• -40%

    ಜನನಾಯಕ -ಡಿ. ಕೆ. ನಾಯ್ಕರ್

    0

    ಜನನಾಯಕ –ಡಿ. ಕೆ. ನಾಯ್ಕರ್

    ರಾಜ್ಯ ರಾಜಕಾರಣದಲ್ಲಿ ಅಷ್ಟೇ ಅಲ್ಲ, ರಾಷ್ಟ್ರ ರಾಜಕಾರಣದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದ ಶ್ರೀ ನಾಯ್ಕರ್ ವಿಶಿಷ್ಟ ವ್ಯಕ್ತಿತ್ವದ ರಾಜಕಾರಣಿ. ಇಂಥ ಅಪರೂಪದ ರಾಜಕಾರಣಿ ಕುರಿತು ಪುಸ್ತಕ ಬರೆಯುವ ಅವಕಾಶ ಸಿಕ್ಕಿದ್ದು ನನಗೆ ಸಹಜವಾಗಿಯೇ ಸಂತೋಷ ಉಂಟು ಮಾಡಿದೆ.
    ಶ್ರೀ ಡಿ. ಕೆ. ನಾಯ್ಕರ್ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹತ್ತು ಹಲವು ಹುದ್ದೆ, ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಆದರೆ ಅವರಿಗೆ ಮುಖ್ಯಮಂತ್ರಿಯ ಗದ್ದುಗೆ ದೂರವೇ ಉಳಿದದ್ದು ಈಗ ಇತಿಹಾಸ. ಒಂದು ಬಡ, ಹಿಂದುಳಿದ ಕುಟುಂಬದ ಹಿನ್ನೆಲೆಯಿಂದ ಬಂದು ರಾಜಕಾರಣದಲ್ಲಿ ನೆಲೆ ಕಂಡುಕೊಂಡು ರಾಜ್ಯದ ಸಮಸ್ತ ಜನರ ಶ್ರೇಯೋಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ ಶ್ರೀ ಡಿ. ಕೆ. ನಾಯ್ಕರ್ ಈಗಲೂ ಜನಮಾನಸದಲ್ಲಿ ನೆಲೆ ನಿಂತಿದ್ದಾರೆ.

    Original price was: $3.00.Current price is: $1.80.
    Add to basket
  • -40%

    ಎಷ್ಟು ಕಾಡತಾವ ಕಬ್ಬಕ್ಕೀ…

    0

    ರಾಘವೇಂದ್ರ ಪಾಟೀಲರ ‘ಮತ್ತೊಬ್ಬ ಮಾಯಿ’ ಮತ್ತು ‘ಎಷ್ಟು ಕಾಡತಾವ ಕಬ್ಬಕ್ಕೀ…’ ಓದುವಾಗ ನಾವು ಬದುಕಿನೊಂದಿಗೇ, ಅದರ ನಿಷ್ಠುರ ಅನಿಯತಿಯೊಂದಿಗೇ ಹೊಕ್ಕಾಡುವ ಅನುಭವವಾಗುತ್ತದೆ. ಕಥೆಯನ್ನೂ ಅದೊಂದು ಬದುಕು ಎನ್ನುವಂತೆ ಬೆಳೆದುಕೊಳ್ಳುವುದು ಅಸಾಮಾನ್ಯ ಕತೆಗಾರನಿಗೆ ಮಾತ್ರ ಸಾಧ್ಯ. ಕಥೆಗಾಗಿ ಬದುಕು ಇರುವುದಿಲ್ಲ. ಲೇಖಕ ಎಂಬ ಹುಲುಮಾನವನು, ತಾನು ಕಂಡುಂಡು ಕಳವಳಿಸಿದ ಬದುಕನ್ನು ಅದರ ಎಲ್ಲ ವೈರುಧ್ಯ, ತೀವ್ರತೆ, ಅತಾರ್ಕಿಕತೆಯೊಂದಿಗೆ ಭಾಷೆಯ ಪಾದಯಾತ್ರೆಯಲ್ಲಿ ಹಿಡಿಯಲು ಸಾಧ್ಯವೇ ಎಂದು, ಪಾಟೀಲರ ಕಥೆಗಳು ಪರಮ ವಿನಯದಲ್ಲಿ ಪ್ರಯತ್ನ ಮಾಡುತ್ತವೆ. ಪಾಟೀಲರ ಹೊಸ ಸಂಗ್ರಹದಲ್ಲಿ ನಾವು ನೋಡುತ್ತಿರುವುದು ಅಂಥ ಕಥೆಗಳನ್ನು. ಬದುಕಿನ ನಿಬಿಡತೆಯನ್ನು ಯಾವ ಸಂವಿಧಾನದಲ್ಲಿ ಮಂಡಿಸಿದಾಗ ದರ್ಶನದ ಹೊಳಹೊಂದು ಫಳಕ್ಕನೆ ಮಿಂಚುವುದು ಎಂಬ ಸಂಗತಿಯು ಹಗಲೆಚ್ಚರಕ್ಕೆ ಏನು ಗೊತ್ತು? ಚಾರಣವೇ ತುದಿಗುರಿಯೆಂಬಂತೆ ಪಾಟೀಲ ತಮ್ಮ ಕಥೆಗಳನ್ನು ಬರೆಯುತ್ತಾರೆ. ಅದೇ ಅವರ ಅನನ್ಯತೆ.

