ಜಿಂದಗಿ ಏಕ ಸಫರ್ ಹೈ ಸುಹಾನಾ..

ಜಿಂದಗಿ ಏಕ ಸಫರ್ ಹೈ ಸುಹಾನಾ..
ಒಬ್ಬ ಹಿರಿಯರು ದಿನಾಲೂ ಬೆಳಿಗ್ಗೆ walking ಹೋಗುತ್ತಿದ್ದರು. ಪ್ರತಿದಿನವೂ ಅವರಿಗೆ ಒಂದು ದೊಡ್ಡ ಬಂಡೆಯ ಮೇಲೆ ಮಲಗಿ ದೊಡ್ಡ ಬಂಡೆಯ ಮೇಲೆ ಮಲಗಿ ತಾಸುಗಟ್ಟಲೇ ಆಕಾಶ ದಿಟ್ಟಿಸುವ ಹದಿಹರೆಯ ಹೈದ ನೋಡಲು ಸಿಗುತ್ತಿದ್ದ. ಎರಡು ದಿನ ಮುಗುಳ್ನಕ್ಕು ಮುಂದೆ ಹೋದ ಅವರು ಮೂರನೇದಿನ ಅವನ ಬಳಿ ಹೋಗಿ ಕುಳಿತರು. ಬಹುಶಃ ಧುಮ್ಮಿಕ್ಕಿ ಹರಿಯುವ ಕಾವೇರಿ ನೀರು ಕಂಡಾಗ ವಿಶ್ವೇಶ್ವರಯ್ಯ ಅವರಿಗೆ ಅನಿಸಿದ ಹಾಗೆ, “Oh!! What a waste of energy” ಅನಿಸಿರಲು ಸಾಕು….
ಬಳಿ ಕುಳಿತ ಹಿರಿಯರನ್ನು ಕಂಡ. ಯುವಕ ಮುಗುಳ್ನಕ್ಕು ಎದ್ದು ಕೂತ…
ಹಿರಿಯರು- “ಏನಪ್ಪಾ, ಏನ್ ಮಾಡ್ಕೊಂಡಿದೀಯಾ”?
ಯುವಕ- ಸಧ್ಯಕ್ಕೆ ಏನೂ ಇಲ್ಲ ತಾತ.
ಹಿ-ಯಾಕೆ ಏನಾದ್ರೂ ಮಾಡೋದಲ್ವಾ? ತುಂಬಾನೇ ಹುಶಾರಿದ್ದಹಾಗೆ
ಕಾಣ್ತಿಯಾ…
ಯು-ಯಾಕೆ ತಾತ?
ಹಿ- ದುಡಿಯೋಕೆ ಅಂತ ವಯಸ್ಸಿರುತ್ತೆ ಮಗು… ಆಗ
ದುಡಿದಿಟ್ಟುಕೊಳ್ಳಬೇಕು.
ಯು-ಅಂದ್ರೆ ಏನಾಗುತ್ತೆ?
ಹಿ- ಆಮ್ಯಾಲೆ ಚಿಂತೆನೇ ಇರಲ್ಲ ಕಣಯ್ಯ.. ಬೇಕಾದಷ್ಟು ಜನ ನಿನ್ಮ ಮೆಚ್ಚಿ ನಿನಗೆ ಹೆಣ್ಣು ಕೊಡಲು ನಾ ಮುಂದು… ನೀ ಮುಂದು ಅಂತಾ ಬರ್ತಾರೆ…
ಯು- ಬಂದ್ರೆ?
ಹಿ-ಮುದ್ದಾದ ಮಡದಿಯಿಂದ ಮುದ್ದಾದ ಮಕ್ಕಳು ಪಡೆದು, ಅವರನ್ನು ನಿಮಗೆ ಬೇಕಾದಂತೆ ಬೆಳೆಸಿ ಸಂತೋಷವಾಗಿರ್ಬಹುದು-
ಯು-ಆಮ್ಯಾಲೆ?
