ಈ ನಾಟಕದ ಒಂದು ಪಾತ್ರ ಒಂದು ಕಡೆ ಹೀಗೆ ಹೇಳುತ್ತದೆ:

ಇದೊಂದು ವಿಶಿಷ್ಟ ಪದಪ್ರಯೋಗ. ಇದು ಸ್ವತಃ ನಮ್ಮ ಭಾರತಯಾತ್ರೆಯೂ ಹೌದು; ಭಾರತವೇ ಸ್ವತಃ ನಡೆಸುತ್ತಿರುವ ಯಾತ್ರೆಯೂ ಹೌದು. ಆಚಾರ್ಯ ಶಂಕರರಂಥವರು ಇಂಥ ಯಾತ್ರೆ ಮಾಡತಾ ಮಾಡತಾ ಭಾರತವನ್ನು ನೋಡಿದರು ಮಾತ್ರವಲ್ಲ; ತಮ್ಮ ಯಾತ್ರೆಯ ಮೂಲಕವೇ, ನಾನಾ ರೀತಿಯ ವೈವಿಧ್ಯಮಯ ಜೀವಿಗಳು ಸಂಪರ್ಕವೇ ಇಲ್ಲದೆ ಬದುಕತಿರೋ ಈ ನೆಲಕ್ಕೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಈ ಭೂಮಿಗೆ ಭಾರತ ಅನ್ನುವ ಒಂದು ಕೂಡುಹೆಸರನ್ನು ಕಟ್ಟಿಕೊಟ್ಟರು. ಆದ್ದರಿಂದಲೇ ಭಾರತಯಾತ್ರೆ ಅಂದರೆ ಅದು ಭಾರತವನ್ನು ಕಾಣುವ ಯಾತ್ರೆ ಮಾತ್ರವಲ್ಲ; ಭಾರತವನ್ನು ಕಟ್ಟುವ ಯಾತ್ರೆಯೂ ಹೌದು.

Additional information

Category

Author

Publisher

Language

Kannada

Book Format

Ebook

Pages

88

Year Published

2013