• -40%

    ಗೌರೀಪುರ

    0

    ಗೌರೀಪುರ ಕಾದಂಬರಿಯು ನಗರದ ಜೀವನ, ಅಲ್ಲಿಯ ತಲ್ಲಣಗಳು, ಧಾವಂತ, ಹಳ್ಳಿಯ ಜೀವನ ಶೈಲಿ, ಅಲ್ಲಿಯ ಆತ್ಮೀಯತೆ ಇವುಗಳನ್ನು. ಹನ್ನೆರಡು, ಹದಿಮೂರು ವರ್ಷದ ಯುವ ಬಾಲಕನ ಕಣ್ಣಿನಿಂದ ನಗರವನ್ನು ಹಾಗೂ ಹಳ್ಳಿಯನ್ನು ನೋಡುವ ತಂತ್ರವು ಇಲ್ಲಿದೆ.

    Original price was: $1.20.Current price is: $0.72.
    Add to basket
  • -40%

    ಸಾವಿತ್ರಿಬಾಯಿ ಫುಲೆ

    0

    ಸಾವಿತ್ರಿಬಾಯಿ ಫುಲೆ ಈ ಕಾದಂಬರಿಯು ಜ್ಯೋತಿಬಾ ಫುಲೆಯವರ ಧರ್ಮಪತ್ನಿಯಾದ ಸಾವಿತ್ರಿಬಾಯಿ ಫುಲೆಯವರ ಜೀವನ ಹಾಗೂ ಅವರು ಮಾಡಿದ ಸಾಮಾಜಿಕ ಸೇವೆಗಳ ಚಿತ್ರಣವನ್ನು ಒಳಗೊಂಡಿದೆ.

    Original price was: $1.80.Current price is: $1.08.
    Add to basket
  • -40%

    ಅವ್ಯಕ್ತ

    0

    ಮನುಷ್ಯರು ಸೋತಾಗಲೆಲ್ಲಾ ಅವರ ಅಸಹಾಯಕತೆಯನ್ನೇ ಇತರರು ಉಪಯೋಗಿಸಿ ಮನುಷ್ಯರೇ ಮನುಷ್ಯರನ್ನು ಹಣಿಸುತ್ತಾ ಎದ್ದೇಳದಂತೆ ನೋಡುವುದು ಒಂದು ಸಾಮಾನ್ಯ ಸಂಗತಿ. ಮನಸ್ಸಿನಲ್ಲಿ ಹೊಳಹುಹಾಕಿದ ಈ ವಿಚಾರಗಳು ಆಕೃತಿ ಪಡೆದು ಕಾದಂಬರಿಯಾಗಿದೆ.

    Original price was: $1.56.Current price is: $0.94.
    Add to basket
  • -40%

    ಉಮೇದುವಾರರು

    0

    ಡಾ. ಲೋಹಿತ್ ನಾಯ್ಕರ ರಾಜಕೀಯ ಕಾದಂಬರಿ “ಉಮೇದುವಾರರು”.
    ಡಾ. ಲೋಹಿತ್ ನಾಯ್ಕರ ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದರಿಂದ ರಾಜಕೀಯದ ಒಳಹೊರಗನ್ನು ಬಲ್ಲವರಾಗಿದ್ದಾರೆ. ಹಾಗಾಗಿ ಅವರ ಅನುಭವದ ಮೂಸೆಯಿಂದ ಹೊರಬಂದಿರುವ ಈ ಕಾದಂಬರಿಯ ಕಥಾವಸ್ತುವಿಗೆ ಮತ್ತು ಇಲ್ಲಿನ ಪಾತ್ರಗಳಿಗೆ ಅಧಿಕೃತತೆ ದಕ್ಕಿರುವುದರಿಂದ ಕೃತಿಯ ಘನತೆಯನ್ನು ಹೆಚ್ಚಿಸಿದೆ. ಹೈದರಾಬಾದ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದಲ್ಲಿ ಎರಡು ರಾಜಕೀಯ ಕುಟುಂಬಗಳಲ್ಲಿ ನಡೆಯುವ ಹಗ್ಗಜಗ್ಗಾಟದ ಜೊತೆಗೆ ಮಧ್ಯ ಕರ್ನಾಟಕದಲ್ಲಿ ಹಣ, ಹೆಂಡ ಮತ್ತು ಸಾರಾಯಿ ಇವುಗಳ ಜೊತೆಗೆ ಜಾತಿವ್ಯವಸ್ಥೆ ಹೇಗೆ ರಾಜಕೀಯ ದಾಳಗಳಾಗಬಲ್ಲವು ಎಂಬುದನ್ನು ಅತ್ಯಂತ ನವಿರಾದ ಹಾಗೂ ಲವಲವಿಕೆಯ ಭಾಷೆಯಲ್ಲಿ ಲೋಹಿತ್ ಹಿಡಿದಿಟ್ಟಿದ್ದಾರೆ.

    Original price was: $3.00.Current price is: $1.80.
    Add to basket
  • -40%

    ಕೇತಕಿಯ ಬನ

    0

    ಕೇತಕಿಯ ಬನ
    ಈ ಪುಸ್ತಕವು ಶ್ರೀಧರ ಬಳಗಾರ ಅವರು ಬರೆದ ಕಾದಂಬರಿ ಆಗಿದೆ .

    Original price was: $1.44.Current price is: $0.86.
    Add to basket
  • -40%

    ತ್ರಸ್ತ

    0

    ತ್ರಸ್ತ
    ಈ ಪುಸ್ತಕವು ರೇಖಾ ಕಾಖಂಡಕಿ ಅವರು ಬರೆದ ಕಾದಂಬರಿಯಾಗಿದೆ.

    Original price was: $1.56.Current price is: $0.94.
    Add to basket
  • -40%

    ಧೀಂಗಿಣ

    0

    ಧೀಂಗಿಣ

    ಇದು ಪ್ರಭಾಕರ ನೀರ್ ಮಾರ್ ಮಾರ್ಗ ಅವರು ಬರೆದ ಕಾದಂಬರಿಯಾಗಿದೆ.

    Original price was: $1.08.Current price is: $0.65.
    Add to basket
  • -40%

    ಬಾರಣೆ

    0

    ಇದು ಪ್ರಭಾಕರ ನೀರ್ ಮಾರ್ಗ  ಅವರು ಬರೆದ ಸಾಮಾಜಿಕ ಕಾದಂಬರಿ

    Original price was: $1.56.Current price is: $0.94.
    Add to basket
  • -40%

    BAMONN – Story of a Konkani Roman Catholic

    0

    Story of a Konkani Roman Catholic.

