• -40%

    ಸೇಡಿಯಾಪು ನೆನಪುಗಳು

    0

    ಈ ಪುಸ್ತಕವು ಪಂಡಿತ ಸೇಡಿಯಾಪು ಕೃಷ್ಣ ಭಟ್ಟ ಅವರ ಜೀವನದ ಅತೀ ಸಂಕ್ಷಪ್ತ ದೃಶ್ಯ ಸಾಗರದ ಬದಲು ಹನಿ ಮಾತ್ರ ಆದರೆ ಈ ಹನಿ ಪೃವೃತ್ತ ಧರ್ಮವನ್ನು ಭೋಧಿಸುವ ಜೀವನ ಸಾರ ಬಡತನ ಕಾಯಿಲೆ ಶಿಕ್ಷಣಾವಕಾಶರಾಹಿತ್ಯ ಪ್ರತಿಕೂಲ ಪರಿಸರ ಎಳೆಹರೆಯದ ಹುಡುಗನನ್ನು ಚಿರ ಅಂಧಕಾರಕ್ಕೆ ತಳ್ಳಲು ಈ ಒಂದೊಂದೇ ಸಾಕು. ಆದರೆ ಅವನ್ನು ಎದುರಿಸಿ ಅನೇಕ ಸಂಧರ್ಭಗಳಲ್ಲಿ ಅನುಕೂಲ ಬಲಗಳಾಗಿ ಮಾರ್ಪಡಿಸಿ ಸೇಡಿಯಾಪು ಎಂಬ ಸಣ್ಣದೋಣಿ ಬಾಳು ಎಂಬ ಕಡಲಯಾನ ತೊಡಗಿಯೇ ಬಿಟ್ಟಿತು. ‘ಈಸಬೇಕು ಇದ್ದು ಜೈಸಬೇಕು !’ ವಿವರಗಳನ್ನು ಇಲ್ಲಿ ಒಂದು ಜೀವಂತ ಕಾದಂಬರಿಯ ಧಾಟಿಯಲ್ಲಿ ಓದಬಹುದು. ವೈದೇಹಿ ಅವರು ಈ ಪುಸ್ತಕವನ್ನು ರಚಿಸಿದ್ದಾರೆ.

    Original price was: $1.32.Current price is: $0.79.
    Add to basket
  • -40%

    ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ

    0

    ಶ್ರೀ ಎಸ್. ದಿವಾಕರ್ ಅವರು “ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ’’ ಎಂಬ ಹೆಸರಿನಲ್ಲಿ ಜಗತ್ತಿನ ಅತಿ ಸಣ್ಣಕತೆಗಳನ್ನು ಸಂಗ್ರಹಿಸಿದ್ದಾರೆ. ಸುಮಾರು ೬೬ ಕತೆಗಳನ್ನು ಒಳಗೊಂಡಿರುವ ಈ ಹೊತ್ತಿಗೆ ಫ್ರಾನ್ಸ್, ರಷ್ಯಾ, ಪೋರ್ಚುಗೀಸ್, ಸ್ಪ್ಯಾನಿಶ್, ಅಮೆರಿಕ, ಸ್ವಿಡನ್, ದಕ್ಷಿಣ ಆಫ್ರಿಕಾ, ಅರ್ಜೆಂಟೀನಾ, ಇಸ್ರೆಲ್, ಗ್ರೀಸ್, ಹಂಗೇರಿ ಇನ್ನೂ ಹಲವಾರು ದೇಶಗಳ ಲೇಖಕರ ಕತೆಗಳನ್ನು ಕನ್ನಡಕ್ಕೆ ತಂದಿರುವುದು ಲೇಖಕರ ಎಲ್ಲ ಭಾಷೆಯ, ಎಲ್ಲ ಕಾಲದ, ಎಲ್ಲ ರೀತಿಯ ಬರಹಗಳ ಆಸಕ್ತಿಯನ್ನು ತಿಳಿಸುವಂತದ್ದು.

    Original price was: $1.92.Current price is: $1.15.
    Add to basket
  • -40%

    ದೇಸಗತಿ

    0

    ದೇಸಗತಿ ಇದು ಶ್ರೀ ರಾಘವೇಂದ್ರ ಪಾಟೀಲರು ಬರೆದ ಕಥೆಗಳನ್ನೊಳಗೊಂಡಿದೆ. ಇದು ದೇಸಿ ಕಥೆಗಳಾಗಿವೆ. ಇವುಗಳಲ್ಲಿ ಹಳ್ಳಿಯ ಭಾಷೆ, ಜೀವನ ಅಡಕವಾಗಿದೆ.

    Original price was: $1.56.Current price is: $0.94.
    Add to basket
  • -40%

    ಅವ್ಯಕ್ತ

    0

    ಮನುಷ್ಯರು ಸೋತಾಗಲೆಲ್ಲಾ ಅವರ ಅಸಹಾಯಕತೆಯನ್ನೇ ಇತರರು ಉಪಯೋಗಿಸಿ ಮನುಷ್ಯರೇ ಮನುಷ್ಯರನ್ನು ಹಣಿಸುತ್ತಾ ಎದ್ದೇಳದಂತೆ ನೋಡುವುದು ಒಂದು ಸಾಮಾನ್ಯ ಸಂಗತಿ. ಮನಸ್ಸಿನಲ್ಲಿ ಹೊಳಹುಹಾಕಿದ ಈ ವಿಚಾರಗಳು ಆಕೃತಿ ಪಡೆದು ಕಾದಂಬರಿಯಾಗಿದೆ.

