Your Cart

Need help? Call +91 9535015489

📖 Print books shipping available only in India. ✈ Flat rate shipping

ದೇವರಿಗೊಂದು ಪತ್ರ! (40)

ದೇವರಿಗೊಂದು ಪತ್ರ! (40) ಪತ್ರವಿದು ವಿಶೇಷ ಓ ಹರಿಯೆ ಓದು ಈ ಕ್ಷಣಕ್ಕೆ ತಪ್ಪದೆ ನೀನು! ಈ ನಾಲ್ಕು ದಿನದಿಂದ ಅತೀತ ಆನಂದದಲ್ಲಿ ಮನವೆನ್ನ ಮುಳುಗಿಹುದು! ಅರಿಯದ ಸಂತಸದ ಭಾವ ಅನುಭಾವದಲಿ ಆತ್ಮವಿದು ತೇಲುತಿಗುದು ಆನಂದಭಾಷ್ಪ ಕಣ್ಣಂಚಲಿ ಬಿಡದೆ ಜಿನುಗುತಿಹುದು ನೋಡಿದವರು ಎನೆನ್ನುವರೀಪರಿಯ ಭ್ರಾಂತಿಗೆ ಎಂಬಳಕು ಮನದೊಳಿಹುದು! ನೀ ಹುಟ್ಟಿದಾಷ್ಟಮಿಯು ಇಂದು ಜನ್ಮಾಷ್ಟಮಿ ನಿನ್ನದಿಹುದು! ಇಂದು ಕುಳಿತಲ್ಲಿ ನಿಂತಲ್ಲಿ ನಿನ್ನದೇ ಧ್ಯಾನದಲ್ಲಿ ನಾ ಭಿನ್ನ ಪಾತ್ರದಲ್ಲಿ ಕಲ್ಪಿಸಿಹೆನು ನೀ ಹುಟ್ಟಿದಂತೆ ಈ ಕ್ಷಣಕ್ಕೆ ನಾ ದಾದಿಯಾಗಿ ನಿನ್ನ […]

ಸಂಗೊಳ್ಳಿ ರಾಯಣ್ಣ

ಸಂಗೊಳ್ಳಿ ರಾಯಣ್ಣ ಕನ್ನಡ ನಾಡಿನ ಕಲಿ ಗಡಿನಾಡಿನ ಹುಲಿ ಕೆಚ್ಚೆದೆಯದಿ ಗಂಡುಗಲಿ ನಮ್ಮ ಸಂಗೊಳ್ಳಿರಾಯಣ್ಣ ಮುಳುಗದ ಸೂರ್ಯನ ನಾಡಿನರಸರಿಗೆ ಸಿಂಹಸ್ವಪ್ನ ನೀನಾದೆ ಜಮೀನ್ದಾರಿ ಜನರ ಆರ್ಭಟದ ನೀ ಮುರಿದೆ ಭಾರತಾಂಬೆಯ ತನುಜ ನೀನು ಚೆನ್ನಮ್ಮನ ಅನುಜನಾದೆ ನೀನು ಆಕೆಯ ಹೆಜ್ಜೆಗಳಿಗೆ ನೆರಳಾಗಿ ಕಾಯ್ದೆ ನಾಡನು ಸಿಂಹವಾಗಿ ಸಾವಿರ ಕಂಬನಿಗಳಲಿ ಬಿಸಿರಗುತದ ಧಮನಿಗಳಲಿ ನಿನ್ನದೇ ಛಾಯೆ ಪಡಿಮೂಡಿಸುತಲಿ ಸ್ವಾತಂತ್ರ್ಯ ಸಂಗ್ರಾಮಕೆ ಕಹಳೆ ಮೊಳಗಿಸುತಲಿ ಮೋಸದಲಿ ಲಕ್ಕಪ್ಪ ನಿನ್ನ ಸೆರೆ ಹಿಡಿಸಿದ ಕೊನೆಯುಸಿರುವವರೆಗೂ ನಾಡರಕ್ಷಣೆ ನಿನ್ನಿಂದ ನಿನ್ನ ಸಾವು ಜನಮನದಲಿ […]

