Swayamvara Loka
₹65.00 ₹35.00
ಹರಿಯೋ ಹೊಳೆ ಅಂದರೆ ಏನು? ಕವಿಗಳು ಹೇಳತಾರೆ — ಸದಾ ನಿಂತೇ ಇರೋ ಬೆಟ್ಟಕ್ಕೆ ಓಡಾಡಬೇಕು ಅನ್ನಿಸಿದಾಗ, ಅಥವಾ ಬಾಯಿಲ್ಲದೆ ಇರುವ ಕಾಡಿಗೆ ಮಾತಾಡಬೇಕು ಅನ್ನಿಸಿದಾಗ, ಮತ್ತೆ ನಮ್ಮನ್ನೆಲ್ಲ ಹೊತ್ತ ಭೂಮಿಗೆ ನಗಬೇಕು ಅನ್ನಿಸಿದಾಗ, ಆ ಎಲ್ಲ ಆಕಾಂಕ್ಷೆಗಳೇ ಪಡೆಯುವ ರೂಪ — ಹೊಳೆ. ಆದರೆ ಮನುಷ್ಯರ ಅಪೇಕ್ಷೆ ಅದಕ್ಕೆ ತದ್ವಿರುದ್ಧ. ಹರಿಯೋ ಹೊಳೆಯನ್ನ ಒಡ್ಡು ಕಟ್ಟಿ ನಿಲ್ಲಿಸಬೇಕು, ಅದರ ಕಸುವಿನಲ್ಲಿ ನೀರನ್ನು ಕಡೆದು ಕರೆಂಟು ಹುಟ್ಟಿಸಬೇಕು — ಅನ್ನೋದು ಇವತ್ತಿನ ಮನುಷ್ಯರ ಅಪೇಕ್ಷೆ. ಹೀಗೆ, ಪಕೃತಿಯ ಆಕಾಂಕ್ಷೆ ಮತ್ತು ಮನುಷ್ಯರ ಅಪೇಕ್ಷೆ ಎದರಾಬದರಾ ನಿಂತು ಗುದಮುರಿಗೆ ಆಡಿದಾಗ ಹುಟ್ಟಿದ್ದು ನಮ್ಮ ಊರು — ಹೆಸರು, ಹಳೆಯೂರು.
Reviews
There are no reviews yet.