Ebook

ಶ್ರೀರುದ್ರಸಾಧನೆ

$1.34

ಈ ರುದ್ರಕೃತಿ ಪ್ರಕಟಗೊಳ್ಳುತ್ತಿರುವುದು ರುದ್ರಸಾಧನೆಯ ಅನುಭವವು ಸಾಧನಾ ಪಥದ ಸಾಧಕರ ಸ್ವಾಧ್ಯಾಯಕ್ಕೆ ಲಭ್ಯವಾಗಿ ಭಾರತೀಯ ಅಧ್ಯಾತ್ಮ ಪರಂಪರೆಯು ಈಗಲೂ ಹೇಗೆ ಜೀವಂತಿಕೆಯಲ್ಲಿದೆ ಎನ್ನುವ ಆತ್ಮವಿಶ್ವಾಸವನ್ನು ಸಾಧಕಬಂಧುಗಳ ಹೃದಯದಲ್ಲಿ ತುಂಬಲಿ ಎನ್ನುವ ಆಶಯದೊಂದಿಗೆ, ಶ್ರೀರಾಮಕೃಷ್ಣರು, ಭಗವಾನ್ ರಮಣರನ್ನು ಒಳಗೊಂಡು ಎಲ್ಲ ಸಂತ-ಮಹಾತ್ಮರೂ ತಮ್ಮ ಅನುಭವಗಳನ್ನು ಹೇಳಿಕೊಂಡಿರುವುದು ಈಗಲೂ ಸಾಧಕಬಂಧುಗಳಿಗೆ ಅಪೂರ್ವ ಮಾಹಿತಿಗಳನ್ನು ನೀಡುತ್ತಿರುವ ಅಧ್ಯಾತ್ಮಲೋಕದ ಜೀವಂತ ಪರಂಪರೆಯ ಭಾಗವಾಗಿ ಈ ಕಿರು ಕೃತಿಯೂ ಕಿರುಜ್ಯೋತಿ ಪ್ರಕಾಶರೂಪವಾಗಿ ಪ್ರಕಟಗೊಳ್ಳುತ್ತಿದೆ.

ಈ ರುದ್ರಕೃತಿ ಪ್ರಕಟಗೊಳ್ಳುತ್ತಿರುವುದು ರುದ್ರಸಾಧನೆಯ ಅನುಭವವು ಸಾಧನಾ ಪಥದ ಸಾಧಕರ ಸ್ವಾಧ್ಯಾಯಕ್ಕೆ ಲಭ್ಯವಾಗಿ ಭಾರತೀಯ ಅಧ್ಯಾತ್ಮ ಪರಂಪರೆಯು ಈಗಲೂ ಹೇಗೆ ಜೀವಂತಿಕೆಯಲ್ಲಿದೆ ಎನ್ನುವ ಆತ್ಮವಿಶ್ವಾಸವನ್ನು ಸಾಧಕಬಂಧುಗಳ ಹೃದಯದಲ್ಲಿ ತುಂಬಲಿ ಎನ್ನುವ ಆಶಯದೊಂದಿಗೆ, ಶ್ರೀರಾಮಕೃಷ್ಣರು, ಭಗವಾನ್ ರಮಣರನ್ನು ಒಳಗೊಂಡು ಎಲ್ಲ ಸಂತ-ಮಹಾತ್ಮರೂ ತಮ್ಮ ಅನುಭವಗಳನ್ನು ಹೇಳಿಕೊಂಡಿರುವುದು ಈಗಲೂ ಸಾಧಕಬಂಧುಗಳಿಗೆ ಅಪೂರ್ವ ಮಾಹಿತಿಗಳನ್ನು ನೀಡುತ್ತಿರುವ ಅಧ್ಯಾತ್ಮಲೋಕದ ಜೀವಂತ ಪರಂಪರೆಯ ಭಾಗವಾಗಿ ಈ ಕಿರು ಕೃತಿಯೂ ಕಿರುಜ್ಯೋತಿ ಪ್ರಕಾಶರೂಪವಾಗಿ ಪ್ರಕಟಗೊಳ್ಳುತ್ತಿದೆ. ಶ್ರೀರುದ್ರದೊಂದಿಗೆ ಪಠಿಸುವ ‘ಪುರುಷಸೂಕ್ತ’ ಕುರಿತು ವಿದ್ವದ್ಲೋಕದಲ್ಲಿ ಹರಡಿರುವ ತಪ್ಪುಗ್ರಹಿಕೆಯ ವಿಚಾರಗಳು ಅಧ್ಯಾತ್ಮಲೋಕದ ಹಿನ್ನೆಲೆ ಇಲ್ಲದವರ ಮೇಲುಸ್ತರದ ಬೌದ್ಧಿಕತೆಯಿಂದ ಮೂಡಿದ ವಿಚಾರಗಳು ಎಂದು ನನ್ನ ಸಾಧನೆಯಲ್ಲಿ ಕಂಡಿತು. ಈ ಹಿಂದೆ ಕನ್ನಡಋಷಿ ಡಿ.ವಿ.ಜಿ ಅವರು ಪುರುಷಸೂಕ್ತ ಕುರಿತು ಬರೆದಿರುವ ಕಿರುಕೃತಿಯನ್ನು ಈ ‘ಶ್ರೀರುದ್ರಸಾಧನೆ’ ರಚನೆಯ ನಂತರ ಪರಿಶೀಲಿಸಿದಾಗ, ಡಿ.ವಿ.ಜಿ ಅವರೂ ತಮ್ಮ ಜೀವಿತದ ಆರಂಭಿಕ ದಿನಗಳಲ್ಲಿ ಪುರುಷಸೂಕ್ತ ಪಠಣದಲ್ಲಿ ಸಾಧನೆ ನಡೆಸಿರುವುದು ಅವರ ಬರವಣಿಗೆಯಲ್ಲಿ ಕಂಡಿತು. ಪ್ರಸ್ತುತ ಕೃತಿಯಲ್ಲಿ ಪ್ರಕಟವಾಗಿರುವ ಪುರುಷಸೂಕ್ತ ಕುರಿತ ವಿಚಾರಗಳು ಮುಕ್ತಮನದಿಂದ ಅವಲೋಕಿಸುವ ಜಿಜ್ಞಾಸುಗಳಿಗೆ ಅಧ್ಯಾತ್ಮಲೋಕದ ಹಿನ್ನೆಲೆಯ ಸೂಕ್ಷ್ಮತೆಯನ್ನು ಮನಗಾಣಿಸುತ್ತವೆ.

Additional information

Author

Publisher

Book Format

Ebook

Language

Kannada

Pages

160

Year Published

2020

Category

Reviews

There are no reviews yet.

Only logged in customers who have purchased this product may leave a review.