• -40%

    ವಚನವಲ್ಲಿ

    0

    ವಚನವಲ್ಲಿ
    ಶ್ರೀ ಉಮೇಶ ಮುನವಳ್ಳಿ
    ಈ ವಚನಗಳಲ್ಲಿ ಶ್ರೀಯುತರು ಪರಮ ಶಕ್ತಿ ಸಚ್ಛದಾನಂದ ಸ್ವರೂಪವೆನಿಸಿದ ಭಾವನೆಗಳನ್ನು ಮನೋಜ್ಞವಾಗಿ ಅರ್ಥೈಸಿದ್ದಾರೆ. ಪ್ರಸ್ತುತ ‘ವಚನವಲ್ಲಿ’ ಕನ್ನಡ ಇಂಗ್ಲೀಷ ಹಾಗೂ ಹಿಂದಿ ಬಾಷೆಗಳಲ್ಲಿ ನಿರೂಪಿತವಾಗಿರುವದು ಲೇಖಕರ ಬಹುಮುಖ ಪ್ರತಿಭೆ – ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ. ಇಂದಿನ ವಿಷಮ ಪರಿಸ್ಥಿತಿಯಲ್ಲಿ ಆಧ್ಯಾತ್ಮಿಕ ತಿಳುವಳಿಕೆಯನ್ನು ಪಡೆಯಲು ಈ ವಚನಗಳು, ಕಾರ್ಗತ್ತಲೆಯಲ್ಲಿ ಸಮುದ್ರ ಯಾತ್ರಿಕನಾಗಿ ದಿಕ್ಕನ್ನು ಹಾಗೂ ನೆಲೆಯನ್ನು ಸೂಚಿಸುವಂಥ ದೀಪಸ್ಥಂಭ lighthouse ಇದ್ದಂತೆ.

    Original price was: $0.96.Current price is: $0.58.
    Add to basket
  • -40%

    ಜಲಪಾತ

    0

    ಜಲಪಾತ
    ಕವಯತ್ರಿ ಶ್ರೀಮತಿ ಜಿ.ಆರ್. ಪರಿಮಳಾರಾವ್ ಅವರ ಜಲಪಾತದ ಭೋರ್ಗರೆತವನ್ನು ನೋಡಿದೆ. ಆ ಅಬ್ಬರದ ನಾದವನ್ನೂ ಕೇಳಿಸಿಕೊಂಡೆ! ಅಲ್ಲಿ ಅನುಭವದ ಹನೀ ಹನಿಯೂ ಶೇಖರವಾಗಿ ಹರಿಯುತ್ತಾ ಬಂದು ಮೋಹಕವಾಗಿ ತಡಸಲಾಗಿ ಅವರ್ಣನೀಯ ವಿನ್ಯಾಸ ಮೂಡಿಸಿದೆ. ಕವಿಯ ಮನೋಮಂಡಲದ ಶ್ವೇತ ಪರದೆಯ ಮೇಲೆ ವರ್ಣ ಚಿತ್ರ !
    ಸೃಜನಶೀಲತೆಯ ನೀರ್ಬೀಳಲ್ಲಿ ಮಧು ಮಧುರ ಕಾವ್ಯದ ಪದ ಪದದ ಅನನ್ಯ ಇಂಚರವಿದೆ. ಹರಿತದ ಮನೋಹರ ಸಂಚಾರವಿದೆ! ನೆಲ ಮುಗಿಲು ಮಣ್ಣು-ನೀರು ಸಂಬಂಧವಿದೆ. ವಾಗರ್ಥದ ಅದ್ವಿತೀಯ ಬೆಸುಗೆ ಇದೆ. ಒಟ್ಟಾರೆ ಕಾವ್ಯದ ಧಾರೆ ಧಾರೆಯಲ್ಲಿ ಬದುಕಿದೆ. ಬರಹ ಇದೆ! ತನಿ, ನುಡಿ, ತನಿ , ಅರ್ಥ, ತನಿತನಿ ಕವಿತೆಯ ಬೀವ ಜಲ ಇದೆ!

