ ಮರುಳೋ… ನಿಮ್ಮ ಮನೆ ಅಡಿಗೆ ರುಚಿಯಾಗ್ತಾ ಇಲ್ವಾ? ಅಮ್ಮನ ಮನೆಯಿಂದ SUN GOLD ತರಿಸಿಕೊಳ್ಳಿ. ನಂತರ ರುಚಿ ನೋಡಿ! ಯಾಕೋ ಬಟ್ಟೆಗಳಲ್ಲಿ ಹೊಲಸು ಹಾಗೇ ಉಳಿಯುತ್ತಿದೆಯಾ? ಅಮಿತಾಬ ಬಚ್ಚನ್ ಬರ್ತಾನೆ ಬಿಡಿ. ಎರಡು ಸ್ಕ್ರೂ ಹಾಕಿ ತೆಗೆದಮೇಲೆ ಅವನು ಹೇಳಿದ ಸೋಪಿನ ಪುಡಿ ಬಳಸಿ. problem ಖತಂ. ಬಚ್ಚಲು ಮನೆಯಲ್ಲಿ ನಿಲ್ಲೋಕಾಗ್ತಾ ಇಲ್ವಾ? ಒಂದು refreshener ತೂಗು ಹಾಕಿ…. ಕುಣಿಕುಣೀತಾ ಹಲ್ಲುಜ್ತೀರಾ… ಬಚ್ಚಲೇನೂ ಉಜ್ಜಬೇಕಾಗಿಲ್ಲ. ಬಚ್ಚಲು ಉಜ್ಜಲೇ ಬೇಕಾ? ಚಿಂತೆ ಬೇಡ. ಅಕ್ಷಯ […]

ಜನಪ್ರಿಯವಾಗುತ್ತಿರುವ ಸಾಮೂಹಿಕ ‘ಸೂರ್ಯನಮಸ್ಕಾರ’ ಸಲ್ಲಿಸುವ ಸಂಪ್ರದಾಯ
ಜನಪ್ರಿಯವಾಗುತ್ತಿರುವ ಸಾಮೂಹಿಕ ‘ಸೂರ್ಯನಮಸ್ಕಾರ’ ಸಲ್ಲಿಸುವ ಸಂಪ್ರದಾಯ ಇತ್ತೀಚೆಗಷ್ಟೇ ಸಂಕ್ರಾಂತಿ ಹಬ್ಬವನ್ನಾಚರಿಸಿದ್ದೇವೆ. ಸೂರ್ಯನೆಂದರೆ ನಮಗೆಲ್ಲ ಅಪಾರ ಪ್ರೀತಿ. ನಮ್ಮ ಪಾಲಿಗೆ ಆತ ಕೇವಲ ಬೆಳಕೀಯುವ ಸಾಧನವಲ್ಲ. ನಮ್ಮ ಪ್ರತ್ಯಕ್ಷ ದೈವ, ಜೀವಾಧಾರ, ಶುಭಪ್ರದ, ನಮ್ಮ ಸರ್ವಕರ್ಮಗಳ ಸಾಕ್ಷಿ, ಪರಮಸತ್ಯಕ್ಕೆ ಮುಚ್ಚಳವಿದ್ದಂತೆ- ‘ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಂ/ ತತ್ ತ್ವಂ ಪೂಶನ್ ಅಪಾವೃಣು ಸತ್ಯ ಧರ್ಮಾಯ ದೃಷ್ಟಯೇ’ ಎಂದು ಈಶಾವಾಸ್ಯದ ಪ್ರಾರ್ಥನೆ. (ಹಿರಣ್ಮಯವಾದ ಪಾತ್ರೆಗೆ ನೀನೆ ಮುಚ್ಚಳ. ಕೃಪೆ ಮಾಡಿ ತೆರೆದುಕೊಂಡು ಸತ್ಯಧರ್ಮಗಳನ್ನು ನಮಗೆ ತೋರಿಸು). ಇಂತಹ ಸೂರ್ಯನನ್ನು ಪ್ರತಿದಿನ […]