ಹಿ- ಮಕ್ಕಳನ್ನು ಓದಿಸಿ, ಮದುವೆ ಮಾಡಿ ಅವರನ್ನು ವಿದೇಶಕ್ಕೆ ಕಳಿಸಿ ನೀವೂ ಆರಾಮಾಗಿರಬಹುದು ಅಂತ ನಿನಗೆ ಅನಿಸೊಲ್ವಾ?
ಯು- ಏನ್ ತಾತ ನೀವು! ಈಗ ಬಯ್ತಿರೋದು ಏನ್ ಈ ಪರಿ ಆರಾಮಾಗಿದೆಯಾ.. ಅಂತಾನೇ ತಾನೇ? ನೀವು ಹೇಳಿದ ಆ ಎಲ್ಲಾ ಸರ್ಕಸ್ ಮಾಡ್ಬಿಟ್ಟೆ ಅಂತಾನೇ ಇಟ್ಕೊಳ್ಳಿ.. ಕೊನೆಗೆ ಸಿಗೋದೂ ಆರಾಮವೇ ತಾನೇ? ಈಗಲೇ ಅದನ್ನ ಅನುಭೋಗ್ಸತಿದೀನಿ ತಾತಾ ನಾನು…
ಅರೇ ಹಾದಲ್ವಾ? ಅನಿಸುವುದಿಲ್ಲವೇ ಒಂದು ಕ್ಷಣ… ಮದುವೆ, ಮಕ್ಕಳು ಸಂಸಾರ, ಅದರ ಜಂಜಾಟ, ಅದರ ಪಾಶ್ರ್ವ ಪರಿಣಾಮಗಳಾದ ಬಿಪಿ, ಶುಗರ್, ಒತ್ತಡ ಎಲ್ಲದರಲ್ಲೂ ಹಾಯುವಾಗ ಮನಸ್ಸು ಆನೆ(ಆರಾಮ ನೆಮ್ಮದಿ) ಬಯಸುತ್ತದೆ… ಎಲ್ಲ ಗಳ ನಡುವೆ ಹೋರಾಡಿ ಅದನ್ನು ಪಡೆಯಲು ಸೆಣಸುತ್ತದೆ… ಕೊನೆಗೊಮ್ಮೆ ಮನಶಾಂತಿ ಸಿಕ್ಕಾಗ ನೆಮ್ಮದಿಯಿಂದ ಉಸಿರಾಡಿಸುತ್ತದೆ…
ಅದು ಅನಾಯಾಸವಾಗಿ ಸಿಕ್ಕಾಗ ಅನುಭವಿಸಬೇಕೆಂಬುದೂ ಒಂದು ತರ್ಕವೇನೋ ಹೌದು… It is absolutely o.k. to be lazy sometimes… but not always…
ಅದೇ ಶಾಶ್ವತ ಪರಿಹಾರವಲ್ಲ… ನಮ್ಮೆಲ್ಲ ಶಕ್ತಿ ಸಾಮಥ್ರ್ಯ ಬಳಸಿ ಯುದ್ಧ ಗೆದ್ದು ಬೀಗುವದೂ ಒಂದು ಖುಶಿ. ರಣರಂಗದದಿಂದ ಓಡಿ ಹೋಗಿ ಬಚಾವಾಗುವದಲ್ಲ… ಬದುಕಿನಲ್ಲಿ ಎಲ್ಲವನ್ನೂ ಆಸ್ವಾದಿಸಬೇಕು… ಒಂದು ಹಂತದ ವರೆಗೆ… ಬೇಡವೆನಿಸಿದಾಗ quit option ಇರುತ್ತದೆ… ಬೇಕೆನಿಸಿದರೆ..
