ಎಂಥ ಆನಂದ ಸ್ವತಂತ್ರ ಭರತ ಖಂಡ ಒಂದಾಗಿದೆ.. ಕಾಶ್ಮೀರ ಇನ್ನೂ ಹತ್ತಿರ ವಾಗಿದೆ. ಶತ್ರುಗಳ ಸದ್ದಡಗಿದೆ. ತ್ರೀವರ್ಣ ಧ್ವಜ ಮತ್ತಷ್ಟೂ ಎತ್ತರಕ್ಕೆ ಹಾರಾಡಿದೆ. ಬನ್ನಿ ಬನ್ನಿ ಎಲ್ಲ ಅನ್ನಿ ಜನಗಣಮನ ಎಲ್ಲೆಡೆ ಮೊಳಗಲಿ , ಇನ್ನೂ ಸದೃಢ ಭಾರತ ನಮ್ಮದಾಗಲಿ..ಕವಿಜು 🇮🇳🇮🇳🇮🇳🇮🇳👍😊
Author: vijaya inamdar
ನಮ್ಮ ಗೋಕಾಕ ಫಾಲ್ಸ್ ಪ್ರವಾಸ ಕಥನ
ಅದು ಎಲ್ಲರಿಗೂ ಅತೀ ಕುತೂಹಲ ತುಂಬಿರುವ ಮುಂಜಾನೆ ೨೧ ಜುಲೈ ೨೦೧೯*ಗೋಕಾಕ್ ಫಾಲ್ಸ್ ಗೋಕಾಕ್ ಫಾಲ್ಸ್*..ನಾವೆಲ್ಲರೂ ರವಿವಾರ ಕಣ್ಣು ತೆಗೆದಾಗ ಮುಂಜ ಮುಂಜಾನೆ ೪:30 ಆಗಿತ್ತು ಎಲ್ಲರೂ ಅರ್ಭಾಟ ತಯಾರ ಆಗಿ ಕಬ್ಬೂರ ರಸ್ತೆ ಬದಿಯಲ್ಲಿ ಇರುವ ನೀರಿನ ಟಾಕಿಗೆ ಬಂದು ನಿಂತಾಗ ೬ ಹೊಡದಿತ್ತು.ಅವ್ರು ಬಂದ್ರಿಲ್ಲೋ ಇವ್ರು ಬಂದ್ರಿಲ್ಲೋ ಅನಕೋತ ಎಲ್ಲಾ ಲಗೇಜು ಪಗೇಜು ಹಾಕಿ ನಡ್ರಿ ಹೋಗುಣ ಇನ್ನ ಅಂದಾಗ ೭ ಹೊಡದಿತ್ತು.. ಎಲ್ಲಾರೂ ಟೈಂಶೀರ ಬಂದಿದ್ದರಿಂದ ನಾವು ಅಂದಕೊಡಂಗ *ಸೊಗಲ* ಕ್ಕೆ ೯:೩೦ […]
ಮಾತು
ಮಾತು.. ಮಾತು ಹೇಗಿರಬೇಕು??? ಮನುಷ್ಯನಿಗೆ ದೇವರು ಕೊಟ್ಟ ದೊಡ್ಡ ವರ..ಇದರಿಂದ ಯೋಚನೆ ಸಾಧ್ಯ. .ಹುಟ್ಟಿದಾಗ ಕೂಸು ” *ಅಮ್ಮ* “ಎಂಬ ಶಬ್ದದಿಂದ ಮಾತು ಆರಂಭಿಸುತ್ತದೆ.. ಅಮ್ಮ ನನಗೆ ಹಸಿವೆಯಾಗಿದೆ.ಹೀಗೆ ಮಾತು ಮೊದಲು ತಿಳಿಸಲು ಅಥವಾ ಹೇಳಲು ಬೇಕೇಬೇಕು.ನಂತರ ನಮ್ಮ ಪರಿಚಯಕ್ಕೆ ಬೇಕು..ನಮ್ಮ ಸಂಶಯ ನಿವಾರಣೆಗೆ ಕೇಳಲುಬೇಕು.. ತಿಳಿದದ್ದನ್ನು ಆಸಕ್ತರಿಗೆ ಹೇಳಲು ಬೇಕು. *ಮಾತು ಬೆಳ್ಳಿ ಮೌನ ಬಂಗಾರ* ನಿಜ ಆದರೂ ಮಾತು ಅವಶ್ಯವಿದ್ದಲ್ಲಿ ಆಡಲೇ ಬೇಕು.ಇನ್ನೂ ಮಾತು ಹೇಗಿರಬೇಕು ?ಅಂದರೆ ಮಾತು ಮನಮುಟ್ಟುವಂತೆ, ಯಾರಿಗೂ […]
