ಮೋಹನ ಕುಂಟಾರ್ ಅವರು ತಮ್ಮ ಗುರುಗಳಾದ ಡಾ. ಪಾ.ಶ.ಶ್ರೀನಿವಾಸ ಅವರ ಬದುಕು-ಬರಹವನ್ನು ಕುರಿತ ಪುಸ್ತಕ ಇದು. ಮೊದಲ ಭಾಗದಲ್ಲಿ ಅವರ ವ್ಯಕ್ತಿತ್ವವನ್ನು ಹೃದ್ಯವಾಗಿ ನಿರೂಪಿಸಲಾಗಿದೆ. ಎರಡನೆಯ ಭಾಗವು ಅವರ ವಿದ್ವತ್ತನ್ನು ಅನಾವರಣಗೊಳಿಸಿದೆ. ವಿಷಯವನ್ನು ವಿಶಿಷ್ಟವಾಗಿ ಸಂಯೋಜಿಸಿದ್ದು ಉಪಶೀರ್ಷಿಕೆಗಳ ಮೂಲಕ ಗಮನ ಸೆಳೆಯುತ್ತದೆ. ಪಾ.ಶ.ಶ್ರೀನಿವಾಸ ಅವರೊಂದಿಗಿನ ಒಡನಾಟದ ಅನುಭವಗಳನ್ನು ಕುಂಟಾರ್ ಅವರು ಆತ್ಮೀಯವಾಗಿ ಸಹೃದಯರಿಗೆ ಪರಿಚಯಿಸಿದ್ದಾರೆ.