• -40%

    ಭಯಮುಕ್ತ ಬದುಕಿನೆಡೆಗೆ…

    0

    ಭಯಮುಕ್ತ ಬದುಕಿನೆಡೆಗೆ…

    ಇಂಗ್ಲಿಶ್ ಮೂಲ: ಸಂತೋಷ್ ನಂಬಿಯಾರ್

    ಕನ್ನಡಾನುವಾದ: ಶೀನಾ ನಾಡೋಳಿ

    ಪ್ರೀತಿ, ಸಂತೋಷ, ಸ್ವಾತಂತ್ರ್ಯ, ಕರುಣೆ ಹಾಗೂ ಕ್ರಿಯಾತ್ಮಕವಾದ ಬದುಕಿಗೆ ಸವೆದ ದಾರಿ ಇಲ್ಲ. ಇದು ಈಗ, ವರ್ತಮಾನದಲ್ಲಿ, ಸಮಯರಹಿತ ಕ್ಷಣದಲ್ಲಿ ಮಾತ್ರ ಸಂಭವಿಸಲು ಸಾಧ್ಯ. ಯೋಚನೆಯ ಚಲನೆ ನಿಂತು ಸುಳ್ಳು ‘ಅಹಂ’ ಕರಗಿದಾಗ ಭಯವು ಇಲ್ಲವಾಗುವುದು…. ಎಂದು ಹೇಳುತ್ತ ನಂಬಿಯಾರ್ ಅವರು ಎಲ್ಲರ ಯೋಚನೆಗಳು ಹೊಸ ದಿಕ್ಕಿನತ್ತ ತೆರೆದುಕೊಳ್ಳುವಂತೆ ಮಾಡುವ ಪ್ರಯತ್ನ ಮಾಡಿದ್ದಾರೆ.

    Original price was: $0.60.Current price is: $0.36.
    Add to basket
  • -20%

    ಬಾಜೀರಾವ್ ಮಸ್ತಾನಿ

    0

    ಬಾಜೀರಾವ್ ಮಸ್ತಾನಿ

    ಡಾ. ಸರಜೂ ಕಾಟ್ಕರ್

    ಬಾಜೀರಾವ್ ಮಸ್ತಾನಿ ಒಂದು ಅದ್ಭುತವಾದ ಪ್ರೇಮದ ಕಥೆ. ಪುಣೆಯಲ್ಲಿ ಮಸ್ತಾನಿ ಮಹಲ್ ಎಂಬ ವಾಸ್ತು ಇದ್ದರೂ ಇತಿಹಾಸದ ಅಧಿಕೃತ ದಾಖಲೆಯಲ್ಲಿ ಎಲ್ಲೂ ಮಸ್ತಾನಿಯ ಉಲ್ಲೇಖವೇ ಬರುವುದಿಲ್ಲ. ಬಾಜೀರಾವ್ ನಿಂದ ಆಕೆಗೆ ಆದ ಮಗ ಸಮಶೇರ ಬಹಾದ್ದೂರ ಪಾನೀಪತ್ ದಲ್ಲಿ ನಡೆದ ಯುದ್ಧದಲ್ಲಿ ಕೊಲ್ಲಲ್ಪಟ್ಟ ಎಂದು ಹೇಳುವ ಇತಿಹಾಸ ಮಸ್ತಾನಿಯ ಬಗ್ಗೆ ಜಾಣ ಮೌನ ತೋರಿಸುತ್ತದೆ. ಆದರೆ ಲೋಕ ಸಾಹಿತ್ಯದಲ್ಲಿ, ಜಾನಪದ ಕಥಾ ಕಥನಗಳಲ್ಲಿ ಅಲ್ಲಲ್ಲಿ ಬಾಜೀರಾವ್-ಮಸ್ತಾನಿಯರ ಕಥೆ ಉಲ್ಲೇಖಿಸಲ್ಪಡುತ್ತದೆ.

    Original price was: $1.44.Current price is: $1.15.
    Add to basket
  • -20%

    ಜುಲೈ ೨೨ ೧೯೪೭

    0

    ಜುಲೈ ೨೨ ೧೯೪೭

    ಡಾ. ಸರಜೂ ಕಾಟ್ಕರ್

    ದೇಶಪ್ರೇಮವನ್ನು ಮನದಲ್ಲಿ ತುಂಬಿಕೊಂಡು ಜೀವನಪೂರ್ತಿ ನಿಷ್ಠಾವಂತರಾಗಿ ಬಾಳುವ ಅನೇಕರು ದೇಶದಲ್ಲಿರಬಹುದು. ಎಲೆಮರೆಯ ಕಾಯಂತೆ ಬದುಕಿದ ಸತ್ಯಪ್ಪನಂತಹ ದೇಶಭಕ್ತನ ಆದರ್ಶವನ್ನು ಕೇಂದ್ರ ಪ್ರಜ್ಞೆಯಾಗಿಟ್ಟುಕೊಂಡು ಮೂರು ತಲೆಮಾರುಗಳ ಕಥನವನ್ನು ಚಿತ್ರಿಸುವ ಕಾದಂಬರಿ ಇದು. ಇದರಲ್ಲಿ ಮೂರು ತಲೆಮಾರುಗಳ ಸಾಮಾಜಿಕ, ರಾಜಕೀಯ ಇತಿಹಾಸವೂ ಆನುಷಂಗಿಕವಾಗಿ ದಾಖಲಾಗಿದ್ದು, ಇದು ಕೇವಲ ಸತ್ಯಪ್ಪನ ಕತೆ ಮಾತ್ರವಾಗುಳಿಯದೆ ತಲೆಮಾರುಗಳ ನಡುವೆ ದೇಶನಿಷ್ಠೆಯ ಬಗೆಗಿನ ಸಂಘರ್ಷದ ಕತೆಯೂ ಆಗಿದೆ. 

    Original price was: $1.20.Current price is: $0.96.
    Add to basket
  • -40%

    ನಾದದ ನವನೀತ

    0

    ನಾದದ ನವನೀತ

    ಬೇಂದ್ರೆಯವರ ಕಾವ್ಯವನ್ನು ಕುರಿತಂತೆ ಆಳವಾದ ಅಧ್ಯಯನದಿಂದ ರೂಪುಗೊಂಡ ಲೇಖನಗಳು ಪುಸ್ತಕದಲ್ಲಿ ಅಡಕವಾಗಿವೆ. ನಾದದ ನವನೀತದಲ್ಲಿ ಹೊರಹೊಮ್ಮುವ ಭಾವಗೀತದ ಬಗೆಗಿನ ಬೇಂದ್ರೆಯವರ ಕಾವ್ಯತತ್ವವನ್ನು ವಿಸ್ತರಿಸುವ ಇಲ್ಲಿನ ಬರವಣಿಗೆ ಯಾವುದೇ ಕಾವ್ಯಾಭ್ಯಾಸಿಗೆ ಉಪಯುಕ್ತವಾಗಿದೆ. ಬೇಂದ್ರೆಯವರ ಕಾವ್ಯ ಮಥಿಸಿದಷ್ಟು ನವನೀತವಾಗಿ ಭಾವ, ಅರ್ಥ, ಗ್ರಾಹ್ಯವಾಗುವ ಪರಿ ವಿಸ್ಮಯಕಾರಿಯಾಗಿದೆ ಎಂಬುದನ್ನು ಪ್ರಸ್ತುತ ಕೃತಿಯ ಓದು ಖಚಿತ ಪಡಿಸುತ್ತದೆ.

