ಮಕ್ಕಳು ಇಲ್ಲಿರುವ ಕಥೆಗಳನ್ನು ಓದುವ ಮೂಲಕ ‘ಇದರಿಂದ ನಾವು ತಿಳಿದುಕೊಳ್ಳಬೇಕಾದ ನೀತಿ ಏನು ?’ ಎಂಬ ಪ್ರಶ್ನೆಗೆ ತಾವೇ ಉತ್ತರ ಕಂಡುಕೊಳ್ಳುತ್ತಾರೆ. ಇಲ್ಲಿ ಬರುವ ಪಾತ್ರಗಳ ಮೂಲಕ ಬದುಕಿನ ನಾನಾ ಮುಖಗಳ ಪರಿಚಯ ಮಕ್ಕಳಿಗಾಗುತ್ತದೆ.
ಈ ಕಥೆಗಳಿಗೆ ಚಿತ್ರಗಾರ ಸ್ಯಾಮ್‌ ಸೂಕ್ತ ಸಾಂದರ್ಭಿಕ ಚಿತ್ರಗಳನ್ನು ಬಿಡಿಸಿ ಪುಸ್ತಕದ ಸೊಗಸನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಈ ಸಂಕಲನದಲ್ಲಿ ನವಗಿರಿನಂದ, ಪ. ರಾಮಕೃಷ್ಣ ಶಾಸ್ತ್ರಿ , ನೀಲಾಂಬರಿ, ಪಳಕಳ ಸೀತಾರಾಮ ಭಟ್ಟ , ಮತ್ತೂರು ಸುಬ್ಬಣ್ಣ , ಪಾರ್ವತಮ್ಮ ಮಹಲಿಂಗ ಶೆಟ್ಟಿ , ಬೇಬಿ ಎಮ್‌. ಮಾಣಿಯಾಟ್‌ ಇವರುಗಳು ಬರೆದ ಕಥೆಗಳಿವೆ. ಈ ಎಲ್ಲ ಕಥೆಗಳಲ್ಲಿ ನೀತಿಪಾಠ ಒಂದಲ್ಲ ಒಂದು ರೀತಿಯಲ್ಲಿ ಹೇಳಲಾಗಿದೆ.

Additional information

Category

Publisher

Book Format

Printbook

Pages

120

Language

Kannada

Reviews

There are no reviews yet.

Only logged in customers who have purchased this product may leave a review.