ಕನ್ನಡ ಸಾಹಿತ್ಯದ ಮಹಾನ್ ವ್ಯಕ್ತಿಗಳ ಪರಿಚಯ – ಡಾ. ಕಮಲಾ ಹಂಪನಾ ಅವರಿಂದ ” ದಾನಚಿಂತಾಮಣಿ ಅತ್ತಿಮಬ್ಬೆ ಪರಿಚಯ” ಕಾರ್ಯಕ್ರಮ
ಅತ್ತಿಮಬ್ಬೆಯು ಪ್ರಾಚೀನ ಕರ್ನಾಟಕದ ಪ್ರಸಿದ್ಧ ಮಹಿಳೆ, ಅವರ ಕನ್ನಡ ಸಾಹಿತ್ಯದ ಸೇವೆ ಮಹತ್ತರವಾದ್ದದ್ದು. ಅತ್ತಿಮಬ್ಬೆಯು ಹತ್ತನೆಯ ಶತಮಾದ ಉತ್ತರಾರ್ಧ ಮತ್ತು ಹನ್ನೊಂದನೆಯ ಶತಮಾನದ ಮೊದಲ ಭಾಗದಲ್ಲಿ ಜೀವಿಸಿದ್ದಳು. ಆಕೆಯ ಆಶ್ರಿತರಲ್ಲಿ ಒಬ್ಬನಾದ ಮಹಾಕವಿ ರನ್ನನು ತನ್ನ ‘ಅಜಿತಪುರಾಣ’ದಲ್ಲಿ ಅತ್ತಿಮಬ್ಬೆಯನ್ನು ತುಂಬು ಮನಸ್ಸಿನಿಂದ ಪ್ರಶಂಸಿದ್ದಾನೆ. ಪೊನ್ನನ ‘ಶಾಂತಿಪುರಾಣ’ದ ಒಂದು ಸಾವಿರ ಪ್ರತಿಗಳನ್ನು ಓಲೆಗರಿಗಳ ಮೇಲೆ ಬರೆಸಿ ವಿದ್ವಾಂಸರಿಗೆ ವಿತರಣೆ ಮಾಡಿದಳು. ಕನ್ನಡ ಸಾಹಿತ್ಯವನ್ನು ಪುನರುಜ್ಜೀವಿಸಿದ ಪುಣ್ಯಮೂರ್ತಿ ಪರೋಪಕಾರದಲ್ಲಿ ಮಗ್ನವೂ ಅತ್ಯಂತ ಸರಳವೂ ಆದ ಜೀವನವನ್ನು ನಡೆಸಿದ ಅತ್ತಿಮಬ್ಬೆಯು ‘ದಾನಚಿಂತಾಮಣಿ’ […]

ದೇವರಿಗೊಂದು ಪತ್ರ-(13)
ದೇವರಿಗೊಂದು ಪತ್ರ(13) ನೀ ಸೌಖ್ಯವಿರಲು ಸಕಲವೂ ಸೌಖ್ಯ ಮಾಧವ ಇಂದು ಘಾಸಿಯಾದ ಮನಕೆ ನೀ ಆವರಿಸಿ ಸಂತೈಸಿದೆ ಕರುಣಾಮಯಿ ನೇವರಿಸಿ ಶಿರವ ಜನಕನಂತೆ ಹೇಳುವ ಪರಿಯ ಹೇಗೆ ಬಣ್ಣೀಸಲಿ? ನೂರು ನೋವ ಮರೆವೆ ಕ್ಷಣಕೆ ನಿನ್ನ ಮಂದಸ್ಮಿತದಲಿ ಅತುಲಾತೀತ ಆನಂದವೋ ಹರಿ ನಿನ್ನ ದರುಶನದಲಿ ಮೊಗವ ನೋಡುತ ನಿನ್ನ ಕಳೆದು ಹೋಗುವೆ ನಾ ಇದಾವ ಭಕ್ತಿಪರಿ ಕಮಲವದನ ನನ್ನಳುವ ಕಂಡು ನಗುವುದೇನು ಸರಿ ಮಾಯೆಯ ಆದಿಯಲ್ಲಿ ನಿಲ್ಲಿಸಿ ಎನ್ನ ಪರೀಕ್ಷಿಸುವುದೇ ನರಹರಿ? ಉತ್ತೀರ್ಣ ಅನುತ್ತೀರ್ಣ ಎಲ್ಲವೂ ನಿನ್ನ […]

ಜಿಂದಗಿ ಏಕ ಸಫರ್ ಹೈ ಸುಹಾನಾ..
ಜಿಂದಗಿ ಏಕ ಸಫರ್ ಹೈ ಸುಹಾನಾ.. ಒಬ್ಬ ಹಿರಿಯರು ದಿನಾಲೂ ಬೆಳಿಗ್ಗೆ walking ಹೋಗುತ್ತಿದ್ದರು. ಪ್ರತಿದಿನವೂ ಅವರಿಗೆ ಒಂದು ದೊಡ್ಡ ಬಂಡೆಯ ಮೇಲೆ ಮಲಗಿ ದೊಡ್ಡ ಬಂಡೆಯ ಮೇಲೆ ಮಲಗಿ ತಾಸುಗಟ್ಟಲೇ ಆಕಾಶ ದಿಟ್ಟಿಸುವ ಹದಿಹರೆಯ ಹೈದ ನೋಡಲು ಸಿಗುತ್ತಿದ್ದ. ಎರಡು ದಿನ ಮುಗುಳ್ನಕ್ಕು ಮುಂದೆ ಹೋದ ಅವರು ಮೂರನೇದಿನ ಅವನ ಬಳಿ ಹೋಗಿ ಕುಳಿತರು. ಬಹುಶಃ ಧುಮ್ಮಿಕ್ಕಿ ಹರಿಯುವ ಕಾವೇರಿ ನೀರು ಕಂಡಾಗ ವಿಶ್ವೇಶ್ವರಯ್ಯ ಅವರಿಗೆ ಅನಿಸಿದ ಹಾಗೆ, “Oh!! What a waste of […]