    Original price was: $1.56.Current price is: $0.94.
    Add to basket
  • -40%

    ಆಗೊಮ್ಮೆ ಈಗೊಮ್ಮೆ

    0

    ಆಗೊಮ್ಮೆ ಈಗೊಮ್ಮೆ

    (ಗದ್ಯ ಲೇಖನಗಳ ಸಂಗ್ರಹ)

    ಇದೊಂದು ಭಾಷಣಗಳು, ಲೇಖನಗಳು ಮತ್ತು ವ್ಯಕ್ತಿ ಚಿತ್ರಗಳ ಸಂಕಲನ. ಇದರಲ್ಲಿ ಗಿರೀಶ ಕಾರ್ನಾಡ ಅವರು ಕಳೆದ ಐದು ದಶಕಗಳಲ್ಲಿ ಬೇರೆ ಬೇರೆ ವೇದಿಕೆಗಳಲ್ಲಿ ಮಾಡಿದ 11 ಭಾಷಣಗಳು, ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳು ಮತ್ತು 6 ವ್ಯಕ್ತಿಚಿತ್ರಗಳು ಸೇರಿವೆ.

    Original price was: $2.40.Current price is: $1.44.
    Add to basket
  • -40%

    ಅದ್ದ್ಯಾ

    0

    ಅದ್ದ್ಯಾ
    ಅದ್ದ್ಯಾ ಎಂಬ ನಾಮನಿರ್ದೇಶನಗಳಿಲ್ಲದ ವ್ಯಕ್ತಿಯು ತನ್ನದಲ್ಲದ ಬೇರೆಯವರ ಮನೆಯಲ್ಲಿ ಬದುಕಿ ಆ ಮನೆಯ ಸುಃಖ ದುಃಖಗಳಲ್ಲಿ ತಾನೂ ಭಾಗಿಯಾಗಿ ತಾನು ಜೀವನದಲ್ಲಿ ಕಲಿತ ಪಾಠಗಳನ್ನು ಆ ಮನೆಯ ಮಕ್ಕಳಿಗೆ ಕಲಿಸಿ ಅವರ ಜೀವನವನ್ನು ರೂಪಿಸಿದ ಚಿತ್ರ. ತಾನು ಸಮರ್ಪಿಸಿಕೊಂಡ ಮನೆಗೆ ತನ್ನನ್ನು ಸೀಮಿತಗೊಳಿಸಿಕೊಂಡು ಮನೆಯ ಸಂಸ್ಕೃತಿಗೆ ತಾನೂ ಭಾಗೀದಾರಳಾಗಿ ಅದಕ್ಕೆ ತನ್ನ ಕೊಡುಗೆಯನ್ನು ಇತ್ತವಳು ಈ ಅದ್ದ್ಯಾ. ಅದ್ದ್ಯಾ ತನ್ನ ಮೇರೆಯಲ್ಲಿನ ಸಮಾಜದ ಭಾಷೆ ನೀತಿ ನಿಲುವುಗಳನ್ನು ನಿರ್ದೇಶಿಸುವ ಜೀವ. ಆದ್ದರಿಂದ ಇದು ಒಮ್ಮೆ ನಾವು ಕಳಕೊಂಡ ತಿರುಗಿ ಮರಳಿ ಬಾರದ ಸಂಸ್ಕೃತಿಯ ಚಿತ್ರವೆಂದರೂ ಸರಿ.

    Original price was: $1.20.Current price is: $0.72.
    Add to basket
  • -40%

    ಹಿಡಿಯದ ಹಾದಿ

    0

    ಹಿಡಿಯದ ಹಾದಿ
    (ಲಲಿತ ಪ್ರಬಂಧಗಳು)
    ಗಿರಡ್ಡಿ ಗೋವಿಂದರಾಜ ಅವರು ತಮ್ಮೆಲ್ಲ ಪೂರ್ವಗ್ರಹಗಳು ವೈಯಕ್ತಿಕ ಬೇಕು ಬೇಡಗಳು,  ಸ್ವಂತದ ವಿಚಾರಗಳು ಎಲ್ಲವನ್ನೂ ನಿರ್ಮಲ ಹಾಸ್ಯದಲ್ಲಿ ಯಾರನ್ನೂ ತೇಜೋವಧೆ ಮಾಡದಂತ ತುಂಟತನದಲ್ಲಿ ಆಪ್ತಸಂವಾದದ ಸಹಜ ಬೆಚ್ಚನೆಯ ಧಾಟಿಯಲ್ಲಿ ಈ ಪ್ರಂಬಂಧಗಳನ್ನು ರಚಿಸಿದ್ದಾರೆ. ಇವು ಕನ್ನಡ ಪ್ರಬಂಧಕ್ಕೆ ನಿಜವಾದ ಅರ್ಥದಲ್ಲಿ ಆಧುನಿಕತೆಯ ನೆಲೆಯನ್ನು ದೊರಕಿಸಿವೆ. ಇವುಗಳಲ್ಲಿ ಜೀವನ ದೃಷ್ಟಿ, ಹುರುಪು,ಉಲ್ಲಾಸ, ಹಾಗು ಜೀವಪ್ರೀತಿ ಈ ಪ್ರಬಂಧಗಳ ಮುಖ್ಯ ಶಕ್ತಿ.