    Original price was: $1.56.Current price is: $0.94.
    Add to basket
  • -40%

    ಕೇರಳ ಕಾಂತಾಸಮ್ಮಿತ

    0

    ಶ್ರೀಮತಿ ಕಮಲಾ ಹೆಮ್ಮಿಗೆ ಅವರು ಭಾಷಾಂತರಿಸಿದ ಮಲೆಯಾಳಂ ಕತೆಗಳ ಸಂಕಲನ “ಕೇರಳ ಕಾಂತಾಸಮ್ಮಿತ”. ಯಾವದೇ ಸಂಸ್ಕೃತಿಯ ಅತ್ಯಂತ ಸೂಕ್ಷ್ಮ ಸೂಚಕವನ್ನು (cultural index) ಗುರುತಿಸಿಕೊಳ್ಳಬೇಕೆನ್ನುವುದಾದರೆ ಆ ಸಂಸ್ಕೃತಿಯ ಸ್ತ್ರೀಸಂವೇದನೆ, ಸ್ತ್ರೀ-ಪ್ರಜ್ಞೆಗೆ ಹೋಗಬೇಕಾಗುತ್ತದೆ. ಯಾಕೆಂದರೆ, ಸ್ತ್ರೀಯರು ನಿಜವಾದ ಅರ್ಥದಲ್ಲಿ ಸಂಸ್ಕೃತಿಯ ಕಷ್ಟೋಡಿಯನ್ ಆಗಿರುತ್ತಾರೆ. ಸ್ತ್ರೀ ಸಂವೇದನೆಯ ಅಭಿವ್ಯಕ್ತಿ ಮಾಧ್ಯಮಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವುದರಿಂದ ಆಯಾ ಸಂಸ್ಕೃತಿಯ ಆರೋಗ್ಯ-ಅನಾರೋಗ್ಯ, ತೃಪ್ತಿ-ಅತೃಪ್ತಿ, ಸುಭಗತೆ-ತಳಮಳ, ಸಮತೋಲ-ಅಸಮತೋಲಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಕಮಲಾ ಹೆಮ್ಮಿಗೆಯವರು ತಮ್ಮ ಈ – “ಕೇರಳ ಕಾಂತಾಸಮ್ಮಿತ” ಸಂಕಲನದಲ್ಲಿ, ಇಪ್ಪತ್ತನೆಯ ಶತಮಾನದ ಮಲೆಯಾಳೀ ಭಾಷೆಯ ಮಹತ್ವದ ಮಹಿಳಾ ಕಥೆಗಳನ್ನು ಸಂಗ್ರಹಿಸಿ ಕೊಡುವ ಮೂಲಕ ಮಲೆಯಾಳೀ ಸಂಸ್ಕೃತಿಯಲ್ಲಿನ `ಸ್ತ್ರೀ ಸಂವೇದನಾ ಸಂಚಯ’(mass of feminine conscience)ವನ್ನು ಸೃಷ್ಟಿಮಾಡಿ ಕೊಟ್ಟಿದ್ದಾರೆ.

    Original price was: $3.12.Current price is: $1.87.
    Add to basket
  • -40%

    ಓ ಹೆನ್ರಿ ಕಥೆಗಳು

    0

    ವಿಲಿಯಂ ಸಿಡ್ನೆ ಪೋರ್ಟರ್ (1862-1910) ಅಮೇರಿಕೆಯ ಅತ್ಯಂತ ಪ್ರಸಿದ್ಧ ಸಣ್ಣ ಕಥೆಗಳ ಲೇಖಕ. ಅವನ ಕಾವ್ಯನಾಮ ಓ-ಹೆನ್ರಿ. ಆತ ಆರುನೂರಕ್ಕೂ ಹೆಚ್ಚು ಕಥೆಗಳನ್ನು ರಚಿಸಿದ ಪ್ರತಿಭಾವಂತ. ಅವನು ಹಣದ ದುರುಪಯೋಗ ಮಾಡಿದ ಅಪರಾಧಕ್ಕಾಗಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವಾಗ ಕಥೆಗಳನ್ನು ಬರೆಯಲು ಪ್ರಾರಂಭಿಸಿದ. ಓ-ಹೆನ್ರಿಯ ಕಥೆಗಳ ವಿಶೇಷತೆ ಹಾಗೂ ಹೆಗ್ಗುರುತೆಂದರೆ ಅವುಗಳ ಆಶ್ಚರ್ಯಕರವಾದ ಅಂತ್ಯ. ಅವನ ಕಥೆಗಳಲ್ಲಿ ಕಂಡುಬರುವ ಅನಿರೀಕ್ಷಿತ ಬದಲಾವಣೆಗಳು ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುತ್ತವೆ. ಓ-ಹೆನ್ರಿಯ ಕಥೆಗಳು ಅಮೇರಿಕೆಯ ಸಾಮಾನ್ಯ ಹಾಗೂ ಅತಿಸಾಮಾನ್ಯ ಜನರ ಅಪೇಕ್ಷೆಗಳನ್ನು, ಆಕಾಂಕ್ಷೆಗಳನ್ನು, ಹತಾಶೆಗಳನ್ನು, ಸಂಭ್ರಮಗಳನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸುತ್ತವೆ. ಪ್ರತಿಯೊಂದು ಕಥೆಯೂ ಮನುಷ್ಯ ಸ್ವಭಾವದ ಒಳನೋಟಗಳನ್ನು ನೀಡುತ್ತ, ಆ ಸ್ವಭಾವ, ಬದುಕಿನ ಅನಿವಾರ್ಯ ಹೋರಾಟಗಳ ಫಲಶೃತಿಗಳಾದ ಪ್ರೀತಿ, ದ್ವೇಷ, ಬಡತನ, ಆತ್ಮಗೌರವ, ಮೋಸ, ಅಪರಾಧಗಳಿಂದ ಬದಲಾಗುವುದನ್ನು ಹೃದಯಕ್ಕೆ ಮುಟ್ಟುವಂತೆ ತಲುಪಿಸುತ್ತದೆ. ಈ ಕಥಾಸಂಕಲನದಲ್ಲಿ ಓ ಹೆನ್ರಿಯ ಪ್ರಾತಿನಿಧಿಕ ಇಪ್ಪತ್ತು ಅನುವಾದಿತ ಕಥೆಗಳಿವೆ.

