ದ.ರಾ.ಬೇಂದ್ರೆ ಆಧುನಿಕ ಕನ್ನಡ ಕಾವ್ಯ ಸಂದರ್ಭದ ಬಹುದೊಡ್ಡ ಕಾವ್ಯ ಪ್ರತಿಭೆ. ಕಾಮನಬಿಲ್ಲಿನ ಬಣ್ಣ ಏಳಾದರೆ, ಬೇಂದ್ರೆ ಕಾವ್ಯದ ಬಣ್ಣ ಎಂಟು. ಹೊಸಗನ್ನಡ ಕಾವ್ಯಕ್ಕೆ ಹೊಸ ಉಸಿರು, ಹೊಸ ಜೀವತುಂಬಿ ಹಸನುಗೊಳಿಸಿ ಅಂದಿನ ಕವಿಗಳಿಗೆ ಮಾತ್ರವಲ್ಲ, ಮುಂದಿನ ಕವಿಗಳಿಗೂ ಮಾರ್ಗದರ್ಶಕ ಕಾವ್ಯಗುರು ಎನಿಸಿದವರು. ತಮ್ಮ ದೇಸಿನುಡಿಯ ಪ್ರಯೋಗಶೀಲತೆಯ ಮೂಲಕ ಹೊಸಗನ್ನಡ ಕಾವ್ಯ ಭಾಷೆಯನ್ನು ಬೆಳೆಸಲು ನಿರಂತರವಾಗಿ, ಅವಿಚಲರಾಗಿ, ಯಶಸ್ವಿಯಾಗಿ ದುಡಿದ ಹಿರಿಯರಲ್ಲಿ ದ.ರಾ.ಬೇಂದ್ರೆ ಮುಖ್ಯರು. ಬೇಂದ್ರೆಯವರ ಕಾವ್ಯ ಸತ್ವವನ್ನು ಪ್ರಭಾವಿಸಿದ ಮಹತ್ವದ ಅಂಶಗಳ ಬಗೆಗೆ ಸುದೀರ್ಘವಾದ ಚರ್ಚೆ ಈಗಾಗಲೇ ನಡೆದಿದೆಯಾದರೂ ಹೊಸ ತಲೆಮಾರಿನ ಪ್ರತಿಕ್ರಿಯೆಗೆ ದ್ಯೋತಕವಾಗಿ ಡಾ. ಪ್ರಕಾಶ ಗ. ಖಾಡೆ ಅವರ ಈ ಕೃತಿ ಹೊರಬರುತ್ತಿದೆ.
ಪ್ರಕಾಶ ಅವರು ಈ ಕೃತಿಯಲ್ಲಿ ಅನೇಕ ಮಹತ್ವದ ಸಂಗತಿಗಳ ಚರ್ಚೆಗೆ ಮುಂದಾಗಿದ್ದಾರೆ. ಬೇಂದ್ರೆ ಅವರ ಕಾವ್ಯ ಶಿಲ್ಪದ ಒಳ-ಹೊರ ಆವರಣಗಳು ಜಾನಪದದ ನೆಲೆಯಾಗಿವೆ ಎಂಬುದನ್ನು ಕವಿತೆಗಳ ಪ್ರಮಾಣೀಕರಣದಲ್ಲಿ ಶ್ರುತಪಡಿಸುವುದು ಈ ಕೃತಿಯ ಮುಖ್ಯ ಆಶಯ.
Ebook
ಬೇಂದ್ರೆ ಕಾವ್ಯದ ದೇಸಿಯತೆ
Author: Prakash Khade
$0.58
ಪ್ರಕಾಶ ಅವರು ಈ ಕೃತಿಯಲ್ಲಿ ಅನೇಕ ಮಹತ್ವದ ಸಂಗತಿಗಳ ಚರ್ಚೆಗೆ ಮುಂದಾಗಿದ್ದಾರೆ. ಬೇಂದ್ರೆ ಅವರ ಕಾವ್ಯ ಶಿಲ್ಪದ ಒಳ-ಹೊರ ಆವರಣಗಳು ಜಾನಪದದ ನೆಲೆಯಾಗಿವೆ ಎಂಬುದನ್ನು ಕವಿತೆಗಳ ಪ್ರಮಾಣೀಕರಣದಲ್ಲಿ ಶ್ರುತಪಡಿಸುವುದು ಈ ಕೃತಿಯ ಮುಖ್ಯ ಆಶಯ.
About this Ebook
Information
Additional information
Author | |
---|---|
Publisher | |
Book Format | Ebook |
Language | Kannada |
ISBN | 978-93-83717-49-1 |
Pages | 68 |
Year Published | 2020 |
Category |
Reviews
Only logged in customers who have purchased this product may leave a review.
Reviews
There are no reviews yet.