Your Cart

Need help? Call +91 9535015489

📖 Print books shipping available only in India. ✈ Flat rate shipping

ಎಚ್. ಎಸ್. ಶಿವಪ್ರಕಾಶ ಅವರ ಆಯ್ದ ಕವಿತೆಗಳು

K V Subbanna
$8.00

Product details

Category

Poetry

Author

K V Subbanna

Publisher

Akshara Prakashana

Book Format

Ebook

Language

Kannada

ಎಚ್‌.ಎಸ್‌. ಶಿವಪ್ರಕಾಶ್ ಅವರ ಆಯ್ದ ಕವಿತೆಗಳು
ಎಚ್.ಎಸ್. ಶಿವಪ್ರಕಾಶ್
1954ರಲ್ಲಿ ಕನ್ನಡದ ಪ್ರಸಿದ್ಧ ವಿದ್ವಾಂಸ ಬಿ. ಶಿವಮೂರ್ತಿ ಶಾಸ್ತ್ರಿಯವರ ಮಗನಾಗಿ ಜನಿಸಿದ ಎಚ್.ಎಸ್. ಶಿವಪ್ರಕಾಶ್ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಮುಗಿಸಿ ತುಮಕೂರು ಮತ್ತು ಬೆಂಗಳೂರಿನಲ್ಲಿ ಅಧ್ಯಾಪಕರಾಗಿದ್ದರು. ಮುಂದೆ, ದೆಹಲಿಯ ಸಾಹಿತ್ಯ ಅಕಾಡೆಮಿಯ ಪತ್ರಿಕೆ ‘ಇಂಡಿಯನ್ ಲಿಟರೇಚರ್‘ಗೆ ಸಂಪಾದಕರಾಗಿ ಕೆಲಸ ಮಾಡಿರುವ ಇವರು ಪ್ರಸ್ತುತ ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ತೌಲನಿಕ ಕಲಾಮೀಮಾಂಸೆ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳನ್ನು ಪಡೆದಿರುವ ಇವರು ಈಚಿನ ದಶಕಗಳ ಕನ್ನಡದ ಪ್ರಮುಖ ಕವಿ-ನಾಟಕಕಾರರೆಂದು ಗುರುತಿಸಲ್ಪಟ್ಟಿದ್ದಾರೆ. ‘ಮಿಲರೇಪ, ‘ಮಳೆಬಿದ್ದ ನೆಲದಲ್ಲಿ‘, ‘ಅಣುಕ್ಷಣಚರಿತೆ‘, ‘ಮಳೆಯೇ ಮಂಟಪ‘, ‘ಮಹಾಚೈತ್ರ‘, ‘ಮಾರನಾಯಕನ ದೃಷ್ಟಾಂತ‘, ‘ಷೇಕ್‍ಸ್ಪಿಯರ್ ಸ್ವಪ್ನನೌಕೆ‘, ‘ಮಂಟೇಸ್ವಾಮಿ ಕಥಾಪ್ರಸಂಗ‘, ‘ಮೊದಲ ಕಟ್ಟಿನ ಗದ್ಯ‘, ‘ಸಾಹಿತ್ಯ ಮತ್ತು ರಂಗಭೂಮಿ‘ ಮೊದಲಾದವು ಇವರ ಪ್ರಮುಖ ಪ್ರಕಟಿತ ಕೃತಿಗಳು.
ಎಚ್‌.ಎಸ್‌. ಶಿವಪ್ರಕಾಶ್ – ಮುಖ್ಯ ಕೃತಿಗಳು

ಕವನ ಸಂಕಲನಗಳು:
ಮಿಲರೇಪ
ಮಳೆಬಿದ್ದ ನೆಲದಲ್ಲಿ
ಅಣುಕ್ಷಣಚರಿತೆ
ಸೂರ್ಯಜಲ
ನವಿಲುನಾಗರ
ಮಳೆಯೇ ಮಂಟಪ
ಮತ್ತೆ ಮತ್ತೆ
ಶಿವಪ್ರಕಾಶರ ಕವಿತೆಗಳು (ಆಯ್ದ ಕವಿತೆಗಳು)

ನಾಟಕಗಳು:
ಮಹಾಚೈತ್ರ
ಮಾರನಾಯಕನ ದೃಷ್ಟಾಂತ
ಷೇಕ್‌ಸ್ಪಿಯರ್ ಸ್ವಪ್ನನೌಕೆ
ಮಂಟೇಸ್ವಾಮಿ ಕಥಾಪ್ರಸಂಗ
ಮಾದಾರಿ ಮಾದಯ್ಯ
ಸಿಲಪ್ಪದಿಗಾರಂ ಮೂರು ನಾಟಕಗಳು (ಮಧುರೆ ಕಾಂಡ, ಮಾಧವಿ, ಮಾತೃಕಾ)
ಮದುವೆ ಹೆಣ್ಣು

ಲೇಖನಗಳು / ವಿಮರ್ಶೆ:
ಮೊದಲ ಕಟ್ಟಿನ ಗದ್ಯ
ಸಾಹಿತ್ಯ ಮತ್ತು ರಂಗಭೂಮಿ