ಉತ್ಸವ ರಾಕ್ ಗಾರ್ಡನ್ ನಲ್ಲಿ ಗ್ರಾಮರಾಜ್ಯದ ಪುನರುತ್ಥಾನ

ಕಾರ್ಪೋರೇಟ್ ಜಗತ್ತಿನ ಅಬ್ಬರದ ಪರಿಣಾಮ ನಮ್ಮ ಜನಪದ ಸಂಸ್ಕøತಿ, ದೇಶೀಯತೆ ಅನ್ನೋದು ಬರೀ ಭಾಷಣದ ಸರಕಾಗಿದೆ. ಅದರ ಕಲ್ಪನೆಯೂ ಮಕ್ಕಳಿಗಿಲ್ಲ. ಅದರ ಬಗ್ಗೆ ಕಲ್ಪನೆ ಮೂಡಿಸುವ ಪ್ರಯತ್ನಗಳೂ ಕಡಿಮೆನೇ ಅಂತ ಹೇಳಬಹುದು. ಹಾಗಾದರೆ ಈ ಮಕ್ಕಳಿಗೆ ಇವೆಲ್ಲದರ ಪರಿಚಯ ಬೇಡವೇ? ಬೇಕು ಯಾರು ಈ ಕೆಲಸ ಮಾಡಬೇಕು. ಹೇಗೆ ಮಾಡಬೇಕು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಗೋಟಗೋಡಿಯಲ್ಲಿದೆ.

ಇಂದಿನದು ಧಾವಂತದ ಬದುಕು. ಯಾವುದಕ್ಕೂ ಸಮಯಾವಕಾಶವಿಲ್ಲ.ಇದಕ್ಕೆ ಜೀವನದ ಮಹತ್ವಘಟ್ಟವೆಂದೇ ಕರೆಯಲ್ಪಡುವ ಮದುವೆಯೂ ಹೊರತಾಗಿಲ್ಲ.ಸುದೀರ್ಘ ಆಚರಣೆಗಳಿಗೆ ಗುಡ್‍ಬೈ ಹೇಳಿ ಫಟಾಫಟ್ ಮದುವೆಯಾಗಿ ಮರುದಿನವೇ ಹನಿಮೂನ್‍ಗೆ ತೆರಳುವ ಪರಿಪಾಠ ಬೆಳೆದಿದೆ.ಆಧುನಿಕತೆಯ ಅಬ್ಬರಕ್ಕೆ ಸಿಲುಕಿದ ನಾವಿಂದು ಕೆಲಸದ ಒತ್ತಡ ಹಾಗೂ ಬದಲಾದ ಜೀವನಶೈಲಿಯಿಂದ ಮದುವೆಯಂತಹ ಅತ್ಯಮೂಲ್ಯ ಕ್ಷಣಗಳ ಕಾರ್ಯಕ್ರಮಗಳ ರಸಾಸ್ವಾದಿಸುವಲ್ಲಿ ವಿಫಲರಾಗಿದ್ದೇವೆ. ಒಂದಿಷ್ಟು ಸ್ನೇಹಿತರು, ಸಹೋದ್ಯೋಗಿಗಳು ಸೇರಿಕೊಂಡು ಯಾವುದೋ ಒಂದು ಹಾಲ್‍ನಲ್ಲಿ ರಿಸೆಪ್ಷನ್ ಮಾಡಿ ಮುಗಿಸುವ ರೂಢಿ ಬೆಳೆಸಿಕೊಂಡಿದ್ದೇವೆ. ಈ ರೂಢಿ ಹೀಗೆ ಮುಂದುವರಿದಲ್ಲಿ ಮುಂದೊಂದು ದಿನ ಹಿಂದಿನ ಕಾಲದಲ್ಲಿ ಮದುವೆಗಳು ಹೀಗಾಗುತ್ತಿದ್ದವು ಎಂದು ಮುಂದಿನ ಪೀಳಿಗೆಗೆ ಹೇಳುವ ಸ್ಥಿತಿ ಬರುವುದು ಖಚಿತ.
