ರಾಮನು ಯಜ್ಞಪರಿಪಾಲನೆಗಾಗಿ ವಿಶ್ವಾಮಿತ್ರನೊಂದಿಗೆ ಹೊರಟಲ್ಲಿಂದ ಮೊದಲುಗೊಂಡು ವನವಾಸವನ್ನು ಮುಗಿಸಿ ಹಿಂದಿರುಗಿ ಪಟ್ಟವನ್ನೇರುವವರೆಗಿನ ಶೌರ್ಯದ ಕಥೆಯನ್ನು ಈ ನಾಟಕವು ಹೇಳುವುದರಿಂದ  ಇದು – ಮಹಾ-ವೀರ-ಚರಿತ, ಕಡುಗಲಿಯ ನಿಡುಗಾಥೆ. ಆದರೆ ಈ ನಿಡುಗಾಥೆಯನ್ನು ಭವಭೂತಿಯು ನಿರ್ವಹಿಸಿರುವ ವಿಧಾನ ತುಂಬ ವಿಶೇಷವಾದದ್ದು; ಕಿರಿದರಲ್ಲಿ ಹಿರಿದನ್ನು ಹಿಡಿಯುವ ಮಹತ್ವಾಕಾಂಕ್ಷೆಯದು. ವಿಶ್ವಾಮಿತ್ರನ ಆಶ್ರಮ, ಪಂಚವಟಿ, ಲಂಕೆ ಮತ್ತು ಮರುಪ್ರಯಾಣದ ಆಕಾಶಮಾರ್ಗ – ಈ ನಾಲ್ಕೇ ಸ್ಥಳಗಳಲ್ಲಿ ನಡೆಯುವಂತೆ ಇಡಿಯ ರಾಮಾಯಣದ ಕಥೆಯನ್ನು ಈ ನಾಟಕವು ಏಳು ಅಂಕಗಳಲ್ಲಿ ಪ್ರಸ್ತುತಪಡಿಸುತ್ತದೆ. ಜತೆಗೆ, ಶೂರ್ಪಣಖಿಯೇ ಮಂಥರೆಯ ರೂಪದಲ್ಲಿ ಕಾಣಿಸಿಕೊಳ್ಳುವುದೇ ಮೊದಲಾಗಿ ರಾಮಾಯಣದ ಹಲವು ಹೊಸ ಬಗೆಯ ವ್ಯಾಖ್ಯಾನಗಳೂ ಈ ನಾಟಕದಲ್ಲಿವೆ. ಮುಂದೆ ಸಂಸ್ಕೃತದಲ್ಲಿ ಕಾಣಿಸಿಕೊಂಡ ರಾಮಾಯಣದ ಹೊಸ ಬಗೆಯ ವ್ಯಾಖ್ಯಾನಗಳಿಗೆಲ್ಲ ಅಡಿಪಾಯ ಹಾಕಿಕೊಟ್ಟ ಕೃತಿ ಇದೆಂದೂ ಹೇಳಲಾಗುತ್ತದೆ. ಹಾಗಿದ್ದರೂ, ಇದರ ಮುಕ್ಕಾಲು ಭಾಗ ಮಾತ್ರ ಭವಭೂತಿ ಬರೆದದ್ದು, ಉಳಿದದ್ದು ಇನ್ನಿಬ್ಬರು ಪ್ರತ್ಯೇಕವಾಗಿ ಬರೆದು ಪೂರ್ಣಗೊಳಿಸಿದ್ದು. ಅಂಥ ನಾಟಕ-ಸ್ವಾರಸ್ಯಗಳನ್ನು ಇವತ್ತಿನ ರಂಗಭೂಮಿಗೆ ಉಪಯುಕ್ತವಾಗುವಂತೆ ಕನ್ನಡೀಕರಿಸುವ ಪ್ರಯತ್ನ ಇಲ್ಲಿದೆ.

Additional information

Category

Publisher

Book Format

Printbook

Language

Kannada

Translator

Akshara K V

Reviews

There are no reviews yet.

Only logged in customers who have purchased this product may leave a review.