ಶ್ರೀ ಸೂರ್ಯಂಬೈಲು ಕೃಷ್ಣಮೂರ್ತಿಯವರು “ಹಿಂದೂ ಧರ್ಮ ವಿಚಾರ ನಾನು ತಿಳಿದುಕೊಂಡಂತೆ” ಎಂಬ ಶಿರೋನಾಮೆಯಲ್ಲಿ ಬರೆದಿರುವ ಪುಸ್ತಕ.
ಈ ಪುಸ್ತಕದಲ್ಲಿ ಅಡಕವಾಗಿರುವ 10 ಅಂಶಗಳನ್ನು ಓದಿದ ನಂತರ ಅವರ ಅಪಾರ ಅನುಭವಾಮೃತದ ಪರಿಚಯವಾಯಿತು. ಅವರು ಮೊದಲನೇ ಅಂಶದಲ್ಲಿ ಹಿಂದೂಧರ್ಮ ಒಂದು ಮತವಲ್ಲ. ಯಾವ ಒಬ್ಬ ಮತಾಚಾರ್ಯರಿಂದಲೂ ಸ್ಥಾಪಿಸಲ್ಪಟ್ಟದ್ದಲ್ಲ. ಅದೊಂದು ವಿಚಾರಧಾರೆ. ಕಾಲಕ್ರಮದಲ್ಲಿ ವಿಕಸಿತವಾದ ಜೀವನ ರೀತಿ ಎಂದು ಬರೆದಿರುವುದು ಅವರಿಗೆ ಧರ್ಮ ಮತ್ತು ಮತ (ರಿಲಿಜನ್) ಈ ಪದದ ಬಗ್ಗೆ ಸಾಮಾನ್ಯವಾಗಿ ಮೆಕಾಲೆ ಉದ್ಘಾಟಿಸಿದ ಶಿಕ್ಷಣ ಪದ್ಧತಿಯಲ್ಲಿ ವ್ಯಾಸಂಗ ಮಾಡಿ ವಿದ್ಯಾವಂತರೆನಿಸಿಕೊಂಡವರಿಗಿಲ್ಲದ ಪರಿಜ್ಞಾನವಿರುವುದು ವ್ಯಕ್ತವಾಗುತ್ತದೆ. ಹಿಂದೂ ಧರ್ಮ ಮತವಲ್ಲ ಅದೊಂದು ಅನಾದಿ ಕಾಲದಲ್ಲಿ ಉಗಮವಾಗಿ ಶತಮಾನಗಳಿಂದ ಮಾನವರ ಸಕಲ ಸಮಸ್ಯೆಗಳಿಗೂ ಸೂಕ್ತ ಪರಿಹಾರ ನೀಡುವ ಜೀವನ ಶೈಲಿಯಾಗಿದೆ ಎಂಬ ಸತ್ಯಾಂಶ ಗ್ರಂಥಕರ್ತರ ಅನುಭವಕ್ಕೆ ಬಂದಿರುವುದರ ಪರಿಚಯ ಓದುಗರಿಗೆ ಮನವರಿಕೆಯಾಗುವುದು.
-40%
Ebook
ಹಿಂದೂ ಧರ್ಮ ವಿಚಾರ
Author: Suriambail Krishnamoorthi
$0.94
ಶ್ರೀ ಸೂರ್ಯಂಬೈಲು ಕೃಷ್ಣಮೂರ್ತಿಯವರು “ಹಿಂದೂ ಧರ್ಮ ವಿಚಾರ ನಾನು ತಿಳಿದುಕೊಂಡಂತೆ” ಎಂಬ ಶಿರೋನಾಮೆಯಲ್ಲಿ ಬರೆದಿರುವ ಪುಸ್ತಕ.
About this Ebook
Information
Additional information
Author | |
---|---|
Publisher | |
Book Format | Ebook |
Language | Kannada |
Pages | 140 |
Year Published | 2013 |
Category |
Reviews
Only logged in customers who have purchased this product may leave a review.
Reviews
There are no reviews yet.