ಆದರೆ ಕ್ರಿಯಾಶೀಲ ವ್ಯಕ್ತಿತ್ವ ಮತ್ತು ಸೃಜನಶೀಲತೆಯನ್ನು ಅಳವಡಿಸಿಕೊಂಡ ಹಲವರು ಇಂದಿಗೂ ನಮ್ಮ ಮಧ್ಯೆ ಇದ್ದಾರೆ. ಸಂಪ್ರದಾಯಬದ್ಧವಾಗಿ ಹಿಂದಿನ ದಿನಗಳಲ್ಲಿ ಮದುವೆಗಳು ಹೇಗೆ ನಡೆಯುತ್ತಿದ್ದವು ಎಂಬುದನ್ನು ಬರೀ ಮಾತಿನಿಂದ ಅಲ್ಲ. ಅದಕ್ಕೆ ಒಂದು ಚಿತ್ರ ಹಾಗೂ ಮೂರ್ತಿರೂಪ ಕೊಟ್ಟು ವಿವರಿಸುವ ಸಾಹಸಕ್ಕೆ ಹಾಕಿದ್ದಾರೆ ಗೋಟಗೋಡಿಯ ಉತ್ಸವ ಗಾರ್ಡನ್‍ನ ಪೆÇ್ರ. ಪೆÇ್ರ. ಟಿ.ಬಿ. ಸೊಲಬಕ್ಕನವರ.ದಾವಣಗೆರೆಯ ಜಿ.ಕೆ.ಫೈನ್ ಆಟ್ರ್ಸ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದವರು. ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕøತರೂ ಹೌದು. ಇವರ ತಲೆಯಲ್ಲಿ ನೂರೆಂಟು ಯೋಜನೆಗಳು. ಇವರು ಅತ್ಯುತ್ತಮ ಶಿಲ್ಪಕಲಾಕೃತಿ ರಚನಾಕಾರರು ಇವರ ಬಳಿ ಅಪಾರವಾದ ಶಿಷ್ಯ ಬಳಗವಿದೆ. ಇವರ ಯೋಜನೆಗೆ ತಕ್ಕನಾಗಿ ಆರ್ಥಿಕವಾಗಿ ಬೆಂಬಲಕ್ಕೆ ನಿಂತವರು ಅಳಿಯ ಜನಪದ ಪ್ರೇಮಿ ಪ್ರಕಾಶ ದಾಸನೂರ.
ಏನಿದು ಆರ್ಟ್ ಮ್ಯೂಸಿಯಂ?
ಹಿಂದಿನ ತಲೆಮಾರಿನ ಜನ ಮದುವೆಯನ್ನು ಒಂದು ಸಂಭ್ರಮದ ಉತ್ಸವವನ್ನಾಗಿ ವಾರಗಟ್ಟಲೇ ಆಚರಿಸುತ್ತಿದ್ದರು. ಮದುವೆ ಪೂರ್ವ ಹಲವು ಆಚರಣೆಗಳು ಜಾರಿಯಲ್ಲಿದ್ದವು.ವೈಷ್ಣ ಸಂಪ್ರದಾಯದಂತೆ ಅಗ್ನಿ ಸಾಕ್ಷಿಯಾಗಿ ಮದುವೆಯಾಗುತ್ತಿದ್ದರೆ, ಶೈವ ಸಂಪ್ರದಾಯದಲ್ಲಿ ಪಂಚಕಲಶಗಳನ್ನಿಟ್ಟು ಮದುವೆ ಮಾಡುತ್ತಿದ್ದರು. ಅದೇ ರೀತಿ ಜೈನ ಸಂಪ್ರದಾಯದಲ್ಲಿ ಮದುವೆ ಸಂಪ್ರದಾಯ ಹೇಗಿತ್ತು ಎಂಬುದಕ್ಕೆ ಇಲ್ಲಿದೆ ಸಚಿತ್ರ ಉತ್ತರ. ಮುಕ್ತಾಯ ಹಂತದಲ್ಲಿರುವ ಮದುವೆ ಮಾಹಿತಿ ಬಿಂಬಿಸುವ ಈ ಮ್ಯೂಸಿಯಂ ಮುಂದಿನ ಪೀಳಿಗೆಗೆ ನಿಜಕ್ಕೂ ಒಂದು ಮಾರ್ಗದರ್ಶಕ ಕೇಂದ್ರ. ಒಂದು 25*40 ವಿಸ್ತಾರದ ವಿಶಾಲವಾದ ಈ ಮ್ಯೂಸಿಯಂನಲ್ಲಿ ವೇದಿಕೆ ಅದರಲ್ಲಿ ವಿವಿಧ ಸಂಪ್ರದಾಯದ ಮದುವೆ ಪದ್ಧತಿಯ ಸಿಮೆಂಟ್ ಕಲಾಕೃತಿಗಳನ್ನು ಇಡಲಾಗಿದೆ. ವೇದಿಕೆ ಎದುರಿನ ಗೋಡೆಗಳ ಮೇಲೆ ಗ್ರಾಮಿಣ ಬದುಕಿನ ಸೊಗಡು ಅನಾವರಣಗೊಳಿಸುವ ಗ್ಲಾಸ್ ಪೇಂಟಿಂಗ್‍ಗಳು. ಇನ್ನುಳಿದಂತೆ ಮನಸೂರೆಗೊಳ್ಳುವ ಕೆತ್ತನೆಗಳು ಹಾಗೂ ತೈಲವರ್ಣಗಳು.
