ನಾನೇಕೆ ಅನುವಾದಿಸುತ್ತೇನೆ?

ನಾನೇಕೆ ಅನುವಾದಿಸುತ್ತೇನೆ?
ನನ್ನ ಲೇಖನಗಳನ್ನು ಓದಿದವರಿಗೆ ಒಂದು ಮಾತು ಸ್ಪಷ್ಟವಾಗಿ ಗೊತ್ತಿದೆ. ನನ್ನ ಸ್ವಂತ ಲೇಖನಗಳಷ್ಟೇ, ಕೆಲವೊಮ್ಮೆ ಅದನ್ನೂ ಲೀರಿ ಅನುವಾದಿತ ಲೇಖನಗಳಿವೆ. ಅದಕ್ಕೆ ಕಾರಣವನ್ನೂ ಆಗಾಗ ಹೇಳುತ್ತಲೇ ಬಂದಿದ್ದೇನೆ.
ಪದವಿಗೆ, ನಂತರದ BEdಗೆ, ಆ ನಂತರದ ಶಿಕ್ಷಕ ವೃತ್ತಿಗೆ ಆಯ್ದುಕೊಂಡ ವಿಷಯಗಳು ಮೂರು…    English_Major, Hindi_ minor / ಆಸಕ್ತಿಯ ಭಾಷೆ ಮಾತೃ ಭಾಷೆ ಕನ್ನಡ ಮೂರರಲ್ಲೂ ಸಾಹಿತ್ಯ ಓದಿದಾಗ ಸ್ವಾಭಾವಿಕವಾಗಿ ವಿಷಯಗಳ ಸಾಮ್ಯ, ವೈಷಮ್ಯಗಳ ಅರಿವಾಗ ತೊಡಗಿತು. ಉತ್ತಮವಾದುದನ್ನು ಇನ್ನೊಂದು ಭಾಷೆಯಲ್ಲಿ ಪುನಸೃಷ್ಠಿಸುವ ಆರೋಗ್ಯಕರ ಹವ್ಯಾಸ ಬೆಳೆಯಿತು. ಕಲಿಸುವ ಭಾಷೆಗಳ ಕೊನೆಗೆ ಅಂಥ ಭಾಷಾಂತರ ಚಟುವಟಿಕೆಗಳನ್ನು ಸೇರಿಸಿದ್ದೂ ಒಂದು plus point ಆಗಿ ಮಕ್ಕಳಿಗೆ ತುಲನಾತ್ಮಕ ಅಭ್ಯಾಸಕ್ಕೆ ಸಹಾಯಕವಾಯಿತು IN LONDON TOWN ಕವಿತೆಯನ್ನು ‘ಹೀಗೊಂದು ಊರಾಗ’ ಎಂದು ಅನುವಾದಿಸಿದ್ದನ್ನು ಆಕಾಶವಾಣಿಯವರು ಆಯ್ದ ಕಾರ್ಯಕ್ರಮಗಳಡಿ ತಮ್ಮ ವಾರ್ಷಿಕ ಕಾರ್ಯಕ್ರಮದಿಂದ ಶ್ರೀ ಇಂದುಹಾಸ ಜೇವೂರವರ ನಿರ್ದೇಶನದಲ್ಲಿ ರಂಗಕ್ಕೆ ತಂದುದು ಮುಖ್ಯ ಹೆಜ್ಜೆಯಾಯಿತು. ಪ್ರಥಮ ಸಲದ ನನ್ನ ಅಮೇರಿಕಾ ಪ್ರವಾಸದ ಅನುಭವದ ಇಂಗ್ಲಿಷ ಕವನ ‘ಮಂಥನ’ ದ ಕನ್ನಡ ಅನುವಾದ ‘ಅಕ್ಕ’ (America Kannad KootA) ಹೊರತಂದ ಸ್ಮರಣಸಂಚಿಕೆಯಲ್ಲಿ ಸ್ಥಾನ ಪಡೆದುದು, ‘ಶಾಂತತಾ ಕೋರ್ಟ ಚಾಲೂ ಆಹೆ’ ನಾಟಕಕ್ಕೆ ಅನುವಾದಿಸಿದ ಇಂಗ್ಲೀಷ ಕವನದ ಅನುವಾದ ಶ್ರೀ ಶ್ರೀನಿವಾಸ ಜೋಶಿ ಯವರ ‘ರಂಗನಾಥ’ ಧ್ವನಿಸುರುಳಿಗೆ ಆಯ್ಕೆಯಾದದ್ದು ಮತ್ತೆರಡು ಮೈಲುಗಲ್ಲುಗಳು.
