Ebook

ನಿಟ್ಟೂರು ಶ್ರೀನಿವಾಸರಾಯರು – ನೂರರ ನೆನಪು

Author: M S Krishnayya

$2.70

ಪ್ರಾಚೀನ ಆಚಾರ‍್ಯವಾಣಿಯೊಂದಿದೆ: “ಶೇಷ್ಠಗ್ರಂಥಗಳ ಮತ್ತು ಶೇಷ್ಠ ವ್ಯಕ್ತಿಗಳ ಸಂಗದಲ್ಲಿ ಕಳೆದ ಕಾಲವೇ ಬದುಕಿನ ಅತ್ಯಂತ ಶೇಷ್ಠಕಾಲ”. ಮೂರು ವರ್ಷ ನಮಗೆ ಅಂತಹಕಾಲ ಒದಗಿದ್ದು ಒಂದು ಸೌಭಾಗ್ಯ, ಅವಿಸ್ಮರಣೀಯ.‘ನೂರರ ನೆನಪು’ ಎಂದಾಗ ನಿಟ್ಟೂರರು ತೊಂಬತ್ತೊಂಬತ್ತು ತುಂಬಿ ನೂರನೆಯ ವರ್ಷಕ್ಕೆ ಕಾಲಿಟ್ಟಾಗಿನ ಹಿನ್ನೋಟ ಎಂಬುದು ಆಗುತ್ತೆ. ಅವರು ಹೇಳಿದ ನೂರಾರು ವ್ಯಕ್ತಿಗಳು, ಘಟನೆಗಳು, ಸಂಗತಿಗಳು, ವಿಚಾರಗಳು ಎಂದೂ ಆಗುತ್ತೆ. ಅಲ್ಲದೆ, ಶತಮಾನದ ಹರಹು ಉಳ್ಳದ್ದು ಎಂಬುದು, ವಾಸ್ತವ. ನಿಟ್ಟೂರರ ಓದು ವಿಸ್ತಾರವಾದದ್ದು, ಆಸಕ್ತಿ ಮತ್ತು ಕಾರ್ಯಕ್ಷೇತ್ರಗಳು ಹತ್ತುಹಲವು, ವೈವಿಧ್ಯಪೂರ್ಣ. ಅವರ ಜ್ಞಾಪಕಶಕ್ತಿ ಅಪೂರ್ವವಾದದ್ದು.ಅವರದು ತಾರ್ಕಿಕ, ವೈಜ್ಞಾನಿಕ, ವೈಚಾರಿಕ ಚಿಂತನ ಪ್ರತಿಭೆ. ವ್ಯಾಖ್ಯಾನ, ವರ್ಣನೆ, ವಿವರ, ಹಾಸ್ಯಪ್ರಸಂಗಗಳಿಗಿಂತ ವಿವರಣೆಗಳಿಗಿಂತ ವಾಸ್ತವ ಸಂಗತಿಗಳನ್ನು ಹೇಳುತ್ತಾ ಸಾಗುತ್ತಾರೆ.

-ಎಂ.ಎಚ್.ಕೃಷ್ಣಯ್ಯ

ಈ ಪುಸ್ತಕ ನನ್ನ ಆತ್ಮಕಥೆಯಲ್ಲ. ಬಹುಕಾಲದಿಂದ ನನ್ನ ಮಿತ್ರರು ನನ್ನ ಜೀವನದ ಇತಿಹಾಸವನ್ನು ಬರೆಯಬೇಕೆಂದು ನನಗೆ ಹೇಳುತ್ತಿದ್ದರು. ಆದರೆ ನನಗೆ ಅದೇನೂ ಇಷ್ಟವಿರಲಿಲ್ಲ. ಇತ್ತೀಚೆಗೆ ನನ್ನ ಆಪ್ತಮಿತ್ರರಾದ ಶ್ರೀ ಎಚ್. ಕೆ. ರಂಗನಾಥ್‌ರವರು ಮತ್ತು ಪ್ರಿಸಮ್ ಪ್ರಕಟನಾಲಯದ ಶ್ರೀ ಪ್ರಾಣೇಶರವರು ನನ್ನ ಆತ್ಮಕಥೆ ಅಲ್ಲದಿದ್ದರೂ ನನ್ನ ಜೀವಿತ ಕಾಲದ ಅನುಭವಗಳೂ ಮತ್ತು ನಾನು ಸಂಧಿಸಿದ ಅನೇಕ ಗಣ್ಯವ್ಯಕ್ತಿಗಳೂ ಮತ್ತು ಘಟನೆಗಳೂ, ನಮ್ಮ ನಾಡಿನ ಇತಿಹಾಸದ ದೃಷ್ಟಿಯಿಂದ ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯವಾದ್ದರಿಂದ ಅವುಗಳನ್ನು ಒಳಗೊಂಡ ವಿಷಯಗಳನ್ನು ಕುರಿತು ಬರೆಯಬೇಕೆಂದು ಹೇಳಿದರು. ಅವರ ಅಕ್ಕರೆಯ ಒತ್ತಾಯದ ಮೇಲೆ ನನಗೂ ಹಾಗೆ ಮಾಡಬಹುದೆಂದು ಅನಿಸಿತು. ಆದರೆ ನನಗೆ ಬರೆಯುವ ಶ್ರಮ ತಪ್ಪಿಸಿ ಶ್ರೀ ಎಚ್. ಕೆ. ರಂಗನಾಥ್, ಶ್ರೀ ಎಂ. ಎಚ್. ಕೃಷ್ಣಯ್ಯ ಮತ್ತು ಶ್ರೀ ಜಿ. ಅಶ್ವತ್ಥನಾರಾಯಣ ಅವರು ನಾನು ಹೇಳಿದುದನ್ನು ಟೇಪ್‌ಗಳಲ್ಲಿ ಒಕ್ಕಣಿಸಿ ಅದನ್ನು ಬರೆವಣಿಗೆಗೆ ರೂಪಾಂತರಿಸಿದ್ದಾರೆ. ಹಾಗೆ ಸಂಪಾದಿಸುವುದರಲ್ಲಿ ಕೇವಲ ವೈಯಕ್ತಿತವಾದ ಭಾಗವನ್ನು ಬಿಟ್ಟು ಸಾರ್ವಜನಿಕರು ತಿಳಿದುಕೊಳ್ಳಬೇಕಾದ ಅಂಶಗಳನ್ನು ಮಾತ್ರ ಉಳಿಸಬೇಕಾಗಿ ಕೋರಿದೆ. ಹಾಗೆ ಪ್ರಯತ್ನಪಟ್ಟಿದ್ದಾರೆಂಬ ಭರವಸೆ ನನಗಿದೆ. ಆದರೆ ಹಾಗೆ ಬೇರ್ಪಡಿಸುವುದು ಅಷ್ಟು ಸುಲಭವಲ್ಲವೆಂದು ನನಗೆ ಗೊತ್ತಿದೆ. ಆದರೂ ಒಟ್ಟಿನ ಮೇಲೆ ನಾನು ಕೇಳಿಕೊಂಡ ರೀತಿ ಸಂಪಾದಿಸಿದ್ದಾರೆಂದು ನನಗೆ ಭರವಸೆ ಉಂಟು.

-ನಿಟ್ಟೂರು ಶ್ರೀನಿವಾಸರಾವ್

Additional information

Author

Publisher

Book Format

Ebook

Year Published

2003

Category

Pages

312

ISBN

81-7286-263-6

Language

Kannada

Reviews

There are no reviews yet.

Only logged in customers who have purchased this product may leave a review.