    Original price was: $3.06.Current price is: $1.84.
    Add to basket
  • -40%

    ದಿಬ್ಬಣ

    0

    ದಿಬ್ಬಣ

    ಈ ಪುಸ್ತಕವು ಪ್ರಭಾಕರ ನೀರ್ ಮಾರ್ಗ ಅವರು ಬರೆದ ಸಾಮಾಜಿಕ ಕಾದಂಬರಿಯಾಗಿದೆ.

    Original price was: $1.68.Current price is: $1.01.
    Add to basket
  • -40%

    ತಿಲ್ಲಾನ

    0

    ತಿಲ್ಲಾನ

    ‘ತಿಲ್ಲಾನ’ ಕಾದಂಬರಿ ಜಿಲ್ಲೆಯಲ್ಲಿ ಭೂತಾರಾಧನೆಯನ್ನು ನಂಬಿಕೊಂಡು ಬಂದಿರುವ ಕಲಾವಿದನೊಬ್ಬನ ನೋವಿನ ಕತೆಯಾಗಿದೆ.

    Original price was: $0.96.Current price is: $0.58.
    Add to basket
  • -40%

    ಉಲ್ಲಂಘನೆ

    0

    ಉಲ್ಲಂಘನೆ

    ನಾ. ಮೊಗಸಾಲೆಯವರ ಕಾದಂಬರಿ ‘ಉಲ್ಲಂಘನೆ’ಯು ಪ್ರಾದೇಶಿಕ ಕಾದಂಬರಿಯಾಗಿರುವುದರ ಜೊತೆಗೆ ಒಂದು ಸಮುದಾಯದ ಏಳು-ಬೀಳುಗಳನ್ನು ಕುರಿತು ಬರೆದ ಕೃತಿಯಾಗಿದೆ.

    Original price was: $4.80.Current price is: $2.88.
    Add to basket
  • -40%

    ಕಾಡಿನ ದಾರಿ

    0

    ಕಾಡಿನ ದಾರಿ

    ಶ್ರೀ ಜಿ. ಪಿ. ಬಸವರಾಜು ಅವರ  ಕಾದಂಬರಿ.

    Original price was: $1.32.Current price is: $0.79.
    Add to basket
  • -40%

    ಮೊಗಸಾಲೆ ಕಾದಂಬರಿ ಸಂಪುಟ ೩ 

    0

    ಮೊಗಸಾಲೆ ಕಾದಂಬರಿ ಸಂಪುಟ ೩ 

    ಈ ಸಂಪುಟದ ಮೊದಲ ಕಾದಂಬರಿ ‘ಪ್ರಕೃತಿ’ (ಪ್ರ.ಮು.೧೯೮೨) ಕಾರವಾರ ಮತ್ತು ಕಾರ್ಕಳ ಪರಿಸರದಲ್ಲಿ ಇದರ ಘಟನಾವಳಿಗಳು ನಡೆಯುತ್ತವೆ. ಈ ಸಂಪುಟದ ಎರಡನೇ ಕಾದಂಬರಿ – ‘ನೆಲಮುಗಿಲುಗಳ ನಡುವೆ’. ಈ ಕಾದಂಬರಿಯು ಹಿಂದೆ ಆಗಿದ್ದನ್ನೂ ನೆನೆಸಿಕೊಳ್ಳುವ ರೀತಿಯಲ್ಲಿ ತೆರೆದುಕೊಳ್ಳುತ್ತದೆ. ಇಡೀ ಕಾದಂಬರಿಯ ಉದ್ದೇಶ- ಬದುಕು ಅನಿರೀಕ್ಷಿತವಾಗಿ ಸಾವಿಗೆ, ಹಾಗೂ ಮನಸ್ಸು ಸಾವಿನತ್ತಣಿಂದ ಬದುಕಿಗೆ ತಿರುಗಿಕೊಳ್ಳುವುದು.

    ಸಣ್ಣ ವಿಷಯವನ್ನು ದೊಡ್ಡದಾಗಿಸುವುದು- ಎಂಬರ್ಥದಲ್ಲಿ ಈ ಮಾತನ್ನು ನಾವು ಆಡುತ್ತೇವೆ. ಆದರೆ ಇದನ್ನೇ ಸಾಧಿಸಿ ತೋರಿಸಬಲ್ಲ ವಿವಿಧಾರ್ಥಗಳ ‘ಪ್ರತಿಭಾವಂತ’ರು ನಮ್ಮ ಸಮಾಜದಲ್ಲಿದ್ದಾರೆ. ಅವರು ಹೇಗೆ ಏನೂ ಇಲ್ಲದಲ್ಲಿಯೂ ಏನೆಲ್ಲ ರಾದ್ಧಾಂತ ಸೃಷ್ಟಿಸುತ್ತಾರೆ ಎಂಬುದೊಂದು ವಿಸ್ಮಯ! ಮತ್ತು ಅಂಥ ವಿಸ್ಮಯವನ್ನು, ಸಣ್ಣ ಸಣ್ಣ ವಿವರಗಳು/ಮಾತುಕತೆಗಳಲ್ಲಿ ಮುಂದುವರೆಯುವ ಕುಟಿಲೋಪಾಯಗಳನ್ನು ಕಥಾನಕವಾಗಿ ಸೃಷ್ಟಿಸುವುದು ಮೂರನೇ ಕಾದಂರಿಯಾದ ದಿಗಂತ.

    ‘ದೃಷ್ಟಿ’ ಈ ಸಂಪುಟದ ಕೊನೆಯ ಕಾದಂಬರಿ. ಈ ಪುಟ್ಟ ಕಾದಂಬರಿ ತನ್ನ ತೆಕ್ಕೆಯಲ್ಲಿ ಹಿಡಿಯಬಯಸುವ ಬದುಕು ಹಾಗೂ ಬದುಕನ್ನು ಕುರಿತ ಚಿಂತನಾತ್ಮಕ ಶೋಧ ಹೆಚ್ಚು ಗಂಭೀರವಾಗಿ ನಡೆದಿದೆ.

    Original price was: $2.70.Current price is: $1.62.
    Add to basket
  • -40%

    Anurakte – The Enamoured

    0

    Translated from Kannada by Poornima Hebbar

    It is originally a Kannada novel written by Vyasaraya Ballal and translated to English by Poornima Hebbar.