ಬದುಕೆಂದರೆ ಒಳಗೆ ಹುರಿದ ಸೇಂಗಾ ಇಟ್ಟ ಇಲಿಬಲೆ… ಹೊರಗಿನ ಇಲಿಗೆ ಒಳಗಿನ ಸೆಂಗಾಗಳ ಮೇಲೆ ಕಣ್ಣು.. ಒಳಗೆ ಸಿಗಿ ಬಿದ್ದುದಕ್ಕೆ ಹೊರಗಿರುವ ಇಲಿಯ ಸ್ವಾತಂತ್ರ್ಯದ ಮೇಲೆ ಗಮನ.. ಎರಡಕ್ಕೂ ಇರುವದೆಲ್ಲವ ಬಿಟ್ಟು ಇರದಿರುವದರ ಕಡೆಗೆ ತುಡಿತ. ಹಾಗೆಯೇ ಮದುವೆಯಾಗಿ ಸಂಸಾರ ಮಾಡಿ ಗೆಲ್ಲುವದು ತಿಂದರೂ… ತಿನ್ನದಿದ್ದರೂ ಕೊನೆಗೆ ಪರಿತಪಿಸುವಂತೆ ಮಾಡುವ ಲಡ್ಡು.
ಹಾಗಾದರೆ ಮಧ್ಯ ಮಾರ್ಗವೇನು? There is a golden mid point…
ಬಾಲ್ಯದಲ್ಲಿ ಮನಸಾರೆ ಆಡಿ, ಹರಯದಲ್ಲಿ ಏನಾದರೂ ಬದುಕಿನಲ್ಲಿ ಸಾಧಿಸಿ, ವಾನಪ್ರಸ್ಥದಲ್ಲಿ ಮಕ್ಕಳು ಮರಿಗಳು ತುಂಬು ಸಂಸಾರದ ಸುಖ ಅನುಭವಿಸಿ ಸಾವಧಾನವಾಗಿ detachment ಬೆಳೆಸಿಕೊಳ್ಳುವದು. ಬಾಲ್ಯದಲ್ಲಿಯೇ ಅಳತೆ ಮೀರಿದ ಪ್ರೌಢಿಮೆ, ಯೌವನದಲ್ಲಿ ಅತಿಯಾದ ಹುಡುಗಾಟ, ಮಧ್ಯವಯಸ್ಸಿನಲ್ಲಿ ಹಣದ ಹಿಂದೆ ಓಡುವದು, ಮುದುಕರಾದಮೇಲೂ ಕುಟುಂಬದ ನಿಯಂತ್ರಣ ಬೇಕೆನ್ನುವದೂ ಅನಪೇಕ್ಷಿತ ಅಷ್ಟೇ ಅಲ್ಲ, ಆತ್ಮದುದ್ದಾರಕ್ಕೂ ಅಡ್ಡಿ… ಅದು ನಿಯಮ ಬಾಹಿರವೂ ಅಹುದು.
ಇದೇನೋ ಭಾರಿ ತತ್ವಬೋಧನೆಯಲ್ಲ.. ಹಾಗೆ ನಾನು ಬದುಕಿಬಿಟ್ಟಿದ್ದೇನೆ ಅಂತಂತೂ ಸರ್ವಥಾ ಅಲ್ಲ… ಹಾಗೆ ಬದುಕಿದವರ ಬದುಕಿನಿಂದ, ಅದರ ಚಲುವಿನಿಂದ, ಅದರ ಧನಾತ್ಮಕ ಪರಿಣಾಮಗಳಿಂದ ಕಲಿಯುತ್ತ ಬಂದ, ಪಾಠಗಳು… ಒಂದು ಹಂತದಲ್ಲಿ ಈ ತರಹದ ಬದುಕಿಗೆ ಅಣಿಯಾಗದಿದ್ದರೆ ಮಾನಸಿಕವಾಗಿ ನೆಮ್ಮದಿ ಕಳೆದುಕೊಂಡು ಬದುಕು ನರಕ ಸದೃಶವಾಗುವದನ್ನು ಯಾರಿಂದಲೂ ತಪ್ಪಿಸಲಾಗುವದಿಲ್ಲ…

Leave a Reply