    Original price was: $0.96.Current price is: $0.58.
    Add to basket
  • -40%

    ಝೆನ್ ಹಾಯಿಕು

    0

    ಝೆನ್ ಹಾಯಿಕು
    ಬಹಿರಂಗದ ಹೊರೆತೆರೆಯನ್ನು ಸರಿಸಿ ಅಂತರಂಗದ ಮೆಟ್ಟಿಲಲ್ಲಿ ಇಳಿದು, ನನ್ನ ಹೃದಯ ಕೇಂದ್ರದಲ್ಲಿ ನೆಲೆ ನಿಂತಾಗ ಸ್ಪಂದಿಸಿವೆ ಈ ಝೆನ್ ಹಾಯಿಕುಗಳು.
    ಕೇಂದ್ರದಲ್ಲಿ ನೆಲೆ ನಿಂತಾಗ ಸ್ಪಂದಿಸಿವೆ ಈ ಝೆನ್ ಹಾಯಿಕುಗಳು.
    ಸ್ವಿಟ್ಜರ ಲ್ಯಾಂಡ್, ಐರ್ ಲ್ಯಾಂಡ್, ಜರ್ಮನಿ, ಇಟಲಿ, ವೆನೆಸ್, ಬೆಲ್ಜಿಯಂ, ಫ್ರಾನ್ಸ, ರೋಮ್ ಮುಂತಾದ ಯೂರೂಪಿನ್ ದೇಶಗಳನ್ನು, ಅಮೇರಿಕಾದ ಕೆಲವು ಭಾಗಗಳನ್ನು ನೋಡಿ ಕಿಂಚಿತ್ ಪ್ರಪಂಚ ಪರ್ಯಟನೆಯಲ್ಲಿ ಕಂಡ ಪ್ರಕೃತಿಯ ಅದ್ಭುತ ವೈಚಿತ್ರಗಳನ್ನು ನೋಡಿ, ನನ್ನ ಮನವು ಝೆನ್ ಎಳೆಯಲ್ಲಿ ಬಿಗಿದು ಮೂರು ಸಾಲಿನ, ಐದು, ತಾರು ಸಾಲಿನ ಹಾಯಿಕುಗಳನ್ನು ಪೋಣಿಸಿತು. ಈ ಭಾವನಾ ತರಂಗದಲ್ಲಿ ತೇಲಿ ನಾನು ಜೀವನ ದರ್ಶನ ಪಡೆದಿರುವೆ. ಈ ಹಾಯಿಕುಗಳ ಮಿಣುಕಿದೆ ಬೆಳಕು ನನ್ನ ಕೈಹಿಡಿದು ನಡೆಸುತ್ತಿದೆ. ನನ್ನಲ್ಲಿ ಚೈತನ್ಯ ತುಂಬಿಸಿ ಒಳ ಕಣ್ಣಿನ ದೃಷ್ಟಿಗೆ ಬೆಳಕು ನೀಡುತ್ತಿದೆ.
    -ಜಿ. ಆರ್. ಪರಿಮಳಾ ರಾವ್