    Original price was: $4.68.Current price is: $2.81.
    Add to basket
  • -40%

    ಮೊಗಸಾಲೆ ಕಾದಂಬರಿ ಸಂಪುಟ ೪

    0

    ಮೊಗಸಾಲೆ ಕಾದಂಬರಿ ಸಂಪುಟ ೪

    ಇದು ಡಾ. ನಾ. ಮೊಗಸಾಲೆಯವರ ಕಾದಂಬರಿಗಳ ನಾಲ್ಕನೇ ಸಂಪುಟ. ಇದರಲ್ಲಿ ನಾಲ್ಕು ಕಾದಂಬರಿಗಳಿವೆ. ಉಪ್ಪು, ತೊಟ್ಟಿ, ಪಂಥ ಮತ್ತು ಅರ್ಥ – ಇಲ್ಲಿರುವ ಕಾದಂಬರಿಗಳು. 

    ಈ ಕಾದಂಬರಿಗಳಲ್ಲಿನ ಜೀವನ ಚಿತ್ರಣವೂ ಇಂಥ ಹಲವೆಂಟು ಬಗೆಯ ವ್ಯಕ್ತಿತ್ವಗಳನ್ನು ತೆರೆದಿಡುವಂಥದ್ದು. ‘ಉಪ್ಪು’ ಕಾದಂಬರಿ ಪ್ರಾಮಾಣಿಕ ರಾಜಕಾರಣಿಯೊಬ್ಬ ಭ್ರಮನಿರಸನಗೊಳ್ಳುವುದನ್ನು ಚಿತ್ರಿಸಿದರೆ, ‘ತೊಟ್ಟಿ’ ಒಂದು ಕಾಲ್ಪನಿಕ ಘಟನೆಯ ಮೂಲಕ ಒಂದು ಬೀದಿಯ ಜನ ಒಂದು ಸನ್ನಿವೇಶಕ್ಕೆ ಹೇಗೆ ಸ್ಪಂದಿಸುತ್ತಾರೆಂಬುದನ್ನು, ಅನಂತರ ಅವರೇ ಹೇಗೆ ಬದಲಾಗುತ್ತಾರೆಂಬುದನ್ನು ಚಿತ್ರಿಸುತ್ತದೆ. ‘ಪಂಥ’ ಬಡವರ ಅಮಾಯಕತೆಯನ್ನು ಧಾರ್ಮಿಕ ನೆಲೆಯಲ್ಲಿ ಶೋಷಿಸುವ, ಅದನ್ನು ಮಾನವೀಯ ನೆಲೆಯಲ್ಲಿ ನೋಡುವ ಬದಲು ಕೋಮುದೃಷ್ಟಿಯಿಂದ ನೋಡುವುದರ ಪರಿಣಾಮವನ್ನು ಚಿತ್ರಿಸುತ್ತದೆ. ಕೊನೆಯದಾದ ‘ಅರ್ಥ’ ಹೊಸ ತಲೆಮಾರು ತನ್ನ ಬೇರಿನಿಂದ ಕಳಚಿಕೊಳ್ಳುವುದನ್ನು ಹಿರಿಯ ತಲೆಗಳು ವಿಷಾದದಿಂದ ಗಮನಿಸುತ್ತಾ ಸಂಕಟಪಡುವುದನ್ನು ಅಭಿವ್ಯಕ್ತಿಸುತ್ತದೆ.

    Original price was: $2.70.Current price is: $1.62.
    Add to basket
  • -40%

    ವೇಷ

    0

    ವೇಷ
    (ಸಾಮಾಜಿಕ ಕಾದಂಬರಿ)
    ಪ್ರಭಾಕರ ನೀರ್ ಮಾರ್ಗ

    ‘ವೇಷ’ ಶ್ರೀ ಪ್ರಭಾಕರ ನೀರ್ ಮಾರ್ಗರ ಸಾಮಾಜಿಕ ಕಾದಂಬರಿ, ಮಂಗಳೂರು ನಗರಕ್ಕೆ ಸಮೀಪದ ನೀರ್ ಮಾರ್ಗ ಕಾದಂಬರಿಯ ಕೇಂದ್ರ ಬಿಂದು, ಐವತ್ತು ವರ್ಷಕ್ಕೆ ಹಿಂದೆ ನೀರ್ ಮಾರ್ಗ ಮಂಗಳೂರು ನಗರದ ಆಕರ್ಷಣೆಗೆ ಒಳಗಾಗದ ಹಳ್ಳಿ. ಸಿಟಿಬಸ್ ಇಲ್ಲದಿದ್ದರೆ ಇಂದಿಗೂ ನೀರ್ ಮಾರ್ಗ ಹಳ್ಳಿಯಾಗಿಯೇ ಇರುತ್ತಿತ್ತು. ಅಂತಹ ನವನಾಗರಿಕತೆಯ ನೀರ್ ಮಾರ್ಗದಲ್ಲಿ ಮಧ್ಯಮವರ್ಗದ ಮಂದಿ ಬದುಕಿ ಬಾಳಿದ ಸಾಮರಸ್ಯವನ್ನು ವೇಷ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.

    Original price was: $1.56.Current price is: $0.94.
    Add to basket
  • -50%

    ಹವನ

    0

    ಹವನ
    ಕಾದಂಬರಿ
    ಮಲ್ಲಿಕಾರ್ಜುನ ಹಿರೇಮಠ

    ‘ಹವನ’ ವಿಶಿಷ್ಟ ಸಾಂಸ್ಕೃತಿಕ ಆವರಣ ಹೊಂದಿದ ಕಾದಂಬರಿ, ಮಾನವಶಾಸ್ತ್ರೀಯ (Anthropological) ಅಧ್ಯಯನದ ಆಸಕ್ತಿಗಳು, ಮತ್ತು ಆಧುನಿಕತೆಗೆ ಸಂಬಂಧಪಟ್ಟಂತೆ ಇಂದು ಪ್ರಚಲಿತವಿರುವ ವೈಚಾರಿಕತೆಯ ಸಂರಚನೆಗಳು, ಇವೆರಡಕ್ಕೂ ಸೃಜನಶೀಲವಾಗಿ ಮುಖಾಮುಖಿಗೊಳ್ಳುವ ‘ಹವನ’ ಕಾದಂಬರಿಯಲ್ಲಿ, ನಮ್ಮ ನಡುವಿನ ಲಂಬಾಣಿ ಸಮೂಹದ ವರ್ಣಮಯ ಸಾಂಸ್ಕೃತಿಕ ನಡುಗಡ್ಡೆಯೊಂದು ಸ್ಫೋಟಗೊಳ್ಳುವ ಅಧಿಕೃತ ಚಿತ್ರಣವಿದೆ.

