Gopal Wajapeyi

Gopal Wajapeyi

ಗೋಪಾಲ ವಾಜಪೇಯಿ 01 Jun 1951-20 Sep 2016 ಲಕ್ಷೆಶ್ವರದಲ್ಲಿ (ಗದಗ ಜಿಲ್ಲೆ) ಜನಿಸಿದರು. ‘ಸಂಯುಕ್ತ ಕರ್ನಾಟಕ’, ‘ಕರ್ಮವೀರ’ ಹಾಗೂ ‘ಕಸ್ತೂರಿ’ ಪತ್ರಿಕೆಗಳಲ್ಲಿ ಉಪಸಂಪಾದಕ ಸ್ಥಾನದಿಂದ ಸಂಪಾದಕ ಸ್ಥಾನದ ತನಕ ಮೂರು ದಶಕಗಳ ಸೇವೆ ಸಲ್ಲಿಸಿದ್ದರು.ಗೋಪಾಲ ವಾಜಪೇಯಿಯವರ ಪ್ರಕಟಿತ ಪುಸ್ತಕಗಳು: ದೊಡ್ಡಪ್ಪ, ನಂದಭೂಪತಿ, ಧರ್ಮ ಪುರಿಯ ಶ್ವೇತವೃತ್ತ, ಸಂತ್ಯಾಗ ನಿಂತಾನ ಕಬೀರ, ಆಗಮನ (ನಾಟಕ ಕೃತಿಗಳು); ಹಾಗೂ ‘ರಂಗದ ಒಳಹೊರಗೆ’ (ಅನುಭವ ಕಥನ), ಆಕಾಶವಾಣಿ, ರಂಗಭೂಮಿ ಹಾಗೂ ಕಿರುತೆರೆ ಚಲನಚಿತ್ರಗಳಲ್ಲಿ ಸಕ್ರಿಯರಾಗಿರುವ ಅವರು ನಾಟಕಕಾರ, ನಟ, ನಿರ್ದೇಶಕ, ನೇಪಥ್ಯಕರ್ಮಿ, ಸಂಘಟಕ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಪ್ರಸಿದ್ದರು. ‘ಸಂತ ಶಿಶುನಾಳ ಶರೀಫ’, ‘ಸಂಗ್ಯಾಬಾಳ್ಯಾ, ‘ನಾಗಮಂಡಲ’, ‘ಸಂತೆಯಲ್ಲಿ ನಿಂತ ಕಬೀರ’ ಇತ್ಯಾದಿ ಹಲವು ಚಲನಚಿತ್ರಗಳಿಗೆ ಸಂಭಾಷಣಕಾರ ರಾಗಿ, ಗೀತರಚನಕಾರರಾಗಿ ಕೆಲಸ ಮಾಡಿದ್ದಾರೆ.

Books By Gopal Wajapeyi