ಗ್ಲಾಸ್ ಪೇಂಟಿಂಗ್ ಲೋಕ
ಮೈಸೂರು ಮಹಾರಾಜರ ಕಾಲದಿಂದಲೂ ನಮ್ಮಲ್ಲಿ ಜಾರಿಯಲ್ಲಿದ್ದ ಗ್ಲಾಸ್ ಪೇಂಟಿಂಗ್‍ಗಳು ಇಂದು ನೋಡಲು ಅಪರೂಪ. ಆದರೆ ಈ ಮಾದರಿ ಪೇಂಟಿಂಗ್ ಕಲಾಕೃತಿಗಳು ನಮಗಿಲ್ಲಿ ನೋಡಲು ಲಭ್ಯ.ತಂಜಾವೂರು ಶೈಲಿಯ ಗ್ಲಾಸ್ ಪೇಂಟಿಂಗ್ ಕಲಾಕೃತಿಗಳು ಇಲ್ಲಿವೆ.ಬದಲಾವಣೆಗೆ ಓಗೊಟ್ಟ ಮನುಷ್ಯ ಕಾಲಕ್ಕೆ ತಕ್ಕನಾಗಿ ಎಲ್ಲದರಲ್ಲೂ ಬೆಳವಣಿಗೆ ಕಂಡಿದ್ದಾನೆ. ಇದಕ್ಕೆ ಈ ಪೇಂಟಿಂಗ್ ಕೂಡ ಹೊರತಾಗಿಲ್ಲ. ಫೈಬರ್ ಗ್ಲಾಸ್‍ಗಳ ಬಳಕೆ ಈಗ ಹೆಚ್ಚು ರೂಢಿಯಲ್ಲಿದ್ದು ಈ ಗ್ಲಾಸ್‍ಗಳ ಮೇಲೆ ಸಮಕಾಲೀನ ಸ್ಥಿತಿಗಳ ಸ್ಪಂದನೆಯನ್ನು ಕಾಣಬಹುದಾಗಿದೆ. ಫೈನ್ ಆರ್ಟ್‍ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವ ನಾಲ್ಕು ಜನ ನಿಷ್ಣಾತ ಕಲಾವಿದರು ಹಗಲಿರುಳು ಪೇಂಟಿಂಗ್‍ನಲ್ಲಿ ನಿರತರಾಗಿದ್ದು ಗ್ರಾಮೀಣ ಹಾಗೂ ಕಾಡಿನ ಬದುಕನ್ನು ತಮ್ಮ ಕುಂಚದ ಮೂಲಕ ಸೊಗಸಾಗಿ ಅನಾವರಣಗೊಳಿಸುತ್ತಿದ್ದಾರೆ.ಗೋಡೆಗೆ ತೂಗು ಹಾಕಿದಾಗ ಪಾರದರ್ಶಕವಾಗಿ ಕಾಣುವ ಈ ಪೇಂಟಿಂಗ್‍ನ ವಿಶೇಷವೆಂದರೆ ಫಾರ್ಮಲ್ ಬ್ಯಾಲೆನ್ಸ್.ನಾಲ್ಕು ದಿಕ್ಕಿನಿಂದ ನೋಡಿದರೂ ಕಲಾಕೃತಿಯ ಸ್ವರೂಪ ಮತ್ತು ಅಂದ ಒಂದೇ ತೆರನಾಗಿ ಕಾಣುತ್ತದೆ. ಇದು ಕಲಾವಿದನ ಕೈಚಳಕಕ್ಕೆ ಹಿಡಿದ ಕೈಗನ್ನಡಿ.