    Original price was: $1.44.Current price is: $0.72.
    Add to basket
  • -40%

    ಮೊಗಸಾಲೆ ಕಾದಂಬರಿ  ಸಂಪುಟ – ೨

    0

    ಮೊಗಸಾಲೆ ಕಾದಂಬರಿ  ಸಂಪುಟ – ೨
    ಡಾ. ನಾ. ಮೊಗಸಾಲೆ

    ಡಾ. ನಾ. ಮೊಗಸಾಲೆಯವರ ಕಾದಂಬರಿಗಳ ಈ ಎರಡನೇ ಸಂಪುಟದಲ್ಲಿ ಇರುವ ಮೂರು ಕಾದಂಬರಿಗಳು – ‘ನನ್ನದಲ್ಲದ್ದು’ (೧೯೭೭), ‘ಪಲ್ಲಟ’ (೧೯೭೯) ಹಾಗೂ ‘ಹದ್ದು’ (೧೯೭೨).

    ಈ ಸಂಪುಟದಲ್ಲಿನ ಕಾದಂಬರಿಗಳ ಪೈಕಿ ‘ನನ್ನದಲ್ಲದ್ದು’ ಲೇಖಕರಿಗೆ ಹೆಚ್ಚು ಪ್ರಚಾರವನ್ನು ತಂದುಕೊಟ್ಟ ಕಾದಂಬರಿ. ಮೇಧಾವಿ ವೈದ್ಯನೊಬ್ಬ ತನ್ನ ತಂದೆ ಮಧುಮೇಹದಿಂದ ನರಳಿ ನರಳಿ ಸತ್ತದ್ದನ್ನು ನೋಡಿ, ತನ್ನ ಮಕ್ಕಳಿಗೂ ಅದೇ ರೋಗ ಬರುವುದೆಂಬ ಕಾರಣದಿಂದ ಮದುವೆಗೂ ಮೊದಲೇ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು, ಅದನ್ನು ಮುಚ್ಚಿಟ್ಟು ಮದುವೆಯಾಗುವುದು, ಮದುವೆಯಾದ ನಾಲ್ಕೈದು ವರ್ಷಗಳ ನಂತರ ಅದನ್ನು ಪತ್ನಿಗೆ ಹೇಳಿ ಇನ್ನೊಬ್ಬರ ವೀರ್ಯದಿಂದ ಗರ್ಭಿಣಿಯಾಗುವಂತೆ ಸಲಹೆ ಕೊಡುವುದು, ಆಕೆ ತೀವ್ರ ಘಾಸಿಗೊಳ್ಳುವುದು – ಇಲ್ಲಿನ ವಸ್ತು. ಮದುವೆಗೆ ಮೊದಲು ಮತ್ತೂ ನಂತರ ಆ ವೈದ್ಯ ಡಾ. ಶ್ರೀನಿವಾಸ್ ಹಲವಾರು ಹೆಣ್ಣುಗಳನ್ನು ಅನುಭವಿಸಿ ‘ಎಲ್ಲರಲ್ಲೂ ಇರುವುದು ಅದೇ’ ಎಂಬ ನಿಲುವಿಗೆ ಬಂದಿರುತ್ತಾನೆ. ತನ್ನ ಆಸ್ತಿಯನ್ನೆಲ್ಲಾ ಪತ್ನಿಯ ಹೆಸರಿಗೆ ಬರೆದು, ಆಕೆಗೆ ಮರುಮದುವೆಯಾಗುವಂತೆ ಸಲಹೆ ನೀಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
    ‘ಪಲ್ಲಟ’ದಲ್ಲಿ ಭೂ ಸುಧಾರಣೆ ಕಾನೂನು ಜಾರಿಯಾಗುವಾಗ ಕುಟುಂಬಗಳ ಒಳಗಿನ ಬಿರುಕಿಗೆ ಹೇಗೆ ಕಾರಣವಾಯಿತೆಂಬುದನ್ನು ಚಿತ್ರಿಸುತ್ತದೆ.

    ‘ಹದ್ದು’ ಕೃತಿಯಲ್ಲಿ ಪ್ರಾಯದಲ್ಲಿ ಉದಿಸುವ ಕಾಮದ ಅಭೀಷ್ಟೇ ವ್ಯಕ್ತಿಗಳು ಹದ್ದುವಾಗುವಂತೆ ಮಾಡುವುದನ್ನು ಚಿತ್ರಿಸುತ್ತದೆ.

    Original price was: $2.70.Current price is: $1.62.
    Add to basket
  • -40%

    ಮೊಗಸಾಲೆ ಕಾದಂಬರಿ ಸಂಪುಟ – ೧

    0

    ಮೊಗಸಾಲೆ ಕಾದಂಬರಿ ಸಂಪುಟ – ೧

    ಡಾ. ನಾ. ಮೊಗಸಾಲೆ

    ‘ಮೊಗಸಾಲೆ ಕಾದಂಬರಿ ಸಂಪುಟ – ೧’ : ಎನಿಸಿಕೊಂಡಿರುವ ಈ ಪ್ರಥಮ ಸಂಪುಟದಲ್ಲಿ ಅವರ ಆರಂಭದ ಮೂರು ಕಾದಂಬರಿಗಳಿವೆ. ಈ ಮೂರು ಕಾದಂಬರಿಗಳೂ ಅವರು ಹದಿನೆಂಟರಿಂದ ಇಪ್ಪತ್ತೊಂದರ ಒಳಗಿನ ವಯಸ್ಸಿನ ‘ಹುಡುಗ’ರಾಗಿದ್ದಾಗ ಬರೆದದ್ದು.

    ಅವರ ಮೊದಲ ಕಾದಂಬರಿ ‘ಮಣ್ಣಿನ ಮಕ್ಕಳು’. ಕಷ್ಟಪಟ್ಟು ದುಡಿದು ಬದುಕು ಕಟ್ಟಿಕೊಂಡ ಒಂದು ಶೂದ್ರ ಕುಟುಂಬ, ಮನೆಯ ಹಿರಿಮಗನ ಅವಿವೇಕದಿಂದಾಗಿ ಎಲ್ಲವನ್ನೂ ಕಳೆದುಕೊಂಡದ್ದನ್ನು ಚಿತ್ರಿಸುತ್ತದೆ.

