Your Cart

Need help? Call +91 9535015489

📖 Print books shipping available only in India. ✈ Flat rate shipping

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೯: ಲಾವಣಿಯ ಲಾವಣ್ಯ

ಗೋಷ್ಠಿ 9 ವೇಳೆ : 3.30-4.30 ಲಾವಣಿಯ ಲಾವಣ್ಯ ಉತ್ತರ ಕರ್ನಾಟಕದ ಅನೇಕ ಭಾಗದಲ್ಲಿ ಇನ್ನೂ ಕ್ರಿಯಾಶೀಲವಾಗಿರುವ ಜಾನಪದ ಹಾಡುಗಾರಿಕೆಯ ಒಂದು ಮುಖ್ಯ ಪ್ರಕಾರ ಲಾವಣಿ. ಒಂದು ಕಾಲಕ್ಕೆ, ಈ ಭಾಗದಲ್ಲಿ ಸಂಸ್ಕøತಿ ಪ್ರಸಾರದಲ್ಲಿ ಲಾವಣಿ ಬಹಳ ಮಹತ್ವದ ಪಾತ್ರ ವಹಿಸಿತ್ತು. ಕಾಲಕಾಲಕ್ಕೆ ಬದಲಾವಣೆ ಪಡೆದು ತನ್ನ ಸೃಜನಶೀಲತೆಯನ್ನು ಜೀವಂತವಾಗಿ ಇರಿಸಿಕೊಂಡಿತ್ತು. ಇಂಗ್ಲೀಷಿನ ‘ಬ್ಯಾಲಡ್’ಗೆ ಸಂವಾದಿಯಾದದ್ದು, ಕಥೆ ಹೇಳುವ ಒಂದು ಕಾವ್ಯಪ್ರಕಾರ ಎಂದು ತಪ್ಪು ಗ್ರಹಿಕೆಗೆ ಒಳಗಾಗಿರುವ ಲಾವಣಿಗೆ ಅದರದೇ ಆದ ದೇಸೀ ರಾಚನಿಕ ವಿನ್ಯಾಸ, ವಸ್ತು, […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೮: ಇಂದೂ ಕಾಡುವ ಅಂದಿನ ಕೃತಿ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೮: ಇಂದೂ ಕಾಡುವ ಅಂದಿನ ಕೃತಿ ಅನೇಕ ಕಾರಣಗಳಿಂದ, ಒಮ್ಮೆ ಮಹತ್ವವೆನಿಸಿದ ಅನೇಕ ಕೃತಿಗಳು ಕ್ರಮೇಣ ಮರೆವಿಗೆ ಸರಿಯುತ್ತವೆ. ಇನ್ನು ಕೆಲವು ಮಹತ್ವದ ಕೃತಿಗಳು ಓದುಗರ ಗಮನವನ್ನೇ ಸೆಳೆಯದೆ ಕಣ್ಮರೆಯಾಗಿರುತ್ತವೆ. ಇಂದಿಗೂ ಪ್ರಸ್ತುತವಾಗಿರುವ ಅಂಥ ಕೃತಿಗಳನ್ನು ಮತ್ತೆ ಮತ್ತೆ ಓದುಗರ ಗಮನಕ್ಕೆ ತರುವುದು ನಿರಂತರವಾಗಿ ನಡೆಯಬೇಕಾದ ಕೆಲಸ. ಅಂಥ ಒಂದು ಉದ್ದೇಶದ ಗೋಷ್ಠಿ ಇದು. ರಾ.ಕು. ಅವರ “ಗಾಳಿಪಟ”, ಮಧುರಚೆನ್ನರ ‘ರಮ್ಯಜೀವನ’, ಹ. ಪೀ. ಜೋಶಿಯವರ “ಮಾವಿನ ತೋಪು”, ಕೊಡಗಿನ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೭ – ಹಳಗನ್ನಡ ಕಾವ್ಯದ ಓದು

