Your Cart

Need help? Call +91 9535015489

📖 Print books shipping available only in India. ✈ Flat rate shipping

ಎಲ್ಲರೊಂದೇ

ಸತ್ಯದ ಬಾನಲಿ ಹಾರುವ ಬನ್ನಿ
ಒಂದೇಗೂಡಿನ ಹಕ್ಕಿಗಳೇ
ಪ್ರೀತಿಯ ರೆಕ್ಕೆ ಬಡಿಯುತ ಬನ್ನಿ
ಪ್ರೇಮಾನಂದವ ಹರಡುತಲಿ

ದಾರಿತೊರಲು ಗುರುತಾ ಬರುವ
ತೇಜ ಸೂರ್ಯನಾ ರೂಪದಲಿ
ಮಾಯಾ ಮೋಹದ ತರೆಯನು ಸರಿಸಿ
ಜ್ಞಾನದ ಬೆಳಕನು ನೀಡುತಲಿ

ಒಳಿತು ಕೆಡುಕನು ಮೀರುತ ಮೇಲೆ
ಹಾರುವ ನೀಲಾಕಾಶದಲಿ
ಮಾತು ಮೌನಗಳ ಮೀರಿದ ಶಾಂತಿಯ
ಹರಡುವ ಇಂದೇ ಭೂಮಿಯಲಿ

ತೀರಗಳಿರದ ಸಾಗರವಾಗುವ
ಅಲೆಗಳ ಹೊಡೆತವ ಮೀರುತಲಿ
ವಿಶ್ವ ಚೇತನದಿ ಲೀನವಾಗುವ
ಅಹಂಭಾವವನು ಕಳಚುತಲಿ

One comment

  1. Shrinivas Huddar

    ಸದಾಶಯ ಹೊಂದಿರುವ ಕವನ ಮೆಚ್ಚುಗೆಯಾಯಿತು.

Leave a Reply