    Original price was: $1.20.Current price is: $0.72.
    Add to basket
  • -40%

    ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು

    0

    ಸಮೃದ್ಧ ಅನುಭವ ಸುತ್ತಲಿನ ಜಗತ್ತಿನಲ್ಲಿ ಲವಲವಿಕೆಯ ಆಸಕ್ತಿಯಿರುವ ಮನುಷ್ಯ ನಿರೂಪಿಸಿದ ಪುಸ್ತಕಗಳಲ್ಲಿ ‘ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು’ ಒಂದು. ಈ ಪುಸ್ತಕದ ಬರಹದಲ್ಲಿ ನಯ ನಾಜೂಕು, ಕಲೆ ಇಲ್ಲ. ನೇರವಾಗಿ ನಿರೂಪಣೆ. ಅನುಭವದಿಂದ ಎದ್ದು ಬಂದ ಚಿಂತನೆ. ಕಾರಂತರ ಅಪೂರ್ವ ಪ್ರಾಮಾಣಿಕತೆಯ ಶ್ರದ್ಧಾವಂತ ಜೀವನದ ಪರಿಚಯವಾಗುತ್ತದೆ.

    ಅಪೂರ್ವಜೀವನದ ನೆನಪುಗಳನ್ನು ನಮಗೆ ಒದಗಿಸುವ ಪುಸ್ತಕ. ‘ಸಮಾಜದ ಋುಣ ಹೇಗೆ ತೀರಿಸಿಯೇನು?’ ಎಂದು ಬಹುಶಃ ಕೋ.ಲ.ಕಾರಂತರು ಹೇಳಿಕೊಂಡರೆ ಅದು ಅವರ ಹಿರಿತನವನ್ನು ತೋರಿಸುತ್ತದೆ.

    ವೈದೇಹಿಯವರ ಸುಂದರ ನಿರೂಪಣೆ ಇದಾಗಿದೆ.

    Original price was: $1.80.Current price is: $1.08.
    Add to basket
  • -40%

    ಜನಪದ ರಮ್ಯ ಕಥಾನಕಗಳು

    0

    ಜನಪದ ರಮ್ಯ ಕಥಾನಕಗಳು
    ಜನಪದರು ಕಥೆಯ ವಿಚಾರಗಳೆಲ್ಲ ಸತ್ಯ ಎಂದೇ ನಂಬಿಕೊಳ್ಳುತ್ತಾರೆ. ಕಥೆಗಳನ್ನು ಕೇಳುವವರು ತಮ್ಮ ಹಗಲಿನ ನೋವು ನಲಿವುಗಳನ್ನು ಇರುಳಿನ ಬೆಳದಿಂಗಳಿನಲ್ಲಿ ಕಥೆಗಾರನ ಬಾಯಿಂದ ಬಂದ ಕಥೆಯ ಪಾತ್ರಗಳ ನೋವು ನಲಿವುಗಳಿಗೆ ಹೋಲಿಸಿಕೊಂಡು ಸಾಂತ್ವನ ಹೊಂದುತ್ತಾರೆ. ಕಥೆಗಾರನ ಪ್ರತಿಯೊಂದು ಮಾತನ್ನು ಶ್ರದ್ಧೆಯಿಟ್ಟು ಆಲಿಸುತ್ತಾರೆ. ಈ ಸಂಗ್ರಹದಲ್ಲಿ ಚಿತ್ರದುರ್ಗದ ಪ್ರಾಂತೀಯ ಭಾಷೆಯಲ್ಲಿ ಆರು ಕಥೆಗಳನ್ನು ಸಂಗ್ರಹಿಸಲಾಗಿದೆ. ಹಾಗೆಯೇ ಈ ಕಥೆಗಳು ಎಲ್ಲರೂ ಓದುವಂತಾಗಬೇಕು ಮತ್ತು ಮೂಲಕಥೆಗಾರನ ನುಡಿಗಟ್ಟುಗಳನ್ನು ಉಳಿಸಿಕೊಳ್ಳಲಾಗಿದೆ.

