ಕುವೆಂಪು ಅವರ ಕಾದಂಬರಿಗಳ ದಟ್ಟಲೋಕದೊಳಕ್ಕೆ ನಮ್ಮನ್ನು ಕೊಂಡೊಯ್ಯುವ ಟಿ.ಪಿ. ಅಶೋಕ ಅವರ ಈ ವಿಮರ್ಶಾಕೃತಿಯು ಆ ಕಾದಂಬರಿಗಳ ಸೂಕ್ಷ್ಮವಿವರಗಳನ್ನು ನಮಗೆ ಪರಿಚಯಿಸಿ, ಆ ಮೂಲಕ ಕುವೆಂಪು ಕಾಣ್ಕೆಯ ಒಳಗೇ ಇರುವ ವೈಶಿಷ್ಟ್ಯ-ವೈವಿಧ್ಯಗಳನ್ನು ತೆರೆಸಿಕೊಡುತ್ತದೆ. ಚೇತನವು ಅನಿಕೇತನವಾಗಬೇಕೆಮ್ದು ಹಂಬಲಿಸಿದ ಕವಿ ಕುವೆಂಪು ಹೇಗೆ ತಮ್ಮ ಕಾದಂಬರಿಗಳಲ್ಲಿ ತತ್ಕಾಲೀನ ಲೌಕಿಕ ಬದುಕಿನ ವಿವರಗಳನ್ನು ದೇಶಸ್ಥ-ಕಾಲಸ್ಥ ನೆಲೆಗಳಲ್ಲಿ ದಾಖಲಿಸುತ್ತಾರೆ; ಹೇಗೆ ಅವರ ಪಾತ್ರಗಳು ಏಕಕಾಲದಲ್ಲಿ ನಿಜವ್ಯಕ್ತಿಗಳಾಗಿಯೂ ರೂಪಕಗಳಾಗಿಯೂ ಒಡಮೂಡಿಕೊಳ್ಳುತ್ತವೆ- ಇಂಥ ಹಲವಾರು ಸಾಂಸ್ಕೃತಿಕ ಪ್ರಶ್ನೆಗಳನ್ನು ಆರಂಭಿಕ ಓದುಗ-ವಿದ್ವದ್ವಿಮರ್ಶಕರಿಬ್ಬರಿಗೂ ಉಪಯುಕ್ತವೆನ್ನಿಸುವಂತೆ ಚರ್ಚಿಸುವ ಸಮರ್ಥ ವಿಮರ್ಶೆ ಇಲ್ಲಿದೆ.

Additional information

Category

Author

Publisher

Language

Kannada

Book Format

Ebook

Reviews

There are no reviews yet.

Only logged in customers who have purchased this product may leave a review.