ಇದರಿಂದ ಪ್ರೇರಿತಳಾಗಿ ಹೆಚ್ಚು ಕಡಿಮೆ ನಾನು ಕಲಿತ, ಕಲಿಸಿದ ಎಲ್ಲ ಕವನಗಳನ್ನೂ ಅನುವಾದಿಸಿ ಇನ್ನೇನು print ಗೆ (ಪೂರ್ವ- ಪಶ್ಚಿಮ) ಹಾಕಬೇಕೆಂದು ಹೋಗುವಾಗ  Railway Station ಬಸ್ ನಲ್ಲಿ ಕಳೆದುಕೊಂಡೆ. ಪುನಃ ದೊರಕಿಸಲು ಮಾಡಿದ ಪ್ರಯತ್ನಗಳು ಫಲಿಸದ ಹಿನ್ನೆಲೆಯಲ್ಲಿ ಆದ ತೀವೃ ಯಾವ ಮಟ್ಟಕ್ಕೆ ಮುಟ್ಟಿತೆಂದರೆ ಕೆಲದಿನ ಬರೆಯುವದನ್ನೇ ಬೆಟ್ಟೆ.
ನನಗೂ ಒಮ್ಮೊಮ್ಮೆ ಅನಿಸುವದಿದೆ. ನಾನೇಕೆ ಅನುವಾದಕ್ಕೆ ಬೆನ್ನು ಬಿದ್ದಿದ್ದೇನೆ, ಅದು ಎಷ್ಟರ ಮಟ್ಟಿಗೆ ಸರಿ ಎಂದು ಆದರೆ ಇಂದು ನೋಡಿದ ಸಂದರ್ಶನವೊಂದು ನನ್ನ ಅನುಮಾನವನ್ನು ಬೇರು ಸಮೇತ ಕಿತ್ತೆಸೆದು ನನ್ನನ್ನು ನಿರಾಳವಾಗಿಸಿದ್ದು ಸುಳ್ಳಲ್ಲ..
ಮಾಧ್ಯಮ ಅನೇಕ’ದ ಸಾಹಿತಿಗಳ ಸಂದರ್ಶನದ ನಾಲ್ಕನೇ ಕಂತಿನಲ್ಲಿ ಶ್ರೀ ಕೆ. ನಲ್ಲ ತಂಬಿಯವರ ಸಂದರ್ಶನವೆಷ್ಟು  convincing  ಆಗಿತ್ತೆಂದರೆ ಅನುವಾದ ಸಾಹಿತ್ಯವೂ ಒಂದು ಬಲವಾದ ಸಾಹಿತ್ಯ ಎಂಬುದನ್ನು ವಿಶದವಾಗಿ, ವಿವರವಾಗಿ, ವಿವೇಚನಾ ದೃಷ್ಟಿಯಿಂದ ಹೇಳಿದ್ದು ಆ ಬಗೆಗಿನ ನನ್ನೆಲ್ಲ ಅನುಮಾನಗಳಿಗು ಪೂರ್ಣ ವಿರಾಮ ಸಿಕ್ಕಂತಾಯಿತು. ಅವರಿಗೆ ಸೂಕ್ತ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಹೊರಡಿಸಿದ ಸಂದರ್ಶನಕಾರ ರಾಜಕುಮಾರ ಮಡಿವಾಳರ ಅವರಿಗೆ ನಾನು ಆಭಾರಿ…
ಸಂದರ್ಶನದ ಮುಖ್ಯಾಂಶಗಳು :
. ಅನುವಾದವೆಂದರೆ ಬೇರೆ ಬೇರೆ ಭಾಷಿಕರಿಗೆ ಪರಸ್ಪರ ಸಾಹಿತ್ಯ ದಕ್ಕುವಂತೆ ಮಾಡುವ ಪ್ರಮಾಣಿಕ ಪ್ರಯತ್ನ..