    Original price was: $1.68.Current price is: $1.01.
    Add to basket
  • -40%

    ಮನಸುಖರಾಯನ ಮನಸು

    0

    ಮನಸುಖರಾಯನ ಮನಸು :
    (ಕತೆ – ಹರಟೆ)
    ಇದರಲ್ಲಿರುವ ಆರು ಲೇಖನಗಳಲ್ಲಿ ‘‘ಬಾಶಿಂಗ ಬಲ’’ ‘‘ತ್ರಯಸ್ಥ’’ ಹಾಗೂ ‘‘ಗಧೇ ಪಂಚವೀಶಿ’’ ಇವು ಮೂರು ಕಥಾ ರೂಪಿ ಹರಟೆಗಳು. ‘‘ಗಾಯಕವಾಡ ದಾದಾ’’ ಹರಟೆ ರೂಪಿ ವ್ಯಕ್ತಿ ಚಿತ್ರಣ; ‘‘ಶ್ರದ್ಧಾ’’ ಒಂದು ಬಾಲ್ಯಕಾಲದ ಚಿತ್ರಣ. ‘‘ಪುಸ್ತಕದ ಹುಳ’’ ಒಂದು ಶುದ್ಧ ತಲೆಹರಟೆ ರೂಪಿ ಹರಟೆ…………….

    Original price was: $1.80.Current price is: $1.08.
    Add to basket
  • -40%

    ನಾ ಬದುಕಲಿಕ್ಕೆ ಒಲ್ಲೆಪಾ

    0

    ನಾ ಬದುಕಲಿಕ್ಕೆ ಒಲ್ಲೆಪಾ
    ಇದು ದ್ವಿಪಾತ್ರ ನಾಟಕಗಳ ಸಂಕಲನ. ದ್ವಿಪಾತ್ರ ನಾಟಕಗಳಿಗೆ ಸಂಭಾಷಣೆಯೇ ಜೀವಾಳ . ಸಂಭಾಷಣೆ ಮೂಲಕವೇ ಕುತೂಹಲವನ್ನು ಹುಟ್ಟಿಸುವ ತಂತ್ರಗಾರಿಕೆಯೇ ನಾಟಕದ ಮೂಲ ವಸ್ತು. ಯಾವುದೇ ಒಂದು ಸಮಸ್ಯೆಯನ್ನು ಎದುರಿಗಿಟ್ಟುಕೊಂಡು ಅದರ ಪರ ಮತ್ತು ವಿರೋಧದ ವಾಗ್ವಾದದ ಮೂಲಕವೇ ನಾಟಕವನ್ನು ರಚಿಸುವ ಜಾಣಕಲಾತ್ಮಕಯೇ ನಾಟಕಕಾರಣನ ಹಿರಿಮೆ. ಈ ನಿಟ್ಟಿನಲ್ಲಿ ಲೋಹಿತ ನಾಯ್ಕರ್ ಯಶಸ್ವಿಯಾಗಿದ್ದಾರೆ.
    ಈ ನಾಟಕಗಳು ಹವ್ಯಾಸಿ ರಂಗಭೂಮಿಗೆ ಸೂಕ್ತವಾಗಿವೆ.

    Original price was: $0.96.Current price is: $0.58.
    Add to basket
  • -39%

    ಗೋರಾ

    0

    ಗೋರಾ
    (ಜೀವನ ಚರಿತ್ರೆ)
    ಅತಿ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಗೋರಾ (ಗೋಪರಾಜು ರಾಮಚಂದ್ರರಾವ) ಜಗತ್ತಿನ ಪ್ರಪ್ರಥಮ ನಾಸ್ತಿಕ ಕೇಂದ್ರವನ್ನು ಸ್ಥಾಪಿಸಿದರು. ನಾಸ್ತಿಕವಾದದ ಪ್ರಚಾರಕ್ಕಾಗಿ ಪ್ರಪಂಚದಾದ್ಯಂತ ಸಂಚರಿಸಿ ಪ್ರಥಮ ಅಂತರಾಷ್ಟ್ರೀಯ  ನಾಸ್ತಿಕ ಸಮ್ಮೇಳನವನ್ನು ಏರ್ಪಡಿಸಿದರು. ನಾಸ್ತಿಕತೆ ಎಂದರೆ ಕೇವಲ ನಿರೀಶ್ವರ ವಾದಿಗಳೆಂದು  ತಿರಸ್ಕ್ರತ ದೃಷ್ಟಿಯಿಂದ  ಕಾಣುವಂತಹ ವಾತಾವರಣ ಇರುವ ನಮ್ಮ ಸಾಮಾಜಿಕ ಪರಿಸ್ಥಿತಿಯಲ್ಲಿ ಬದುಕು ಹಸನಗೊಳ್ಳಲು ದಾರಿದೀಪ ಎಂದು ತಮ್ಮ ಬದುಕಿನ ಕೊನೆಯ ಘಳಿಗೆಯವರೆಗೂ ‘ಇತ್ಯಾತ್ಮಕ ನಾಸ್ತಿಕವಾದ’ದ ಪರ ಹೋರಾಡಿದ ಅಪರೂಪದ ವ್ಯಕ್ತಿಯ ಜೀವನ ಚರಿತ್ರೆ ಇದು.

