ಹರಿಯೋ ಹೊಳೆ ಅಂದರೆ ಏನು?

ಕವಿಗಳು ಹೇಳತಾರೆ —

ಸದಾ ನಿಂತೇ ಇರೋ ಬೆಟ್ಟಕ್ಕೆ

ಓಡಾಡಬೇಕು ಅನ್ನಿಸಿದಾಗ, ಅಥವಾ

ಬಾಯಿಲ್ಲದೆ ಇರುವ ಕಾಡಿಗೆ

ಮಾತಾಡಬೇಕು ಅನ್ನಿಸಿದಾಗ, ಮತ್ತೆ

ನಮ್ಮನ್ನೆಲ್ಲ ಹೊತ್ತ ಭೂಮಿಗೆ

ನಗಬೇಕು ಅನ್ನಿಸಿದಾಗ,

ಆ ಎಲ್ಲ ಆಕಾಂಕ್ಷೆಗಳೇ ಪಡೆಯುವ

ರೂಪ — ಹೊಳೆ.

ಆದರೆ ಮನುಷ್ಯರ ಅಪೇಕ್ಷೆ

ಅದಕ್ಕೆ ತದ್ವಿರುದ್ಧ.

ಹರಿಯೋ ಹೊಳೆಯನ್ನ

ಒಡ್ಡು ಕಟ್ಟಿ ನಿಲ್ಲಿಸಬೇಕು,

ಅದರ ಕಸುವಿನಲ್ಲಿ ನೀರನ್ನು ಕಡೆದು

ಕರೆಂಟು ಹುಟ್ಟಿಸಬೇಕು — ಅನ್ನೋದು

ಇವತ್ತಿನ ಮನುಷ್ಯರ ಅಪೇಕ್ಷೆ.

ಹೀಗೆ, ಪಕೃತಿಯ ಆಕಾಂಕ್ಷೆ

ಮತ್ತು ಮನುಷ್ಯರ ಅಪೇಕ್ಷೆ

ಎದರಾಬದರಾ ನಿಂತು

ಗುದಮುರಿಗೆ ಆಡಿದಾಗ

ಹುಟ್ಟಿದ್ದು ನಮ್ಮ ಊರು —

ಹೆಸರು, ಹಳೆಯೂರು.

Additional information

Category

Author

Publisher

Language

Kannada

Book Format

Ebook

Year Published

2007