ಬೂಟು ಬಂದೂಕುಗಳ ನಡುವೆ

‘ನಾಟಕ ಬೆಂಗ್ಳೂರು’ ಉತ್ಸವದಲ್ಲಿ ಡಿ.20ರಂದು ಸಮನ್ವಯ ತಂಡದ ‘ಬೂಟು ಬಂದೂಕುಗಳ ನಡುವೆ’ (ರಚನೆ– ಮೈನಾ ಚಂದ್ರು, ನಿರ್ದೇಶನ– ಮಾಲತೇಶ ಬಡಿಗೇರ) ನಾಟಕ ಪ್ರದರ್ಶನಗೊಳ್ಳಲಿದೆ.ನಾಟಕದ ವಿಷಯ: ಬ್ರಿಟಿಷರ ಆಡಳಿತದ ಅವಧಿಯಲ್ಲಿ ಪ್ರತಿ ಭಾರತೀಯ ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತ್ತು. ಮಲೆನಾಡಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸಹಾಯ ಮಾಡಲೆಂದೇ ವೃದ್ಧೆ ತನ್ನ ಗುಡಿಸಲನ್ನು ಹೋಟೆಲ್‌ ಆಗಿ ಮಾರ್ಪಡಿಸಿಕೊಂಡಿದ್ದಳು. ಬ್ರಿಟಿಷರ ಪಾಶವೀ ಕೃತ್ಯಕ್ಕೆ ಆಕೆಯ ಮಗ ಬಲಿಯಾಗುವ ಕಥಾನಕವಿದು. ಸ್ಥಳ– ರವೀಂದ್ರ ಕಲಾಕ್ಷೇತ್ರ, ಜೆ.ಸಿ ರಸ್ತೆ. ಡಿ.20 ರಾತ್ರಿ 7.

courtsey:prajavani.net

https://www.prajavani.net/artculture/art/between-boots-and-guns-690872.html

Leave a Reply