ಗರ್ಭಗುಡಿಯ ಶಿಶು ಚೇತನ
ಶ್ರೀಮತಿ ಪರಿಮಳಾರಾವ್ ಅವರು ಹನಿಗವನ, ಹಾಯಿಕುಗಳನ್ನಷ್ಟೇ ಅಲ್ಲ, ನೀಳ್ಗವನಗಳನ್ನು ಬರೆಯಬಲ್ಲರೆಂಬುದಕ್ಕೆ ‘ಗರ್ಭಗುಡಿಯ ಶಿಶುಚೇತನ’ ಎಂಬ ನೀಳ್ಗವನ ಒಂದು ಅತ್ಯುತ್ತಮ ನಿದರ್ಶನ. ಈ ಕವನದಲ್ಲಿ ಕವಿಯತ್ರಿ , ಕೂಸು, ತಾಯಿಯ ಗರ್ಭದಲ್ಲಿ ನವಮಾಸ ಇದ್ದಾಗ, ಬೆಳೆಯುವ ಆ ಕೂಸಿನ ಕಲ್ಪನೆ, ಹಾಗೂ ಮಾತೆಯ ಮಮತೆಯ ಭಾವನೆಗಳನ್ನು ತುಂಬಾ ಅಪ್ಮಾಯಮಾನವಾಗಿ ವರ್ಣಿಸಿದ್ದಾರೆ. ಸೃಷ್ಟಿಯ ಸೊಬಗಿನ ಸುಂದರ ಚಿತ್ರಣ ಇಲ್ಲಿದೆ.