    Original price was: $1.92.Current price is: $1.15.
    Add to basket
  • -40%

    ಮಾಟದೊಳಗಣ ನೋಟ

    0

    ಮಾಟದೊಳಗಣ ನೋಟ
    (ಶಿಲ್ಪಕಲೆ ಕುರಿತ ಬರೆಹಗಳು)

    ವಿಭಿನ್ನ ಮಾಧ್ಯಮಗಳ ಶಿಲ್ಪಕಲೆಗಳು ಭಾರತೀಯ ಸಂಸ್ಕೃತಿಯ ಅವಿಸ್ಮರಣೀಯ ಕುರುಹುಗಳು. ಹಾಗಾಗಿ ಸಮಕಾಲೀನ ದಿನಗಳಲ್ಲಿಯೂ ಸಾಂಪ್ರದಾಯಿಕ ಶಿಲ್ಪ ಕಲೆಗಳ ಬಗೆಗೆ ಪ್ರೀತಿ, ಆರಾಧನಾಭಾವ ಉಳಿದುಕೊಂಡಿದೆ. ಸಾಂಪ್ರದಾಯಿಕ ಶಿಲ್ಪ ಕಲೆಗಳ ರಚನಾ ವಿಧಾನ, ಹಿನ್ನೆಲೆ, ಅರ್ಥ, ಸ್ವರೂಪ ಇವುಗಳನ್ನು ಉಳಿಸಿಕೊಂಡು ಬಂದಿರುವ ಮನುಷ್ಯನ ನಂಬಿಕೆಗಳು ಇತ್ಯಾದಿಗಳೆಲ್ಲ “ಮಾಟದೊಳಗಣ ನೋಟ” ಪುಸ್ತಕದ ಲೇಖನಗಳಲ್ಲಿ ದಾಖಲಾಗಿವೆ.

    Original price was: $1.44.Current price is: $0.86.
    Add to basket
  • -40%

    ದಲಿತರ ಮೇಲಿನ ದೌರ್ಜನ್ಯ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳು

    0

    ದಲಿತರ ಮೇಲಿನ ದೌರ್ಜನ್ಯ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳು

    ಇಲ್ಲಿನ ಲೇಖನಗಳಲ್ಲಿ ದಲಿತರ ಸಮಕಾಲೀನ ಸಮಸ್ಯೆಗಳನ್ನು ಆತ್ಮೀಯವಾಗಿ ವಿಶ್ಲೇಷಿಸ ಲಾಗಿದೆ. ದಲಿತರ ಸಮಸ್ಯೆಗಳು ಮೇಲ್ನೋಟಕ್ಕೆ ತೋರುವುದಕ್ಕಿಂತಲೂ ಭಿನ್ನವಾಗಿ ಅವುಗಳ ಆಂತರ್ಯವನ್ನು ಶೋಧಿಸಿರುವಲ್ಲಿ ಲೇಖಕರ ಸಾಮಾಜಿಕ ಕಾಳಜಿ ಸ್ಪಷ್ಟವಾಗುತ್ತದೆ. ಅಂಬೇಡ್ಕರ್ ಚಿಂತನೆಯನ್ನು ಮತ್ತು ದಲಿತ ಲೋಕವನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತ ಮತಾಂತರದ ಒಳ ಹೊರಗುಗಳನ್ನು ಸೂಕ್ಷ್ಮವಾಗಿ ಇಲ್ಲಿನ ಬರವಣಿಗೆಗಳಲ್ಲಿ ಓದುಗರ ಮುಂದಿಡಲಾಗಿದೆ. ದಲಿತ ಸಂಸ್ಕೃತಿಯನ್ನು ಕೇಂದ್ರೀಕರಿಸಿ ಬರೆದ ಇಲ್ಲಿನ ಲೇಖನಗಳು ಕನ್ನಡ ವಿಚಾರ ಪ್ರಪಂಚದಲ್ಲಿ ಹೊಸ ತಿಳುವಳಿಕೆಯನ್ನು ಮೂಡಿಸುವಲ್ಲಿ ಸಶಕ್ತವಾಗಿವೆ. 

    Original price was: $1.20.Current price is: $0.72.
    Add to basket
  • -20%

    ಮೆಲುದನಿ

    0

    ಮೆಲುದನಿ

    ಡಾ. ಪುರುಷೋತ್ತಮ ಬಿಳಿಮಲೆಯವರ ಓದು ಎಷ್ಟು ವ್ಯಾಪಕವಾದುದು ಎಂಬುದಕ್ಕೆ ಇಲ್ಲಿನ ಲೇಖನಗಳು ಹಾಗೂ ಮುನ್ನುಡಿಗಳೇ ಸಾಕ್ಷಿ ನುಡಿಯುತ್ತವೆ. ಹಿರಿಯ-ಕಿರಿಯ ಬರಹಗಾರರು ಎಂಬ ಭೇದವಿಲ್ಲದೆ ಎಲ್ಲರನ್ನೂ ಓದುವ, ಓದಿದುರ ಬಗೆಗೆ ನಾಲ್ಕು ಮಾತು ಬರೆದು ಗುಣಾವಗುಣಗಳನ್ನು ನಿರ್ದಾಕ್ಷಿಣ್ಯವಾಗಿ ಹೇಳುವ ಪ್ರಾಮಾಣಿಕ ನಿಷ್ಠೆ ಇಲ್ಲಿನ ಲೇಖನಗಳಲ್ಲಿ ವ್ಯಕ್ತವಾಗಿದೆ. ಸಾಹಿತ್ಯ, ಜಾನಪದ ವಲಯಗಳಲ್ಲಿ ಪ್ರಮುಖ ಚಿಂತಕರೂ ಬರಹಗಾರರೂ ಆದ ಡಾ. ಬಿಳಿಮಲೆಯವರ ಮುನ್ನುಡಿಗಳಲ್ಲಿ ಬರಹಗಾರರು ಸಾಗುವ ದಿಕ್ಕನ್ನು ಖಚಿತವಾಗಿ ತೆರೆದು ತೋರಿಸುವ ಗುಣವಿದೆ. ಎಲ್ಲವನ್ನು ವಸ್ತುನಿಷ್ಠವಾಗಿ ಪರಿಗ್ರಹಿಸುವ ದೃಷ್ಟಿಕೋನವೊಂದು ಇಲ್ಲಿ ಗಮನಸೆಳೆಯುತ್ತದೆ. 

    Original price was: $2.40.Current price is: $1.92.
    Add to basket
  • -20%

    ತೋಟಿಯ ಮಗ

    0

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ತಗಳಿ ಶಿವಶಂಕರ ಪಿಳ್ಳೆ ಅವರ ಮಲಯಾಳಂ ಕಾದಂಬರಿಯ ಕನ್ನಡಾನುವಾದ

    ತೋಟಿಯ ಮಗ

    ಮೋಹನ ಕುಂಟಾರ್

    ತೋಟಿಯುಡೆ ಮಗನ್  ಕಾದಂಬರಿಯು ತಗಳಿ ಶಿವಶಂಕರ ಪಿಳ್ಳೆಯವರ ಬಹುಮುಖ್ಯ ಕಾದಂಬರಿಗಳಲ್ಲಿ ಒಂದು. ಅದನ್ನು ಕುಂಟಾರ್ ಅವರು ಮೂಲ ಸಾಂಸ್ಕೃತಿಕ ಸನ್ನಿವೇಶಕ್ಕೆ ಧಕ್ಕೆಬಾರದಂತೆ ಕನ್ನಡದಲ್ಲಿ ಸಂವಹನ ಸುಲಭವಾಗಿ ಅನುವಾದ ಮಾಡಿದ್ದಾರೆ.