. ಅದು ಒಂದು ಸಂಸ್ಕತಿಯನ್ನು ಇನ್ನೊಂದು ಸಂಸ್ಕøತಿಗೆ ಪರಿಚಯಿಸುವ ಪರಿ..
. ಒಂದು ಜೀವನ ಪದ್ಧತಿಯನ್ನು ಇನ್ನೊಂದರ ಜೊತೆಗೆ ಹೆಣೆಯುವ ಕೆಲಸ..
. ಅನುವಾದವೆಂದರೆ ಶಬ್ಧಗಳ ವಿನಿಮಯವಲ್ಲ ಹಾಗಾಗಲೂ ಬಾರದು..
. ಹಟಕ್ಕೆ ಬಿದ್ದಂತೆ ಅನುವಾದ ಮಾಡುವದು ಸಲ್ಲ ಬೇಕೆನಿಸಿದಾಗ, ಬೇಕೆನಿಸಿದಷ್ಟು, ಬೇಕೆಂದ ರೀತಿಯಲ್ಲಿ ಮಾಡುವ ಪ್ರಯತ್ನ ಸ್ತುತ್ಯ.
. ಮಾತೃ ಭಾಷೆ ನಮ್ಮ ಕಾರ್ಯಕ್ಷೇತ್ರದ ಸ್ಥಾನಿಕ ಭಾಷೆ, ಒಂದು ದೇಶಿಯ, ಇನ್ನೊಂದು ಅಂತರ್ದೇಶಿಯ ಹೀಗೆ ಕನಿಷ್ಠ ನಾಲ್ಕು ಭಾಷೆಗಳ ಪರಿಚಯ ಅಪೇಕ್ಷಣೀಯ.
. ಎಲ್ಲ ಭಾಷೆಗಳಿಗೂ ತನ್ನದೇ ಆದ ಸೌಂದರ್ಯವಿದೆ.. ನಮ್ಮದನ್ನು ಖಂಡಿತಕ್ಕೂ ಪ್ರೀತಿಸೋಣ.. ಯಾವುದೇ ಭಾಷೆಯ ಬಗ್ಗೆ ದ್ವೇಷ ಕೂಡದು…
. ಬದುಕು ಒಂದು ತೂತಿನ ಕೊಡ.. ತುಂಬ್ತಾನೇ ಇರಬೇಕು ಯಾಕೆಂದರೆ ಅದು ಸೋರ್ತಾನೇ ಇರುತ್ತೆ..
. ಹಾಗಂತ ನಮ್ಮತನ ಸರ್ವಥಾ ಬಿಟ್ಟುಕೊಡಬಾರದು ಪ್ರಸಿದ್ಧ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನರಿಗೆ ಅಮೇರಿಕಾ ಆಹ್ವಾನವಿತ್ತು, ಸಕಲ ಅನುಕೂಲಗಳನ್ನೂ ಮಾಡಿಕೊಡುತ್ತೇವೆ. ಇಲ್ಲಿಗೆ ಬಂದುಬಿಡಿ ಎಂದು ಆಹ್ವಾನ ಕೊಟ್ಟಾಗ ಅವರು ಹೇಳಿದರಂತೆ, “ ನನ್ನ ಗಂಗೆಯನ್ನು ಅಲ್ಲಿ ಹರಿಸುತ್ತೀರಾ”?

 

 

Leave a Reply