ಬೇಂದ್ರೆಯವರ ಕವಿತೆಯ ಸಾಲನ್ನು ಕಾರ್ನಾಡ್ ರು ತಮ್ಮ ಆತ್ಮಕತೆಯ ಶೀರ್ಷಿಕೆ ಮಾಡಿದ್ದಾರೆ. ಶಿರಸಿಯಲ್ಲಿ ಬಾಲ್ಯ ಕಳೆದ ಗಿರೀಶ್ ಕಾರ್ನಾಡ್ ಅವರು ಧಾರವಾಡದ ಕಾಲೇಜು, ಆಕ್ಸಫರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕವಿಯಾಗಬೇಕು ಅಂದು ಕೊಂಡಿದ್ದ ಗಿರೀಶ್ ಕಾರ್ನಾಡ್ ರು ಹರಯದ ದಿನಗಳಲ್ಲಿ ಚಿತ್ರ ಬಿಡಿಸಿ ಅದನ್ನು ಗಣ್ಯರಿಗೆ ಕಳಿಸಿ ಅವರ ಹಸ್ತಾಕ್ಷರ ಸಂಗ್ರಹಿಸುವ ಪರಿಪಾಠ ಇಟ್ಟುಕೊಂಡಿದ್ದರು. ನಾಟಕಕಾರ, ನಟ, ನಿರ್ದೇಶಕ, ರಂಗಕವಿ, ಆಡಳಿತಗಾರ ಹೀಗೆ ಹಲವಾರು ರೀತಿಯಲ್ಲಿ ಅನಾವರಣಗೊಂಡಿರುವ ಗಿರೀಶ್ ಕಾರ್ನಾಡ್ ರ ವ್ಯಕ್ತಿತ್ವ ಅವರದೇ ಶೈಲಿಯಲ್ಲಿ ಓದುವ ಸೊಗಸು ಈ ಪುಸ್ತಕದಿಂದ ದೊರೆಯುತ್ತದೆ. ವಿಶಿಷ್ಟ ಅನುಭವಗಳನ್ನು ಮನಮುಟ್ಟುವ ರೀತಿಯಲ್ಲಿ ಗಿರೀಶ್ ಕಾರ್ನಾಡ್ ರು ದಾಖಲಿಸಿದ್ದಾರೆ.

ಆಡಾಡತ ಆಯುಷ್ಯ
Sale!
ಆಡಾಡತ ಆಯುಷ್ಯ
$4.09 $2.45
ಆಡಾಡತ ಆಯುಷ್ಯ – ಈ ಕ್ರತಿಯು ಗಿರೀಶ ಕಾರ್ನಾಡ ಅವರ ಆತ್ಮಕಥೆಯಾಗಿದ್ದು, ಆತ್ಮಕಥೆಯ ಪೂರ್ವಾರ್ಧವನ್ನು ಒಳಗೊಂಡಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡ್ ಅವರ ಆತ್ಮಕತೆ ‘ಆಡಾಡತ ಆಯುಷ್ಯ’.
- Category: Autobiography
- Publisher: Manohara Granthamala
- Language: Kannada
- ISBN: 978-93-81822-09-4
- Book Format: Ebook
- Year Published: 2012
Only logged in customers who have purchased this product may leave a review.
Reviews
There are no reviews yet.