    Original price was: $0.60.Current price is: $0.36.
    Add to basket
  • -40%

    ಮನೋನಂದನ

    0

    ಮನೋನಂದನ
    ಮನೋದೈಹಿಕ ಬೇನೆಗಳು ವಿಚಿತ್ರ ರೂಪಗಳನ್ನು ಪ್ರದರ್ಶಿಸುತ್ತವೆ. ಸರಿಯಾಗಿ ಅರ್ಥಮಾಡಿಕೊಳ್ಳಲು ಸುಮಾರು ತ್ರಾಸು ಆಗುತ್ತದೆ. “ಇಂತಿಂತಹ ರೋಗಿ ಈ ತೆರನಾಗಿ ತನ್ನ ಕಷ್ಟ ಹೇಳಿಕೊಂಡ. ಹೀಗಿರಬಹುದು ಎಂದು ನಾನು ತರ್ಕಮಾಡಿ , ನಿರ್ಣಯಿಸಿ ಚಿಕಿತ್ಸೆ ನಡೆಸಿದ. ಏನೂ ಪ್ರಯೋಜನವಾಗಲಿಲ್ಲ. ಕಡೆಗೆ, ಅನಿರೀಕ್ಷಿತವಾಗಿ ತಿಳಿದುಬಂದ ಸಂಗತಿಯಿಂದ ಗುಣವಾಯಿತು.
    ಮನಸ್ಸಿನ ದೃಢತೆಯನ್ನೂ ಸಮಾಧಾನವನ್ನೂ ಸಾಧಿಸಲು ಇರುವ ಎಲ್ಲ ಮಾರ್ಗಗಳನ್ನೂ ಅಲ್ಪಸ್ವಲ್ಪವಾದರೂ ಸರಳವಾಗಿ ತಿಳಿಸೋಣ” ಎನ್ನಿಸಿತು. ಅದನ್ನು ಬರೆದು ಹೋದಾಗ, ‘ಹುಡುಗಿಗಿಂತ ಹೆರಳೇ ಭಾರ’ ಎಂದ ಹಾಗೆ, ಈ ಭಾಗವೇ ಕತೆಗಳ ಭಾಗಕ್ಕಿಂತ ಭಾರವಾಯಿತು. ಕಲಿಯಬೇಕಾದರೆ ಇನ್ನೊಬ್ಬರಿಗೆ ಕಲಿಸಬೇಕು’ ಎಂಬ ಹಿರಿಯರ ನುಡಿಯ ಸತ್ಯವು ಮನದಟ್ಟಾಯಿತು. ನನಗಾದಂತೆಯೇ ಓದುಗರಾರಿಗಾದರೂ ಸಂದೇಹ ಬಂದರೆ, ಅವರೂ ನಾನು ಓದಿದ ಆಧಾರ ಗ್ರಂಥಗಳನ್ನು ಓದಿ ತಿಳಿದುಕೊಳ್ಳಲಿ ಎನ್ನಿಸಿತು.

    Original price was: $1.98.Current price is: $1.19.
    Add to basket
  • -40%

    ಮಿನುಗು ದೀಪ

    0

    ಮಿನುಗು ದೀಪ
    ಬದುಕಿನ ಶುಷ್ಕ ವಸ್ತುಗಳನ್ನು ಕಾವ್ಯರಸದಲ್ಲಿ ಅದ್ದಿ ಚಪ್ಪರಿಸಿ ಸವಿಯುವಂತೆ ಮಾಡುವ ಕಾವ್ಯ ಪಾಕ ಪ್ರವೀಣೆ ಇವರು. ನಮ್ಮ ಮುಂದಿರುವ ಪ್ರಕೃತ ಹನಿಗವನ ಸಂಕಲನದಲ್ಲಿ ‘ಮುಕ್ತಕಗೀತೆ’, ಮತ್ತು ‘ಚುಟುಕ’ಗಳ ಬಗೆಯವು. ಇಲ್ಲಿಯ ವಿಷಯಗಳ ಹರವು ಅಣುರೇಣುತೃಣದಿಂದ ಬ್ರಹ್ಮ ಬ್ರಹ್ಮಾಂಡ ಪರ್ಯಂತವಾದವು. ಅಡಿಗೆ ಮನೆ ಸೌಟಿನಿಂದ ಹಿಡಿದು, ಚಪ್ಪಲಿ, ಕುಂಚ, ಕಲ, ಬಲ, ಬೆಟ್ಟ, ಕಡಲು, ಗಗನ, ಅಳು- ನಗು, ಸೂರ್ಯ- ಚಂದ್ರ, ಗಂಡ- ಹೆಂಡತಿ, ಇರುವೆ- ಅನೆ, ನಾಯಿ- ನರಿ, ವಸ್ತುಗಳನ್ನು ಒಮ್ಮೆ ಚಕಮಕಿಯ ಬೆಳಕಾಗಿ ಮಿಂಚಾಗಿ , ಒಮ್ಮೆ ರಸಾರ್ದ್ರ ನುಡಿಯಾಗಿ , ಕಿಡಿಯಾಗಿ, ಲೇವಡಿಯಾಗಿ, ಉಪಹಸ್ಯವಾಗಿ, ಹಂಗಿಸಿ, ಭಂಗಿಸಿ, ನೇರವಾಗಿ , ವಕ್ರವಾಗಿ, ತಿರುಚಿ, ಮಣಿಸಿ, ಖಂಡಿಸಿ, ಮಂಡಿಸಿ, ಸಿಹಿಯಾಗಿ, ಒಗರಾಗಿ, ಖಾರವಾಗಿ, ಕಹಿಯಾಗಿ, ನಾನಾ ಕಲ್ಲಹರಳುಗಳನ್ನು ಎಸೆಯುತ್ತ, ಬಾಣಬಿರುಸು ಬಿಡುತ್ತ, ಪಟಾಕಿ – ಚಟಾಕಿಗಳನ್ನು ಹಾರಿಸುತ್ತ , ಕಾವ್ಯ ದಿಗಂತವನ್ನು ವಿಸ್ತರಿಸುತ್ತಾ ನಡೆದಿದ್ದಾರೆ.

