ಈ ಪುಸ್ತಕದಲ್ಲಿ ಅಂಕಣ ಬರಹದಂಥ ಕಿರು ಲೇಖನಗಳಿವೆ.ಅತಿ ಉತ್ತಮ ಎನಿಸಿದ ಇತರ ಭಾಷೆಯ ಅನುವಾದಗಳೂ ಇವೆ.‘ಕೌಲಗಿ ಸ್ವಾಮಿರಾಯರೂ ಮಾವಿನಹಣ್ಣಿನ ಸೀಕರಣಿಯೂ’ ಎಂಬ ಅಧ್ಯಾಯದಲ್ಲಿ ಗಂಡನ ಸೀಕರಣಿಪ್ರೀತಿಯನ್ನು ನೆನೆಸಿಕೊಂಡ ರೀತಿ ಸೀಕರಣೆಯಷ್ಟೇ ಸಿಹಿ. ‘ದಿಲ್ ಥಾ ಛೋಟಾ ಸಾ ಛೋಟೀ ಸಿ ಆಶಾ’ ಅಧ್ಯಾಯದಲ್ಲಿ- ‘ಕನಿಷ್ಠ ಒಂದು ಲೂನಾ ಆದರೂ ಕೊಂಡುಕೊಳ್ಳಬೇಕೆಂಬ ನನ್ನವರ ಪುಟ್ಟ ಕನಸು ಕನಸಾಗಿಯೇ ಉಳಿದಿತ್ತು. ಈಗ ನಾನು ಮಕ್ಕಳ ಲಕ್ಷುರಿ ಕಾರುಗಳಲ್ಲಿ ತೇಲಿದಂತೆ ಹೋಗುವಾಗಲೆಲ್ಲ ನನ್ನವರು ಏದುಸಿರು ಬಿಡುತ್ತ ಕರ್ನಾಟಕ ಹೈಸ್ಕೂಲ್ ದಿಬ್ಬ ಏರುತ್ತಿರುವ ದೃಶ್ಯ ನೆನಪಾಗಿ ಸಂಕಟವಾಗುತ್ತದೆ’ ಎನ್ನುತ್ತಾರೆ. ಶಿಕ್ಷಕಿಯಾಗಿ ಏರುದನಿಯವಳಾದ ತಾನು ಬೆಂಗಳೂರಿನ ಅಪಾರ್ಟ್ ಮೆಂಟ್ ಸಂಸ್ಕೃತಿಯಲ್ಲಿ ಹೇಗೆ ಬದಲಾಗಬೇಕಾಯ್ತೆಂದು ಹಾಸ್ಯಶೈಲಿಯಲ್ಲಿ ಬಣ್ಣಿಸಿದ್ದಾರೆ. ಒಟ್ಟಿನಲ್ಲಿ ಸಿಹಿ ಹುಳಿ ಉಪ್ಪು ಖಾರ ಎಲ್ಲ ರುಚಿಗಳ ಮಿಶ್ರಣ. ಧಾರವಾಡದ ವರ್ಲ್ಡ್ ಫೇಮಸ್ ಗಿರ್ಮಿಟ್ ಅನ್ನು ಹೋಲುವ ಹೂರಣವುಳ್ಳ ಸೊಗಸಾದ ಪುಸ್ತಕವಿದು ‘ನೀರ ಮೇಲೆ ಅಲೆಯ ಉಂಗುರ’.
Ebook
ನೀರ ಮೇಲೆ ಅಲೆಯ ಉಂಗುರ
Author: Krishna Koulagi
₹90.00
ಈ ಪುಸ್ತಕದಲ್ಲಿ ಅಂಕಣ ಬರಹದಂಥ ಕಿರು ಲೇಖನಗಳಿವೆ.ಅತಿ ಉತ್ತಮ ಎನಿಸಿದ ಇತರ ಭಾಷೆಯ ಅನುವಾದಗಳೂ ಇವೆ.
About this Ebook
Information
Additional information
Author | |
---|---|
Publisher | |
Book Format | Ebook |
Language | Kannada |
Pages | 202 |
Year Published | 2020 |
Category |
Reviews
Only logged in customers who have purchased this product may leave a review.
Reviews
There are no reviews yet.