    Original price was: $1.92.Current price is: $1.15.
    Add to basket
  • -40%

    ಉಮೇದುವಾರರು

    0

    ಡಾ. ಲೋಹಿತ್ ನಾಯ್ಕರ ರಾಜಕೀಯ ಕಾದಂಬರಿ “ಉಮೇದುವಾರರು”.
    ಡಾ. ಲೋಹಿತ್ ನಾಯ್ಕರ ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದರಿಂದ ರಾಜಕೀಯದ ಒಳಹೊರಗನ್ನು ಬಲ್ಲವರಾಗಿದ್ದಾರೆ. ಹಾಗಾಗಿ ಅವರ ಅನುಭವದ ಮೂಸೆಯಿಂದ ಹೊರಬಂದಿರುವ ಈ ಕಾದಂಬರಿಯ ಕಥಾವಸ್ತುವಿಗೆ ಮತ್ತು ಇಲ್ಲಿನ ಪಾತ್ರಗಳಿಗೆ ಅಧಿಕೃತತೆ ದಕ್ಕಿರುವುದರಿಂದ ಕೃತಿಯ ಘನತೆಯನ್ನು ಹೆಚ್ಚಿಸಿದೆ. ಹೈದರಾಬಾದ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದಲ್ಲಿ ಎರಡು ರಾಜಕೀಯ ಕುಟುಂಬಗಳಲ್ಲಿ ನಡೆಯುವ ಹಗ್ಗಜಗ್ಗಾಟದ ಜೊತೆಗೆ ಮಧ್ಯ ಕರ್ನಾಟಕದಲ್ಲಿ ಹಣ, ಹೆಂಡ ಮತ್ತು ಸಾರಾಯಿ ಇವುಗಳ ಜೊತೆಗೆ ಜಾತಿವ್ಯವಸ್ಥೆ ಹೇಗೆ ರಾಜಕೀಯ ದಾಳಗಳಾಗಬಲ್ಲವು ಎಂಬುದನ್ನು ಅತ್ಯಂತ ನವಿರಾದ ಹಾಗೂ ಲವಲವಿಕೆಯ ಭಾಷೆಯಲ್ಲಿ ಲೋಹಿತ್ ಹಿಡಿದಿಟ್ಟಿದ್ದಾರೆ.

    Original price was: $3.00.Current price is: $1.80.
    Add to basket
  • -40%

    ಸಾವಿನ ಸೆರಗಿನಲ್ಲಿ

    0

    ನಿವೃತ್ತ ಪೋಲೀಸ್ ಮಹಾನಿರ್ದೇಶಕರಾದ ಡಾ. ಡಿ. ವಿ. ಗುರುಪ್ರಸಾದರು “ಸಾವಿನ ಸೆರಗಿನಲ್ಲಿ” ಎಂಬ ಕುತೂಹಲಕಾರಿ ಕೃತಿಯನ್ನು ರಚಿಸಿದ್ದಾರೆ. ಮರಣದಂಡನೆಗೀಡಾದ ಪ್ರತಿಯೊಬ್ಬ ಕೈದಿಯನ್ನು ಜೈಲಿನಲ್ಲಿ ಸಂದರ್ಶನ ಮಾಡಿ ಅಪರಾಧಿಗಳ ಮನಸ್ಸಿನ ಒಳಸುರುಳಿಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟು ಪಾಪಿಗಳ ಲೋಕಕ್ಕೆ ಕ್ಷ-ಕಿರಣವನ್ನು ಬೀರಿದ್ದಾರೆ. ಒಟ್ಟು 14 ಕತೆಗಳು ಇಲ್ಲಿ ನಿರೂಪಿಸಿದ್ದಾರೆ.

    Original price was: $2.40.Current price is: $1.44.
    Add to basket
  • -40%

    ಕೇತಕಿಯ ಬನ

    0

    ಕೇತಕಿಯ ಬನ
    ಈ ಪುಸ್ತಕವು ಶ್ರೀಧರ ಬಳಗಾರ ಅವರು ಬರೆದ ಕಾದಂಬರಿ ಆಗಿದೆ .

    Original price was: $1.44.Current price is: $0.86.
    Add to basket
  • -40%

    ಪ್ರೇಯಸಿಗೆ ಪತ್ರಗಳು

    0

    ಪ್ರೇಯಸಿಗೆ ಪತ್ರಗಳು:
    ಈ ಪುಸ್ತಕವು ಕೃಷ್ಣಾ ನಂದ ಕಾಮತರ ಪತ್ರ ಸಂಕಲನವನ್ನು ಒಳಗೊಂಡಿದೆ.

    Original price was: $0.96.Current price is: $0.58.
    Add to basket
  • -40%

    ತ್ರಸ್ತ

    0

    ತ್ರಸ್ತ
    ಈ ಪುಸ್ತಕವು ರೇಖಾ ಕಾಖಂಡಕಿ ಅವರು ಬರೆದ ಕಾದಂಬರಿಯಾಗಿದೆ.

    Original price was: $1.56.Current price is: $0.94.
    Add to basket
  • -40%

    ಬಿಳಿ ಸಾಹೇಬನ ಭಾರತ

    0

    ಬಿಳಿ ಸಾಹೇಬನ ಭಾರತ

    ಈ ಪುಸ್ತಕವು ಎನ್ ಜಗದೀಶ್ ಕೊಪ್ಪ  ಅವರು ಅನುವಾದಿಸಿದ ಜಿಮ್ ಕಾರ್ಬೆಟ್  ಅವರ

    ಜೀವನಗಾಥೆ.

    Original price was: $1.08.Current price is: $0.65.
    Add to basket
  • -40%

    ರಾಕ್ಷಸ-ತಂಗಡಿ

    0

    ರಾಕ್ಷಸ-ತಂಗಡಿ

    ಗಿರೀಶ ಕಾರ್ನಾಡ  ಅವರು ರಚಿಸಿದ ನಾಟಕ.