    ಅನಂತ – ಡಾ. ಮೊಗಸಾಲೆಯವರು ಬರೆದ ಎರಡನೆಯ ಕಾದಂಬರಿ. ವೈದ್ಯಕೀಯ ವಿದ್ಯಾರ್ಥಿಯೊಬ್ಬ ದ.ಕನ್ನಡದ ಹವ್ಯಕ ಬ್ರಾಹ್ಮಣ ಸಮಾಜದಲ್ಲಿ ಪ್ರಚಲಿತ ರೂಢಿಗೆ ವಿರುದ್ಧವಾಗಿ ತನ್ನ ಅಕ್ಕನ ಮಗಳನ್ನು ಮದುವೆಯಾಗಲು ಬಯಸಿ ವಿಫಲನಾಗುವ ಕತೆಯಿದು.

    ಮೂರನೆಯ ಕಾದಂಬರಿ ‘ಕನಸಿನ ಬಳ್ಳಿ’. ಇಲ್ಲಿನ ಕಥಾನಾಯಕ ಸದಾನಂದ ಕೂಡ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿ ವೃತ್ತಿ ಮಾಡುತ್ತಿದ್ದವನು. ಇವನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲೇ ನರ್ಸ್ ಆಗಿದ್ದ ವಾಸಂತಿಯನ್ನು (ಆಕೆ ಎಳೆ ವಯಸ್ಸಿನ ವಿಧವೆ) ಮದುವೆಯಾಗಲು ಬಯಸಿ ತಾಯಿಯ ಒಪ್ಪಿಗೆ ಸಿಗದ ಕಾರಣಕ್ಕಾಗಿ ಬೇಸರಗೊಂಡು ನೌಕರಿ ಬಿಟ್ಟು ತನ್ನ ಪೂರ್ವಿಕರ ಹಳ್ಳಿಯಾದ ಕಾಸರಗೋಡು ಸಮೀಪದ ಕನ್ಯಾನಕ್ಕೆ ಬಂದು ಖಾಸಗಿ ಕ್ಲಿನಿಕ್ ಆರಂಭಿಸಿ ಅಲ್ಲಿಯೇ ಇರತೊಡಗುತ್ತಾನೆ. ತನ್ನ ತಂದೆ ನಿರ್ಲಕ್ಷಿಸಿ ಹೋಗಿದ್ದ ಕೃಷಿ ಜಮೀನನ್ನೂ ಅಭಿವೃದ್ಧಿಪಡಿಸುತ್ತಾ ಅದನ್ನು ಒಳ್ಳೆಯ ತೋಟವಾಗಿಸುತ್ತಾನೆ.

    Original price was: $2.70.Current price is: $1.62.
    Add to basket
  • -40%

    ಬೆಂಕಿಬಿದ್ದ ಬಯಲು ಮತ್ತು ಪೆದ್ರೊ ಪರಾಮೊ

    0

    ಬೆಂಕಿಬಿದ್ದ ಬಯಲು ಮತ್ತು ಪೆದ್ರೊ ಪರಾಮೊ

    ಬೆಂಕಿಬಿದ್ದ ಬಯಲು ಮತ್ತು ಪೆದ್ರೊ ಪರಾಮೊ. ಇದು ಹ್ವಾನ್ ರುಲ್ಫೋ ಸಮಗ್ರ ಸಾಹಿತ್ಯದ ಕನ್ನಡಾನುವಾದ.

    Original price was: $3.42.Current price is: $2.05.
    Add to basket
  • -52%

    ಧಾತು

    0

    ಮೊಗಸಾಲೆಯವರ ಹೊಸ ಕಾದಂಬರಿ ‘ಧಾತು’  ಕಥನ ಕ್ರಮದಲ್ಲಿ ಪಲ್ಲಟವೊಂದನ್ನು ಇದು ಸೂಚಿಸುತ್ತದೆ.  ಎಂದಿನಿಂದಲೂ ಎಲ್ಲ ಕಲಾಪ್ರಕಾರಗಳನ್ನೂ ನಿರಂತರವಾಗಿ ಕಾಡುತ್ತಿರುವ ಗಂಡು ಹೆಣ್ಣಿನ ಸಂಬಂಧವನ್ನು ಇದು ಧಾತುವಾಗಿ ಹೊಂದಿದೆ. ಆಧುನಿಕತೆಯೇ ಮೂಲವಾಗಿ ಬದಲಾಗುತ್ತಿರುವ ಬದುಕಿನ ವಿನ್ಯಾಸವನ್ನು ಇದು ಶೋಧಿಸಲೆಳಸುತ್ತದೆ.

    Original price was: $2.16.Current price is: $1.04.
    Add to basket
  • -40%

    ಒಂದು ಆನೆಯ ಸುತ್ತ

    0

    ಒಂದು ಆನೆಯ ಸುತ್ತ

    (ವಸ್ತುಸ್ಥಿತಿಯನ್ನು ಆಧರಿಸಿದ ಕಾಲ್ಪನಿಕ ಕಾದಂಬರಿ)