ಗ್ರಾಮಿಣ ಸೊಗಡು
ಸಾಂಪ್ರದಾಯಿಕ ವೃತ್ತಿಗಳ ಬಗ್ಗೆ ಆಳವಾದ ಚಿತ್ರಣ ಅದೂ ಸಿಮೆಂಟ್ ಕಲಾಕೃತಿಗಳೊಂದಿಗೆ, ಉಳುಮೆ, ಬಿತ್ತನೆ, ಕಮ್ಮಾರಿಕೆ, ನೇಕಾರಿಕೆ, ಜ್ಯೋತಿಷ್ಯ ಹೇಳುವುದು, ವ್ಯಾಪಾರ ಮಾಡುವುದು, ಹಳ್ಳಿ ಶಾಲೆಯ ಚಿತ್ರಣ ಒಂದೇ ಎರಡೇ ಇಡೀ ಒಂದು ಹಳ್ಳಿಯ ಚಿತ್ರಣವೇ ನಿಮ್ಮ ಕಣ್ಣೆದುರು ಇಲ್ಲಿ ಗೋಚರಿಸುತ್ತದೆ. ಸಾಲುಮರದ ತಿಮ್ಮಕ್ಕಳ ಪರಿಸರ ಕಾಳಜಿಯನ್ನು ಸಿಮೆಂಟ್ ಕಲಾಕೃತಿಯಲ್ಲಿ ಸೆರೆಹಿಡಿಯಲಾಗಿದೆ. ಜತೆಗೆ ಕವಲೆತ್ತು, ಹಸುಗಳು, ಎಮ್ಮೆಗಳ ಕಲಾಕೃತಿಗಳಿಗೆ ಮುತ್ತು ಜೋಡಿಸಿ ಮೇಲೆ ಗಾಜಿನ ಪೆಟ್ಟಿಗೆ ಹಾಕಿ ಭದ್ರವಾಗಿ ಇಡಲಾಗಿದೆ. ನೋಡಿದವರು ನೈಜ ಪ್ರಾಣಿಗಳೆಂದೇ ಭಾವಿಸುವಷ್ಟು ಜೀವಕಳೆ ಈ ಕಲಾಕೃತಿಗಳದ್ದಾಗಿದೆ. ನಮ್ಮ ಸರ್ಕಾರ ಅಬ್ಬಬ್ಬಾ ಅಂದರೆ ಏನು ಮಾಡಬಹುದು ಹೇಳಿ ಈ ಎಲ್ಲ ಸಂಸ್ಕøತಿ, ಸಂಪ್ರದಾಯಗಳ ಬಗ್ಗೆ ಪುಸ್ತಕದಲ್ಲಿ ಚಿತ್ರ ಹಾಕಿ ವಿವರಿಸಬಹುದು ಅಷ್ಟು ಸಾಲದು. ಈ ಎಲ್ಲ ವಿಶೇಷತೆಗಳನ್ನು ಕಣ್ಣೆದುರಿಗೆ ಕಟ್ಟಿಕೊಡುವ ಈ ಪ್ರಯತ್ನ ಇಲ್ಲಿ ಕಾಣಬಹುದು. ಜನಪದ ಸಂಸ್ಕøತಿಯ ಒಂದು ಅಂಗವಾಗಿರುವ ಬಯಲಾಟ, ರಂಗಭೂಮಿಯನ್ನು ಪರಿಚಯಿಸುವ ಉದ್ದೇಶದಿಂದ ಇಲ್ಲಿ ಬಯಲು ರಂಗಮಂದಿರ ನಿರ್ಮಿಸಲಾಗಿದೆ. ವಿಶಾಲವಾದ ವೇದಿಕೆ(ಕಟ್ಟೆ) ಎದುರು ದೊಡ್ಡ ಬಯಲು ಅಲ್ಲಲ್ಲಿ ಕೂರಲು ಕಲ್ಲಿನ ಕಟ್ಟೆಗಳನ್ನು ಹಾಕಲಾಗಿದೆ. ಇದರ ಎದುರಿನ ಸ್ಥಳದಲ್ಲಿ ಇರುವ ಚಿಕ್ಕ ಕೆರೆಯಲ್ಲಿ ಬೋಟ್‍ಗಳನ್ನು ಇರಿಸಲಾಗಿದ್ದು ಮಕ್ಕಳಿಗೆ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಹೀಗೆ ಒಂದೇ ಎರಡೇ ಹಲವು ಅಪರೂಪದ ಕಲಾಕೃತಿಗಳು, ಗ್ರಾಮೀಣ ಬದುಕಿನ ಹಲವು ಆಯಾಮಗಳು ಇಲ್ಲಿ ಲಭ್ಯ. ನವ್ಯ ಮತ್ತು ನೈಜ ಶಲ್ಪ ಚಿತ್ರ ಕಲಾಖೃತಿಗಳನ್ನೊಳಗೊಂಡ ಅಪೂರ್ವ ಶಿಲ್ಪವನ ಇದಾಗಿದ್ದು ಮನರಂಜನೆಯ ಪ್ರವಾಸಿ ಕೇಂದ್ರವಲ್ಲದೇ ಸಾಂಸ್ಕøತಿಕ ಶೈಕ್ಷಣಿಕ ಕೇಂದ್ರವೂ ಆಗಿದೆ. ಹಾಗಿದ್ದರೆ ತಡವೇಕೆ ಇಂದೇ ಹೊರಡಿ.ಮಿಸ್ ಮಾಡ್ಕೊಬೇಡಿ.