    Original price was: $1.44.Current price is: $0.86.
    Add to basket
  • -40%

    ಕಾಡಿನ ದಾರಿ

    0

    ಕಾಡಿನ ದಾರಿ

    ಶ್ರೀ ಜಿ. ಪಿ. ಬಸವರಾಜು ಅವರ  ಕಾದಂಬರಿ.

    Original price was: $1.32.Current price is: $0.79.
    Add to basket
  • -40%

    ಮೀಸೆ ಮಾವ

    0

    ಮೀಸೆ ಮಾವ

    ಮೀಸೆ ಮಾವ- ಶ್ರೀ ಭಾಸ್ಕರ ಹೆಗಡೆಯವರ ಕಥಾಸಂಕಲನ .

    Original price was: $1.56.Current price is: $0.94.
    Add to basket
  • -40%

    ಅಕ್ಷರ ಚಿತ್ರಗಳು

    0

    ಅಕ್ಷರ ಚಿತ್ರಗಳು

    ಇದು ಹಿರಿಯ ಲೇಖಕರ ವ್ಯಕ್ತಿ ಚಿತ್ರಗಳನ್ನು ಒಳಗೊಂಡಿದೆ.

    Original price was: $1.56.Current price is: $0.94.
    Add to basket
  • -40%

    ಒಂದು ಪುಟದ ಕಥೆ

    (3.00)
    1

    ಒಂದು ಪುಟದ ಕಥೆ
    (ಆತ್ಮಕಥನ)

    ಒಂದು ಪುಟದ ಕಥೆ ಇದು ಶ್ರೀ ವಿ.ಎಸ್. ಖಾಂಡೇಕರ ಅವರ ಆತ್ಮಕಥೆಯಾಗಿದೆ.

    Original price was: $5.40.Current price is: $3.24.
    Add to basket
  • -40%

    ತುಕ್ಕಪ್ಪಾ ಮಾಸ್ತರ

    0

    ತುಕ್ಕಪ್ಪಾ ಮಾಸ್ತರ
    (ಕತೆಗಳು)

    ಶ್ರೀ ಚಂದ್ರಕಾಂತ ಕುಸನೂರ

    ಈ ಕೃತಿಯು ಶ್ರೀ ಚಂದ್ರಕಾಂತ ಕುಸನೂರರ ೮ ವಿಭಿನ್ನ ಕತೆಗಳನ್ನು ಒಳಗೊಂಡಿದೆ.

    Original price was: $1.20.Current price is: $0.72.
    Add to basket
  • -40%

    ಮೂಕ ಹಕ್ಕಿಯ ಹಾಡು

    0

    ಮೂಕ ಹಕ್ಕಿಯ ಹಾಡು
    (ಆತ್ಮಕಥನ)

    ಕನ್ನಡಕ್ಕೆ
    ಡಾ. ಎನ್. ಜಗದೀಶ್ ಕೊಪ್ಪ

    ಪಾಕಿಸ್ತಾನದ ಹೆಣ್ಣು ಮಗಳು ಮುಕ್ತರ್ ಮಾಯಿಯ ಆತ್ಮಕಥನ `ಮೂಕ ಹಕ್ಕಿಯ ಹಾಡು’.

    ಡಾ. ಎನ್. ಜಗದೀಶ್ ಕೊಪ್ಪ ಅವರು ಆಂಗ್ಲ ಮೂಲದಿಂದ ಅನುವಾದಿಸುವ `ಮೂಕ ಹಕ್ಕಿಯ ಹಾಡ`” ಕೃತಿಯು ಮುಖ್ತಾರ್ ಮಾಯಿಯ ತೀರಾ ಭಿನ್ನವಾದ ದಾರುಣ ಬದುಕನ್ನು ನಮ್ಮ ಮುಂದೆ ತೆರೆದಿಡುವ ಕೃತಿಯಾಗಿದೆ. ಪಾಕಿಸ್ತಾನದ ಕೆಳವರ್ಗದ ಕೃಷಿ ಕುಟುಂಬದಲ್ಲಿ ಬೆಳೆದ ಅನಕ್ಷರಸ್ಥ ಹೆಣ್ಣು ಮಗಳು ಮುಖ್ತಾರ್ ಮಾಯಿ ಸಾಮೂಹಿಕ ಅತ್ಯಾಚಾರದಂತಹ ಕ್ರೌರ್ಯಕ್ಕೆ ಬಲಿಯಾದ ನಂತರ ಅನುಭವಿಸುವ ತೊಳಲಾಟಗಳನ್ನೆಲ್ಲಾ ಮೀರಿಯೂ ಆಕೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದ ಹಿಂದೆ ದೂರ ದೃಷ್ಟಿ ಮತ್ತು ಪ್ರಬುದ್ಧತೆ ಇದೆ.

