ಭಾರತದ ಪ್ರಥಮ ಉಪಗ್ರಹ ‘ಆರ್ಯ ಭಟ’ ನಿರ್ಮಾಣವಾಗಿದ್ದು ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿದ್ದ ನಾಲ್ಕು ಶೆಡ್ ಗಳ ಲ್ಲಿ ಸುಮಾರು ೧೦೦ ಕೆಜಿ ತೂಗುತ್ತಿದ್ದ ಆರ್ಯಭಟವನ್ನು ರೂಪಿಸುವ ಹೊಣೆ ಯನ್ನು ಹೊತ್ತವರು ಡಾ|| ಯು.ಆರ್. ರಾವ್. ಉಪಗ್ರಹವನ್ನು ಯಶ ಸ್ವಿಯಾಗಿ ನಿರ್ಮಿಸಿದ ಯು,ಆರ್. ರಾವ್ ತಂಡವು ಮುಂದೆ ಇದೇ ಶೆಡ್ಡುಗಳಲ್ಲಿ ‘ದಿ ಇಸ್ರೋ ಸ್ಯಾಟಲೈಟ್ ಸೆಂಟರ್ ‘ (ಐಸಾಕ್) ಸಂಸ್ಥೆಯನ್ನು ಹುಟ್ಟು ಹಾಕಿತ್ತು. ಡಾ|| ಯು.ಆರ್. ರಾವ್ ಅವರ ಮರಣಾ ನಂತರ ಇದೇ ಕೇಂದ್ರಕ್ಕೆ ‘ಯು.ಆರ್. ರಾವ್ ಸ್ಯಾಟಲೈಟ್ ಸೆಂಟರ್ ‘ ಬೆಂಗಳೂರು’ ಎಂದು ಪುನರ್ನಾಮಕರಣವನ್ನು ಮಾಡಿ ಅವರಿಗೆ ಗೌರವ ಸಲ್ಲಿಸಿದ್ದಾರೆ. ಇಸ್ರೋ ಸಂಸ್ಥೆಯ ಸರ್ವತೋಮುಖ ಪ್ರಗತಿಗೆ ಕಾರಣರಾದ ಅವರು ಜನಸಾಮಾನ್ಯರನ್ನು ಮರೆಯಲಿಲ್ಲ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷರಾಗಿ ವಿಜ್ಞಾನವನ್ನು ಕನ್ನಡ ದಲ್ಲಿ ಜನಸಾಮಾನ್ಯರಿಗೆ ತಿಳಿಸುವ ಅನೇಕ ಯೋಜನೆಗಳನ್ನು ಕೈಗೊಂಡ ದ್ದು ಸ್ತುತ್ಯರ್ಹ.
Sale!
ಡಾ|| ಯು. ಆರ್. ರಾವ್ ( Ebook )
$0.30
ಈ ಪುಸ್ತಕದಲ್ಲಿ ಯು. ಆರ್. ರಾವ್ ಅವರ ಭಾರತೀಯ ಉಪಗ್ರಹದಲ್ಲಿ ಮಾಡಿದ ಸೇವೆಯ ಬಗ್ಗೆ ಬರೆಯಲಾಗಿದೆ.
- Category: Biography
- Publisher: Nava Karnataka
- Book Format: Ebook
- Pages: 48
- Language: Kannada
- Year Published: 2021
Reviews
There are no reviews yet.