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೭ – ಹಳಗನ್ನಡ ಕಾವ್ಯದ ಓದು ಹಳಗನ್ನಡ ಕಾವ್ಯದ ಅಭ್ಯಾಸ ಅಲಕ್ಷ್ಯಕ್ಕೆ ಒಳಗಾಗತೊಡಗಿದೆ. ಪದವಿ ಮತ್ತು ಸ್ನಾತಕೋತ್ತರ ಅಭ್ಯಾಸಕ್ರಮದಲ್ಲೂ ಹಳಗನ್ನಡ – ನಡುಗನ್ನಡ ಕಾವ್ಯಗಳ ಓದಿನ ಭಾಗ ಕಡಿಮೆಯಾಗ ತೊಡಗಿದ. ಹಳಗನ್ನಡವನ್ನು ಚೆನ್ನಾಗಿ ಕಲಿಸುವ ಪಾಂಡಿತ್ಯವೂ ವಿರಳವಾಗುತ್ತಿದೆ. ಇಂದಿನ ಬರವಣಿಗೆಗೆ ಹಳೆಗನ್ನಡ ಕಾವ್ಯದ ಓದು ಅಗತ್ಯವಿಲ್ಲ ಎಂಬ ವಾದವೂ ಎದ್ದಿದೆ. ಆದರೆ ಪರಂಪರೆಯ ಅಧ್ಯಯನದಿಂದ ನಮ್ಮ ಇಂದಿನ ಕಾವ್ಯ ಹೆಚ್ಚಿನ ಸತ್ವ, ತೇಜಸ್ಸು ಪಡಯಬಲ್ಲದು. ಕಳೆದ ಮೂರು ವರ್ಷಗಳಲ್ಲಿ ಧಾರವಾಡ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೫ – ವಿಶೇಷ ಉಪನ್ಯಾಸ : ನಮಗೆ ಸಾಹಿತ್ಯ ಏಕೆ ಬೇಕು?

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೫ – ವಿಶೇಷ ಉಪನ್ಯಾಸ : ನಮಗೆ ಸಾಹಿತ್ಯ ಏಕೆ ಬೇಕು? ಈ ಸಲದ ಒಂದು ವಿಶೇಷ ಕಾರ್ಯಕ್ರಮ ವಿಶೇಷ ಉಪನ್ಯಾಸ. ಸಾಹಿತ್ಯದ ಅಭ್ಯಾಸ. ಓದು ತರುಣರಲ್ಲಿ ಕಡಿಮೆಯಾಗುತ್ತಿದೆ ಎಂಬ ಆಪಾದನೆ ಒಂದು ಕಡೆ ಇದ್ದರೆ, ಸಾಹಿತ್ಯ ಸಂಭ್ರಮದ ನಾಲ್ಕು ಆವೃತ್ತಿಗಳಿಗೆ ನಾಡಿನ ಒಳಗಿನಿಂದ ಮತ್ತು ಹೊರಗಿನಿಂದ ಅತ್ಯಂತ ಉತ್ತೇಜನಕಾರಿಯಾದ ಸ್ಪಂದನ ಸಿಗುತ್ತಿರುವದು ಆಶಾದಾಯಕ ಸಂಗತಿಯಾಗಿದೆ. ಸಾಹಿತ್ಯಾಭ್ಯಾಸವನ್ನು ಕುದುರಿಸುವ ಅನೇಕ ಹೊಸ ದಾರಿಗಳನ್ನು ಹುಡುಕುವ ಕೆಲಸದಲ್ಲಿ ಸಂಭ್ರಮ ಗಣನೀಯ ಯಶಸ್ಸು […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೬ – ಮಾಧ್ಯಮಗಳಲ್ಲಿ ಸತ್ಯ, ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೬ – ಮಾಧ್ಯಮಗಳಲ್ಲಿ ಸತ್ಯ, ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆ ಇತ್ತೀಚಿಗೆ, Investigating Journalism ಬೆಳೆಯತೊಡಗಿದ ಮೇಲೆ ಪತ್ರಿಕೆಗಳು ಮತ್ತು ಟಿವಿ ಮಾಧ್ಯಮ ನಮ್ಮ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದ ಅನೇಕ ಅನಿಷ್ಟಗಳನ್ನು ಬೆಳಕಿಗೆ ತಂದು ಒಳ್ಳೆಯ ಕೆಲಸ ಮಾಡಿತೊಡಗಿವೆ. ಮಾಹಿತಿ ಹಕ್ಕು ಕಾಯಿದೆಯ ಲಾಭ ಪಡೆದುಕೊಂಡು ಅನೇಕ ಭ್ರಷ್ಟಾಚಾರ ಪ್ರಕರಣಗಳನ್ನು ಹೊರಗೆ ತಂದಿವೆ. ಆದರೆ ಹಾಗೆ ಮಾಡುವಾಗ ಸುದ್ದಿಗಳಿಗೆ ರೋಚಕತೆ ನೀಡಲು ವಿಷಯಗಳನ್ನು ತಿರುಚುವುದು. ಅತಿರಂಜಿತಗೊಳಿಸುವುದು ಕೂಡ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೪ – ಸಂಶೋಧಕರೊಂದಿಗೆ ಮಾತುಕತೆ