    Original price was: $1.32.Current price is: $0.79.
    Add to basket
  • -52%

    ಮೊಲೆವಾಲು ನಂಜಾಗಿ

    0

    ಮೊಲೆವಾಲು ನಂಜಾಗಿ

    ಕತೆಗಳು

    ಶ್ರೀ ಮಲ್ಲಿಕಾರ್ಜುನ ಹಿರೇಮಠ

    ‘‘ಮೊಲೆವಾಲು ನಂಜಾಗಿ….’’ ಎಂಬ ಈ ಕಥಾ ಸಂಕಲನದ ತಲೆ ಬರಹವನ್ನು ಅವರು ಬಸವಣ್ಣನವರ ಒಂದು ವಚನದಿಂದ ಆಯ್ದುಕೊಂಡಿದ್ದಾರೆ. ಅಲ್ಲದೆ ಆ ಹೆಸರಿನ ಕಥೆಯೊಂದು ಈ ಸಂಕಲನದ ಕೇಂದ್ರದಲ್ಲಿಯೇ ಇದೆ. ‘‘ಅವನತಿ’’ ಕಥೆಯು ಮೇಲ್ನೋಟಕ್ಕೆ ಒಂದು ಗ್ರಾಮೀಣ ಪ್ರದೇಶದಲ್ಲಿಯ ಕಾಲೇಜಿನಲ್ಲಿ ನಡೆಯುವ ವಿದ್ಯಮಾನದಂತೆ ತೋರುತ್ತದೆ. ‘‘ತಯಾರಿ’’ ಕಥೆಯು  ಹೆಚ್ಚು ಜಟಿಲವಾಗಿದ್ದು ಕಥೆಯು ಸ್ತ್ರೀ ಕೇಂದ್ರಿತವಾಗಿದೆ. ವಿಧವೆಯೊಬ್ಬಳು ಮರುಮದುವೆಯಾಗಿದ್ದಾಳೆ. ಅವಳ ಮನೆಯವರ ವಿರೋಧದಿಂದಾಗಿ ಮತ್ತು ಗಂಡನ ತಂದೆ-ತಾಯಿಗಳಿಗೆ ಈ ಮದುವೆ ಸ್ವೀಕೃತವಾಗಿಲ್ಲವಾದುದರಿಂದ, ಪ್ರೀತಿಯ ಆಧಾರವೊಂದರಲ್ಲಿಯೇ ಅವರು ಬಾಳಬೇಕಾಗಿದೆ. ಆದರೆ ಪ್ರೀತಿಯೊಂದೇ ಆಧಾರವಾಗಿ ಬಾಳಬೇಕಿದ್ದ ಮಹಿಳೆಯು ತನ್ನ ಗಂಡನನ್ನೇ ಅರ್ಥಾತ್ ತನ್ನ ಪ್ರೀತಿಯನ್ನೇ ಕಳೆದುಕೊಂಡಾಗ ಬದುಕಲು ಅವಳು ಮಾಡಿಕೊಳ್ಳಬೇಕಾದ ಸಿದ್ಧತೆಯೇ ಈ ಕಥೆಯ ವಸ್ತು. ಸಂಕಲನದ ಕೊನೆಯ ಕಥೆ ‘‘ಮಾಗಿ’’ ಸ್ವಲ್ಪ ದೀರ್ಘವಾದ ಕತೆಯೆ. ಮೂವರು ಮಿತ್ರರು ಒಂದು ಪ್ರವಾಸದಲ್ಲಿ ತಮ್ಮನ್ನೇ ತಾವು ಗುರುತಿಸಿಕೊಳ್ಳುವ ವಿಧಾನವನ್ನು ಕುರಿತು  ಕಥೆಯು ಚಿಂತಿಸುತ್ತದೆ. 

    Original price was: $1.80.Current price is: $0.86.
    Add to basket
  • -40%

    ಮರುಭೂಮಿಯ ಹೂ

    0

    “ಕುವೆಂಪು ಭಾಷಾ ಭಾರತಿ ಪ್ರಾಧಿಕಾರ” ಪ್ರಶಸ್ತಿ ವಿಜೇತ ಕೃತಿ

    ಕನ್ನಡ ಅನುವಾದ
    ಡಾ. ಎನ್. ಜಗದೀಶ್ ಕೊಪ್ಪ

    ಸೋಮಾಲಿಯಾದ ಹೆಣ್ಣು ಮಗಳು ವಾರಿಸ್ ಡೀರೀಳ ಆತ್ಮಕಥೆ “ಮರುಭೂಮಿಯ ಹೂ”.

    Original price was: $1.56.Current price is: $0.94.
    Add to basket
  • -52%

    ಧಾತು

    0

    ಮೊಗಸಾಲೆಯವರ ಹೊಸ ಕಾದಂಬರಿ ‘ಧಾತು’  ಕಥನ ಕ್ರಮದಲ್ಲಿ ಪಲ್ಲಟವೊಂದನ್ನು ಇದು ಸೂಚಿಸುತ್ತದೆ.  ಎಂದಿನಿಂದಲೂ ಎಲ್ಲ ಕಲಾಪ್ರಕಾರಗಳನ್ನೂ ನಿರಂತರವಾಗಿ ಕಾಡುತ್ತಿರುವ ಗಂಡು ಹೆಣ್ಣಿನ ಸಂಬಂಧವನ್ನು ಇದು ಧಾತುವಾಗಿ ಹೊಂದಿದೆ. ಆಧುನಿಕತೆಯೇ ಮೂಲವಾಗಿ ಬದಲಾಗುತ್ತಿರುವ ಬದುಕಿನ ವಿನ್ಯಾಸವನ್ನು ಇದು ಶೋಧಿಸಲೆಳಸುತ್ತದೆ.

    Original price was: $2.16.Current price is: $1.04.
    Add to basket
  • -52%

    ಉತ್ತರ ವಿಹಾರ

    0

    ಉತ್ತರ ವಿಹಾರ
    (ಪ್ರವಾಸಕಥನ)