    Original price was: $1.44.Current price is: $1.15.
    Add to basket
  • -40%

    ಯಕ್ಷಗಾನ ಸ್ಥಿತ್ಯಂತರ

    0

    ಯಕ್ಷಗಾನ ಸ್ಥಿತ್ಯಂತರ
    (ಸಂಶೋಧನ ಲೇಖನಗಳು)

    ಯಕ್ಷಗಾನವು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬರಲು ಸಾಂಸ್ಕೃತಿಕವಾಗಿ ಹತ್ತು ಹಲವು ಕಾರಣಗಳಿವೆ. ಈ ಸ್ಥಿತ್ಯಂತರಗಳನ್ನು ಶೈಕ್ಷಣಿಕ ಶಿಸ್ತು ಹಾಗೂ ವಿಮರ್ಶಾತ್ಮಕ ಒಳನೋಟಗಳಿಂದ ಇಲ್ಲಿನ ಲೇಖನಗಳು ದಾಖಲಿಸಿವೆ. ಯಕ್ಷಗಾನದ ಕುರಿತಂತೆ ಬಂದಿರುವ ಬರವಣಿಗೆಗಳಿಗೆ  ವಿನೂತನ ಆಯಾಮವನ್ನು ನೀಡಬಲ್ಲ ಆಲೋಚನೆಗಳು ಪ್ರಸ್ತುತ ಗ್ರಂಥದ ಲೇಖನಗಳಲ್ಲಿ ಹರಳುಗೊಂಡಿವೆ. 

    Original price was: $2.40.Current price is: $1.44.
    Add to basket
  • -10%

    ಜಯ

    0

    ಮಹಾಭಾರತದ ಬೃಹತ್ ಕಥೆಯನ್ನು ಸಂಗ್ರಹವಾಗಿ ನಿರೂಪಿಸಿರುವ ಈ ಕಥನ ತನ್ನ ಅಚ್ಚುಕಟ್ಟಾದ ನಿರೂಪಣೆ, ಚಕಮಕಿಯಂತೆ ಮಿಂಚುವ ಚುರುಕಾದ ಸಂಭಾಷಣೆಗಳಿಂದ ಆಕರ್ಷಕವಾಗಿ, ಸವೇಗವಾಗಿ ಕಥೆಯನ್ನು ನಡೆಸಿಕೊಂಡು ಹೋಗುತ್ತದೆ. ಕಥೆಗಳನ್ನು ಸಂಗ್ರಹಿಸಿ ಹೇಳಿದ್ದರೂ, ಅವುಗಳ ನಾಟ್ಯಾಯಮಾನತೆ ಎದ್ದುಕಾಣುತ್ತದೆ. ಇದೆಲ್ಲ ಪಟ್ಟನಾಯಕರು ಸಿದ್ಧಹಸ್ತ ಕತೆಗಾರರು ಎಂಬುದಕ್ಕೆ ಸಾಕ್ಷಿಯಾಗಿದೆ.

    Original price was: $7.81.Current price is: $7.02.
    Add to basket
  • -20%

    ಸುಪ್ರಸಿದ್ಧ ಭಾಷಣಗಳು

    0

    ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ

    ಸುಪ್ರಸಿದ್ಧ ಭಾಷಣಗಳು

    ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಮಾಡಿದ ೨೯ ಭಾಷಣಗಳ ಸಂಕಲನವಿದು. ಈ ಸಂಗ್ರಹದಲ್ಲಿ ಬಾಬಾಸಾಹೇಬರು ಆರಂಭದಲ್ಲಿ ಮಾಡಿದ ಹಲಕೆಲ ಭಾಷಣಗಳ ಜೊತೆಗೆ ಅವರು ಸಾರಾನಾಥದಲ್ಲಿ ಮಾಡಿದ ಐತಿಹಾಸಿಕ ಕೊನೆಯ ಭಾಷಣವೂ ಅಡಕವಾಗಿದೆ. ಅವರ ಮಾತುಗಳಲ್ಲಿ ಅವರಿಗೆ ದಲಿತರ ಬಗ್ಗೆ ಇದ್ದ ಕಳಕಳಿ, ಪ್ರೀತಿ ಹಾಗೂ ಅಸ್ವಸ್ಥತೆ(restlessness) ಗೊತ್ತಾಗುತ್ತದೆ. ಬೌದ್ಧ ಧರ್ಮವನ್ನು ಆಳವಾಗಿ ಅಭ್ಯಾಸ ಮಾಡಿದ ಬಾಬಾಸಾಹೇಬರು ತಮ್ಮ ಭಾಷಣಗಳಲ್ಲಿ ಅದರ ತಿರುಳನ್ನು ಹೇಳಿದ್ದಾರೆ.

    Original price was: $1.44.Current price is: $1.15.
    Add to basket
  • -20%

    ಚಂದ್ರಶೇಖರ ಕಂಬಾರರ ಕಾವ್ಯಭಾಷೆ

    0

    ಚಂದ್ರಶೇಖರ ಕಂಬಾರರ ಕಾವ್ಯಭಾಷೆ

    ಸಾಹಿತ್ಯದಲ್ಲಿ ಭಾಷೆಗೆ ವಿಶಿಷ್ಟವಾದ ಸ್ಥಾನವಿದೆ. ಭಾಷೆಯನ್ನು ಸಾಹಿತ್ಯದಿಂದ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಅದು ಅಭಿನ್ನ. ಏಕೆಂದರೆ ಸಾಹಿತ್ಯ ಸಂಭವಿಸುವುದು ಭಾಷೆಯ ಮೂಲಕವೇ. ಸಹೃದಯರು ಗ್ರಹಿಸುವ ವಸ್ತು, ಭಾಷೆಯ ಮೂಲಕವೇ ವಿಶಿಷ್ಟವಾದ ಅರ್ಥವನ್ನು ಪಡೆದುಕೊಂಡು ಸೃಷ್ಟಿಯಾಗುತ್ತದೆ. ಭಾಷೆಯ ಮೂಲಕವೇ ಕಾವ್ಯ ವಸ್ತುವಿನ ಸೂಕ್ಷ್ಮವಿನ್ಯಾಸಗಳು, ಪದರುಗಳು, ಭಾವಗಳು, ಸೂಕ್ಷ್ಮಕಂಪನಗಳು, ವೈವಿಧ್ಯ ಪೂರ್ಣವಾಗಿ ಪ್ರಕಟವಾಗುತ್ತವೆ. ಕಾವ್ಯಭಾಷೆ ಎನ್ನುವುದು ವ್ಯಾವಹಾರಿಕ ಭಾಷೆಗಿಂತ ಭಿನ್ನವಾದುದು. ಕಾವ್ಯಭಾಷೆಗಿರುವ ಸೂಕ್ಷ್ಮಸ್ತರಗಳು ವ್ಯಾವಹಾರಿಕ ಭಾಷೆಯಲ್ಲಿ ಕಾಣಿಸುವುದಿಲ್ಲ. ಕಾವ್ಯಭಾಷೆ ಖಾಸಗಿಯಾಗುತ್ತ ಅದು ಕವಿಯ ಒಳಜಗತ್ತಿಗೆ ಸಹೃದಯರನ್ನು ಒಯ್ದುಬಿಡುತ್ತದೆ. ಕನ್ನಡ ಕಾವ್ಯಲೋಕದಲ್ಲಿ ಭಾಷೆಯನ್ನು ಸಮರ್ಥವಾಗಿ ಬಳಸಿದ ಕವಿಗಳಲ್ಲಿ ಕಂಬಾರರು ಪ್ರಮುಖರು.
    ಕಂಬಾರರು, ಬೇಂದ್ರೆ, ಬೆಟಗೇರಿ ಅವರ ಪ್ರಭಾವವನ್ನು ಪಡೆದುಕೊಳ್ಳುತ್ತಲೇ ಕ್ರಮೇಣ ಆ ಪ್ರಭಾವದಿಂದ ಮುಕ್ತರಾಗಿ ಭಿನ್ನಮಾರ್ಗ ಹಿಡಿದರು; ಬೆಳೆದರು. ಭಾಷೆ, ಛಂದಸ್ಸು, ವಸ್ತು, ಪ್ರತಿಮೆ ಎಲ್ಲವೂ ಕಂಬಾರರ ಕಾವ್ಯದಲ್ಲಿ ಭಿನ್ನವಾಯಿತು.