ಕೋಟ್……
ಈ ಹಿಂದೆ ಮನುಷ್ಯನ ಜೀವನಶೈಲಿ ಅಂದರೆ ಹೆರಿಗೆಯಿಂದ ಹಿಡಿದು ಮದುವೆÀವರೆಗೆ ಯಾವ ರೀತಿ ಆಚಾರ ವಿಚಾರಗಳಿದ್ದವು ಎಂಬುದನ್ನು ವಿವರಿಸುವ ಕಲಾಕೃತಿಗಳನ್ನೊಳಗೊಂಡ 100 ಅಡಿಯ ಟಾವರ್ ನಿರ್ಮಿಸುವ ಕಾರ್ಯ ಸಾಗಿದೆ. ಈ ಯೋಜನೆಯ ಹೆಸರು ಹಪಾಹಪಿಗೊಂದು ಉತ್ತರ. ಈ ಟಾವರ್ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಇಷ್ಟರಲ್ಲೇ ಲೋಕಾರ್ಪಣೆಯಾಗಲಿದೆ.
-ಪೆÇ್ರ. ಟಿ.ಬಿ. ಸೊಲಬಕ್ಕನವರ

ಹೇಗೆ ಹೋಗೋದು?
ಈ ಗಾರ್ಡನ್‍ಗೆ ಹೋಗಬೇಕೆಂದರೆ ಹುಬ್ಬಳ್ಳಿಯಿಂದ ಹಾವೇರಿಗೆ ಹೋಗುವ ರ್ಟ್ರಾೀಯ ಹೆದ್ದಾರಿ ಮಧ್ಯೆ ಬರುವ ಗೋಟಗೋಡಿ ಗ್ರಾಮ ಬಳಿ ಇಳಿಯಬೇಕು. ಹುಬ್ಬಳ್ಳಿುಂದ 37 ಕಿ,ಮೀ. ಹಾಗೂ ಶಿಗ್ಗಾವಿಯಿುಂದ 6 ಕಿ.ಮೀ ದೂರದಲ್ಲಿದೆ. ಖಾಸಗಿ ವಾಹನ ಮಾಡಿಕೊಂಡು ಹೋದರೆ ಉತ್ತಮ. ಬೆಳಗ್ಗೆನೇ ಹೊರಟರೆ ಸಂಜೆವರೆಗೂ ಅರಾಮಾಗಿ ವಿಹರಿಸಿ, ಆನಂದಿಸಬಹುದು. ಮಧ್ಯಾಹ್ನ ಊಟವೂ ಇಲ್ಲಿಯೇ ಲಭ್ಯ. ಆದರೆ ಯಾವುದೇ ಜಂಕ್‍ಫುಡ್‍ಗೆ ಇಲ್ಲಿ ಅವಕಾಶವಿಲ್ಲ. ಇಲ್ಲೇನಿದ್ದರೂ ಪಕ್ಕಾ ದೇಶಿ ಊಟ. ಮನೆಯಿಂದಲೇ ಕಟ್ಟಿಕೊಂಡು ಬರಬಹುದು ಇಲ್ಲದಿದ್ದರೆ ಬಂದ ತಕ್ಷಣ ಇಲ್ಲಿ ಹೇಳಿದರೆ ಸಾಕು . ಮಧ್ಯಾಹ್ನದ ಹೊತ್ತಿಗೆ ಬಿಸಿ ಬಿಸಿ ಜೋಳದ ರೊಟ್ಟಿ, ವಿವಿಧ ತರಹದ ಪಲ್ಯೆಗಳು, ಹಲವು ಮಾದರಿಯ ಚಟ್ನಿ ಸಿದ್ಧವಾಗಿರುತ್ತವೆ.

www.utsavrock.com

Leave a Reply