ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೯: ಕನ್ನಡ ಮಾಧ್ಯಮ – ಮುಂದೇನು?

ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೯: ಕನ್ನಡ ಮಾಧ್ಯಮ – ಮುಂದೇನು?

ಗೋಷ್ಠಿಯ ನಿರ್ದೇಶಕ ಹಾಗು ಕನ್ನಡಪರ ಹೋರಾಟಗಾರ ಸ. ರ. ಸುದರ್ಶನ ಹೇಳಿದ್ದು ” ಮಕ್ಕಳ ಶಿಕ್ಷಣ ಮಾಧ್ಯಮವನ್ನು ನಿರ್ಣಯಿಸುವ ಹಕ್ಕು ಪಾಲಕರದ್ದು ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ನಿಂದಿಸಬಾರದು, ಆದರೆ ಅದನ್ನು ಪರಾಮರ್ಶಿಸಬಹುದು. ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಮಗಿರುವ ಆಯ್ಕೆಗಳ ಬಗ್ಗೆ ಚಿಂತನೆ ನಡೆಸಬೇಕು”.
“ನಾಲ್ಕು ವರ್ಷಗಳ ಕಾಲ ಕಲಿತ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತವನ್ನು ಇಂಗ್ಲಿಷ್ನಲ್ಲಿ ಓದದೇ ನನ್ನ ನೆಲದ ಭಾಷೆ ಗುಜರಾತಿನಲ್ಲಿಯೇ ಓದಿದ್ದರೆ ಒಂದೇ ವರ್ಷ ಸಾಕಿತ್ತು” ಎಂಬ ಗಾಂಧೀಜಿ ಅವರ ಮಾತನ್ನು ಉದಾಹರಿಸಿ ಚರ್ಚೆ ಪ್ರಾರಂಭಿಸಿದರು…….

Leave a Reply