    ವನ್ಯಜೀವಿಗಳ ಬಗ್ಗೆ ಮಾತಾಡುತ್ತೇವೆ. ಅವುಗಳ ಅಳಿವಿನ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತೇವೆ. ಆದರೆ ಬರಿಯ ಮಾತು, ಕಾಳಜಿಗಳಿಂದ ಅವು ಉಳಿಯಲಾರವು.  ಅವುಗಳ ಅಳಿವಿಗೆ ಕಾರಣವಾಗುವ ಅಂಶಗಳ ಬಗ್ಗೆ ನಮ್ಮ ಗಮನ ಹರಿಯಬೇಕು. ಆನೆಗಳಂತಹಾ ದೈತ್ಯಜೀವಿಗಳು ಊರೊಳಗೆ ನುಗ್ಗಿ ಆಸ್ತಿ, ಮನೆ, ಬೆಳೆ, ಜೀವಹಾನಿಗಳನ್ನು ಮಾಡಿದಾಗ ಅದರ ನೇರ ಪರಿಣಾಮ ಎದುರಿಸುವವರ ಬವಣೆ ವರ್ಣನಾತೀತ. ಆಗೆಲ್ಲಾ ಸಹಜವಾಗಿಯೇ ಅವುಗಳ ಮೇಲೆ ಆಕ್ರೋಶ ವ್ಯಕ್ತವಾಗುತ್ತದೆ.   ಈಗ ಮಲೆನಾಡಿನ ಕೆಲವೆಡೆ ಆಗುತ್ತಿರುವುದು ಇದೇ. ತಿಳಿದೋ ತಿಳಿಯದೆಯೋ ಅನಿವಾರ್ಯ ಎಂದುಕೊಂಡು ಪ್ರಾಣಿಗಳ ವಾಸಸ್ಥಳಗಳನ್ನೆಲ್ಲಾ ನಾವು ಆಕ್ರಮಿಸಿಕೊಳ್ಳುತ್ತಿದ್ದೇವೆ. ವಿಧಿ ಇಲ್ಲದೆ ಅವೇ ಊರೊಳಗೆ ನುಗ್ಗುವ ಪರಿಸ್ಥಿತಿ ನಿರ್ಮಾಣ ಮಾಡಿದ್ದೇವೆ. ತೊಂದರೆಯಾದಾಗ ಮಾತ್ರ ಹಾಹಾಕಾರ ವೆಬ್ಬಿಸುತ್ತೇವೆ.   ಆನೆಗಳ ಸ್ವಚ್ಛಂದ ತಿರುಗಾಟಕ್ಕೆ ಅಡ್ಡಿ ಮಾಡಿ ಅವುಗಳ ಆಹಾರ, ನೆಲೆ ನಾಶ ಮಾಡಿದ್ದೇವೆ. ಊರೊಳಗೆ ಬಂದಾಗ ಅವುಗಳನ್ನು ಕೊಲ್ಲುವ ಮಾತೂ ಬರುತ್ತದೆ.   ಅಲ್ಲ, ತೊಂದರೆಗೊಳಗಾದ ಜನರೇ ತಮಗೆ ತೋಚಿದ ಯಾವುದಾದರೂ ಒಂದು ರೀತಿಯಲ್ಲಿ ಅವುಗಳನ್ನು ಕೊಲ್ಲುತ್ತಿದ್ದಾರೆ. ಇದಕ್ಕೆಲ್ಲಾ ಪರಿಹಾರವೇ ಇಲ್ಲವೇ ಇಲ್ಲ ಎಂದಲ್ಲ; ಇದೆ, ಪೂರ್ತಿಯಾಗಿ ಅಲ್ಲದಿದ್ದರೂ ಮಿತಿ ಮೀರದಷ್ಟು ಖಂಡಿತಾ ಇದೆ.   ಆದರೆ ಒಬ್ಬಿಬ್ಬರು ಮಾಡುವಂಥದ್ದಲ್ಲ.   ಸಂಕಲ್ಪ ಬೇಕು.   ಘನಸರ್ಕಾರದ ಕೃಪೆಯಾಗಬೇಕು.   ಆದಷ್ಟೂ ಈ ಅಪೂರ್ವವಾದ ಪಶ್ಚಿಮಘಟ್ಟವನ್ನು ಭೇದಿಸಬಾರದು. ಅಲ್ಲಿ ಜನ ಜಾತ್ರೆ ಕೂಡದು.   ಈಗಿರುವ ಹೆದ್ದಾರಿಗಳ ಹೊರತಾಗಿ ಹೊಸ ದಾರಿಗಳನ್ನು ನಿರ್ಮಿಸಬಾರದು. ಇರುವ ರಸ್ತೆಗಳನ್ನೇ ಸುವ್ಯವಸ್ಥೆಗೊಳಿಸಬೇಕು. ಗೊತ್ತು ಗುರಿ ಇಲ್ಲದೆ ಅರೆಕಟ್ಟುಗಳನ್ನು ಕಟ್ಟಲೇ ಬಾರದು. ಹಾಗಾದರೆ ಅಭಿವೃದ್ಧಿ ಬೇಡವೇ? ಅವಶ್ಯ ಇರುವ ವಿದ್ಯುತ್ತಿನ ಉತ್ಪಾದನೆ ನಿಲ್ಲಿಸಬೇಕೇ? ಎಂದೂ ಅನಿಸಬಹುದು. ಈಗ ದುಬಾರಿ ಎನಿಸಿದರೂ ಅದನ್ನು ಬೇರೆ ಬಗೆಯಲ್ಲಿ ಉತ್ಪಾದಿಸಬೇಕು.   ಲಾಭ ನಷ್ಟದ ತೂಕ ಹಾಕಿ ನೋಡಿದರೆ ಮುಂದಾಲೋಚನೆ ಇಲ್ಲದೆ ಮಾಡುವ ಈ ರೀತಿಯ ಕೆಲಸಗಳಿಂದ ಲಾಭಕ್ಕಿಂತ ಅಪಾರವಾದ ನಷ್ಟವೇ ಜಾಸ್ತಿ ಎನ್ನುವುದು ಪ್ರಕೃತಿಯ ಒಳಹೊರಗು ತಿಳಿದವರಿಗೆ ಅರ್ಥವಾಗುತ್ತದೆ.   ಇದರ ಪರಿಣಾಮ ಅನುಭವಿಸುವವರು ನಮ್ಮ ಮುಂದಿನ ಪೀಳಿಗೆಯವರು. ಅಂದರೆ ನಮ್ಮ ಮಕ್ಕಳು, ಮೊಮ್ಮಕ್ಕಳು! ಇದು ಒಂದು ತರಹ ‘ಚಿನ್ನದ ಮೊಟ್ಟೆ ಇಡುವ ಕೋಳಿಯ ಹೊಟ್ಟೆ ಸೀಳಿದಂತೆ!’ ಮಳೆ ತರಿಸುವ ಮಳೆಕಾಡುಗಳು, ಪ್ರಕೃತಿಯ ಸಮತೋಲನ ಸಾಧಿಸುವ ವನ್ಯಜೀವಿಗಳು, ಇಡೀ ನಮ್ಮ ದೇಶಕ್ಕೇ ಸಾಲುವಷ್ಟು ಅಪೂರ್ವವಾದ ಔಷಧಿ ಸಂಪತ್ತನ್ನು ಹೊಂದಿದ ಸಸ್ಯಗಳು ಎಲ್ಲಕ್ಕೂ ಮೂಲ ಪಶ್ಚಿಮಘಟ್ಟಗಳ ಸಾಲುಗಳು. ಅವುಗಳ ಮೂಲಗಳನ್ನೇ ನಾಶಮಾಡಿ ನಾವು ಸುಖಪಡುವುದಲ್ಲ.  ಅದಕ್ಕೆ ಹಾನಿ ಮಾಡದೆ ಅದರಿಂದ ಸಿಗುವ ಲಾಭವನ್ನು ಪಡೆಯುವುದೇ ವಿವೇಚನೆ.   ತೊಂದರೆ ಕೊಡುವ ಆನೆಗಳಂತಹಾ ಪ್ರಾಣಿಗಳು ಊರಿಗೆ ಬಂದರೆ ಅಲ್ಲಿನ ಜನಗಳ ಬದುಕು ನರಕವಾಗುತ್ತದೆ. ಅದಕ್ಕೂ ವ್ಯವಸ್ಥೆಯಾಗಬೇಕು.   ಕೆಲವೆಡೆ ತಡೆಗೋಡೆ, ಕೆಲವೆಡೆ ಕಂದಕಗಳನ್ನು ತೋಡಿಯಾದರೂ ಅವು ಊರಿಗೆ ಬಾರದಂತೆ ತಡೆಯಬೇಕು. ಗುಡ್ಡ, ಬೆಟ್ಟ, ತೊರೆ, ಪ್ರಪಾತಗಳಿರುವ ಸಾವಿರಾರು ಕಿ.ಮೀ. ಉದ್ದಕ್ಕೆಲ್ಲಾ ಅದನ್ನು ಮಾಡುವುದೆಂತು? ಎನಿಸಬಹುದು.  ವಿಪರೀತ ಖರ್ಚಿನ ಬಾಬ್ತು ನಿಜ, ಆದರೆ ಯಾವ್ಯಾವುದಕ್ಕೋ ಕೋಟಿ ಕೋಟಿ ಖರ್ಚು ಮಾಡುವ ನಮಗೆ ಅದು ಖಂಡಿತಾ ಅಸಾಧ್ಯವಲ್ಲ. ಅಲ್ಲದೆ ಚೀನದ ಮಾಹಾಗೋಡೆಯ ಮುಂದೆ ಇದೆಷ್ಟರ ಕೆಲಸ? ಮನಸ್ಸಿದ್ದರೆ ಮಾರ್ಗ!

