
ತೇಜಸ್ವಿ ನನಗೆ ನಿಮಿತ್ತ
Dhananjay Jeevala B K$2.27 $1.36
Product details
Author | Dhananjay Jeevala B K |
---|---|
Publisher | Total Kannada |
Book Format | Ebook |
Language | Kannada |
ISBN | 978-81-922269-8-9 |
Pages | 187 |
Year Published | 2013 |
Category | Articles |
ಈ ಕೃತಿಯಲ್ಲಿ ಜೀವಾಳ ಅವರು ತೇಜಸ್ವಿ ಅವರೊಂದಿಗೆ ನಡೆಸಿದ ಚರ್ಚೆಗಳು, ಸುತ್ತಾಟಗಳು ಓದುಗರಿಗೆ ಪ್ರಕೃತಿ ಸಂರಕ್ಷಣೆಯ ಆಯಾಮಗಳನ್ನು ತಿಳಿಸಿಕೊಡುತ್ತವೆ. ಪಶ್ವಿಮಘಟ್ಟದ ಮೇಲೆ ದಂಧೆಕೋರರು ಅವ್ಯಾಹತವಾಗಿ ನಡೆಸುತ್ತಿರುವ ದಾಳಿ, ಅದಕ್ಕೆ ಪ್ರತಿಯಾಗಿ ಪರಿಸರ ಚಿಂತಕರು ನಡೆಸಬೇಕಾದ ಕ್ರಿಯೆ ಕುರಿತ ವಿಚಾರಗಳು ಇಲ್ಲಿ ದೊರೆಯುತ್ತವೆ. ತೇಜಸ್ವಿ ಅವರ ಅನೇಕ ಕೃತಿಗಳಲ್ಲಿ ಪರಿಸರದ ಬಗೆಗಿನ ಚಿಂತನೆಗಳು ಬಂದಿವೆಯಾದರೂ ಈ ಕೃತಿಯಲ್ಲಿ ಇಂಥ ಚಿಂತನೆಗಳೆಲ್ಲವೂ ಒಂದೆಡೆಯೇ ದೊರೆತಿರುವುದು ಮತ್ತು ಇದು ಬರೆಹಕ್ಕೆ ಸೀಮಿತವಾಗದಂತೆ ತೇಜಸ್ವಿ ಹೇಗೆ ಕಾರ್ಯೋನ್ಮುಖರಾಗುತ್ತಿದ್ದರು ಎಂಬುದು ತಿಳಿಯುತ್ತದೆ.ಇಷ್ಟದ ಕ್ಷೇತ್ರಗಳ ಬಗ್ಗೆ ನಿರಂತರ ಅಧ್ಯಯನಶೀಲತೆ ಇರಬೇಕು ಎಂದು ಬಯಸಿದ ತೇಜಸ್ವಿ ಇಳಿ ವಯಸ್ಸಿನಲ್ಲಿಯೂ ಕಲಿಕೆಯ ಉತ್ಸಾಹ ಜೊತೆಗೆ ಶ್ರದ್ಧೆ ಇರುವವರಿಗೆ ಕಲಿಸುವುದರಲ್ಲಿಯೂ ಸಂಯಮ ಹೊಂದಿದ್ದರು ಎಂಬುದು ತಿಳಿಯುತ್ತದೆ. ಕೃತಿಯುದ್ದಕ್ಕೂ ತೇಜಸ್ವಿ ಚಿಂತನೆಗಳು ಕಾಣಿಸುವುದರ ಜೊತೆಗೆ ಜೀವಾಳ ಅವರ ಆಲೋಚನಾ ಲಹರಿಯ ಪ್ರಖರತೆಯೂ ಅರಿವಾಗುತ್ತದೆ. ಜೊತೆಗ ಅಭಿಮಾನವನ್ನು ಪ್ರಾಯೋಗಿಕ ರೂಪಕ್ಕೆ ಇಳಿಸುವಲ್ಲಿನ ಶ್ರದ್ಧೆ ಮತ್ತು ಶ್ರಮದ ಅರಿವೂ ಆಗುತ್ತದೆ.