“‘ಝೇಂಕಾರ’ ಸಂಗೀತೋತ್ಸವ ಇಂದು”,

ಹಿಂದೂಸ್ತಾನಿ ರಾಗಗಳಲ್ಲಿ ಸಿದ್ಧಹಸ್ತರಾದ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರು ಝೇಂಕಾರ ಸಂಗೀತೋತ್ಸವದಲ್ಲಿ ಸಂಗೀತಾಸಕ್ತರ ಮನತಣಿಸಲು ಸಜ್ಜಾಗಿದ್ದಾರೆ. ಪಂಡಿತ್ ಬಸವರಾಜ ರಾಜಗುರು ಅವರ ಶಿಷ್ಯರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಾಸಣಗಿ ಅವರು ಆಕಾಶವಾಣಿಯ ‘ಎ’ ಶ್ರೇಣಿಯ ಹಿಂದೂಸ್ತಾನ ಗಾಯಕರು.ವಿಶ್ವ ಸಂಗೀತ ದಿನಾಚರಣೆ ನಿಮಿತ್ತ ಶನಿವಾರ (ಜೂನ್ 22) ಝೇಂಕಾರ ಭಾರತಿ ಮ್ಯೂಸಿಕ್ ಅಂಡ್ ಕಲ್ಚರಲ್ ಸೆಂಟರ್ ಆಯೋಜಿಸಿರುವ ಸಂಸ್ಥೆಯ ಐದನೇ ವಾರ್ಷಿಕೋತ್ಸವದಲ್ಲಿ ವೈವಿಧ್ಯಮಯ ಸಂಗೀತವನ್ನು ಸವಿಯಬಹುದು. ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಪಂಡಿತ್ ಬಸವರಾಜ ಮುಗಳಖೋಡಹಾಗೂ ಹಿಂದೂಸ್ತಾನಿ ಗಾಯಕ ಪಂಡಿತ್ಶರಣ್ ಚೌಧರಿ ಅವರು ಗಾಯನ ಪ್ರಸ್ತುತಪಡಿಸಲಿದ್ದಾರೆ.ಕೆ.ಎಸ್. ಗಣೇಶ್ ಕುಮಾರ್, ಮಹಾಂತೇಶ್ ಕುಮಾರ್ ಹಾಗೂ, ಶೋಭಾ ಇಂಚಗೇರಿಮಠ ಅವರಿಂದ ವಚನ, ದಾಸರಪದ ಹಾಗೂ ಭಾವಸಂಗಮ ಮೂಲಕ ವೈವಿಧ್ಯಮಯ ಸಂಗೀತ ಉಣಬಡಿಸಲಿದ್ದಾರೆ. ಸಂಗೀತ ನಿರ್ದೇಶಕ ಸಾಧುಕೋಕಿಲ, ಚಿತ್ರನಟ ರಾಮಕೃಷ್ಣ ಅವರ ಉಪಸ್ಥಿತಿ ಇದೆ.ಗಣಪತಿ ಭಟ್ ಹಾಸಣಗಿ ಅವರಿಗೆ ‘ಝೇಂಕಾರ ಗಾನವಾರಿಧಿ’, ಹೆಸರಾಂತ ತಬಲಾ ವಾದಕ ಅಮೃತೇಶ್ ಕುಲಕರ್ಣಿ ಅವರಿಗೆ ‘ಝೇಂಕಾರ ತಬಲಾ ವಾರಿಧಿ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುತ್ತದೆ ಎಂದು ಬಸವರಾಜ ಮುಗಳಖೋಡ ಅವರು ತಿಳಿಸಿದ್ದಾರೆ.ಸ್ಥಳ: ನಗರ ಕೇಂದ್ರ ಗ್ರಂಥಾಲಯ ಸಭಾಂಗಣ, ಹಂಪಿನಗರ, ಸಮಯ: ಶನಿವಾರ ಜೂನ್ 22ರಂದು ಸಂಜೆ 4 ಗಂಟೆಗೆ.

courtsey:prajavani.net

https://www.prajavani.net/artculture/music/music-645841.html

Leave a Reply