    Original price was: $0.36.Current price is: $0.22.
    Add to basket
  • -40%

    ಹಯವದನ

    0

    ಹಯವದನ
    ಶ್ರೀ ಗಿರೀಶ ಕಾರ್ನಾಡರ ‘ಹಯವದನ’ ನಾಟಕವು ಎಪ್ಪತ್ತರ ದಶಕದಲ್ಲಿ ಅವರು ಹೋಮಿಭಾಭಾ ಫೆಲೋಶಿಪ್ ಪಡೆದು ಧಾರವಾಡದಲ್ಲಿದ್ದಾಗ ಬರೆದದ್ದು. ಈ ನಾಟಕಕ್ಕೆ ರಾಷ್ಟ್ರಮಟ್ಟದ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿಯೂ ದೊರಕಿದೆ. ಶ್ರೀ ಸತ್ಯದೇವ ದುಬೆ, ಬಿ.ವಿ. ಕಾರಂತರಂಥ ನಿರ್ದೇಶಕರಿಂದ ಅನೇಕ ಪ್ರದರ್ಶನಗಳನ್ನು ಕಂಡಿದೆ. ಶ್ರೀ ದುಬೆಯವರ ಹಿಂದೀ ಪ್ರದರ್ಶನದಲ್ಲಿ ಶ್ರೀ ಅಮೋಲ ಪಾಲೇಕರ, ದಿ. ಅಮರೀಶಪುರಿ ಶ್ರೀಮತಿ ಸುನೀತಾ ಪ್ರಧಾನ ಮುಂತಾದವರು ಪಾತ್ರವಹಿಸಿ, ಈ ನಾಟಕದ ಪ್ರದರ್ಶನ ಅತ್ಯಂತ ಯಶಸ್ವಿಯಾಗಲು ಮತ್ತು ಬಹುಕಾಲ ಜನರ ಮನಸ್ಸಿನಲ್ಲಿ ಬೇರೂರಲು ಕಾರಣವಾಯಿತು.

    Original price was: $1.08.Current price is: $0.65.
    Add to basket
  • -25%

    ಕೊರವಂಜಿ – ಅಕ್ಟೋಬರ ೧೯೪೨

    0

    ಕೊರವಂಜಿ : ಅಕ್ಟೋಬರ 1942
    ತಿಳಿ ನಗೆಯ ಮಾಸಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಕುಹಕಿಡಿಗಳು
    ಹುರಿಗಾಳು
    ಗತ್ರೀ ತಂತ್ರ – ನಾ.ಕ.
    ಧರ್ಮ ಸಂಕಟ  – ಮೂರ್ತಿ .
    ಕಳ್ಳ ಅನುಭವ
    ವಾರ್ತಾ ವಿಹಂಗಮ
    ತುಂಡು ಕವಿ
    ಕನ್ಯಾ ಲೇನ
    ವಿಸಿಟಿಂಗ್ ಕಾರ್ಡ್
    ಎಮ್ಮೆ ವ್ಯಾಪಾರ – ರಾಮು.
    ಅನುರಾಗಾಗ್ನಿ
    ಷಹರಿನ ಸ್ನೇಹಿತರಿಂದ ಬಂದ ಕಾಗದ
    ಒಡಕು ಮಡಿಕೆ -ಎನ್.ಎಸ್.ಸಿ.
    ರಂಗಣ್ಣ ಬರದದ್ದು -ಎಸ್.ವೀ.ವೀ.ಕೃತಂ
    ಹುಲಿಗಳ ಗಲಿಬಿಲಿ
    ರಾಜೀವಪುರದ ರಾಜಕೀಯ

    Original price was: $0.24.Current price is: $0.18.
    Add to basket
  • -25%

    ಕೊರವಂಜಿ-ಸೆಪ್ಟೆಂಬರ್-೧೯೪೨

    0

    ಕೊರವಂಜಿ : ಸೆಪ್ಟೆಂಬರ್ 1942

    ತಿಳಿ ನಗೆಯ ಮಾಸ ಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ . ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ  ಬರಹಗಳು ಈ ಕೆಳಗಿನಂತಿವೆ.

