
ಚೂರಿಕಟ್ಟೆ ಅರ್ಥಾತ್ ಕಲ್ಯಾಣಪುರ
$5.00
Product details
Category | Plays |
---|---|
Publisher | Akshara Prakashana |
Language | Kannada |
Book Format | Ebook |
ಈ ಊರಿಗೆ ಎರಡು ಹೆಸರು. ಚೂರಿಕಟ್ಟೆ ಅರ್ಥಾತ್ ಕಲ್ಯಾಣಪುರ. ಬಸ್ಸಿನ ಬೋರ್ಡಿನ ಮೇಲೆ ಕಲ್ಯಾಣಪುರ… ಯಾಕೆ ಹೀಗೆ ಅನ್ನುತ್ತೀರಾ? ಅದಕ್ಕೆ ಒಂದು ದೊಡ್ಡ ಪುರಾಣವೇ ಇದೆ. ಈ ಊರಿನ ಮೂಲ ದೇವರು ಶಂಭುಲಿಂಗೇಶ್ವರ. ಈಗ ನೂರಾರು ವರ್ಷಗಳ ಹಿಂದೆ ಆ ಶಂಭುಲಿಂಗೇಶ್ವರನ ಒಂದು ಗಣ ಈ ಕಟ್ಟೆಯಮೇಲೇ ಸ್ಥಾಪನೆಯಾಗಿತ್ತಂತೆ. ಆಗ ಜನರೆಲ್ಲ ಕೋಳಿ ಕುರಿ ತಂದು ಅದನ್ನು ಹರಿತವಾದ ಚೂರಿಯಲ್ಲಿ ಸೀಳಿ ಆ ಗಣಕ್ಕೆ ಬಲಿ ಕೊಡುತ್ತಿದ್ದರಂತೆ. ಆಮೇಲೆ ಬ್ರಿಟಿಷರ ಕಾಲದಲ್ಲಿ ಕುದುರೆಯ ಮೇಲೆ ಬಂದು ಒಬ್ಬ ಕಲೆಕ್ಟರನಿಗೆ ಇಲ್ಲೇ ಹಾದಿ ತಪ್ಪಿತು ಅನ್ನೋ ಕಾರಣಕ್ಕೆ ಆತ ಇಲ್ಲಿ ಒಂದು ಕೈಮರ ಹಾಕಿಸಿದನಂತೆ. ಸರಿ, ಗಣಕ್ಕೆ ಮೈಲಿಗೆ ಆಯಿತು ಅಂತ ಊರಿನವರು ಆ ಗಣವನ್ನು ಎತ್ತಿಕೊಂಡು ಹೋಗಿ ಈಗ ಊರನಡುವೆಯೇ ಇರುವ ಶಂಭುಲಿಂಗನ ಗುಡಿಯ ಬದಿಗೆ ನಿಲ್ಲಿಸಿದರಂತೆ. ಆಮೇಲೆ ಊರು ಆ ಕಡೆಗೇ ಬೆಳೆಯುತ್ತ ಹೋಯಿತು; ಶಂಭುಲಿಂಗನ ಗುಡಿ ಊರಿನ ನಟ್ಟನಡುವಿಗೆ ಆಯಿತು. ಊರು ಬೆಳೆದ ಹಾಗೆ ಇತಿಹಾಸವೂ ಬೆಲೀತು; ಸಾತಂತ್ರ್ಯ ಬಂತು. ಆಗ ಊರಿನವರಿಗೆ ಈ ಚೂರಿಕಟ್ಟೆ ಅನ್ನೋ ಹೆಸರು ಅಪಶಕುನ ಅನ್ನೋ ಹಾಗೆ ಕಂಡಿದ್ದರಿಂದ ದೊಡ್ಡದೊಡ್ಡವರೆಲ್ಲಾ ಸೇರಿ ಸರ್ಕಾರಕ್ಕೆ ಒತ್ತಾಯ ಮಾಡಿ ಈ ಊರಿನ ಹೆಸರನ್ನು ಕಲ್ಯಾಣಪುರ ಅಂತ ಬದಲು ಮಾಡಿಸಿದರು. ಆದರೆ, ಚೂರಿಕಟ್ಟೆ ಅನ್ನೋ ಹೆಸರು ಅಳಿಸಲೇ ಇಲ್ಲ… ಈಗ ಒಂದೆರಡು ವರ್ಷದ ಈಚೆಗೆ ಈ ಹೆಸರಿಗೆ ಇನ್ನೋಂದು ಅರ್ಥ ಬರಲಿಕ್ಕೆ ಶುರು ಆಗಿದೆ. ಪ್ರತಿವರ್ಷ ಶಂಭುಲಿಂಗೇಶ್ವರ ಜಾತ್ರೆ ಶುರು ಆಗಬೇಕು, ಅಷ್ಟು ಹೊತ್ತಿಗೆ ಇಲ್ಲಿ ಹಿಂದು ಮುಸ್ಲಿಂ ಗಲಾಟೆ ಶುರು; ಹೆಣ ಬೀಳೋದಕ್ಕೆ ಆರಂಭ. ಇವರು ಅವರಿಗೆ ಚೂರಿ ಹಾಕೋದು, ಅವರು ಇವರನ್ನು ತಿವಿಯೋದು. ಒಟ್ಟಿನಲ್ಲಿ ಹೆಣ ಕಾಯೋದು ನಮ್ಮ ಹಣೆಬರಹ.
Customers also liked...
-
Shriranga
$0.73$0.44 -
Lohit Naikar
$0.97$0.58 -
Girish Karnad
$0.73$0.44 -
Girish Karnad
$0.60$0.36 -
Prakash Garud
$0.73$0.44 -
Akshara K V
$5.00