ಸುಂದರ ಭೂಮಿ
(ಕವನ ಸಂಕಲನ)
ಈ ಕವನಗಳಲ್ಲಿ ತಿಳಿಹಾಸ್ಯವಿದೆ, ಆಳವಾದ ಚಿಂತನ ಮಂಥನಗಳಿವೆ, ಎದೆ ತಲುಪಿ ಮನವರಳಿಸುವ ಸೂಕ್ಷ್ಮ ಸಂವೇದನಾ ಭಾವನೆಗಳಿವೆ, ಸಮಾಜ, ದೇಶದ ಭವಿಷ್ಯದ ಕುರಿತ ದುಗುಡ ಇದೆ, ಸ್ವಾರ್ಥಿಗಳ, ಆಷಾಢಭೂತಿಗಳ ವಿಡಂಬನೆಯಿದೆ. ಕೆಲವೇ ಸಾಲುಗಳಲ್ಲಿ ಓದುಗನನ್ನು ಸುದೀರ್ಘ ಚಿಂತನೆಗೆ ಹಚ್ಚಿ, ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸುವ ಗುಣ ಈ ಕವನಗಳಲ್ಲಿವೆ.