ಪಂಪನ ಕಾವ್ಯದಲ್ಲಿ ಭಗವದ್ಗೀತೆ ಭಾಗ-೪ ಪಂಪನ ಈ ಒಂದು ವೃತ್ತದಲ್ಲಿ ಉಳಿದ ಮಾತು ಇಷ್ಟು : ‘[ಎಂದು] ಸಯ್ತಜಿತನ್ ಆದಿಯ ವೇದ ರಹಸ್ಯದೊಳ್ ನಿರಂತದ (ಪರಿಚರ್ಯೆಯಿಂ) ನೆಱೆಯೆ ಯೋಜಿಸಿದಂ ಕದನ ತ್ರಿಣೇತ್ರನಂ.’ ಹೀಗೆ ನೇರವಾಗಿ ಅಜಿತನು (ಕೃಷ್ಣನು) ಆದಿಯ ವೇದ ರಹಸ್ಯದಲ್ಲಿ ನಿರಂತರವಾದ ಅನುನಯದ ಮಾತುಗಳಿಂದ ಕದನ ತ್ರಿನೇತ್ರನಾದ ಅರ್ಜುನನನ್ನು ಸಂಪೂರ್ಣವಾಗಿ [ಯುದ್ಧೋದ್ಯಮಕ್ಕೆ] ನಿಯೋಜಿಸಿದನು. ಇಲ್ಲಿ ‘ಆದಿಯ ವೇದರಹಸ್ಯದೊಳ್’ -ಎಂಬ ಮಾತು ಸ್ವಾರಸ್ಯವಾಗಿದೆ. ‘ಆದಿಯ ವೇದರಹಸ್ಯದೊಳ್’ ಎಂದರೆ ಬಹುಶಃ ಉಪನಿಷತ್ ಪ್ರಣೀತವಾದ ಈ ತತ್ವದಲ್ಲಿ ಎಂದು ಅರ್ಥವಿರಬಹುದು […]