ಗೋಷ್ಠಿ ೪ – ಸಂಶೋಧಕರೊಂದಿಗೆ ಮಾತುಕತೆ ಇದು, ಇಬ್ಬರು ಪ್ರಸಿದ್ಧ ಸಂಶೋಧಕರಾದ ಹಂಪನಾ ಮತ್ತು ಆರ್.ಶೇಷಾಶಾಸ್ತ್ರಿ ಅವರ ನಡುವೆ ನಡೆಯುವ ಸಂವಾದ. ಹಂಪನಾ ಅವರು ಕನ್ನಡದ ಇತಿಹಾಸ, ಸಾಹಿತ್ಯ, ಜೈನಶಾಸ್ತ್ರಗಳಲ್ಲಿ ವಿಶೇಷ ಕೆಲಸ ಮಾಡಿರುವ ಪಂಡಿತರು. ಆರ್.ಶೇಷಶಾಸ್ತ್ರಿಯವರು ಹಂಪನಾ ಅವರು ಮಾಡಿರುವ ಕೆಲಸದ ಬಗ್ಗೆ ಪ್ರಸ್ತಾವಿಕವಾಗಿ ಮಾತಾಡಿ, ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಈ ಪ್ರಶ್ನೆಗಳು ಕೇವಲ ವರದಿಯ ರೂಪದ ಉತ್ತರಗಳನ್ನು ಅಪೇಕ್ಷಿಸದೆ, ಹಂಪನಾ ಅವರು ಮಾಡಿದ ಕೆಲಸದ ಹಿಂದಿನ ಉದ್ದೇಶ, ಸಿದ್ಧಾಂತ, ಅರ್ಥ ಪೂರ್ಣತೆ, ಮಹತ್ವಗಳ ಮೇಲೆ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೩- ಅಷ್ಟಾವಧಾನ

ಗೋಷ್ಠಿ ೩ – ಅಷ್ಟಾವಧಾನ: ಇದು ಈ ವರ್ಷದ ವಿಶೇಷ ಕಾರ್ಯಕ್ರಮ. ಅಷ್ಟಾವಧಾನ ಎಂಬುದು ನಮ್ಮ ಪರಂಪರೆಯಿಂದ ಬಂದಿರುವ ಒಂದು ಪಾಂಡಿತ್ಯದ ಕ್ರೀಡೆ. ಈಗ ಇದು ಅಷ್ಟಾಗಿ ಪ್ರಚಾರದಲ್ಲಿ ಇಲ್ಲ. ಅನೇಕ ವರ್ಷಗಳಿಂದ ಈ ಕಲೆಯನ್ನು ಅಷ್ಟಾವಧಾನಿ ಗಣೇಶ ಅವರು ನಡೆಸಿಕೊಂಡು ಬಂದಿದ್ದಾರೆ. ವಿಶಿಷ್ಟವಾಗಿ ಏಕಾಗ್ರತೆ ಮತ್ತು ಬಹುವಿಧ ಪಾಂಡಿತ್ಯವನ್ನು ಬಯಸುವ ಈ ಕಲೆಯ ಒಂದು ಮಾದರಿಯನ್ನು ಇಲ್ಲಿ ಡಾ.ಆರ್.ಗಣೇಶ ಪ್ರಸ್ತುತ ಪಡಿಸುತ್ತಾರೆ. ಪ್ರಚ್ಛಕರಾಗಿ ದಿವಾಕರ ಹೆಗಡೆ ಮತ್ತು ಇತರರು ಭಾಗವಹಿಸುತ್ತಾರೆ. ಪ್ರಚ್ಛಕರು ನಿಷೇಧಾಕ್ಷರಿ : ಕೇಯೂರು […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೨ – ಐತಿಹಾಸಿಕ ಕಾದಂಬರಿಗಳಿಂದ ಓದು