ಉಳವಿ ಬಸಪ್ಪನ ಜಾತ್ರಿ
ಅಣ್ಣಾ ನಿನಗ ಎಷ್ಟ ಮಿರ್ಚಿ ಅಕ್ಕಾರ ನಿಮಗ ಗಿರಮಿಟ್ ಕೊಡಲಿ..ಲೆ ಗಿಡ್ಡ ಒಂದ ಬಳ್ಳೊಳ್ಳಿ ಚುರಮರಿ ತಾ ಇಲ್ಲೆ ..ಚಹಾ ಹಾಕ..ನಾಲ್ಕನೇ ಶ್ರಾವಣ ಸೋಮವಾರ ಬಂತಂದ್ರ ಇಷ್ಟ ಅಳತಿ ಗದ್ದಲಾ ಧಾರವಾಡ ಉಳವಿ ಬಸಪ್ಪನ ಜಾತ್ರ್ಯಾಗ ಸಿಗ್ತದ ಹುಡುಗುರಗೇ ಸಾಲಿ ಸೂಟಿ,ನಡಿ ಮೂರು ಸಂಜಿ ಆತ ಅಂದ್ರ ನಡಿ ಮಾಳಮಡ್ಡಿ ಬಸಪ್ಪನ ಜಾತ್ರಿ ಸಡ್ಲ ಇಲ್ಲದ ಗುಡಿಗೂ ಪಾಳಿ ಮಿರ್ಚಿ ಟೆಂಟಗೂ ಪಾಳಿ….ಬಿಟ್ರ ಹಾರು ಪುಗ್ಗಾದ ಮಜಾ. ತಿರಗೂ ಜೋಕಾಲಿ, ಹೇ ಅಂದಂಗ ಮರತ ಬಿಟ್ಟಿದ್ದೆ ಸಣ್ಣ […]
ಮಳೆ ಈ ಮಳೆ
ಆಷಾಢ ಮೋಡ ಸರಿಸಿ ಬಂದಳು ಈ ಶ್ರಾವಣ ಮಳೆ ಎಲ್ಲೇಡೆ ಹಸಿರಿನ ಚಾಪೆ ಹಾಸಿದ ಈ ಮಳೆ ಆಸೆಯ ಶ್ರಾವಣಕ್ಕೆ ಮೊದಲ ಈ ಮಳೆ ತವರಿಗೆ ಹೊಗುವ ಅಕ್ಕ -ತಂಗಿಯರಿಗೆ ತಳಿ ಹಾಕುವ ಈ ಮಳೆ ಒಟ್ಟು ಶ್ರಾವಣ ಸಂಭ್ರಮಕ್ಕೆ ಮಣೆ ಹಾಕುವ ಈ ಮಳೆ.. ವಿಜಯ ಇನಾಮದಾರ ಧಾರವಾಡ
ಶ್ರಾವಣ ಮಳೆ
ಧಾರವಾಡ ಬೆಸುಗೆ ಯ ಕವಿ ಗೋಷ್ಠಿಯಲ್ಲಿ ನಾ ಹೇಳಿದ ಸ್ವ ರಚಿತ ಮಳೆ ಕವನ “ಎಲ್ಲರ ಚಿತ್ತ ಕಾರ್ಮುಗಿಲಿನತ್ತ ಕಾರ್ಮುಗಿಲು ನಿಂತಿದೆ ಭೂವಿಯ ಮಿಲನದತ್ತ ನಿಮ್ಮಿಬ್ಬರ ಮಿಲನದಿ ಭೋರ್ಗೆರೇ ಓ ಮಳೆ ಕೊಡು ಬೇಗ ರೈತನ ಬೆಳೆಗೆ ಆ ಭರ್ಜರಿ ಹಸಿರು ಕಳೆ ಸಾಕಿನ್ನೂ ಮಳೆಗಾಗಿ ಕಪ್ಪೆ ಕಂಕಣ ಹೋಮ ಹವನ ನಿನಗಾಗಿ ಇದು ಕವಿ ವಿಜಯ ನ ಕವನ..”* ವಿಜಯ ಇನಾಮದಾರ ಧಾರವಾಡ
ಕಟಿಂಗ್ ಕಟಿಂಗ್..
