Your Cart

Need help? Call +91 9535015489

📖 Print books shipping available only in India. ✈ Flat rate shipping

ಇರಾವತಿ ಕರ್ವೆ

Geeta Shenoy
$0.33

Product details

Author

Geeta Shenoy

Publisher

Nava Karnataka

Book Format

Printbook

Language

Kannada

Pages

48

Year Published

2021

Category

Biography

ಇರಾವತಿ ಕರ್ವೆಯವರು ಭಾರತದ ಪ್ರಥಮ ಮಾನವಶಾಸ್ತ್ರಜ್ಞೆ. ಭಾರತೀಯ ವಿಶ್ವವಿದ್ಯಾಲಯಗಳಲ್ಲೂ ಮಾನವಶಾಸ್ತ್ರ ಎಂದರೆ ಏನು ಎಂದು ಕೇಳುವ ಸಮಯದಲ್ಲಿ ಇರಾವತಿಯವರು ಜರ್ಮನಿಯ ಕೈಸರ್ ವಿಲ್ಹೆಲ್ಮ್ ಇನಸ್ಟಿಟ್ಯೂಟ್ ಆಫ್ ಆಂಥ್ರೋಪಾಲಜಿ, ಹ್ಯೂಮನ್ ಹೆರಿಡಿಟಿ ಆಂಡ್ ಯೂಜೆನಿಕ್ಸ್)ಯನ್ನು ಸೇರಿ ಪಿಎಚ್.ಡಿ ಪಡೆಯುತ್ತಾರೆ. ಇರಾವತಿಯವರು ಎಂದಿಗೂ ‘ಆರಾಮ ಕುರ್ಚಿ’ಯ ಸಂಶೋಧಕರಾಗಿರಲಿಲ್ಲ. ಇವರು ತಮ್ಮ ಎಲ್ಲ ಕೆಲಸಗಳನ್ನು ಕ್ಷೇತ್ರಾಧ್ಯಯನದ ಮೂಲಕವೇ ನಡೆಸಿದ್ದು ವಿಶೇಷ. ಪಂಡರಿವಾರಿ ಸಂಸ್ಕೃತಿಯನ್ನು ಅರಿತುಕೊಳ್ಳಲು ಒಂದಲ್ಲ ಹಲವು ಸಲ ಭಕ್ತರ ಜೊತೆಗೆ ಪಂಡರಾಪುರ ಯಾತ್ರೆಯನ್ನು ಕಾಲ್ನಡಿಗೆಯಲ್ಲಿ ನಡೆಸುತ್ತಾರೆ. ಹಳ್ಳಿಗರ ನಡುವೆಯೇ ಉಳಿದು ಅವರ ದೈನಂದಿನ ಬದುಕನ್ನು ಅಧ್ಯಯನ ಮಾಡುವುದರ ಜೊತೆಗೆ ಅವರ ನಂಬಿಕೆ, ಮೂಢನಂಬಿಕೆ, ಭಾಷಾ ವೈಭವ ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ದುರ್ಬಲತೆಗಳನ್ನು ಅಧ್ಯಯನ ಮಾಡುವ ವೈಖರಿ ಮಾದರಿಯಾಗಿದೆ. ಇರಾವತಿ ಕರ್ವೆಯವರ ‘ಯುಗಾಂತ’ ಎನ್ನುವ ಮಹಾಭಾರತ ಸಂಬಂಧಿತ ಸಂಶೋಧನಾ ಪ್ರಬಂಧ, ಪ್ರತಿಯೊಬ್ಬ ಭಾರತೀಯನು ಒಮ್ಮೆಯಾದರೂ ಓದಲೇಬೇಕಾದ ಕೃತಿ.