    ಕುಹಕಿಡಿಗಳು
    ಸುರಸುರಬತ್ತಿ
    ನವೀನ ಗಾದೆಗಳು
    ಬಾಧಕವಿಲ್ಲ
    ತುಲಸೀ ದಳ  – ನಾ. ಕ.
    ತಮ್ಮಯ್ಯನ ಎಮ್ಮೆಗಳು  – ಎಸ್. ವೀ. ವೀ. ಕೃತಂ
    ದಕ್ಷಿಣದ ಸುಂದರಿ  – ವಸುದೇವ ಭೂಪಾಲಂ
    ರಾಮ ಶಬ್ದ  – ಶ್ರೀಮತಿ ಮೀನಾಬಾಯಿ
    ಭಾವನಿಗೊಂದು ಉತ್ತರ
    ಜಹನಾರ    – ಪಾಟಾಳಿ
    ಗುಮಾಸ್ತೆ ಲಾವಣಿ –ಇಂದಾಗೆ ಈಶ್ವರಯ್ಯ
    ಎಲ್ಲರೂ ಜ್ಯೋತಿಷ್ಯ ಓದಿದರೆ  –  ಕೇಫ
    ಗುರುಶಿಷ್ಯ  – ನಾ. ಕಸ್ತೂರಿ
    ಡಾ|| ಕ್ವಿಟ್  – ನಾ. ಕಸ್ತೂರಿ

    Original price was: $0.24.Current price is: $0.18.
    Add to basket
  • -40%

    ಟಿಪೂ ಸುಲ್ತಾನ ಕಂಡ ಕನಸು

    0

    ಟಿಪೂ ಸುಲ್ತಾನ ಕಂಡ ಕನಸು
    1997 ರಲ್ಲಿ ಭಾರತೀಯ ಸ್ವಾತಂತ್ರ್ಯಕ್ಕೆ ಐವತ್ತು ತುಂಬಿದ ಸಂದರ್ಭದಲ್ಲಿ ಇಂಗ್ಲೆಂಡಿನ ಬಿ.ಬಿಸಿ. ರೇಡಿಯೋದವರು ನನಗೆ ಸ್ವಾತಂತ್ರ್ಯ ದಿನಂದು ಬಿತ್ತರಿಸಲಿಕ್ಕಾಗಿ ಒಂದು ನಾಟಕ ಬರೆದುಕೊಡಲು ಕೇಳಿಕೊಂಡರು. ನಾಟಕದ ವಸ್ತು ಆಂಗ್ಲ-ಭಾರತೀಯ ಸಂಬಂಧವನ್ನು ಕುರಿತದ್ದಾಗಿರಬೇಕು ಎಂಬ ಮಾತು ಸೂಚ್ಯವಾಗಿ ಬಂದಾಗ ನನಗೆ ಕೂಡಲೆ ಹೊಳೆದದ್ದು ಕರ್ನಾಟಕದ ಕೊನೆಯ ಸ್ವತಂತ್ರ ಶಾಸಕನಾದ ಟಿಪೂ ಸುಲ್ತಾನನ ದುರಂತ! ತನ್ನ ಇಡಿಯ ಬಾಳನ್ನು ಬಡಿದಾಟದಲ್ಲೇ ನೀಗಿಸಿದ ಈ ವ್ಯಕ್ತಿ ಗುಟ್ಟಾಗಿ ತನ್ನ ಕನಸುಗಳನ್ನು ಬರೆದಿಡುತ್ತಿದ್ದ ಎಂಬ ಮಾತನ್ನು ಏ.ಕೆ.ರಾಮಾನುಜನ್‍ರಿಂದ ಕೇಳಿದಂದಿನಿಂದ ನನಗೆ ಟಿಪೂವಿನಲ್ಲಿ ವಿಶೇಷ ಆಸಕ್ತಿ ಉಂಟಾಗಿತ್ತು. ಅದೇ ನಾಟಕ ರಚನೆಗೆ ಪ್ರೇರಣೆಯಾಯಿತು.

    Original price was: $0.72.Current price is: $0.43.
    Add to basket
  • -25%

    ಕೊರವಂಜಿ ಜುಲೈ ೧೯೪೨

    0

    ಕೊರವಂಜಿ ಜುಲೈ 1942 :

    ತಿಳಿ ನಗೆಯ ಮಾಸಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಕುಹಕಿಡಿಗಳು
    ಹುರಿಗಾಳು
    ಅತಿರಸ ನಿಮಿಷಗಳು  – ಕಾರಂತ
    ವಿವಾಹ ಮಹೋತ್ಸವ  -ನಾ.ಕ
    ‘ಸೋಮು ನಾಣಿ ಸರಸ  -ಎಂ.ವಿ.ಜಿ.
    ರಾಜೀವಪುರದ ರಾಜಕೀಯ
    ಮಾಸಭವಿಷ್ಯ
    ಒಸಗೆ ನುಡಿಗಳು – ಬಾರಬರ.
    ಕಂಠುವಿನ ಹಾವಳಿ
    ಓದುಗರಿಗೆ ಒಂದು ಒರೆಗಲ್ಲು  – ನಾ.ಕ.
    ಅವಳ ಮೇಲೆ ಪ್ರೀತಿ (ಕವಿತೆ)  – ಎಂ.ಜಿ.ವೆಂ
    ಗಾಳಿಯಲ್ಹ್ಲೋಗುವ ಮಾರಿ
    ನೀತಿಯ ಕತೆಗಳು – ಬಲಿತವರಿಗೆ
    ಸಂಕಲ್ಪ
    ದೂರದರ್ಶಿ
    ಅಗಸನ ಆಗುಹೋಗುಗಳು
    ಕಾಲಭೈರವಿ – ನಾ.ಕ.