ವಿಶ್ವ ಪುಸ್ತಕ ದಿನ – ಉಚಿತ ಪುಸ್ತಕ ಪಡೆಯಿರಿ -ಕೋಪನ್ ಕೋಡ್ – WBD2020
ಓ ಹೆನ್ರಿ ಕಥೆಗಳು – https://vividlipi.com/shop/stories/o-henry-kathegalu/ ನಾದದ ನವನೀತ – https://vividlipi.com/shop/articles/naadada-navneeta/ ನೋಡಿರಿ ಧರ್ಮಜ ಫಲಗುಣಾದಿಗಳು – https://vividlipi.com/shop/articles/nodiri-dharmaja-phalugunaadiglu/ ೧. ವಿವಿಡ್ಲಿಪಿ ಆಂಡ್ರಾಯ್ಡ್ ಅಪ್ಲಿಕೇಶನ್ – https://bit.ly/2JWfQLl – ಇಲ್ಲಿಂದ ವಿವಿಡ್ಲಿಪಿ ಆಂಡ್ರಾಯ್ಡ್ ಅಪ್ಲಿಕೇಶನ್ ನಿಮ್ಮ ಮೊಬೈಲ್ಗೆ ಇಳಿಸಿ (ಡೌನ್ಲೋಡ್ ಮಾಡಿ) ೨. ಮೇಲಿನ ಲಿಂಕ್ ಬಳಿಸಿ, WBD2020 ಕೂಪನ್ ಕೋಡ್ ಉಪಯೋಗಿಸಿ ಪುಸ್ತಕಗಳನ್ನು ಖರೀದಿಸಿ. ೩. ವಿವಿಡ್ಲಿಪಿ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಿಸಿ ಪುಸ್ತಕ ಓದಿರಿ – ನೀವು ನಮ್ಮ ಪುಸ್ತಕಗಳನ್ನು VIVIDLIPI ಮೊಬೈಲ್ ಅಪ್ಲಿಕೇಶನ್ ಮುಖಾಂತರ […]

ಕನಸುಗಳು ಬೇಕೇ?
ಕನಸುಗಳು ಬೇಕೇ? ಕಾಲೇಜು ಕಲಿಯುತ್ತಿರುವ ಹದಿಹರೆಯದ ಮಗನಿಗೆ ಅವ್ವನದೊಂದು ಪತ್ರ… ಸವಿಗನಸುಗಳು ಬೇಕು ಸವಿಯಲೀ ಬದುಕು ಪ್ರೀತಿಯ ಸುಮೀತ್, ನಿನಗೆ ನನ್ನ ಒಲವಿನ ನೆನಹುಗಳು. ನೀನು ನಿನ್ನೆ ನನಗೊಂದು ಪ್ರಶ್ನೆ ಕೇಳಿದ್ದೆ… “ಅವ್ವಾ, ಕನಸು ಕಾಣಬಾರದೇ? ಅದು ತಪ್ಪಂತೆ… ನನ್ನ ಸಹಪಾಠಿಗಳೆಲ್ಲರೂ ಹೇಳ್ತಾರೆ… ನಮ್ಮ ಭಾಷಾ ಶಿಕ್ಷಕರೂ ಹಾಗೇ ಹೇಳ್ತಾರೆ” ಅಂತ… ಅದಕ್ಕೆ ಉತ್ತರ ಫೋನಿನಲ್ಲಿ ಕೊಡುವುದು ನನಗೇಕೋ ಅಷ್ಟೊಂದು ಸಮಂಜಸವೆನ್ನಿಸಲಿಲ್ಲ… ಅದಕ್ಕೇ ಇವೊತ್ತು ನಿನಗೊಂದು ಪತ್ರವನ್ನೇ ಬರೆಯುತ್ತಿದ್ದೇನೆ. ನಿನಗೆ ನೆನಪಾದಾಗಲೊಮ್ಮೆ ಮತ್ತೆ ಮತ್ತೆ ಓದಬಹುದು… ಬೇರೆಯ […]