ಗೋಷ್ಠಿ ೨ – ಐತಿಹಾಸಿಕ ಕಾದಂಬರಿಗಳಿಂದ ಓದು: ನವೋದಯ ಕಾಲದಲ್ಲಿ ಕನ್ನಡದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಐತಿಹಾಸಿಕ ಕಾದಂಬರಿಗಳು ಬರುತ್ತಿದ್ದವು. ಗಳಗನಾಥರಿಂದ ಮೊದಲುಗೊಂಡು ತ.ರಾ.ಸು ಅವರವರೆಗೆ ಕನ್ನಡ ಐತಿಹಾಸಿಕ ಕಾದಂಬರಿಗಳು ಅಪಾರ ಸಂಖ್ಯೆಯ ಓದುಗರಲ್ಲಿ ಓದಿನ ರುಚಿ ಹಚ್ಚಲು ಸಹಾಯ ಮಾಡಿದವು. ಭಾರತ ಮತ್ತು ಕರ್ನಾಟಕದ ಐತಿಹಾಸಿಕ ಪರಂಪರೆಗಳನ್ನು ನಮ್ಮ ಅರಿವಿಗೆ ತರಲು ಯತ್ನಿಸಿದವು. ಈಗ ಐತಿಹಾಸಿಕ ಕಾದಂಬರಿಗಳ ಪರಂಪರೆ ಹೆಚ್ಚು-ಕಡಿಮೆ ನಿಂತೇ ಹೋದಂತಾಗಿದೆ. ಈ ಸಾಹಿತ್ಯ ಪ್ರಕಾರಗಳಲ್ಲಿ ಮತ್ತೆ ಆಸಕ್ತಿ ಹುಟ್ಟುವಂತೆ ಮಾಡುವ ಒಂದು ಪ್ರಯತ್ನ […]

ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧ – ಆಸಹಿಷ್ಣುತೆ

ಗೋಷ್ಠಿ ೧ – ಆಸಹಿಷ್ಣುತೆ: ಇವತ್ತು ನಮ್ಮ ರಾಜಕೀಯ. ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದಲ್ಲಿ ತಲ್ಲಣವನ್ನುಂಟುಮಾಡಿರುವುದು ಆಸಹಿಷ್ಣುತೆ. ಇದರಲ್ಲಿ ಎಡ – ಬಲ ಎಂಬ ಭೇದವೇನೂ ಇಲ್ಲ. ಪರಂಪರಾಗತವಾಗಿ ಕಾಪಾಡಿಕೊಂಡು ಬಂದಿರುವ ಬಹುತ್ವಕ್ಕೆ ಇದರಿಂದ ಅಪಾರವಾದ ಹಾನಿಯಾಗಿದೆ. ಮೂಲಭೂತವಾದ ಎಲ್ಲ ಕಡೆಗೂ ಹೆಡೆಯೆತ್ತಿ ಬುಸುಗುಡುತ್ತಿದೆ. ತಮಗೆ ಹಿಡಿಸದ ವಾದಗಳನ್ನು ಔಚಿತ್ಯದ ಎಲ್ಲೇ ಮೀರಿ ಮನಬಂದಂತೆ ಟೀಕಿಸುವ ಒಂದು ಪಂಥವಿದ್ದರೆ ಅಂಥ ವಾದಗಳನ್ನು ಪ್ರಾಣ ತೆಗೆದಾದರು ಹತ್ತಿಕ್ಕಬೇಕೆನುವ ಇನ್ನೊಂದು ಪಂಥ ಇದೆ. ಇದರಿಂದಾಗಿ, ಇವತ್ತು ನಮ್ಮ ಅಭಿಪ್ರಾಯಗಳನ್ನು ಧೈರ್ಯದಿಂದ […]