Ebook

ದಂಡಿ

$1.08

ಈ ಪುಸ್ತಕವು  ಕರಾವಳಿ ಕರ್ನಾಟಕದ ಉಪ್ಪಿನ ಸತ್ಯಾಗ್ರಹದ ಸುತ್ತಲಿನ ಚರಿತ್ರೆ ಯನ್ನು ಒಳಗೊಂಡಿದೆ

‘ದಂಡಿ’ ನಾಯಕನ ಹೆಸರು ಈತ ಭಾರತದ ಸ್ವಾತಂತ್ರ್ಯ ಹೋರಾಟಗಳಲ್ಲಿ ಅತ್ಯಂತ ಪ್ರಮುಖ ಎನಿಸಿದ,

ಉಪ್ಪಿನ ಸತ್ಯಾಗ್ರಹದ ಸುತ್ತಲಿನ ಮಹತ್ವದ ರಾಷ್ಟ್ರ, ರಾಜ್ಯ ನಾಯಕರುಗಳ ಚಟುವಟಿಕೆ ಮತ್ತು ವ್ಯಕ್ತಿತ್ವಗಳಿಂದ ತೀವ್ರವಾಗಿ ಪ್ರಭಾವಿತನಾದವನು. ಅವರೆಲ್ಲರ ಸಾರಸತ್ವಗಳನ್ನು ಹೀರಿಕೊಳ್ಳಲು ಹೊರಟವನು. ಆದರೆ ಎಲ್ಲೋ ದಾರಿ ತಪ್ಪಿದ್ದಾನೆ. ತಪ್ಪಿದ ಈ ದಾರಿಯನ್ನು ಆತ ದಕ್ಕಿಸಿಕೊಳ್ಳಲೇಬೇಕಿದೆ. ಹೀಗಾಗಿ, ಈ ದಾರಿಯ ಶೋಧವೇ ಕಾದಂಬರಿ ವಸ್ತು.

ಚಾರಿತ್ರಿಕವಾದ ದಂಡಿಯ ಈ ಚರಿತ್ರೆ ಇನ್ನೊಂದು ಅರ್ಥದಲ್ಲಿ ಇಡೀ ಕರಾವಳಿ ಕರ್ನಾಟಕದ ಉಪ್ಪಿನ ಸತ್ಯಾಗ್ರಹದ ಸುತ್ತಲಿನ ಚರಿತ್ರೆಯೇ ಆಗಿದೆ ಈ ಮಹತ್ವದ ಸಂದರ್ಭದಲ್ಲಿ  ಇಲ್ಲಿಯ ಅಗೇರ, ಮೊಗೇರ, ಹಾಲಕ್ಕಿ, ಗೌಡಸಾರಸ್ವತ, ಹವ್ಯಕ ಮತ್ತು ದೇಶಾವರಿ ಬ್ರಾಹ್ಮಣ ಸಮುದಾಯಗಳು, ನಾಡವರು, ಕಾರ್ವಿ ಹಾಗೂ ಕುಣಬಿ ಸಮುದಾಯಗಳು ತಮ್ಮ ಹೋರಾಟದ ರೀತಿಯನ್ನು ಚಳುವಳಿಯ ಆಶಯದಂತೆ ರೂಪಿಸಿಕೊಂಡ ಕಥನವನ್ನು ಕಾದಂಬರಿಯು ಎಳೆಎಳೆಯಾಗಿ ವಿವರಿಸುತ್ತಾ ಹೋಗುತ್ತದೆ

Additional information

Category

Author

Publisher

Book Format

Ebook

Pages

160

Year Published

2020

Language

Kannada

ISBN

978-93-83717-48-4

Reviews

There are no reviews yet.

Only logged in customers who have purchased this product may leave a review.