    ಕಳೆದ ಎರಡು ಮೂರು ವರ್ಷಗಳಲ್ಲಿ ದೇಶದ ಉತ್ತರ ಭಾಗಗಳಲ್ಲಿ ಕೈಗೊಂಡ ಪ್ರವಾಸದ ಫಲಸ್ವರೂಪ ಈ ಕೃತಿ. ಉತ್ತರಪ್ರದೇಶ ಮತ್ತು ಬಿಹಾರದ ಪ್ರಮುಖ ಪ್ರವಾಸಿ ತಾಣಗಳಲ್ಲದೆ, ಕಾಶ್ಮೀರ, ಉತ್ತರಾಖಂಡದ ಕೆಲವು ಪ್ರೇಕ್ಷಣೀಯ ಸ್ಥಳಗಳು ಹಾಗೂ ಪೂರ್ವಾಂಧ್ರ ಕುರಿತು ಎರಡು ಕಥನಗಳು ಕೃತಿಯಲ್ಲಿ ಸೇರಿವೆ. ಇವುಗಳಲ್ಲಿ ಕಾಶ್ಮೀರ ಪ್ರವಾಸ ಮಾತ್ರ ಸಹಕುಟುಂಬ ಪ್ರವಾಸವಾಗಿದ್ದರೆ, ಉಳಿದ ಪ್ರವಾಸಗಳು ಸಹೃದಯ ಸನ್ಮಿತ್ರರೊಂದಿಗೆ ಕೈಗೊಂಡ ಪ್ರವಾಸಗಳು. ನೋಡುವ ಕಣ್ಣಿಗೆ ಪ್ರತಿ ಪ್ರವಾಸವೂ ಒಂದು ಅಪೂರ್ವ ಅನುಭವವೆ. ಒಂದು ಪ್ರದೇಶದ ಇತಿಹಾಸ, ಭೂಗೋಳ, ಪರಂಪರೆ ಕುರಿತು ತೀವ್ರ ಆಸಕ್ತಿ ನನ್ನ ಪ್ರವಾಸ ಕಥನಗಳ ಹಿಂದಿನ  ಪ್ರೇರಕ ಶಕ್ತಿ. ಪ್ರತಿಯೊಂದು ವಿಶಿಷ್ಟ, ವಿಭಿನ್ನ. ನನ್ನ ಹಿಂದಿನ ಆರೂ ಪ್ರವಾಸ ಕಥನಗಳಿಗೆ ಓದುಗರಿಂದ ಒಳ್ಳೆಯ ಸ್ಪಂದನೆ ಸಿಕ್ಕಿದೆ.

    Original price was: $2.04.Current price is: $0.98.
    Add to basket
  • -40%

    ಅತಿಥಿ ದೇವೋ ಭವ

    0

    ಅತಿಥಿ ದೇವೋ ಭವ
    (ಅತಿಥಿಯ ರಸಪ್ರಸಂಗಗಳು)

    ಸ್ವಾಮಿರಾವ ಕುಲಕರ್ಣಿಯವರ  `ಅತಿಥಿ ದೇವೋ ಭವ’ ಎಂಬ ಅತಿಥಿಯ ಅನುಭವಗಳ ರಸಪ್ರಸಂಗಗಳ ಕುರಿತಾಗಿ ಬರೆದ ಪ್ರಬಂಧಗಳ ಸಂಕಲನ.
    “ಕನ್ನಡ ಸಾಹಿತ್ಯದಲ್ಲಿ ಇದೊಂದು ಹೊಸ ಪ್ರಯೋಗದ ಅಪರೂಪದ ಸಾಹಿತ್ಯ ಪ್ರಕಾರವಾಗಿದೆ.” ೧೯೯೮ರಲ್ಲಿ ಪ್ರಕಟವಾದ ನನ್ನ `ರಂಗನಾಟಕದ ರಸಪ್ರಸಂಗಳು’- ರಂಗಾನುಭವದ ಕಿರುಲೇಖನಗಳ ಕೃತಿಯ ಬಗ್ಗೆ ಹಿರಿಯ ಸಾಹಿತಿ ದಿ. ಡಾ. ಹಾ. ಮಾ. ನಾಯಕರ ಮಾತುಗಳಿವು. ರಂಗಭೂಮಿಯ ಹಿರಿಯರಾದ ಮಾಸ್ಟರ್ ಹಿರಣ್ಣಯ್ಯನವರು “ನಾನೂ ಹಲವು ದಶಕಗಳಿಂದ ನಾಟಕ ಮಾಡತಿದ್ದೀನಿ. ಇಂತಹ ಅನೇಕ ಘಟನೆಗಳು, ಪ್ರಸಂಗಗಳು ನಡೆದಿವೆ. ನಿಮ್ಮ `ರಂಗನಾಟಕಗಳ ರಸಪ್ರಸಂಗಗಳು’ ಓದಿದ ಮೇಲೆ, ನಾನು ಇಂತಹ ಪ್ರಸಂಗಗಳನ್ನು ಬರೆಯದೇ ತಪ್ಪು ಮಾಡಿದೆ ಅನಿಸುತ್ತದೆ.’ ಈರ್ವರು ಹಿರಿಯರ ಈ ಮಾತುಗಳೇ `ಅತಿಥಿ ದೇವೋಭವ’ ಬರಹಕ್ಕೆ ಮೂಲ ಪ್ರೇರಣೆಯಾಗಿವೆ.

    Original price was: $0.84.Current price is: $0.50.
    Add to basket
  • -40%

    ಇಣುಕಿದಲ್ಲಿ ಛಂದ

    0

    ಇಣುಕಿದಲ್ಲಿ ಛಂದ
    (ಲಲಿತ ಪ್ರಬಂಧಗಳು)

    ಕಾವ್ಯ ನನಗೆ ಮೌನಗಳ ಮೀಟುವ ಏಕತಾರಿ. ನಾಟಕ ಹಲವು ಸಮಸ್ಯೆಗಳ ಚಿಂತನೆಯ ಅನಾವರಣ. ಸುತ್ತಲಿನ ನನಗಿಷ್ಟವಾದದ್ದನ್ನೆಲ್ಲ ಎತ್ತಿಕೊಂಡು ತನ್ಮಯಳಾಗುವ ಖುಷಿ, ಲಲಿತ ಪ್ರಬಂಧ.
    ಎದುರಾಗುವ ಸನ್ನಿವೇಶ, ವ್ಯಕ್ತಿಗಳನ್ನು ರಾಗಭಾವಗಳಿಂದ ಪ್ರತ್ಯೇಕಿಸಿ ನವಿರು ಹಾಸ್ಯಕ್ಕೆ ಪ್ರತಿಮೆಯಾಗಿಸಿಯೂ, ಓರೆ ಕೋರೆಗಳ ಸಾಪೇಕ್ಷತೆಯನ್ನು ಈ ಪ್ರಪಂಚದ ಸಾರ್ವತ್ರಿಕ ಸಹಜ ನಡವಳಿಕೆಯಾಗಿ ಸ್ವೀಕರಿಸುವ ಆರೋಗ್ಯಕರ ಔದಾರ್ಯವೇ ಲಲಿತಪ್ರಬಂಧದ ಜೀವನಾಡಿ. ಯಾವುದೇ ಸಾಹಿತ್ಯಿಕ ಕಾಲಘಟ್ಟದ ಹಣೆಪಟ್ಟಿಯ ಹಂಗಿಲ್ಲದೆ ಹರಿವ ಹೊಳೆ ಲಲಿತ ಪ್ರಬಂಧ. ನನ್ನ ಬೊಗಸೆಯಲಿ ಹಿಡಿವಷ್ಟು ಸಲಿಲವನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. ಕನ್ನಡದಲ್ಲಿ ಗೊರೂರು, ವಿ. ಸೀ., ಪು.ತಿ.ನ., ಎ. ಎನ್. ಮೂರ್ತಿರಾಯರು, ಅ. ರಾ. ಮಿತ್ರ ಮುಂತಾದ ಲೇಖಕರು ಲಲಿತ ಪ್ರಬಂಧ ಪ್ರಕಾರವನ್ನು ಬೆಳೆಸಿದ್ದಾರೆ. ಮನೆಯ ಪುಸ್ತಕದ ರಾಶಿಯಲ್ಲಿ ಮೊದಲು ನನ್ನ ಕಣ್ಣಿಗೆ ಬಿದ್ದ ರಾ. ಕು. ಅವರ `ಗಾಳಿಪಟ’ ಪ್ರತಿಯೊಂದು ಮರು ಓದಿನಲ್ಲೂ ಅದೇ ಸಂತೋಷ ಕೊಡುವ ಕೃತಿ.

    Original price was: $2.40.Current price is: $1.44.
    Add to basket
  • -40%

    ಮ್ಯೂಟೇಶನ್

    0

    ಮ್ಯೂಟೇಶನ್
    (ಕಥಾಸಂಕಲನ)

    ಇದು ‘ಆರಾಮಕುರ್ಚಿ ಮತ್ತು ಕತೆಗಳು’ ನಂತರದ, ನನ್ನ ಎರಡನೆಯ ಕಥಾಸಂಕಲನವಾಗಿದೆ. ಈ ಕತೆಗಳನ್ನು ಬೇರೆ ಬೇರೆ ಕಾಲಘಟ್ಟದಲ್ಲಿ ಬರೆಯಲಾಗಿದೆ. ಸಣ್ಣಕತೆಗಳು ನನ್ನನ್ನು ತಿಳಿಗೊಳಿಸುತ್ತಾ ಬಂದಿವೆ. ಬರೆದಾದ ಮೇಲೆ ಅವುಗಳಲ್ಲಿ ನನ್ನ ಮುಖ ನೋಡುತ್ತಾ ಸಂತೋಷಪಟ್ಟಿದ್ದೇನೆ. ಅಲ್ಲಿ ಕಂಡ ಇತರ ಮುಖಗಳು ಕೂಡ ಅಚ್ಚರಿ ಹುಟ್ಟಿಸಿವೆ. ಬರೆಯುವ ಕ್ರಿಯೆಯೇ ನನ್ನನ್ನು ನಾನು ಶುದ್ಧೀಕರಿಸಿಕೊಳ್ಳುವ ಕ್ರಿಯೆಯಾಗಿದೆ. ಬರೆದಾದ ಮೇಲೆ ಅದು ಮೂಡಿಸುವ ಪ್ರಸನ್ನತೆ ಬಿಡುಗಡೆಯ ಭಾಗ್ಯ ಕೊಟ್ಟಿದೆ. ನಾಟಕ, ಕಾವ್ಯ ಸಾಹಿತ್ಯದ ಪ್ರಮುಖ ಅಂಗಗಳಾದರೂ ಕೂಡ, ಕತೆ-ಕಾದಂಬರಿ ಮಾತ್ರ ಪೂರ್ಣದೇಹಿಗಳಂತೆ ಕಂಡಿವೆ. ಬಹುತೇಕ ಓದುಗರು ಸಣ್ಣಕತೆಗಳಿಗೆ ಭೇಟಿಕೊಡುವಷ್ಟು, ಉಳಿದ ಪ್ರಕಾರಗಳಿಗೆ ಭೇಟಿ ಕೊಡಲಾರರು. ಸಣ್ಣಕತೆಯ, ಸಣ್ಣದೆನ್ನುವ ಭಾವನೆಯೇ ಮನುಷ್ಯನ ಸಾವನ್ನು ನೆನಪಿಸುತ್ತಿರಬಹುದು! ಹುಟ್ಟು ಸಾವಿನ ಮಧ್ಯದ ಬದುಕು ಬರಿ ಸಣ್ಣ ಕತೆಯಾಗಿರಬಹುದು! ಹೀಗಾಗಿ ಓದುಗರಿಗೆ ಇದರ ಬಗ್ಗೆ ವಿಲಕ್ಷಣವಾದ ಸೆಳೆತವಿದೆ.

