ಬದುಕಲು ಅರ್ಹತೆ ಬೇಕು
(ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರು ನೀಡಿದ ಪ್ರವಚನಗಳ ಸಾರ ಸಂಗ್ರಹ)
ಒಂದು ಸಾಮಾನ್ಯ ಸಂಸ್ಥೆಯ ಸದಸ್ಯತ್ವವನ್ನು ಪಡೆಯಲು, ಒಂದು ಶಾಲೆಯನ್ನು ಸೇರಲು , ಗಳಿಸಲು ಒಂದು ನೌಕರಿಯನ್ನು ಪಡೆಯಲು . ಅವುಗಳಿಗೆ ತಕ್ಕ ಅರ್ಹತೆಯನ್ನು ಪಡೆಯಬೇಕು. ಹಾಗೆ ಅರ್ಹತೆ ಇದೆ ಎಂದು ಹೇಳುವ ಪ್ರವೇಶ ಪತ್ರವನ್ನು ತುಂಬಿ ಕೊಡಬೇಕು. ಅಗಾ ಸದಸ್ಯತ್ವ ಕೊಡಬೇಕೆ ಬೇಡವೇ ? ಶಾಲೆಗೆ ಸೆರಿಸಿಕೊಳ್ಳಬೇಕೆ ಬೇಡವೇ ? ನೌಕರಿಗೆ ಅರ್ಹನೆ ಎಂದು ವಿಚಾರಿಸುತ್ತಾರೆ. ಅಂಥದ್ದರಲ್ಲಿ ಭೂಮಿಯ ಮೇಲೆ ಹುಟ್ಟಿ ಬಂಡ ಮೇಲೆ, ಇಲ್ಲಿ ಬದುಕಲು ಅರ್ಹತೆಯನ್ನು ಪಡೆಯಲು ಪ್ರವೇಶಪತ್ರ ಬೇಡವೇ ?