Ebook

ಮಾವಿನ ಮರದಲ್ಲಿ ಬಾಳೆಯ ಹಣ್ಣು

$8.00

ನಾಟಕಕಾರ, ನಿರ್ದೇಶಕ ಮತ್ತು ಬರಹಗಾರರಾದ ಕೆ.ವಿ. ಅಕ್ಷರ ಅವರು ರಂಗಭೂಮಿ ಮತ್ತು ನಾಟಕ ಕುರಿತು ಬರೆದ ಲೇಖನಗಳ ಸಂಕಲನ ಇದು. ಗುಬ್ಬಿ ಕಂಪೆನಿಯ ರಾಮಾಯಣ ಪ್ರಯೋಗದ ಒಂದು ಉಲ್ಲೇಖದಿಂದ ಈ ವಿಚಿತ್ರ ಹೆಸರನ್ನು ಎತ್ತಿಕೊಂಡಿರುವ ಈ ಪುಸ್ತಕವು ಕನ್ನಡ ರಂಗಭೂಮಿ ಮತ್ತು ನಾಟಕದ ಜಗತ್ತಿನೊಳಗೆ ಅಡಕವಾಗಿರುವ ವಿಚಿತ್ರ ಬಗೆಯ ಪರಸ್ಪರ ಸಂಬಂಧಗಳನ್ನೂ ಸಾಮ್ಯ-ಭಿನ್ನತೆಗಳನ್ನೂ ಅಂತರ್ ಪಠ್ಯೀಯತೆಯನ್ನೂ ಶೋಧಿಸಿ ಅದರ ಮೂಲಕವೇ ಆಧುನಿಕ ಕನ್ನಡ ರಂಗಭೂಮಿಯ ಒಂದು ವಿಶಿಷ್ಟ ಚಿತ್ರವನ್ನು ಕಟ್ಟಿಕೊಡುತ್ತದೆ. ಸಂಗ್ಯಾಬಾಳ್ಯಾ, ಸಂಸರ ನಾಟಕಗಳು, ಪುತಿನ ಅವರ `ಅಹಲ್ಯೆ?, ದ.ರಾ. ಬೇಂದ್ರೆ ಮತ್ತು ಪಿ. ಲಂಕೇಶ್ ಅವರ ನಾಟಕಗಳು – ಹೀಗೆ ಕನ್ನಡ ನಾಟಕದ ಬೇರೆಬೇರೆ ಬಗೆಗಳನ್ನು ಕುರಿತ ವಿಮರ್ಶಾತ್ಮಕ ಲೇಖನಗಳು ಈ ಪುಸ್ತಕದ ಒಂದು ಭಾಗವಾಗಿದ್ದರೆ, ಇನ್ನೊಂದು ಭಾಗದಲ್ಲಿ ಕನ್ನಡ ರಂಗಭೂಮಿಯ ಭೂತ-ವರ್ತಮಾನ-ಭವಿಷ್ಯಗಳನ್ನು ಕುರಿತ ಸುದೀರ್ಘ ಚಿಂತನೆಗಳಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಈ ಪುಸ್ತಕಕ್ಕೆ ದೊರೆತಿದೆ.

Additional information

Category

Publisher

Book Format

Ebook

Language

Kannada

Reviews

There are no reviews yet.

Only logged in customers who have purchased this product may leave a review.