    Original price was: $1.44.Current price is: $1.15.
    Add to basket
  • -40%

    ನೋಡಿರಿ ಧರ್ಮಜ ಫಲುಗುಣಾದಿಗಳು

    0

    ಯಕ್ಷಗಾನರಂಗದಲ್ಲಿ ಶಂಭು ಹೆಗಡೆ ಅಪರೂಪದ ವ್ಯಕ್ತಿ. ಮೇಳದ ಬಗೆಗೆ, ತಮ್ಮ ಮೇಳದ ಕಲಾವಿದರ ಬಗೆಗೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನ, ಸುದ್ದಿ, ಫೋಟೋ ಇತ್ಯಾದಿಗಳನ್ನು ಸಂಗ್ರಹಿಸಿಡುವ ಪ್ರವೃತ್ತಿಯುಳ್ಳವರು. ಅದೇ ಪ್ರವೃತ್ತಿಯು ಶಿವಾನಂದ ಹೆಗಡೆಯವರಲ್ಲೂ ಮುಂದುವರೆದಿದೆ. ಈ ಸಂಗ್ರಹದ ರಾಶಿಯಿಂದ ಆಯ್ದ ಲೇಖನಗಳನ್ನೆಲ್ಲಾ ಪ್ರಕಟಿಸುವುದೆಂದರೆ ಸಾವಿರಾರು ಪುಟಗಳೇ ಆದಾವು. ಹಾಗಾಗಿ ಅವುಗಳಿಂದ ಆಯ್ದ ಕೆಲವು ಲೇಖನಗಳನ್ನು ಮಾತ್ರ ಈ ಪುಸ್ತಕದಲ್ಲಿ ಪ್ರಕಟಿಸಲಾಗಿದೆ.

     
    ಯಕ್ಷಗಾನ ಚರಿತ್ರ್ರೆಯ ದೃಷ್ಟಿಯಿಂದ ಈ ತೆರನಾದ ಪುಸ್ತಕಕ್ಕೆ ಮಹತ್ವವಿದೆ. ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳು ಅಧ್ಯಯನಾಸಕ್ತರಿಗೆ ಪ್ರಯೋಜನಕಾರಿಗಳಾಗಿದ್ದರೂ ಅವುಗಳನ್ನು ಅರಸುವುದು ಶ್ರಮದಾಯಕ. ಆದರೆ ಪುಸ್ತಕ ರೂಪದಲ್ಲಿ ಬಂದರೆ ಸುಲಭವಾಗಿ ಲಭಿಸುತ್ತದೆ. ಅಧ್ಯಯನ ಮಾಡುವವರ ಶ್ರಮ, ಹಣ ಎರಡರ ಉಳಿತಾಯವೂ ಆಗುತ್ತದೆ. ಹಾಗಾಗಿ ಅಲ್ಲಲ್ಲಿ ಚದುರಿಕೊಂಡಿದ್ದ ಲೇಖನಗಳನ್ನು ಒಂದೆಡೆಗೆ ತರುವ ಪ್ರಯತ್ನ ಈ ಪುಸ್ತಕ.
     
    ಶಿವರಾಮ ಕಾರಂತರು, ಲಂಕೇಶ್, ತದ್ದಲಸೆ ಶರ್ಮಾ, ಲೈಫ್ 360 ಪತ್ರಿಕೆಯ ಬಿ.ಗಣಪತಿ ಹೀಗೆ ಹಿರಿಯ-ಕಿರಿಯ ಲೇಖಕರ ಬರವಣಿಗೆಯ ಗುಚ್ಛವೇ “ನೋಡಿರಿ ಧರ್ಮಜ ಫಲುಗುಣಾದಿಗಳು”
    Original price was: $1.44.Current price is: $0.86.
    Add to basket
  • -20%

    ಕಂಪನಿ ನಾಟಕ ಅರ್ಥಾತ್ ವೃತ್ತಿರಂಗಭೂಮಿ

    0

    ಕಂಪನಿ ನಾಟಕ ಅರ್ಥಾತ್ ವೃತ್ತಿರಂಗಭೂಮಿ

    ವೃತ್ತಿರಂಗಭೂಮಿಯ ತಲಸ್ಪರ್ಶಿಯಾದ ಅಧ್ಯಯನಗಳು ಕನ್ನಡದಲ್ಲಿ ವಿರಳ. ಹಾಗಿರುವಲ್ಲಿ ವೃತ್ತಿರಂಗಭೂಮಿಯು ಬೆಳೆದುಬಂದ ಬಗೆಗೆ ಅಧಿಕೃತ ಮಾಹಿತಿಗಳನ್ನು  ಇರಿಸಿಕೊಂಡು ಮಾಡಿದ ಈ ಅಧ್ಯಯನ ಮುಖ್ಯವಾಗುತ್ತದೆ. ಸ್ವತಹ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಶ್ರೀ ಪ್ರಕಾಶ ಗರುಡರು ರಂಗಭೂಮಿಯ ಏಳುಬೀಳುಗಳನ್ನು ಹತ್ತಿರದಿಂದ ಬಲ್ಲವರು. ಅವುಗಳನ್ನು ಮುಖ್ಯ ಆಕರವಾಗಿಸಿ ಐತಿಹಾಸಿಕವಾಗಿ ವೃತ್ತಿ ರಂಗಭೂಮಿಯ ಬೆಳವಣಿಗೆಯನ್ನು ಅವುಗಳ ವಿವಿಧ ಅಯಾಮಗಳನ್ನು ಗುರುತಿಸುವ ಪ್ರಯತ್ನ ಈ ಪುಸ್ತಕದಲ್ಲಿದೆ. ಹಾಗಾಗಿ ಈ ಬರೆಹ ವೃತ್ತಿರಂಗಭೂಮಿಯ ಸಂದರ್ಭದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

    Original price was: $3.12.Current price is: $2.50.
    Add to basket
  • -10%

    ಕೈಗೆ ಬಂದ ತುತ್ತು

    0

    ಕೈಗೆ ಬಂದ ತುತ್ತು 

    ‘ಕೈಗೆ ಬಂದ ತುತ್ತು’ ಆತ್ಮಕಥನದಲ್ಲಿ ಗುರುಪ್ರಸಾದ ತಾವು ವೃತ್ತಿ ಜೀವನದಲ್ಲಿ ಕಂಡ ಹಲವಾರು ಕುತೂಹಲಕಾರಿ ಘಟನೆಗಳನ್ನೂ, ಅಪರಾಧಗಳ ತನಿಖೆಯನ್ನೂ ರೋಚಕವಾಗಿ ಬಣ್ಣಿಸಿದ್ದಾರೆ. ತಾವು ಹತ್ತಿರದಿಂದ ಕಂಡ ರಾಜಮಹಾರಾಜರು, ಪ್ರಧಾನಿಗಳು, ಪತ್ರಕರ್ತರು ಹಾಗೂ ಸಿನಿಮಾ ರಂಗದವರ ವ್ಯಕ್ತಿಚಿತ್ರಗಳನ್ನು ತಮ್ಮ ಸರಳ ಸುಂದರ ಶೈಲಿಯಲ್ಲಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ.
    ಈ ಕೃತಿಯ ಪ್ರತಿ ಪುಟವೂ ರೋಮಾಂಚನಕಾರಿಯಾಗಿದ್ದು, ಗುರುಪ್ರಸಾದರ ಆತ್ಮಕಥನ ಇಂದಿನ ಯುವಪೀಳಿಗೆಗೆ ಪ್ರೇರಣೆಯಾಗುತ್ತದೆ. ಈ ಕೃತಿಯಲ್ಲಿ ಹಾಸ್ಯವಿದೆ. ಗಾಂಭೀರ್ಯವಿದೆ. ಕುತೂಹಲವಿದೆ. ರೋಮಾಂಚನವಿದೆ ಹಾಗೂ ವಿಷಾದವೂ ಇದೆ. ಸಂಗ್ರಹ ಯೋಗ್ಯ ಕೃತಿ ಇದು.