    Original price was: $0.42.Current price is: $0.25.
    Add to basket
  • -40%

    ಅಲೆಯ ಆಲಾಪ

    0

    ಅಲೆಯ ಆಲಾಪ
    ಕನ್ನಡದಲ್ಲಿ ಇತ್ತೀಚೆಗೆ ಹೇರಳವಾಗಿ ಹನಿಗವನ, ಚುಟುಕುಗಳ ಸಾಹಿತ್ಯ ಸೃಷ್ಟಿಯಾಗಿದೆ. ತ್ರಿಪದಿ , ಮುಕ್ತಕ, ಚೌಪದಿಗಳು ಕೂಡ ಅಷ್ಟ ಜನ ಸಾಮಾನ್ಯರನ್ನು ಆಕರ್ಷಿಸಿದೆ. ಬೃಹತ್ತಾದುದನ್ನು , ಮಹತ್ತಾದದನ್ನು ಕಾಯಿಸಿ ಶೋಧಿಸಿ ಭಟ್ಟಿ ಇಳಿಸಿ ಮೂರು ಹ್ರಸ್ವ ಪಂಕ್ತಿಗಳಲ್ಲಿ ಹೇಳುವ ಯತ್ನಕ್ಕೆ ನನ್ನ ಮನ ಮುದಗೊಂಡಿತು.
    ನನ್ನ ಅನುಭವಗಳ, ನೆನಪುಗಳ , ಮನದ ಒಳಪುಗಳ ಸಾರೆಸರ್ವಸ್ವವನ್ನು ಹಿತಮಿತವಾಗಿ ಚಿತ್ರಿಸಲು ಯತ್ನಿಸಿದ್ದೇನೆ. ಪ್ರಾಸ ಎಲ್ಲಿ ಸಹಜವಾಗಿ ಬಂದಿದೆಯೋ ಅಲ್ಲಲ್ಲಿ ಅದನ್ನು ಬರಮಾಡಿಕೊಂಡಿದ್ದೇನೆ.
    ಇನ್ನು ಸುಂದರವಾದ ‘ಹೈಕು ಹಂದರದಲ್ಲಿ ಮನವು ವಾಯುವಿಹಾರ ಮಾಡುತ್ತದೆ ಬುವಿಬಾನ ದಾರಿಯಲಿ, ಜಪಾನಿನ ಹೈಕು ಕವಿತೆಗಳು ಮನದ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮಭಾವ ಪ್ರಚೋದಿಸಿ ಭಾವನೆಗೆ ಪ್ರತಿಷ್ಠಾಪನೆಯ ಮಂಟಪವನ್ನು ಕಟ್ಟತ್ತದೆ ಕೇವಲ ಮೂರು ಸಾಲುಗಳಲ್ಲಿ.
    ಈ ಪುಸ್ತಕದಲ್ಲಿ ಬರುವ ತ್ರಿಪದಿಗಳು
    ಅಲೆಯ ಆಲಾಪ
    ಮುಕ್ಕಾಲು ಪದ್ಯಗಳು
    ಹೈಕು – ಹಂದರ