    Original price was: $1.44.Current price is: $0.86.
    Add to basket
  • -40%

    ಅರಮನೆ ಗುಡ್ಡದ ಕರಾಳ ರಾತ್ರಿಗಳು

    0

    ಪಶ್ಚಿಮಘಟ್ಟ ಎಂದರೇ ಮಿಸ್ಟರಿಗಳು ತುಂಬಿಕೊಂಡ ಪ್ರದೇಶ. ಅದರೊಳಗೇನಿದೆ ಎಂದು ಇಂದಿಗೂ ಸ್ಪಷ್ಟವಾಗಿಲ್ಲ. ಎಂದಿಗೂ ಆಗುವುದಿಲ್ಲ. ಅಷ್ಟು ನಿಗೂಢತೆ ಇದೆ ಅದರೊಳಗೆ. ಅದರ ಪಕ್ಕದಲ್ಲೇ ಹುಟ್ಟಿ ಬೆಳೆದವರಿಗೆ ಒಂದಿಷ್ಟು ಅದರ ಬಗ್ಗೆ ತಿಳಿದಿರುತ್ತದೆ. ಅಂದರೆ ಅಲ್ಲಿಯ ಪ್ರಾಣಿ-ಪಕ್ಷಿ,  ವಾತಾವರಣ, ಕಾಡುದಾರಿಗಳ ಬಗ್ಗೆ ಒಂದಿಷ್ಟು ಅರಿತಿರುತ್ತಾರೆ ಅಷ್ಟೆ.

    Original price was: $1.56.Current price is: $0.94.
    Add to basket
  • -40%

    ಜೇನುಕಲ್ಲಿನ ರಹಸ್ಯ ಕಣಿವೆ

    0

    ಜೇನುಕಲ್ಲಿನ ರಹಸ್ಯ ಕಣಿವೆ
    (ಮಲೆನಾಡಿನ ರೋಚಕ ಕತೆಗಳು-೪)
    ಕಾದಂಬರಿ
    ಗಿರಿಮನೆ ಶ್ಯಾಮರಾವ್
    ಈ ಪಶ್ಚಿಮಘಟ್ಟ ಅದ್ಭುತ, ರಮ್ಯ, ಅಪರೂಪದ ಜೀವ-ಸಸ್ಯಗಳ ತಾಣ. ಆದರೆ ಅದು ಸುತ್ತಲಿಂದ ಇಂಚಿಂಚಾಗಿ ನಶಿಸುತ್ತಿದೆ. ಬಹುಶಃ ನಮ್ಮ ಕಾಲ ಮುಗಿಯುವುದರೊಳಗೆ ಅದರ ಸಹಜ ಸೌಂದರ್ಯ ಮಾಸಬಹುದು. ಮುಂದಿನ ಪೀಳಿಗೆಯವರಿಗೆ ಅದರ ಮತ್ತೊಂದು ರೂಪವೇ ಕಾಣಲು ಸಿಗಬಹುದು. ಹಾಗಾಗುವ ಮೊದಲೇ ಅದರ ಒಂದೊಂದೇ ಮಗ್ಗುಲನ್ನು ಪ್ರತಿಯೊಂದು ಕಾದಂಬರಿಯಲ್ಲೂ ಪದರು ಪದರಾಗಿ ಬಿಚ್ಚಿಡುತ್ತಾ ಹೋಗುವ ಉದ್ದೇಶ ಇಲ್ಲಿದೆ. ಕೋಟ್ಯಂತರ ವರ್ಷಗಳಿಂದ ಅಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದ ವನ್ಯಜೀವಿಗಳ ಬದುಕು ಒಮ್ಮೆಲೇ ಈ ಶತಮಾನದಲ್ಲಿ ಘೋರವಾಗಿ ಜೀವಜಾಲದ ಸರಪಳಿ ಕಡಿಯುತ್ತಿದೆ. ಮಾಡಿದ ಕರ್ಮಗಳು ಬದುಕಿಗೆ ಮತ್ತೊಂದು ರೀತಿಯಲ್ಲಿ ಸುತ್ತಿಕೊಳ್ಳುತ್ತದಾ? ಅದು ಬೇಗ ಕಣ್ಣಿಗೆ ಕಾಣದಿದ್ದರೂ ಬದುಕನ್ನು ಆಳವಾಗಿ ನೋಡಿದಾಗ ಅಲ್ಲ ಎನ್ನಲು ಬರುವುದಿಲ್ಲ. `ಮಾಡಿದ್ದನ್ನು ಅನುಭವಿಸಲೇಬೇಕು’ ಎನ್ನುವುದು ಜಗತ್ತಿನ ನಿಯಮವೇ ಆಗಿರಬೇಕು. ಇವೆಲ್ಲದರ ಒಳನೋಟ ಈ ಕಾದಂಬರಿಯಲ್ಲಿದೆ.

    Original price was: $1.56.Current price is: $0.94.
    Add to basket
  • -40%

    ತಲೆಬುರುಡೆ ಬಿಡಿಸಿದ ಕೊಲೆ ರಹಸ್ಯ

    0

    ತಲೆ ಬುರುಡೆ
    ಬಿಡಿಸಿದ ಕೊಲೆ ರಹಸ್ಯ
    ಮೂಲ : ಶ್ರೀ ಕೆ. ರಾಮಯ್ಯ ರೈ
    ಅನುವಾದ: ಕೆದಂಬಾಡಿ ಜತ್ತಪ್ಪ ರೈ
    ಸಮಾಜದ ಈ ಸ್ವಾಸ್ಥ್ಯ ಕಾಪಾಡಲು ನಾವೇ ಪೊಲೀಸ್ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಪೊಲೀಸರು ನಾಗರಿಕರ ಸ್ನೇಹಿತರಾಗಿದ್ದರೆ ಅದರಿಂದ ಎಲ್ಲರಿಗೂ ಹಿತ. ಒಳ್ಳೆಯ ಪೊಲೀಸ್ ಅಧಿಕಾರಿಗಳಿಗೆ ಯಾವತ್ತೂ ಜನರ ನೈತಿಕ ಬೆಂಬಲ ಸಿಕ್ಕಿಯೇ ಸಿಗುತ್ತದೆ. ಪೊಲೀಸರೇ ನಾಗರಿಕರ ಸಹಕಾರ ಪಡೆಯದೆ ದೂರ ಸರಿದರೆ ಈ ಮಾತು ವಿರೋಧಾಭಾಸದ್ದು ಅನಿಸುತ್ತದೆ.
    ಆದರೆ ನಮ್ಮ ನಡುವೆ ಶ್ರೀ ಕೆ. ರಾಮಯ್ಯ ರೈ ಅವರಂಥ ದಕ್ಷ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳೂ ಇದ್ದರು. ಅವರ ಅನುಭವ ನೆನಪುಗಳೇ ಇಂದಿನವರಿಗೆ ಆದರ್ಶವಾಗಲಿ. ಅವರ ಸ್ವಾನುಭವದ ಸತ್ಯಕಥೆ ‘ತಲೆಬುರುಡೆ’ ಕಾದಂಬರಿ ರೂಪದಲ್ಲಿ ಸ್ವಾರಸ್ಯಕರವಾಗಿ ಹರಿದು ಬಂತು.

    Original price was: $2.10.Current price is: $1.26.
    Add to basket
  • -40%

    ವಿಚ್ಛೇದನಾ ಪರಿಣಯ

    0

    ವಿಚ್ಛೇದನಾ ಪರಿಣಯ
    ಕತೆಯನ್ನು ಹುಡುಕುವ ಒಂದು ಕಾದಂಬರಿ
    ಸುಮಾರು ಏಳೆಂಟು ತಿಂಗಳ ಕಾಲಾವಧಿಯಲ್ಲಿ ಬರೆದ ಈ ಕಾದಂಬರಿಯ ಈ ರೂಪಕ್ಕೆ ಕಾರಣರಾದವರು ರಚನೆಯ ಬೇರೆ ಬೇರೆ ಹಂತಗಳಲ್ಲಿ ಓದಿ ತಮ್ಮ ಮೆಚ್ಚುಗೆ-ಟೀಕೆ-ನಿರೀಕ್ಷೆಗಳನ್ನು ತಿಳಿಸಿದ ಆತ್ಮೀಯರು. ಈ ಆತ್ಮೀಯರಿಗೆಲ್ಲ ಕೃತಜ್ಞನಾಗಿದ್ದೇನೆ.

    Original price was: $0.84.Current price is: $0.50.
    Add to basket
  • -40%

    ಕರಾಳ ಗರ್ಭ

    0

    ಈ ಕಾದಂಬರಿಯನ್ನು ನಾಗೇಶ ಕುಮಾರ ಸಿ ಎಸ್ ಅವರು ಬರೆದಿದ್ದಾರೆ. ಇದು  ಒಂದು ರಹಸ್ಯಮಯ  ಪತ್ತೇದಾರಿ ಕಾದಂಬರಿಯಾಗಿದೆ.

    Original price was: $0.83.Current price is: $0.50.
    Add to basket
  • -40%

    ಸುವರ್ಣ ಕರಾವಳಿ

    0

    ಸುವರ್ಣ ಕರಾವಳಿ
    ಈ ಕಾದಂಬರಿಯನ್ನು ನಾಗೇಶ ಕುಮಾರ ಸಿ ಎಸ್ ಅವರು ಬರೆದಿದ್ದಾರೆ. ಇದು  ಒಂದು ರಹಸ್ಯಮಯ  ಪತ್ತೇದಾರಿ ಕಾದಂಬರಿಯಾಗಿದೆ.

    Original price was: $0.83.Current price is: $0.50.
    Add to basket
  • -40%

    ಮುಳುಗುವ ಕೊಳ

    0

    ಮುಳುಗುವ ಕೊಳ
    ಈ ಕಾದಂಬರಿಯನ್ನು ನಾಗೇಶ ಕುಮಾರ ಸಿ ಎಸ್ ಅವರು ಬರೆದಿದ್ದಾರೆ. ಇದು  ಒಂದು ರಹಸ್ಯಮಯ  ಪತ್ತೇದಾರಿ ಕಾದಂಬರಿಯಾಗಿದ್ದು ಪೊಲೀಸರು ಕೊಲೆಗಾರರನ್ನು ಹೇಗೆ ಪತ್ತೆ ಮಾಡುತ್ತಾರೆ ಎಂಬುದನ್ನು ಈ ಕಾದಂಬರಿಯಲ್ಲಿ ವಿವರಿಸಿದ್ದಾರೆ. ಕೊಲೆಗಾರರು ಪೋಲೀಸರ ಜೊತೆಯಲ್ಲೇ ಇದ್ದು ಪೊಲೀಸರಿಗೆ ಯಾವುದೇ ರೀತಿಯ ಸಂಶಯ ಬರದಂತೆ ನಡೆದುಕೊಂಡು ಅವರು  ಯಾವ ರೀತಿ  ದಾರಿ ತಪ್ಪಿಸಲು ನೋಡುತ್ತಾರೆ ಎಂಬುದನ್ನು ತಿಳಿಸಿದ್ದಾರೆ ಹೀಗಾಗಿ ಈ ಕಾದಂಬರಿಯು ತುಂಬಾ ಕುತೂಹಲಕಾರಿಯಾಗಿದೆ.

    Original price was: $0.83.Current price is: $0.50.
    Add to basket