    Original price was: $3.00.Current price is: $2.70.
    Add to basket
  • -10%

    ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ

    0

    ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ

    ಕಾವ್ಯಮೀಮಾಂಸೆಯನ್ನು ಕುರಿತಂತೆ ಗಿರಿ ಅವರು ನಡೆಸುವ ವೈಜ್ಞಾನಿಕ ಶೋಧ, ಚಿಂತನೆ ಮಹತ್ವದ ಅಂಶಗಳನ್ನು ಹೊರ ಹಾಕುತ್ತದೆ. ಪ್ರಾಚೀನ ಭಾರತೀಯ ಮೀಮಾಂಸೆಯ ಸಾಧನೆಗಳನ್ನು ಮತ್ತು ಸಮಸ್ಯೆಗಳನ್ನು ಅಥವಾ ಕೊರತೆಗಳನ್ನು ಗಿರಿ ಅವರು ಶೋಧಿಸುತ್ತಾರೆ; ಸ್ಪಷ್ಟ ನಿಲುವಿನಲ್ಲಿ ಅವುಗಳನ್ನು ದಾಖಲಿಸುತ್ತಾರೆ.

    Original price was: $7.20.Current price is: $6.48.
    Add to basket
  • -10%

    ಮೆಲುಕು

    0

    ಮೆಲುಕು
    (ಲೇಖನಗಳು)

    ಈ ಪುಸ್ತಕವನ್ನು ಗಿರೀಶ ಕಾರ್ನಾಡ   ಅವರು ಬರೆದಿದ್ದಾರೆ.

    Original price was: $2.40.Current price is: $2.16.
    Add to basket
  • -10%

    ಕಣ್ಣಾ ಮುಚ್ಛೇ…. ಕಾಡೇ ಗೂಡೇ….

    0

    ಬಿ ಜಯಶ್ರೀ ಅವರಂತಹ ಶಕ್ತಿಯನ್ನು, ಸ್ವಾಭಿಮಾನಿಯನ್ನು, ಪ್ರತಿಭೆಯನ್ನು ಅಕ್ಷರಗಳಲ್ಲಿ ಬಂಧಿಸುವುದಾದರೂ ಹೇಗೆ? ನಾನು ಈ ಸವಾಲಿಗೆ ಮುಖಾಮುಖಿಯಾದಾಗಲೆಲ್ಲ ನನಗೆ ದೊಡ್ಡ ಬೆಂಬಲ ಮತ್ತು ಬೆನ್ನು ಚಪ್ಪರಿಸುವಂಥಾ ನಂಬಿಕೆಯ ಮಾತುಗಳು ಬಂದದ್ದು ಸ್ವತಃ ಜಯಶ್ರೀ ಅವರಿಂದ.

    Original price was: $3.00.Current price is: $2.70.
    Add to basket
  • -10%

    ಶೋಕಚಕ್ರ

    0

    ಶೋಕಚಕ್ರ

    ಮಹಾತ್ಮಾ ಗಾಂಧಿಯವರ ಚಳವಳಕ್ಕೆ ಪ್ರಾರಂಭವಾದದ್ದು ೧೯೨೦ರಲ್ಲಿ . ೧೯೨೪ರಲ್ಲಿ ೨೦ ನಿಮಿಷಗಳ ವರೆಗೆ ಅವರ ಸಂದರ್ಶವನ್ನು ಪಡೆದಿದ್ದೆ. ರಾಜಕೀಯಕ್ಕಿಂತ ಸಾಮಾಜಿಕ, ಅದಕ್ಕಿಂತ , ಅಂತರಂಗಿಕ  ಸುಧಾರಣೆ ಅಗತ್ಯ ಎಂಬುದನ್ನು ಆಗ ನಾನು ಕಲಿತುಕೊಂಡ ಪಾಠ.
    ಸ್ವಾತಂತ್ರ್ಯ ಪ್ರಾಪ್ತಿಯ ತರುವಾಯ ನಾನು ಬಹಳ ಆಶೆಯಿಂದ ಪರಿಸ್ಥಿತಿಯನ್ನು ನೋಡುತ್ತಲಿದ್ದೆ. ಯಾವುದೊ ಒಂದು ಕಾರಣಕ್ಕೆ ರಾಜಕೀಯ ಸ್ವಾತಂತ್ರ್ಯದ ಅವಸರವಿದ್ದು ಮಹಾತ್ಮಾಜಿಯವರು ಅದಕ್ಕೆ ಪ್ರಾಶಸ್ತ್ಯವನ್ನು ಕೊಟ್ಟಿದ್ದರು. ಈಗ ಆ ಜಂಜಾಟ ಮುಗಿಯುತ್ತಲ್ಲ? ಸಾವಿರಾರು ವರ್ಷಗಳಿಗೊಮ್ಮೆ ಅವತರಿಸುವ ಭಗವಂತನ ಅಂಶದಂತಿದ್ದ ಮಹಾತ್ಮಾಜಿಯವರಿಂದ ನಿಜವಾದ- ಅಂತರಂಗಿಕ-ಸುಧಾರಣೆ ಜನತೆಯಲ್ಲಿ ಮೂಡುವುದಲ್ಲ? ಹೀಗೆ ಉತ್ಸಾಹಗೊಳ್ಳುತ್ತಿರುವಾಗ ಜನವರಿ ೩೦, ೧೯೮೯ರ ದುರ್ಘಟನೆ ನಡೆದುಹೋಯಿತು. “ಜಗತ್ತಿನ ದೀಪ ನಂದಿತು.”
    ಈ ಸಂದರ್ಭದ ಹಿನ್ನಲೆಯಲ್ಲಿ ದೇಶದ ಚುನಾವಣಾ, ಸ್ಥಾನಿಕ ಮುಂದಾಳುಗಳ ಸಾಂಸ್ಕೃತಿಕ ಮಟ್ಟ ಇದನ್ನೆಲ್ಲ ನೋಡಿ ಮೂಡಿದ ಭಾವನೆಗಳೇ ಈ ‘ಶೋಕಚಕ್ರ ‘ ನಾಟಕದಲ್ಲಿ ಮೂಡಿದೆ. ಇಲ್ಲಿಯ ಆಯಾ ಪಾತ್ರಗಳೇ ಪರಿಸ್ಥಿತಿಯನ್ನು ಚನ್ನಾಗಿ ಚಿತ್ರಿಸುವುವು.

    Original price was: $0.72.Current price is: $0.65.
    Add to basket
  • -10%

    ಬೀಜದೊಳಗಣ ವೃಕ್ಷ

    0

    ಬೀಜದೊಳಗಣ ವೃಕ್ಷ

    ಶ್ರೀಮತಿ ಗೀತಾ ವಸಂತ ಅವರು ಬೇಂದ್ರೆ ಕಾವ್ಯದ ವಿರಾಟ್ ಸ್ವರೂಪದ ಬಗ್ಗೆ `ಬೀಜದೊಳಗಣ ವೃಕ್ಷ’ ಎಂಬ ಹೆಸರಿನಿಂದ ಅಧ್ಯಯನ ಗ್ರಂಥವೊಂದನ್ನು ಬರೆದು ಪ್ರಸ್ತುತ ಪಡಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಅವರು ತುಮಕೂರು ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧವನ್ನು ಸಲ್ಲಿಸಿ ಡಿ.ಲಿಟ್. ಪದವಿ ಪಡೆದಿದ್ದಾರೆ. ಅದನ್ನು ಓದುಗರಿಗೆ ಉಪಯೋಗವಾಗುವ ರೀತಿಯಲ್ಲಿ ಮಾರ್ಪಡಿಸಿ ಕೃತಿ ರಚಿಸಿದ್ದಾರೆ.

