ಅಹಲ್ಯ ಕಾರ್ಗತ್ತಲಿನ ಮರೆಯಲಿ ಬೀಸುತಿಹ ಸುಳಿಗಾಳಿಯಲಿ ಗೌತಮನ ಶಾಪ ಶಿಲೆಯಾಗಿಸಿಹುದು ಬಿರುಬಿಸಿಲಿಗೂ ಮಳೆಗಾಳಿಗೂ ಕಡು ಚಳಿಗೂ ಅಲುಗಾಡದೆ ನಿಂತಲ್ಲೇ ನಿಂತಿಹಳು ತಾ ಮಾಡದ ಪಾಪಕೆ ಇಂದ್ರನ ಕುಟೀಲತೆಗೆ ಮನ ಮಿಡುಕುತಿಹಳು ರಾಮನ ಬರುವಿಗೆ ಇದಿರು ನೋಡುತ್ತಿರೆ ಯುಗಗಳೇ ಕಳೆದಿವೆ ಪ್ರತೀಕ್ಷೆ ಹುಸಿಯಾಗದೇ ಪರೀಕ್ಷೆ ಎದುರಾಗಿದೆ ಕಾಲನ ಅಣತಿಗೆ ಕೊನೆಎಂಬುದಿದೆ ತನ್ನ ಸತಿಯ ವಿರಹ ಸಹಿಸದೆ ರಾಮ ಬಂದಿಳಿದ ಕಾಡಿಗೆ ಶಿಲೆಯಲ್ಲೂ ಪ್ರತಿಮೆ ಇದೆ ಎಂಬುದ ಮನಗಾಣದೆ ಸ್ಪರ್ಶಿಸಿದ ಹರ್ಷಿಸಿದ ಶಿಲೆಯು ಪ್ರತಿಮೆಯಾಯ್ತು ಪ್ರತಿಮೆ ಜೀವ ತಳೆಯಿತು ಜೀವದ […]