ಕಟಿಂಗ ಕಟಿಂಗ .. ಲೇ ರಾಮ್ಯಾ ..ರಾಮ್ಯಾ ಅವ್ವ ಬಂದೆ..ಬಂದೆ..ಹೇಳ ವಾ ಟೈಮ್ ನೋಡ ಅಲ್ಲೆ ಯೋಳು ಆತ ಕಟಿಂಗ ಮಾಡಸಿ ಕೊಂಡ ಬಾ ಹೋಗ ಶ್ರಾವಣ ಬಂತಂದ್ರ ಆಗುದಿಲ್ಲಾ… ಹೊಂಟೆ ಹೊಂಟೆ. ಲೇ ಎಷ್ಟ ಲಗು ಬಂದಿ ಲೆ?… ಅಯ್ಯ ಸುಡ್ಲಿ..ಏನ ಕಟಿಂಗ ಇದು? ಕೂದಲ ತಗದಿಲ್ಲ..ಕೆಳಗ ಸಣ್ಣ ಮ್ಯಾಲೆ ತಗದಿಲ್ಲಾ..ಅಲ್ಲಾ ಎರಡ ಗೆರಿ ಏನಿವು?ನಾಯಿಗೆ ಬರಿ ಕೊಟ್ಟಂಗ?.. ಹೋಗ ಹೋಗ ವಾಪಸ್ ಹೋಗ? ರೊಕ್ಕ ಏನ ಮ್ಯಾಲಿಂದ ಉದರತಾವೇನ ಮಗನಾ? ನಾ ಹೊಗುದಿಲ್ಲಾ ನಾನ […]
ನಮ್ಮ ಹಬ್ಬ ನಮ್ಮ ಧಾರವಾಡ ಸಂಸ್ಕೃತಿ
ಏ ಲಘು ಲಘು ಆರತಿ ಮಾಡ್ರಿ ಪಾ ಏಷ್ಟೋತ್ತ ಮಾಡ್ತಿರಿ. ತಡಿಯೋ ಮಾರಾಯಾ ಇನ್ನ ನೈವೇದ್ಯ ನ ಆಗಿಲ್ಲಾ.ಲೇ ರಾಮಾ ಬಾಳಿ ಎಲಿ ತಂದಿ. ಅಯ್ಯೋ! ತಂದಿಲ್ಲಾ ಮರತ ಬಿಟ್ಟೆ. ಎನ ಪಾ ನೀ ಹಿಂಗ ಮಾಡತಿ ತಲಿ ಚಿಟ್ಟ ಹಿಡಸತಿ.ಹೋಗ ಹೋಗ ಗುಡಿ ಹತ್ತರ ಸಿಗತಾವ ಲಘೂನ ತಗೋಂಡ ಬಾ, ಸೈಕಲ ತಗೋಂಡ ಹೋಗ ಲೆ ಮತ್ತ. ಅಲ್ಲರ್ರಿ ಚೌಕಟ್ಟಿಗೆ ಮಾವಿನ ತೋಳಲು ಕಟ್ಟಿರ್ರಿ.ಹಾ ಕಟ್ಟಿನಿ ಮಾಹರಾಯತಿ ಮಾಲಿ ತಂದಿನಿ.ಹಾಲ ತಂದಿನಿ.ಕೈಶಾವಿಗೆ ಬಂದಾವ. ನೀ ರಂಗೋಲಿ […]
ಅಳ್ಳಿಟ್ಟು ಅರಳ್ಳಿಟ್ಟು
ಅಳ್ಳಿಟ್ಟು– ಇದು ಉತ್ತರಕರ್ನಾಟಕದ ಸುಪ್ರಸಿದ್ಧವಾದ ತಿಂಡಿ ಇದನ್ನು ಸಾಮಾನ್ಯವಾಗಿ ಬ್ರಾಹ್ಮಣರು ಅನಾದಿಕಾಲದಿಂದಲೂ ತಿನ್ನುತ್ತಾ ಬಂದಾರ.ಇದು ಅಳ್ಳಿನ ಜೊಳದಿಂದ ಮಾಡಿದ ಪದಾರ್ಥ. ಇದನ್ನ ಹ್ಯಂಗ ಮಾಡುದಪಾ ಅಂದ್ರ?ಮೊದಲು ಅಳ್ಳೀನ ಜೋಳ ನೀರಾಗ ಹಾಕಿ ಹತ್ತಿಪ್ಪತ್ತು ನಿಮಿಷ ಕುದಿಸಿ ನೀರಿನಿಂದ ಹೊರಗ ತಗಿಬೇಕು,ನೀರನ್ನ ಎಲ್ಲಾ ಬಸದು ಜೋಳ ನೆರಳಾಗ ಆರಲಿಕ್ಕೆ ಇಡಬೇಕು .ಆಮೇಲೆ ಕಬ್ಬಿಣದ ಬುಟ್ಟಿಯೊಳಗೆ ಜೋಳ ಹಾಕಿ ಹುರಿಬೇಕು ಅಂದರ ರೋಸ್ಟ್ಮಾಮಾಡುದು ಅಂತಾರಲ್ಲಾ ಆಗ ಅಳ್ಳು ಮ್ಯಾಲೆ ಬರತಾವ. ಅದನ್ನಗಿರಣಿಗೆ ಹಾಕಿಸಿದರ ಆತು.ಅಳ್ಳೀಟ್ಟು ತಯಾರ ಆದಂಗ. ಇದರಾಗ ನಾರಿನ […]