    Original price was: $2.16.Current price is: $1.95.
    Add to basket
  • -10%

    ತಾವರೆಯ ಬಾಗಿಲು

    0

    ‘ತಾವರೆಯ ಬಾಗಿಲು’ ಕಾವ್ಯ ಕುರಿತು 40 ಪ್ರಬಂಧಗಳ ಸಂಕಲನ

    Original price was: $2.40.Current price is: $2.16.
    Add to basket
  • -10%

    ಮತ್ತೊಬ್ಬ ರಾಧೆ

    0

    ಮತ್ತೊಬ್ಬ ರಾಧೆ
    (ಕೀರ್ತನಕಾರ್ತಿ ಗಲಗಲಿ ಅವ್ವನವರನ್ನು ಕುರಿತ ನಾಟಕ)

    ಈ ನಾಟಕವು ಹದಿನೆಂಟನೇ ಶತಮಾನದ ಕೀರ್ತನಕಾರ್ತಿ ಗಲಗಲಿ ಅವ್ವನವರನ್ನು ಕುರಿತದ್ದಾಗಿದೆ. ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿಯಲ್ಲಿ ಪ್ರಸಿದ್ಧ ಪಂಡಿತರಾಗಿದ್ದ ಗಲಗಲಿ ಮುದಗಲ್ಲಾಚಾರ್ಯರ ಕಿರುಪತ್ನಿಯಾಗಿ ರಮಾ ತನ್ನ ಹನ್ನೆರಡು ವರ್ಷದಲ್ಲಿಯೇ ಮದುವೆಯಾಗಿ ಗಲಗಲಿ ಗ್ರಾಮವನ್ನು ಪ್ರವೇಶಿಸಿದಳು. ಮದುವೆಯಾದ ಎಂಟು ದಿನಕ್ಕೇ ವಿಧವೆಯಾದಳು. ವಿಧವೆಯಾಗಿ ಬತ್ತಿ ಹೊಸೆಯದೆ, ನ್ಯಾಯಪಂಡಿತಳಾಗಿ ಪೇಶ್ವೇ ಅರಸರ ಪಂಡಿತರನ್ನು ಸೋಲಿಸಿ, ಪುಣೆಯ ಅರಸರಿಂದ ವರ್ಷಾಶನ ಪಡೆದಳು. ಅವ್ವನವರ ಮುನ್ನೂರು ಕೀರ್ತನೆಗಳು ಪ್ರಕಟವಾಗಿವೆ. ಕನ್ನಡದಲ್ಲಿ ಕೀರ್ತನೆ ರಚಿಸಿದ ಮೊದಲ ಮಹಿಳೆಯೆಂಬ ಹೆಗ್ಗಳಿಕೆಗೆ ಗಲಗಲಿ ಅವ್ವ ಸಾಕ್ಷಿಯಾಗಿದ್ದಾಳೆ. ಪುಟ್ಟ ವಿಧವೆಯಾಗಿ ಕಾಣಿಸಿಕೊಂಡ ಈ ಮಹಿಳೆ ಗಲಗಲಿ ಅವ್ವನಾಗಿ ಬೆಳೆದು ನಿಂತದ್ದು, ಅಧ್ಯಾತ್ಮ ಮತ್ತು ಸಾಹಿತ್ಯದಲ್ಲಿ ಮಹತ್ತರ ಸಾಧನೆ ಮಾಡಿದ್ದು ಈಗ ಚರಿತ್ರೆಗೆ ಸೇರಿದ ವಿಷಯವಾಗಿದೆ.
    ಗಲಗಲಿ ಅವ್ವನವರ ವೈಯಕ್ತಿಕ ಬದುಕಿನ ವಿವರಗಳನ್ನು ವಿವರಿಸುವುದು ಈ ನಾಟಕದ ಉದ್ದೇಶವಲ್ಲ. ಅವ್ವನನ್ನು ಒಂದು ಪ್ರತಿಮೆಯನ್ನಾಗಿಸಿಕೊಂಡು, ಶತಮಾನಗಳಿಂದ  ಸ್ತ್ರೀ ಈ ದೇಶವ್ಯವಸ್ಥೆಯಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಕುರಿತು ಚರ್ಚಿಸಲಾಗಿದೆ. ಹೆಣ್ಣೊಬ್ಬಳು ಅಧ್ಯಾತ್ಮದೆತ್ತರಕ್ಕೇರಿದ ಸ್ಥಿತಿಯನ್ನು ಗುರುತಿಸಲಾಗಿದೆ.

    Original price was: $0.84.Current price is: $0.76.
    Add to basket
  • -10%

    ಕಾಲು ದಾರಿಯ ಕಥನಗಳು

    0

    ಕಾಲು ದಾರಿಯ ಕಥನಗಳು
    (ಜಾನಪದ-ಜೀವನ-ಕಥನ)

    ಶ್ರೀ ಕೃಷ್ಣಮೂರ್ತಿ ಹನೂರು ಇವರ `ಕಾಲು ದಾರಿಯ ಕಥನಗಳು’ (ಜಾನಪದ-ಜೀವನ-ಕಥನ) ಕೃತಿಯನ್ನು ಚಂದಾದಾರರಿಗೆ ತಲುಪಿಸಲು ಸಂತೋಷವಾಗುತ್ತಿದೆ. ಶ್ರೀ ಹನೂರು ಅವರು ತಮ್ಮ ಜೀವನದ ಅಮೂಲ್ಯ ಭಾಗವನ್ನು ಜಾನಪದ ಜೀವನದೊಂದಿಗೆ ಕಳೆದು, ಅದು ನಶಿಸಿ ಹೋಗದಂತೆ ತಮ್ಮ ಅಕ್ಷರ ಸಾಹಿತ್ಯದ ಮೂಲಕ ಕೊನೆಯವರೆಗೂ ಉಳಿಯುವಂತೆ ನೋಡಿಕೊಂಡಿದ್ದಾರೆ. ಅವರಿಗೆ ಕನ್ನಡ ಸಾಹಿತ್ಯ ಋಣಿಯಾಗಿರಬೇಕು.

    Original price was: $3.12.Current price is: $2.81.
    Add to basket
  • -10%

    ಮ್ಯೂಟೇಶನ್

    0

    ಮ್ಯೂಟೇಶನ್
    (ಕಥಾಸಂಕಲನ)