    Original price was: $0.24.Current price is: $0.18.
    Add to basket
  • -25%

    ಕೊರವಂಜಿ – ಜೂನ್ ೧೯೪೨

    0

    ಕೊರವಂಜಿ : ಜೂನ್ 1942

    ತಿಳಿ ನಗೆಯ ಮಾಸಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಕುಹಕಿಡಿಗಳು
    ಚೌ ಚೌ….
    ರಾಜೀವಪುರದ ರಾಜಕೀಯ
    ‘ತುಳಿಯೋಣೆ ಬಾರ್ಲ’ (ಕವಿತೆ)  – ಬೆ.ಚಂ.
    ನಾನು ಧಾಂಡಿಗನೆ   – ನಾ.ಕ.
    ಗಂಡ ಹೆಂಡಿರು  – ನಾ.ಕ.
    ಹೊಲ್ಡಾನ್  – ಎಂ.ವಿ.ಎನ್.
    ಮಹಾಕವಿ ಮೇಳ
    ನೇವೇದ್ಯ  – ಎನ್.ಎಸ್.ಕೆ.
    ಭೀಃ  – ಬೆ.ಚಂ.
    ಸಾಹಿತ್ಯಕ್ಕೊಂದ ಸಹಾಯ   – ಬೆ.ಚಂ.
    ಸಣ್ಣ ಕತೆಗಳಿಗೆ ಸುಲಭ ಸೂಚನೆಗಳು
    ಲಗ್ನ- ಪರಿಣಾಮ- ಶೂಲೆ
    ಕ್ರಿಕೆಟ್

    Original price was: $0.24.Current price is: $0.18.
    Add to basket
  • -40%

    ಪಾಚಿ ಕಟ್ಟಿದ ಪಾಗಾರ

    0

    ಪಾಚಿ ಕಟ್ಟಿದ ಪಾಗಾರ
    (ಕಾದಂಬರಿ)
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಬದುಕನ್ನು ಕಣ್ಣಿಗೆ ಕಟ್ಟುವಂತೆ ಕಾದಂಬರಿಗಾರ್ತಿ ಮಿತ್ರಾ ವೆಂಕಟರಾಜ ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ಜೀವನದಲ್ಲಿ ಎದುರಾಗುವ ಘಟನೆಗಳಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಮತ್ತು ಹಳ್ಳಿಯಲ್ಲಿ ಪ್ರಮುಖವಾಗಿರುವ ಕುಟುಂಬಗಳ ರೀತಿ ನೀತಿಗಳ ಇತರ ಸಾಧಾರಣ ಕುಟುಂಬಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ಸವಿವರವಾಗಿ ಚಿತ್ರಿಸಲಾಗಿದೆ. ಮಿತ್ರಾ ವೆಂಕಟರಾಜ ಅವರು ಎರಡು ಭಾಗಗಳಲ್ಲಿ ಕಾದಂಬರಿಯ ಒಟ್ಟು ಜೀವನದ ಪರಂಪರೆ ಅಳಿಸಿಹೋಗದಹಾಗೆ ಚಿತ್ರಿಸಿ ಮುಂದಿನ ತಲೆಮಾರಿಗೆ ದಾಖಲೆ ಉಳಿಸಿದ್ದಾರೆ.

    Original price was: $3.60.Current price is: $2.16.
    Add to basket
  • -20%

    ಅರೆಶತಮಾನದ  ಅಲೆಬರಹಗಳು

    0
    Original price was: $6.96.Current price is: $5.57.
    Add to basket
  • -25%

    ಕೊರವಂಜಿ  – ಮಾರ್ಚ ೧೯೪೨

    0

    ಕೊರವಂಜಿ  : ಮಾರ್ಚ 1942

    ತಿಳಿ ನಗೆಯ ಮಾಸ ಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ . ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯನ ಬರಹಗಳು ಈ ಕೆಳಗಿನಂತಿವೆ.

    ಕುಹಕಿಡಿಗಳು
    ಅಪರಂಜಿ
    ಮನಿ ಆರ್ಡರಾ….
    ‘ಹಸ್ತಗುಣ’
    “ಸಂಗ್ರಾಮ ಗಾದೆಗಳು-ನಮ್ಮೂರಿನವು”
    “ಗಂಡಸರಿಗೊಂದು ಸಲಹೆ”
    “ಬಾಳೆಯ ಬಾಳು”
    ಸಿನಿಮ ಮನೆ
    ರಾಜೀವಪುರದ ರಾಜಕೀಯ “ಮೈ ಲಿ ಮು ಖಂ ಡ ರು”
    ಕಾಲೇಜು ಮುಕ್ತಕಗಳು
    ಕಲಾಕೋವಿದ
    ಇಂದಿನ “ಸರ್ವಜ್ಞ”
    ಸಣ್ಣ ಕತೆಗಳಿಗೆ ಸುಲಭ ಸೂಚನೆಗಳು
    ಮ ರ ಮಾ ತು
    ವಾಸುವಿನ ವ್ಯಕ್ತಿತ್ವ

