ಷಾಪುರದ ಸೀನಿಂಗಿ-ಸತ್ಯ
ಇದು ೧೯೯೨ರಲ್ಲಿ ಆರಂಭಿಸಿ ೧೯೯೫ರಲ್ಲಿ ಬರವಣಿಗೆ ಮುಗಿಸಿದ ನಾಟಕ. ಈ ನಾಟಕ ಬರೆಯಲು ಕಾರಣರಾದವರು ಬಿ. ಜಯಶ್ರೀ. ಅವರ ತಂಡಕ್ಕಾಗಿಯೇ ನಾಟಕ ಕಟ್ಟಲು ಹೊರಟವನಿಗೆ ಹಿರಿಯರು, ಮೇಷ್ಟರು ಆದ ಕ.ವೆಂ. ರಾಜಗೋಪಾಲ ಅವರು ಜನಪದ ಗೀತೆಯೊಂದನ್ನು ಕೇಳಿಸಿ ವಸ್ತುವನ್ನು ಒದಗಿಸಿದರು. ಅಲ್ಲಿಂದಾಚೆಗೆ ಅನೇಕ ಊರುಗಳನ್ನು ತಿರುಗಿ, ಅನೇಕ ಪವಾಡ ಸದೃಶ ಸತ್ಯಗಳನ್ನು ಸ್ವತಃ ಕಂಡೆ. ಜೀವಂತ ದೇವರುಗಳ ದರುಶನ ಪಡೆದೆ. ಈ ಪಯಣದಲ್ಲಿ ಜೊತೆಯಾದ ಗುಲ್ಬರ್ಗದ ವಿಜಯಹಾಗರಗುಂಡಿಗಿಯ ಸಹವಾಸವು ನಾನು ಕಂದ್ದನ್ನ ವಿಭಿನ್ನವಾಗಿ ಅರ್ಥೈಸಲು ಸಹಾಯಮಾಡಿತು.