ರಾಷ್ಟ್ರನಿರ್ಮಾಣದಲ್ಲಿ ಯುವಜನರ ಪಾತ್ರ ಭಾಗ-೩

ರಾಷ್ಟ್ರನಿರ್ಮಾಣದಲ್ಲಿ ಯುವಜನರ ಪಾತ್ರ ಭಾಗ-೩ ಸರಕಾರದ ಪೂರ್ಣ ಗಮನವು ಯುವಜನರ ಮೂಲಕವಾಗಿ  ವಿಕಾಸವನ್ನು ಸಾಧಿಸುವಂಥದಾಗಬೇಕು. ಸರಕಾರದ ಪರವಾಗಿ ಪ್ರಸ್ತುತಪಡಿಸಿದಂಥ ರಾಷ್ಟ್ರೀಯ ಯುವನೀತಿ-೨೦೧೪ ರ ಉದ್ದೇಶವು “ಯುವಕರ ಯೋಗ್ಯತೆಯನ್ನು ಗುರುತಿಸಿ ಅದಕ್ಕನುಗುಣವಾಗಿ ಅವರಿಗೆ ಅವಕಾಶಗಳನ್ನು ಒದಗಿಸಿ ಅವರನ್ನು ಬಲಿಷ್ಠಗೊಳಿಸುವ, ಮತ್ತು ಇದರ ಮೂಲಕ ನಮ್ಮ ದೇಶಕ್ಕೆ ದೊರೆಯಬೇಕಾದಂಥ ಯೋಗ್ಯ ಸ್ಥಾನವನ್ನು ಕೊಡಿಸಬೇಕಾಗಿದೆ” ಎಂಬುದು. ಯುವಕರ ವ್ಯಕ್ತಿತ್ವದಲ್ಲಿ ಸುಧಾರಣೆ ತರುವ, ಅವರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ಹಾಗೂ ಅವರಲ್ಲಿ ಒಬ್ಬ ಜವಾಬ್ದಾರಿಯುತ ನಾಗರಿಕನ ಗುಣ ಹಾಗೂ ಸ್ವಯಂ ಸೇವೆಯ ಭಾವನೆಗಳನ್ನು […]

ಸಂಕಟ ಮರೆಯಬೇಕೆಂದರೆ ಕೆಲಸದಲ್ಲಿ ಮೈಮರೆಯಬೇಕು!

ಸಂಕಟ ಮರೆಯಬೇಕೆಂದರೆ ಕೆಲಸದಲ್ಲಿ ಮೈಮರೆಯಬೇಕು! ಕುರುಕ್ಷೇತ್ರದ ಮಹಾ ಯುದ್ಧದಲ್ಲಿ ಅಪಾರ ಸೈನಿಕರು ಸೇನಾಧಿಪತಿಗಳು ಹಾಗೂ ಅನೇಕ ಸಾಮಂತ ರಾಜರು ಸತ್ತು ಧರೆಗುರುಳಿದ್ದರು. ಕುರುಕುಲದವರ ಶವಗಳನ್ನು ಅಂತಿಮ ಸಂಸ್ಕಾರಕ್ಕೋಸ್ಕರ ಹುಡುಕುತ್ತಿದ್ದ ಯುಧಿಷ್ಟಿರನಿಗೆ ಯುಧ್ಧದ ಭೀಭತ್ಸ ದೃಶ್ಯ ಕಂಡು ಕರುಳು ಕಿವಿಚಿದಂತಾಯಿತು. ಯುದ್ಧದಲ್ಲಿ ಭಳಕೆಯಾದ ಆನೆ, ಕುದುರೆ ಮುಂತಾದ ಪ್ರಾಣಿಗಳ ದೇಹಗಳು ಛಿದ್ರ ಛಿದ್ರವಾಗಿ ಎಲ್ಲೆಡೆ ಬಿದ್ದಿದ್ದವು. ಯಾರ ದೇಹ ಯಾರದ್ದೆಂದು ಗುರುತಿಸಲಾಗದಷ್ಟು ವಿಕಾರಗೊಂಡು ನೆತ್ತರ ಕೆಸರಲ್ಲಿ ಹೂತ್ತಿದ್ದವು. ರಥದ ಪತಾಕೆಗಳು ಹರಿದು ಹೋಗಿ ಭೋರೆಂದು ಬೀಸುವ ಗಾಳಿಗೆ ಅತ್ತಿಂದಿತ್ತ […]

ತೃಣಕೆ ಹಸಿರೆಲ್ಲಿಯದು…? ಬೇರಿನದೇ? ಮಣ್ಣಿನದೇ?

ತೃಣಕೆ ಹಸಿರೆಲ್ಲಿಯದು…? ಬೇರಿನದೇ? ಮಣ್ಣಿನದೇ? ಆಗ ಎಲ್ಲೆಡೆಯೂ ‘ಕೂಡು ಕುಟುಂಬ’ ಗಳಿದ್ದ ಕಾಲ. ಒಂದು ಮನೆಯಲ್ಲಿ ಕನಿಷ್ಠ ಆರೆಂಟು ಮಕ್ಕಳು. ಅಡಿಗೆಮನೆ /ದೇವರ ಕೋಣೆ ಅಜ್ಜಿಯ ಸುಪರ್ದಿಯಲ್ಲಿ. ಬಟ್ಟೆ ಒಗೆಯುವ, ಪಾತ್ರೆ ತಿಕ್ಕುವ, ಬಾವಿಯಿಂದ ನೀರು ಸೇದುವ, ಊಟಕ್ಕೆ ಬಡಿಸುವ ಕೆಲಸ ಅವ್ವಂದಿರಿಗೆ. ಕಸಗುಡಿಸುವ, ಊಟದ ತಟ್ಟೆ (ಎಲೆ)ಗಳನ್ನೆತ್ತಿ ಗೋಮಯ ಹಚ್ಚುವ, ಸಂಜೆ ಕಂದೀಲುಗಳಿಗೆ, ಚಿಮಣಿ ಬುಡ್ಡಿಗೆ ಎಣ್ಣೆ ತುಂಬಿ, ಅವುಗಳ ಗಾಜುಗಳನ್ನು ಒರೆಸಿಡುವ ಕೆಲಸ ಅಕ್ಕಂದಿರ ಪಾಲಿಗೆ. ಹತ್ತು/ ಹನ್ನೆರಡರ ಚಿಕ್ಕ ಬಾಲಕ/ಬಾಲಕಿಯರಿಗೆ ಅಂಗಡಿಗೆ ಓಡಿಹೋಗಿ […]

ಶ್ರಾವಣ ಬಂತು

ಶ್ರಾವಣ ಬಂತು ಶ್ರಾವಣ ಬಂತು ಆನಂದ ತಂತು ಹಬ್ಬ ಹರಿದಿನಗಳ ಶುಭವೇಳೆ ತಂತು ಕಡಬು ಹೋಳಿಗೆ ಪಾಯಸಗಳ ಆಗರ ಮನೆ ಮನೆಯಲೂ ಆನಂದದ ಸಾಗರ ನೀಲಾಕಾಶ ಬದಲಾಯಿತು ಮೈಬಣ್ಣ ಕಪ್ಪಾಯಿತು ಕಪ್ಪು ಮೈಯ್ಯಲಿ ಮೇಘಗಳಾವೃತ ಗಿರಿಪರ್ವತಗಳಿಗೂ ಮುತ್ತನಿಕ್ಕುತ ಸುರಿಸುತಿಹ ಜಲಧಾರೆ ಭುವಿಗೆ ಧರೆಯಲ್ಲಿ ಮೆರೆದೀತು ತಂಪು ರಮಣೀಯತೆಯ ಕಂಪು ಹಕ್ಕಿಗಳ ಉಲಿಯುವಿಕೆಯ ಇಂಪು ಭೂತಾಯಿ ಮೈಬಸಿರು ಅದಕಾಗೇ ತೊಡೆವಳು ಹಸಿರು ಭೂಗಿರಿ ಕಂದರಗಳೆಲ್ಲದರ ಮೇಲೆ ಹಸಿರು ಹೊದಿಕೆ ಶುಭ್ರ ಜಲಧಾರೆ ಆಗಸದಿ ಭೂಮಡಿಲ ಪದರಕೆ ರವಿ ತಾ […]

ರಾಷ್ಟ್ರನಿರ್ಮಾಣದಲ್ಲಿ ಯುವಜನರ ಪಾತ್ರ ಭಾಗ-೨

ರಾಷ್ಟ್ರನಿರ್ಮಾಣದಲ್ಲಿ ಯುವಜನರ ಪಾತ್ರ ಭಾಗ-೨ ಇತ್ತಿಚಿನ ದಿನಗಳಲ್ಲಿ ನಾವು ನಮ್ಮ ಯುವಶಕ್ತಿಯ ಒಂದು ಸರಿಯಾದ ಉಪಯೋಗವನ್ನು ಹೇಳಬಹುದಾದರೆ, ದೆಹಲಿಯ ಮೆಟ್ರೋ ನಿರ್ಮಾಣದಲ್ಲಿ! ಈ ಮೆಟ್ರೋ ನಿರ್ಮಾಣದಲ್ಲಿ ತೊಟಗಿದ್ದ ೯೫% ಕೆಲಸಗಾರರು ಯುವಕರೇ! ಅವರಿಗೆ ಮಾರ್ಗದರ್ಶನವನ್ನು ಮಾಡಿದವರು ಒಬ್ಬ ಅನುಭವಿ ವ್ಯಕ್ತಿಯೇ ಆಗಿದ್ದರೂ ಕೆಲಸವಗಾರರು ಮಾತ್ರ ಯುವಕರೇ! ಇದರಿಂದ ಒಂದು ಮಾತು ಸ್ಪಷ್ಟವಾಗುತ್ತದೆ- ಸರಿಯಾದ ಮಾರ್ಗದರ್ಶನ ಹಾಗೂ ಅದಮ್ಯ ಇಚ್ಛಾಶಕ್ತಿಯಿದ್ದಲ್ಲಿ ಯಾವುದೂ ಅಶಕ್ಯವಲ್ಲ! ಈ ಶಕ್ತಿಗೆ ಒಂದು ಉಚಿತವಾದಂಥ ಗುರಿಯು ದೊರೆಯದಿದ್ದಲ್ಲಿ ಇದು ರಾಷ್ಟ್ರವಿನಾಶಕವೂ ಕೂಡ ಆಗಬಹುದಾಗಿತ್ತು. ಇಂದಿನ […]

ನಾಮದ ಬಲವೊಂದಿದ್ದರೆ ಸಾಕೋ…

ನಾಮದ ಬಲವೊಂದಿದ್ದರೆ ಸಾಕೋ… ‘ಹೆಸರಿನಲ್ಲೇನಿದೆ’ – ಅಂದವನು ಶೇಕ್ಸ್ಪಿಯರ್…ಹೆಸರಿನಲ್ಲೇನಿಲ್ಲ?- ಇದು ನನ್ನ ಪ್ರಶ್ನೆ… ‘ ಹೆಸರಿಗೆ’ ‘ ಹೆಸರು’ ಎಂದು ‘ಹೆಸರಿ’ಟ್ಟು ಹೇಳ ‘ಹೆಸರಿಲ್ಲದೇ’ ಎಲ್ಲೋ ಮಾಯವಾದ ಆ ಮನುಷ್ಯ ಸಿಕ್ಕಿದ್ದರೆ ಝಾಡಿಸಿ ಅವನಿಂದಲೇ ಉತ್ತರ ಪಡೆಯಬಹುದಿತ್ತು. ‘ ನನ್ನ ಹೆಸರು ತಿಳಿಯಬೇಕೇ?’- ಹತ್ತನೇ ಪುಟ ನೋಡಿ ಎಂದು ಬರೆದು ಹತ್ತನೇ ಪುಟದಲ್ಲಿ ಪುನಃ ಮೂವತ್ತನೇ ಪುಟ ನೋಡಿ ಎಂದು, ಅಲ್ಲಿ ಮತ್ತೊಂದು ಪುಟಸಂಖ್ಯೆ ಬರೆದು ಗೆಳೆಯ- ಗೆಳತಿಯರನ್ನು ಪುಸ್ತಕದ ಕೊನೆಯು ಬರುವವರೆಗೂ ಅಟ್ಟಾಡಿಸಿ ನಗುತ್ತಿದ್ದುದು ಎಲ್ಲರೂ […]

ರಾಷ್ಟ್ರನಿರ್ಮಾಣದಲ್ಲಿ ಯುವಜನರ ಪಾತ್ರ

ರಾಷ್ಟ್ರನಿರ್ಮಾಣದಲ್ಲಿ ಯುವಜನರ ಪಾತ್ರ ಉಪ್ಪು ನಮ್ಮ ಆಹಾರದಲ್ಲಿ ರುಚಿಯ ಪಾತ್ರ ವಹಿಸಿದೆ. ಆದ್ದರಿಂದಲೇ ಅದಕ್ಕೆ ತಾಯಿಯಂತೆಯೇ ಆತ್ಮಬಂಧು ಎಂದು ಹೇಳುತ್ತಾರೆ. ಅಂತೆಯೇ ಜೀವನದಲ್ಲಿ ಉಪ್ಪಿನ ಪಾತ್ರವು ನಮ್ಮ ಯುವಕರದಾಗಿದೆ… ಎಂದು ಮಹಾತ್ಮಾ ಗಾಂಧೀಜಿಯವರು ಹೇಳಿದ್ದಾರೆ.. “Youths are the salt of Nation” ಎಂದು! ನಮ್ಮ ರಾಷ್ಟ್ರದ ಚೇತನದಂತಿದ್ದ ವಿವೇಕಾನಂದರು ನಮ್ಮ ಯುವ ಜನಾಂಗಕ್ಕೆ ಪ್ರೇರಣೆಯ ಒಂದು ಸ್ರೋತವಿದ್ದಂತೆ. ಅವರೂ ಕೂಡ ಯುವಶಕ್ತಿಯನ್ನು ಅರಿತವರಾಗಿದ್ದರು.. ಆದ್ದರಿಂದಲೇ ಅವರು “ಎದ್ದೇಳಿ ಯುವಕರೆ.. ನಿಮ್ಮ ಗುರಿಯನ್ನು ತಲುಪುವ ವರೆಗೂ ಎಲ್ಲಿಯೂ […]