    Original price was: $0.24.Current price is: $0.18.
    Add to basket
  • -40%

    ಸತ್ತು ಹುಟ್ಟಿದ್ದು

    0

    ಸತ್ತು ಹುಟ್ಟಿದ್ದು
    (ವೈದ್ಯಕೀಯ ರೋಮಾಂಚಕಾರಿ ಕಾದಂಬರಿ)
    ಇದು ಶ್ರೀಮತಿ ರೋಹಿಣಿ ನಿಲೇಕಣಿ ಅವರ ಪೆಂಗ್ವಿನ್ ಪ್ರಕಾಶಕರಿಂದ ಇಂಗ್ಲೀಷನಲ್ಲಿ “ಸ್ಟಿಲ್ ಬಾರ್ನ್” ಎಂಬ ಹೆಸರಿನಲ್ಲಿ ಪ್ರಕಟವಾಗಿದ್ದು ಇದನ್ನು ಆರ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

    Original price was: $2.40.Current price is: $1.44.
    Add to basket
  • -40%

    ಕಿಂಕಿಣಿ

    0

    ಕಿಂಕಿಣಿ
    ಬದುಕಿನುದ್ದಕ್ಕೂ ಎದುರಾಗುವ ಘಟನೆಗಳ ಸುತ್ತ ಮೂಡುವ ಮನಸ್ಸಿನ ಎಳೆಗಳನ್ನು ಹಸಿಹಸಿಯಾಗಿ ಮೂಡಿಸುವ ಪ್ರಯತ್ನ ಇಲ್ಲಿದೆ.

    Original price was: $0.72.Current price is: $0.43.
    Add to basket
  • ಕಾವ್ಯಸಿಂಧು

    0

    ಯಾವುದೇ ಅಬ್ಬರ, ಆರ್ಭಟಗಳಿಲ್ಲದ ಈ ‘ಕಾವ್ಯಸಿಂಧು’ ವೆಂಬ ಶಾಂತಿ ಸಾಗರದ ತಡಿಯಲ್ಲಿ ನಿಂತು ನೋಡಿದಾಗ ಇಲ್ಲಿಯ ಎಲ್ಲ ರಚನೆಗಳೂ ರಮ್ಯಗೀತಗಳಾಗಿದ್ದು ಸಂಗೀತ ಸಹಚರಿಗಳಾಗಿವೆ. ಇದರಲ್ಲಿಯ ಭಾವಗಳ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿ ಕವಿ ಭಾವಗೀತೆಗಳು, ಭಕ್ತಿ ಗೀತೆಗಳು, ಪ್ರೇಮಗೀತೆಗಳು, ದೇಶಭಕ್ತಿ ಗೀತೆಗಳು ಮತ್ತು ಹಬ್ಬ ಹರಿದಿನಗಳ ಕುರಿತಾದ ಗೀತೆಗಳೆಂಬ ಐದು ವಿಭಾಗಗಳಾಗಿ ವಿಂಗಡಿಸಿಟ್ಟಿದ್ದಾರೆ.

    $0.00
    Add to basket
  • -40%

    ದಿನಚರಿಯ ಕಡೇ ಪುಟದಿಂದ…

    0

    ದಿನಚರಿಯ ಕಡೇ ಪುಟದಿಂದ…
    ಸುಮಾರು ಎರಡು ದಶಕಗಳ ತಮ್ಮ ಬರವಣಿಗೆಯುದ್ದಕ್ಕೂ ಶ್ರೀಮತಿ ಜಯಶ್ರೀಯವರು ಕಥನ ಶೈಲಿಯಲ್ಲಿ ನಡೆಸಿರುವ ಪ್ರಯತ್ನಗಳು ಮಹಿಳಾ ಕಥಾ ಪರಂಪರೆಯಲ್ಲಿ ಮಾತ್ರವಲ್ಲ, ಒಟ್ಟು ಕನ್ನಡ ಕಥನ ಪರಂಪರೆಯಲ್ಲೂ ಮುಖ್ಯವಾಗಿವೆ. ಇದರ ಮುಖ್ಯ ಗುಣವೆಂದರೆ ಅದು ದಶದಿಕ್ಕುಗಳಿಗೂ ಕುತೂಹಲದಿಂದ ಕೈಚಾಚುವ ಬಗೆಯದ್ದಲ್ಲ. ತನ್ನ ಅನುಭವಕ್ಕೆ ಆಳವಾಗಿ ದಕ್ಕಿರುವ, ತನಗೆ ಪರಿಚಿತವಾದ, ತಾನು ಅಧಿಕಾರದಿಂದ ