ಪಂಪನ ಕಾವ್ಯದಲ್ಲಿ ಭಗವದ್ಗೀತೆ ಭಾಗ -೨ ಇದು ಪಂಪನ ಚಿತ್ರಣ. ಈ ಎರಡು ವಚನಗಳ ನಡುವಣ ಒಂದು ಪದ್ಯದಿಂದ ಚಿತ್ರಿತವಾಗಿರುವ ಗೀತಾ ಪ್ರಸಂಗವನ್ನು ನೋಡಿದರೆ ಹದಿನೆಂಟು ಅಧ್ಯಾಯಗಳ ಭಗವದ್ಗೀತೆಯನ್ನು ಇಷ್ಟರಲ್ಲೇ ಮುಗಿಸಿಬಿಟ್ಟಿದ್ದಾನಲ್ಲ ಎಂದು ಅನ್ನಿಸುವುದು ತೀರ ಸಹಜ. ಮೂಲಭಾರತದ ಆ ಉಜ್ವಲವಾದ ನಾಟಕೀಯತೆಯೆಲ್ಲಿ, ಪಂಪನ ಈ ಅವಸರದ ಚಿತ್ರಣವೆಲ್ಲಿ ಎಂದು ಅನ್ನಿಸಬಹುದು. ಮೂಲದ ಪ್ರಕಾರ, ಯುದ್ಧಸನ್ನದ್ಧವಾದ ಉಭಯ ಸೇನೆಗಳ ಮಧ್ಯೆ ಪಾರ್ಥನ ರಥವನ್ನು ಕೃಷ್ಣ ತಂದು ನಿಲ್ಲಿಸಿದಾಗ ತನ್ನೊಡನೆ ಕಾದಲೆಂದು ಬಂದು ನಿಂತ ಸಮಸ್ತ ಬಂಧು ಬಾಂಧವರನ್ನು […]