    ಇದು ‘ಆರಾಮಕುರ್ಚಿ ಮತ್ತು ಕತೆಗಳು’ ನಂತರದ, ನನ್ನ ಎರಡನೆಯ ಕಥಾಸಂಕಲನವಾಗಿದೆ. ಈ ಕತೆಗಳನ್ನು ಬೇರೆ ಬೇರೆ ಕಾಲಘಟ್ಟದಲ್ಲಿ ಬರೆಯಲಾಗಿದೆ. ಸಣ್ಣಕತೆಗಳು ನನ್ನನ್ನು ತಿಳಿಗೊಳಿಸುತ್ತಾ ಬಂದಿವೆ. ಬರೆದಾದ ಮೇಲೆ ಅವುಗಳಲ್ಲಿ ನನ್ನ ಮುಖ ನೋಡುತ್ತಾ ಸಂತೋಷಪಟ್ಟಿದ್ದೇನೆ. ಅಲ್ಲಿ ಕಂಡ ಇತರ ಮುಖಗಳು ಕೂಡ ಅಚ್ಚರಿ ಹುಟ್ಟಿಸಿವೆ. ಬರೆಯುವ ಕ್ರಿಯೆಯೇ ನನ್ನನ್ನು ನಾನು ಶುದ್ಧೀಕರಿಸಿಕೊಳ್ಳುವ ಕ್ರಿಯೆಯಾಗಿದೆ. ಬರೆದಾದ ಮೇಲೆ ಅದು ಮೂಡಿಸುವ ಪ್ರಸನ್ನತೆ ಬಿಡುಗಡೆಯ ಭಾಗ್ಯ ಕೊಟ್ಟಿದೆ. ನಾಟಕ, ಕಾವ್ಯ ಸಾಹಿತ್ಯದ ಪ್ರಮುಖ ಅಂಗಗಳಾದರೂ ಕೂಡ, ಕತೆ-ಕಾದಂಬರಿ ಮಾತ್ರ ಪೂರ್ಣದೇಹಿಗಳಂತೆ ಕಂಡಿವೆ. ಬಹುತೇಕ ಓದುಗರು ಸಣ್ಣಕತೆಗಳಿಗೆ ಭೇಟಿಕೊಡುವಷ್ಟು, ಉಳಿದ ಪ್ರಕಾರಗಳಿಗೆ ಭೇಟಿ ಕೊಡಲಾರರು. ಸಣ್ಣಕತೆಯ, ಸಣ್ಣದೆನ್ನುವ ಭಾವನೆಯೇ ಮನುಷ್ಯನ ಸಾವನ್ನು ನೆನಪಿಸುತ್ತಿರಬಹುದು! ಹುಟ್ಟು ಸಾವಿನ ಮಧ್ಯದ ಬದುಕು ಬರಿ ಸಣ್ಣ ಕತೆಯಾಗಿರಬಹುದು! ಹೀಗಾಗಿ ಓದುಗರಿಗೆ ಇದರ ಬಗ್ಗೆ ವಿಲಕ್ಷಣವಾದ ಸೆಳೆತವಿದೆ.

    Original price was: $0.72.Current price is: $0.65.
    Add to basket
  • -10%

    ಇಣುಕಿದಲ್ಲಿ ಛಂದ

    0

    ಇಣುಕಿದಲ್ಲಿ ಛಂದ
    (ಲಲಿತ ಪ್ರಬಂಧಗಳು)

    ಕಾವ್ಯ ನನಗೆ ಮೌನಗಳ ಮೀಟುವ ಏಕತಾರಿ. ನಾಟಕ ಹಲವು ಸಮಸ್ಯೆಗಳ ಚಿಂತನೆಯ ಅನಾವರಣ. ಸುತ್ತಲಿನ ನನಗಿಷ್ಟವಾದದ್ದನ್ನೆಲ್ಲ ಎತ್ತಿಕೊಂಡು ತನ್ಮಯಳಾಗುವ ಖುಷಿ, ಲಲಿತ ಪ್ರಬಂಧ.
    ಎದುರಾಗುವ ಸನ್ನಿವೇಶ, ವ್ಯಕ್ತಿಗಳನ್ನು ರಾಗಭಾವಗಳಿಂದ ಪ್ರತ್ಯೇಕಿಸಿ ನವಿರು ಹಾಸ್ಯಕ್ಕೆ ಪ್ರತಿಮೆಯಾಗಿಸಿಯೂ, ಓರೆ ಕೋರೆಗಳ ಸಾಪೇಕ್ಷತೆಯನ್ನು ಈ ಪ್ರಪಂಚದ ಸಾರ್ವತ್ರಿಕ ಸಹಜ ನಡವಳಿಕೆಯಾಗಿ ಸ್ವೀಕರಿಸುವ ಆರೋಗ್ಯಕರ ಔದಾರ್ಯವೇ ಲಲಿತಪ್ರಬಂಧದ ಜೀವನಾಡಿ. ಯಾವುದೇ ಸಾಹಿತ್ಯಿಕ ಕಾಲಘಟ್ಟದ ಹಣೆಪಟ್ಟಿಯ ಹಂಗಿಲ್ಲದೆ ಹರಿವ ಹೊಳೆ ಲಲಿತ ಪ್ರಬಂಧ. ನನ್ನ ಬೊಗಸೆಯಲಿ ಹಿಡಿವಷ್ಟು ಸಲಿಲವನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. ಕನ್ನಡದಲ್ಲಿ ಗೊರೂರು, ವಿ. ಸೀ., ಪು.ತಿ.ನ., ಎ. ಎನ್. ಮೂರ್ತಿರಾಯರು, ಅ. ರಾ. ಮಿತ್ರ ಮುಂತಾದ ಲೇಖಕರು ಲಲಿತ ಪ್ರಬಂಧ ಪ್ರಕಾರವನ್ನು ಬೆಳೆಸಿದ್ದಾರೆ. ಮನೆಯ ಪುಸ್ತಕದ ರಾಶಿಯಲ್ಲಿ ಮೊದಲು ನನ್ನ ಕಣ್ಣಿಗೆ ಬಿದ್ದ ರಾ. ಕು. ಅವರ `ಗಾಳಿಪಟ’ ಪ್ರತಿಯೊಂದು ಮರು ಓದಿನಲ್ಲೂ ಅದೇ ಸಂತೋಷ ಕೊಡುವ ಕೃತಿ.

    Original price was: $2.40.Current price is: $2.16.
    Add to basket
  • -10%

    ಅತಿಥಿ ದೇವೋ ಭವ

    0

    ಅತಿಥಿ ದೇವೋ ಭವ
    (ಅತಿಥಿಯ ರಸಪ್ರಸಂಗಗಳು)

    ಸ್ವಾಮಿರಾವ ಕುಲಕರ್ಣಿಯವರ  `ಅತಿಥಿ ದೇವೋ ಭವ’ ಎಂಬ ಅತಿಥಿಯ ಅನುಭವಗಳ ರಸಪ್ರಸಂಗಗಳ ಕುರಿತಾಗಿ ಬರೆದ ಪ್ರಬಂಧಗಳ ಸಂಕಲನ.
    “ಕನ್ನಡ ಸಾಹಿತ್ಯದಲ್ಲಿ ಇದೊಂದು ಹೊಸ ಪ್ರಯೋಗದ ಅಪರೂಪದ ಸಾಹಿತ್ಯ ಪ್ರಕಾರವಾಗಿದೆ.” ೧೯೯೮ರಲ್ಲಿ ಪ್ರಕಟವಾದ ನನ್ನ `ರಂಗನಾಟಕದ ರಸಪ್ರಸಂಗಳು’- ರಂಗಾನುಭವದ ಕಿರುಲೇಖನಗಳ ಕೃತಿಯ ಬಗ್ಗೆ ಹಿರಿಯ ಸಾಹಿತಿ ದಿ. ಡಾ. ಹಾ. ಮಾ. ನಾಯಕರ ಮಾತುಗಳಿವು. ರಂಗಭೂಮಿಯ ಹಿರಿಯರಾದ ಮಾಸ್ಟರ್ ಹಿರಣ್ಣಯ್ಯನವರು “ನಾನೂ ಹಲವು ದಶಕಗಳಿಂದ ನಾಟಕ ಮಾಡತಿದ್ದೀನಿ. ಇಂತಹ ಅನೇಕ ಘಟನೆಗಳು, ಪ್ರಸಂಗಗಳು ನಡೆದಿವೆ. ನಿಮ್ಮ `ರಂಗನಾಟಕಗಳ ರಸಪ್ರಸಂಗಗಳು’ ಓದಿದ ಮೇಲೆ, ನಾನು ಇಂತಹ ಪ್ರಸಂಗಗಳನ್ನು ಬರೆಯದೇ ತಪ್ಪು ಮಾಡಿದೆ ಅನಿಸುತ್ತದೆ.’ ಈರ್ವರು ಹಿರಿಯರ ಈ ಮಾತುಗಳೇ `ಅತಿಥಿ ದೇವೋಭವ’ ಬರಹಕ್ಕೆ ಮೂಲ ಪ್ರೇರಣೆಯಾಗಿವೆ.

    Original price was: $0.84.Current price is: $0.76.
    Add to basket
  • -10%

    ಉತ್ತರ ವಿಹಾರ

    0

    ಉತ್ತರ ವಿಹಾರ
    (ಪ್ರವಾಸಕಥನ)

    ಕಳೆದ ಎರಡು ಮೂರು ವರ್ಷಗಳಲ್ಲಿ ದೇಶದ ಉತ್ತರ ಭಾಗಗಳಲ್ಲಿ ಕೈಗೊಂಡ ಪ್ರವಾಸದ ಫಲಸ್ವರೂಪ ಈ ಕೃತಿ. ಉತ್ತರಪ್ರದೇಶ ಮತ್ತು ಬಿಹಾರದ ಪ್ರಮುಖ ಪ್ರವಾಸಿ ತಾಣಗಳಲ್ಲದೆ, ಕಾಶ್ಮೀರ, ಉತ್ತರಾಖಂಡದ ಕೆಲವು ಪ್ರೇಕ್ಷಣೀಯ ಸ್ಥಳಗಳು ಹಾಗೂ ಪೂರ್ವಾಂಧ್ರ ಕುರಿತು ಎರಡು ಕಥನಗಳು ಕೃತಿಯಲ್ಲಿ ಸೇರಿವೆ. ಇವುಗಳಲ್ಲಿ ಕಾಶ್ಮೀರ ಪ್ರವಾಸ ಮಾತ್ರ ಸಹಕುಟುಂಬ ಪ್ರವಾಸವಾಗಿದ್ದರೆ, ಉಳಿದ ಪ್ರವಾಸಗಳು ಸಹೃದಯ ಸನ್ಮಿತ್ರರೊಂದಿಗೆ ಕೈಗೊಂಡ ಪ್ರವಾಸಗಳು. ನೋಡುವ ಕಣ್ಣಿಗೆ ಪ್ರತಿ ಪ್ರವಾಸವೂ ಒಂದು ಅಪೂರ್ವ ಅನುಭವವೆ. ಒಂದು ಪ್ರದೇಶದ ಇತಿಹಾಸ, ಭೂಗೋಳ, ಪರಂಪರೆ ಕುರಿತು ತೀವ್ರ ಆಸಕ್ತಿ ನನ್ನ ಪ್ರವಾಸ ಕಥನಗಳ ಹಿಂದಿನ  ಪ್ರೇರಕ ಶಕ್ತಿ. ಪ್ರತಿಯೊಂದು ವಿಶಿಷ್ಟ, ವಿಭಿನ್ನ. ನನ್ನ ಹಿಂದಿನ ಆರೂ ಪ್ರವಾಸ ಕಥನಗಳಿಗೆ ಓದುಗರಿಂದ ಒಳ್ಳೆಯ ಸ್ಪಂದನೆ ಸಿಕ್ಕಿದೆ.

    Original price was: $2.04.Current price is: $1.84.
    Add to basket
  • -10%

    ಮೊಲೆವಾಲು ನಂಜಾಗಿ

    0

    ಮೊಲೆವಾಲು ನಂಜಾಗಿ

    ಕತೆಗಳು

    ಶ್ರೀ ಮಲ್ಲಿಕಾರ್ಜುನ ಹಿರೇಮಠ

    ‘‘ಮೊಲೆವಾಲು ನಂಜಾಗಿ….’’ ಎಂಬ ಈ ಕಥಾ ಸಂಕಲನದ ತಲೆ ಬರಹವನ್ನು ಅವರು ಬಸವಣ್ಣನವರ ಒಂದು ವಚನದಿಂದ ಆಯ್ದುಕೊಂಡಿದ್ದಾರೆ. ಅಲ್ಲದೆ ಆ ಹೆಸರಿನ ಕಥೆಯೊಂದು ಈ ಸಂಕಲನದ ಕೇಂದ್ರದಲ್ಲಿಯೇ ಇದೆ. ‘‘ಅವನತಿ’’ ಕಥೆಯು ಮೇಲ್ನೋಟಕ್ಕೆ ಒಂದು ಗ್ರಾಮೀಣ ಪ್ರದೇಶದಲ್ಲಿಯ ಕಾಲೇಜಿನಲ್ಲಿ ನಡೆಯುವ ವಿದ್ಯಮಾನದಂತೆ ತೋರುತ್ತದೆ. ‘‘ತಯಾರಿ’’ ಕಥೆಯು  ಹೆಚ್ಚು ಜಟಿಲವಾಗಿದ್ದು ಕಥೆಯು ಸ್ತ್ರೀ ಕೇಂದ್ರಿತವಾಗಿದೆ. ವಿಧವೆಯೊಬ್ಬಳು ಮರುಮದುವೆಯಾಗಿದ್ದಾಳೆ. ಅವಳ ಮನೆಯವರ ವಿರೋಧದಿಂದಾಗಿ ಮತ್ತು ಗಂಡನ ತಂದೆ-ತಾಯಿಗಳಿಗೆ ಈ ಮದುವೆ ಸ್ವೀಕೃತವಾಗಿಲ್ಲವಾದುದರಿಂದ, ಪ್ರೀತಿಯ ಆಧಾರವೊಂದರಲ್ಲಿಯೇ ಅವರು ಬಾಳಬೇಕಾಗಿದೆ. ಆದರೆ ಪ್ರೀತಿಯೊಂದೇ ಆಧಾರವಾಗಿ ಬಾಳಬೇಕಿದ್ದ ಮಹಿಳೆಯು ತನ್ನ ಗಂಡನನ್ನೇ ಅರ್ಥಾತ್ ತನ್ನ ಪ್ರೀತಿಯನ್ನೇ ಕಳೆದುಕೊಂಡಾಗ ಬದುಕಲು ಅವಳು ಮಾಡಿಕೊಳ್ಳಬೇಕಾದ ಸಿದ್ಧತೆಯೇ ಈ ಕಥೆಯ ವಸ್ತು. ಸಂಕಲನದ ಕೊನೆಯ ಕಥೆ ‘‘ಮಾಗಿ’’ ಸ್ವಲ್ಪ ದೀರ್ಘವಾದ ಕತೆಯೆ. ಮೂವರು ಮಿತ್ರರು ಒಂದು ಪ್ರವಾಸದಲ್ಲಿ ತಮ್ಮನ್ನೇ ತಾವು ಗುರುತಿಸಿಕೊಳ್ಳುವ ವಿಧಾನವನ್ನು ಕುರಿತು  ಕಥೆಯು ಚಿಂತಿಸುತ್ತದೆ. 

    Original price was: $1.80.Current price is: $1.62.
    Add to basket
  • -10%

    ತುಕ್ಕಪ್ಪಾ ಮಾಸ್ತರ

    0

    ತುಕ್ಕಪ್ಪಾ ಮಾಸ್ತರ
    (ಕತೆಗಳು)

    ಶ್ರೀ ಚಂದ್ರಕಾಂತ ಕುಸನೂರ

    ಈ ಕೃತಿಯು ಶ್ರೀ ಚಂದ್ರಕಾಂತ ಕುಸನೂರರ ೮ ವಿಭಿನ್ನ ಕತೆಗಳನ್ನು ಒಳಗೊಂಡಿದೆ.

    Original price was: $1.20.Current price is: $1.08.
    Add to basket
  • -10%

    ಮಕರಂದ

    0

    ಮಕರಂದ:

    ಇದು ವಿ .ಎಸ್. ಕುಲಕರ್ಣಿ ಯವರ ಕವನ ಸಂಕಲನವಾಗಿದೆ.

    Original price was: $0.72.Current price is: $0.65.
    Add to basket