    Original price was: $0.42.Current price is: $0.25.
    Add to basket
  • -40%

    ಅಂತರಂಗಯಾನ

    0

    ಅಂತರಂಗಯಾನ
    ಹೈಕುಗಳು ಸಹೃದಯರ ಹೃದಯವನ್ನು ಹಾಯ್ದು ಒಳನುಗ್ಗಿ ಚಿರವಾಗಿ ಅಲ್ಲೇ ಸೆರೆಯಾಗಿರಬಲ್ಲವು. ಏಕೆಂದರೆ ಇಲ್ಲಿನ ಕಾವ್ಯದ ವಿಚಾರಗಳಿಗೆ ಭಾವನೆಗಳಿಗೆ ಕಾಲವನ್ನು ಮೀರಿ ನಿಲ್ಲುವ ಸತ್ಯದ ಸ್ಪರ್ಶಗುಣವಿದೆ.
    ಈ ಕೃತಿಯಲ್ಲಿನ ವಿಷಯ ವ್ಯಾಪ್ತಿಯ ಹರಹು ತುಂಬ ವಿಶಾಲವಾದುದು. ಸೃಷ್ಟಿಯಲ್ಲಿನ ಪ್ರಕೃತಿ ಪರಿಸರದಿಂದ ಮೊದಲ್ಗೊಂಡು ದಿನಬಳಕೆಯ ಅತ್ಯಂತ ಪರಿಚಿತ ಸಾಮಾನ್ಯ ಸಂಗತಿಗಳವರೆಗೂ ಈ ಹೈಕುಗಳು ನಮ್ಮೊಂದಿಗೆ ಆಪ್ತವಾಗಿ ಸಂಭಾಷಿಸುತ್ತವೆ. ಊದುಕಡ್ಡಿ,, ಇರುವೆ, ಸೌಟು, ಕುಕ್ಕರ್, ಸಾಬೂನುಗುಳ್ಳೆ, ಗಾಳಿಪಟ…. ಕಡೆಗೆ ಸೋಪಿನಲ್ಲಿ ಸಿಕ್ಕ ಕೂದಲೆಳೆ… ಅದೇನೇ ಇರಲಿ, ಇವೆಲ್ಲ ಯಾವುದೊ ತತ್ವವೊಂದನ್ನು ಬಿಂಬಿಸುವ ಸತ್ವಶಾಲಿ ಸಾಲುಗಳಾಗಿ ಪರಿಣಮಿಸಿಬಿಡುತ್ತವೆ. ಅತಿಬಳಕೆಯಿಂದಾಗಿ ಗಮನಕ್ಕೇ ಬಾರದ ವಿಷಯವಸ್ತು ಕೂಡ ಇಲ್ಲಿ ಓದುಗನ ಗಮನ ಸೆಳೆದು ಸೃಷ್ಟಿವೈಚಿತ್ರ್ಯಕ್ಕೆ ನನ್ನ ನಮನ ಸಲ್ಲಿಸಿಬಿಡುತ್ತದೆ. ಇದು ನಿಜಕ್ಕೂ ಕವಯತ್ರಿಯಲ್ಲಿರುವ ಕಾವ್ಯ ಕೈಚಳಕವೇ ಸರಿ!

    Original price was: $0.60.Current price is: $0.36.
    Add to basket
  • -40%

    ಜ್ಞಾನವೃಕ್ಷ

    0

    ಜ್ಞಾನವೃಕ್ಷ
    (ಜೀವನ ಮತ್ತು ಬದುಕು)
    ಜೀವನ ಸಹಜ ಪ್ರಕೃತಿಯಾದರೆ ಬದುಕು ಸಂಸ್ಕಾರದಿಂದ ರೂಪುಗೊಂಡ ಪ್ರತಿಮೆ. ಧಾರ್ಮಿಕ,  ಸಾಮಾಜಿಕ, ವೈಜ್ಞಾನಿಕ, ಭೌತಿಕವೇ ಮೊದಲಾದ ಅನೇಕ ವಿಷಯಗಳನ್ನು ಕೈಗೆತ್ತಿಕೊಂಡು ಹಿಂದೂ, ಮುಸ್ಲಿಮ್ ಕ್ರಿಶ್ಚಿಯನ್, ಸಿಖ್, ಪಾರ್ಸಿ ಮುಂತಾದ ಜನಾಂಗಗಳಿಗೆ ಸಂಬಂಧಿಸಿದ ಗ್ರಂಥಗಳ ಜೊತೆಗೆ ತುಲನಾತ್ಮಕ ಅಧ್ಯಯನದಿಂದ ತಮ್ಮ ಪ್ರಬಂಧಗಳನ್ನು ಮಂಡಿಸುತ್ತಾರೆ. ಈ ಬಹುಮುಖ ಅಧ್ಯಯನ ಇಂದಿನ ಸಮಾಜಕ್ಕೆ ಬದುಕಿನ ಕನ್ನಡಿಯಾಗಿ ಬಾಳಿನ ಮುನ್ನುಡಿಯಾಗಿ ಓದುಗರನ್ನು ಮುನ್ನಡೆಸಲು ಸಹಾಯಕವಾಗಿದೆ.  ‘ಉಪವಾಸದ ಹಿನ್ನೆಲೆಯಲ್ಲಿ ಏಕಾದಶಿಯ ಮಹತ್ವ’ವನ್ನು ನಾನಾ ಬಗೆಯಾಗಿ ವಿಶ್ಲೇಷಿಸಿದ್ದಾರೆ.