    Original price was: $0.84.Current price is: $0.50.
    Add to basket
  • -40%

    ಕಾಲು ದಾರಿಯ ಕಥನಗಳು

    0

    ಕಾಲು ದಾರಿಯ ಕಥನಗಳು
    (ಜಾನಪದ-ಜೀವನ-ಕಥನ)

    ಶ್ರೀ ಕೃಷ್ಣಮೂರ್ತಿ ಹನೂರು ಇವರ `ಕಾಲು ದಾರಿಯ ಕಥನಗಳು’ (ಜಾನಪದ-ಜೀವನ-ಕಥನ) ಕೃತಿಯನ್ನು ಚಂದಾದಾರರಿಗೆ ತಲುಪಿಸಲು ಸಂತೋಷವಾಗುತ್ತಿದೆ. ಶ್ರೀ ಹನೂರು ಅವರು ತಮ್ಮ ಜೀವನದ ಅಮೂಲ್ಯ ಭಾಗವನ್ನು ಜಾನಪದ ಜೀವನದೊಂದಿಗೆ ಕಳೆದು, ಅದು ನಶಿಸಿ ಹೋಗದಂತೆ ತಮ್ಮ ಅಕ್ಷರ ಸಾಹಿತ್ಯದ ಮೂಲಕ ಕೊನೆಯವರೆಗೂ ಉಳಿಯುವಂತೆ ನೋಡಿಕೊಂಡಿದ್ದಾರೆ. ಅವರಿಗೆ ಕನ್ನಡ ಸಾಹಿತ್ಯ ಋಣಿಯಾಗಿರಬೇಕು.

    Original price was: $3.12.Current price is: $1.87.
    Add to basket
  • -40%

    ಮತ್ತೊಬ್ಬ ರಾಧೆ

    0

    ಮತ್ತೊಬ್ಬ ರಾಧೆ
    (ಕೀರ್ತನಕಾರ್ತಿ ಗಲಗಲಿ ಅವ್ವನವರನ್ನು ಕುರಿತ ನಾಟಕ)
    ಈ ನಾಟಕವು ಹದಿನೆಂಟನೇ ಶತಮಾನದ ಕೀರ್ತನಕಾರ್ತಿ ಗಲಗಲಿ ಅವ್ವನವರನ್ನು ಕುರಿತದ್ದಾಗಿದೆ. ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿಯಲ್ಲಿ ಪ್ರಸಿದ್ಧ ಪಂಡಿತರಾಗಿದ್ದ ಗಲಗಲಿ ಮುದಗಲ್ಲಾಚಾರ್ಯರ ಕಿರುಪತ್ನಿಯಾಗಿ ರಮಾ ತನ್ನ ಹನ್ನೆರಡು ವರ್ಷದಲ್ಲಿಯೇ ಮದುವೆಯಾಗಿ ಗಲಗಲಿ ಗ್ರಾಮವನ್ನು ಪ್ರವೇಶಿಸಿದಳು. ಮದುವೆಯಾದ ಎಂಟು ದಿನಕ್ಕೇ ವಿಧವೆಯಾದಳು. ವಿಧವೆಯಾಗಿ ಬತ್ತಿ ಹೊಸೆಯದೆ, ನ್ಯಾಯಪಂಡಿತಳಾಗಿ ಪೇಶ್ವೇ ಅರಸರ ಪಂಡಿತರನ್ನು ಸೋಲಿಸಿ, ಪುಣೆಯ ಅರಸರಿಂದ ವರ್ಷಾಶನ ಪಡೆದಳು. ಅವ್ವನವರ ಮುನ್ನೂರು ಕೀರ್ತನೆಗಳು ಪ್ರಕಟವಾಗಿವೆ. ಕನ್ನಡದಲ್ಲಿ ಕೀರ್ತನೆ ರಚಿಸಿದ ಮೊದಲ ಮಹಿಳೆಯೆಂಬ ಹೆಗ್ಗಳಿಕೆಗೆ ಗಲಗಲಿ ಅವ್ವ ಸಾಕ್ಷಿಯಾಗಿದ್ದಾಳೆ. ಪುಟ್ಟ ವಿಧವೆಯಾಗಿ ಕಾಣಿಸಿಕೊಂಡ ಈ ಮಹಿಳೆ ಗಲಗಲಿ ಅವ್ವನಾಗಿ ಬೆಳೆದು ನಿಂತದ್ದು, ಅಧ್ಯಾತ್ಮ ಮತ್ತು ಸಾಹಿತ್ಯದಲ್ಲಿ ಮಹತ್ತರ ಸಾಧನೆ ಮಾಡಿದ್ದು ಈಗ ಚರಿತ್ರೆಗೆ ಸೇರಿದ ವಿಷಯವಾಗಿದೆ.

    Original price was: $0.84.Current price is: $0.50.
    Add to basket
  • -40%

    ತಾವರೆಯ ಬಾಗಿಲು

    0

    ‘ತಾವರೆಯ ಬಾಗಿಲು’ ಕಾವ್ಯ ಕುರಿತು 40 ಪ್ರಬಂಧಗಳ ಸಂಕಲನ

    Original price was: $2.40.Current price is: $1.44.
    Add to basket
  • -40%

    ರಾಜಕೀಯ ಮತ್ತು ಧರ್ಮ

    0

    ರಾಜಕೀಯ ಮತ್ತು ಧರ್ಮ

    ಲೇಖನಗಳು ತಮ್ಮ ವಸ್ತುವನ್ನು ಬೆಳಗಿಸುತ್ತವೆ. ಅದಕ್ಕಿಂತ ಹೆಚ್ಚಾಗಿ ಲೇಖಕನ ವ್ಯಕ್ತಿತ್ವದ ಬಗ್ಗೆ ಕೂಡ ಕೆಲ ಮಾತುಗಳನ್ನೂ ಹೇಳುತ್ತವೆ. ಈ ದೃಷ್ಟಿಯಿಂದ ಓದುಗರು ಇವುಗಳನ್ನು ಸ್ವೀಕರಿಸಬೇಕು. ಒಟ್ಟಿನಲ್ಲಿ ಹೇಳುವದಾದರೆ ಸುತ್ತಲಿನ ಜಗತ್ತಿನೊಡನೆ ನಡೆದ ಒಂದು ನಿರಂತರ ಪ್ರತಿಕ್ರಿಯೆಯ ಫಲವಾಗಿ ಈ ಲೇಖನಗಳು ಮೂಡಿಬಂದಿದೆ.

    Original price was: $1.08.Current price is: $0.65.
    Add to basket