ಊಟ  ಎಂದರೆ ಬರೆ ಹೊಟ್ಟೆ ತುಂಬಿಸುವದಲ್ಲ

ಊಟ  ಎಂದರೆ ಬರೆ ಹೊಟ್ಟೆ ತುಂಬಿಸುವದಲ್ಲ

ಇತ್ತೀಚಿಗೆ  ಮನೆಯಲ್ಲಿ ಅಡುಗೆ  ಮಾಡುವದು ತುಂಬಾಕಡಿಮೆಯಾಗಿದೆ… ಹೆಣ್ಣು ಮಕ್ಕಳೂ ಸಹ ದುಡಿಯುತ್ತಿರುವುದರಿಂದ ಹೊರಗಿನ ಊಟವೇ  ಪ್ರಧಾನವೆನಿಸುತ್ತಿದೆ… ನಮ್ಮ ಹಿರಿಯರಿಗೆ ಹೊರ  ಊಟದ concept         ಇರಲೇ ಇಲ್ಲ. ಅಡುಗೆ ಮಾಡುವದೂ ಒಂದು ಕಲೆ. ಅದೊಂದು  ಪೂಜೆ, ಧ್ಯಾನ. ಅದಕ್ಕೆ  ಪ್ರಸಾದವೆಂಬ ಹೆಸರೂ ಇದೆ… ಅದನ್ನರಿತು ಮಾಡುವ ಅಡುಗೆ ಉಣ್ಣುವವರಿಗೆ ಸಾತ್ವಿಕ ಗುಣ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಶಿವಾನಿಯವರ ಮಾತು  ಹಾಗೆಯೇ ಸಾಗಿತ್ತು. ಅವರ ಮಾತುಗಳು ಮುಗಿದರೂ ಅವರೆತ್ತಿದ ವಿಷಯದ ಗುಂಗು ನನ್ನನ್ನು  ಬಿಡಲೇಯಿಲ್ಲ… ಅದೇ ದಾಟಿಯಲ್ಲಿ  ಸಾಗಿದಾಗ ನನಗೆ ಅನಿಸಿದ್ದಿಷ್ಟು… ಈಗ  ಎಲ್ಲರ  ಮನೆಯಲ್ಲೂ ಅಡುಗೆ ಮಾಡುವವರೇ ಇರುವುದು ಜಾಸ್ತಿ… ಹಣಕ್ಕೆ ಬೇಯಿಸಿಟ್ಟು ಹೋದದ್ದರಲ್ಲಿ ಮನೆಯಡಿಗೆಯ ಆರೋಗ್ಯ, ಪ್ರೀತಿ, ಉಳಿತಾಯ, ರುಚಿ, ಸ್ವಚ್ಛತೆಯಾವುದೂ ಇರುವದಿಲ್ಲ… ವಿಶೇಷ ಸಂದರ್ಭಗಳಲ್ಲಿ ಅಡಿಗೆ ಮಾಡಿಸುವುದು ಅಡ್ಡಿಯಿಲ್ಲ. ಸಮಯಾಭಾವದ ನೆವವೊಡ್ಡಿ ದಿನಾಲೂ ಹೊರಗೆ ಊಟ ಮಾಡುವದು ಅಥವಾ ಯಾರೋ, ಯಾವಾಗಲೋ ಬೇಯಿಸಿಟ್ಟ ದ್ದು ದಿನಾಲೂ ತಿನ್ನುವದೆಂದರೆ ಅಪಾಯ ಆಹ್ವಾನಿಸಿ ದಂತೆ   ಈಗಿರುವ ಪರಿಸ್ಥಿತಿ ನೋಡಿದರೆ   kitchenless homes      ಬರಬಹುದು  ಮಕ್ಕಳಿಗೆ ಅಡಿಗೆ ಏನೋ ನಮ್ಮದಲ್ಲದ ಪರಕೀಯ ವ್ಯವಸ್ಥೆಯನಿಸುವ ದಿನಗಳು ದೂರವಿಲ್ಲ… ನಾನು ಅಮೆರಿಕೆಗೆ ಹೋದಾಗ ಊಟಕ್ಕೆ  ಹೋದ ಹೋಟೆಲ್ ಹೆಸರು   clay oven…   (ಮಣ್ಣಿನ  ಒಲೆ)  ನೈಜವಾಗಿ ಕಳೆದುಕೊಂಡದ್ದನ್ನು ಹೆಸರಿನಲ್ಲಿ ಹುಡುಕುವ ಹವಣಿಕೆ. ಮನಪಸಂದ್, ರಸೋಯಿ, ರಂಗೋಲಿ, ಹಳ್ಳಿ ಮನೆ, ಇಂಥ ಭಾವನಾತ್ಮಕ ಹೆಸರಿನಡಿಯಲ್ಲಿ ನಮ್ಮ ತನದ ಹುಡುಕಾಟ ಬಾಲ ವಿಹಾರಕ್ಕೆ ಅಜ್ಜಿ ಮನೆ ಅಂದು ಖುಷಿ ಪಟ್ಟಂತೆ…’

ಯಾವುದೂ ತಪ್ಪಲ್ಲ  ಅನಿವಾರ್ಯವೆಂದಾದಲ್ಲಿ ಕೆಲಮಟ್ಟಿಗೆ ಅಪೇಕ್ಷನೀಯವೂ ಹೌದು ಅಷ್ಟೇ ಏಕೆ? ಕೆಲವೊಂದು ಪರ್ಯಾಯ  ವ್ಯವಸ್ಥೆ ಗಳು ಅಸಲನ್ನು ಮೀರಿಸಿ ಉತ್ತಮವಾಗಿರಲೂ ಬಹುದು… ಹಾಗೆಂದು ಮೂಲ ವ್ಯವಸ್ಥೆ ಮರೆತು ಅದಕ್ಕೇ ಅಂಟಿಕೊಳ್ಳುವದು ಅವಶ್ಯಕವೂ ಇರುವುದಿಲ್ಲ. ಅನಿವಾರ್ಯವೂ ಇರುವುದಿಲ್ಲ… ಅತಿಯಾದರೆ ಅಮೃತವೂ ವಿಷದಂತೆ. ಹಾಗಾಗದೆ ನಡುವಿನ    golden mid point   ನ  ಆಯ್ಕೆ ಮಾಡುವದು ಪರ್ಯಾಯವೆನಿಸಬುಹುದು.

ಹಾಗೇ  fb   ತಿರುವಿಹಾಕುವಾಗ ಸಾಧ್ವಿ ಶಿವಾನಿಯವರ ಭಾಷಣ ಕೇಳಿದಾಗ ತಲೆಯಲ್ಲಿ ಹಾದುಹೋದ ವಿಚಾರಗಳಿವು. ನನ್ನವು ಕೇವಲ ನನ್ನ ದೃಷ್ಟಿಯಿಂದ….

Leave a Reply