    Original price was: $1.30.Current price is: $0.78.
    Add to basket
  • -40%

    ರೂಪಾಯಿಕ್ಕೊಂದ ಕವನ

    0

    ರೂಪಾಯಿಕ್ಕೊಂದ ಕವನ 
    ಇಲ್ಲಿಯ ಕವನಗಳು ತಮ್ಮದೇ ಆದ ದಾಟಿಯಲ್ಲಿ ಸಮಾಜಕ್ಕೆ ಕಿವಿಮಾತು. ಮಾಮಿರ್ಕವಾಗಿ ಚಾಟಿ ಏಟನ್ನು ನೀಡುವದರ ಜೊತೆಗೆ ಸಮಾಜ ತಿದ್ದುವ ಕೆಲಸವನ್ನು ಮಾಡಿದ್ದು ಕಂಡು ಬರುತ್ತದೆ. ಮುಂಬೈ ದಾಳಿ ತಿರುಗೇಟು ನಾನು ಮತ್ತು ನನ್ನ ಮನಸು ಈ ಕವಿತೆಗಳು ಮತ್ತು ಸ್ಥಿತಿಯನ್ನು ಯಥಾವತ್ತಾಗಿ ಚಿತ್ರಿಸಿದ್ದು ಬಿಸಿರೊಟ್ಟಿ ಕವನ ಆಸೆಯನ್ನು ಪೂರೈಸಿಕೊಳ್ಳಲು ಸಮಯ ಅಡ್ಡ ಗೊಡೆಯಾಗಿ ನಿಂತು ನಮಗೆ ಅನುದಿನದ ಬದುಕಿನಲ್ಲಿ ಹೇಗೆ ಛೇಡಿಸುತ್ತದೆ ಎಂದು ಮಾರ್ಮಿಕವಾಗಿ ಬರೆದಿದ್ದಾರೆ.
    ಕಾಲ ಎನ್ನುವ ಕವನದಲ್ಲಿ ಕಾಲ ಎಂದೂ ಯಾರೂ ಹೇಳಿದರೂ ನಿಲ್ಲದೇ ಓಡುವ  ಎಂದೂ ನಿಲ್ಲದ ಕಾಲನ ಆಟವನ್ನು ತುಂಬಾ ಚೆನ್ನಾಗಿ ಚಿತ್ರಿಸಲಾಗಿದೆ.

    Original price was: $0.72.Current price is: $0.43.
    Add to basket
  • -40%

    ಸುಂದರ ಭೂಮಿ

    0

    ಸುಂದರ ಭೂಮಿ
    (ಕವನ ಸಂಕಲನ)
    ಈ ಕವನಗಳಲ್ಲಿ ತಿಳಿಹಾಸ್ಯವಿದೆ, ಆಳವಾದ ಚಿಂತನ ಮಂಥನಗಳಿವೆ, ಎದೆ ತಲುಪಿ ಮನವರಳಿಸುವ ಸೂಕ್ಷ್ಮ ಸಂವೇದನಾ ಭಾವನೆಗಳಿವೆ, ಸಮಾಜ, ದೇಶದ ಭವಿಷ್ಯದ ಕುರಿತ ದುಗುಡ ಇದೆ, ಸ್ವಾರ್ಥಿಗಳ, ಆಷಾಢಭೂತಿಗಳ ವಿಡಂಬನೆಯಿದೆ. ಕೆಲವೇ ಸಾಲುಗಳಲ್ಲಿ ಓದುಗನನ್ನು ಸುದೀರ್ಘ ಚಿಂತನೆಗೆ ಹಚ್ಚಿ, ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸುವ ಗುಣ ಈ ಕವನಗಳಲ್ಲಿವೆ.

    Original price was: $0.72.Current price is: $0.43.
    Add to basket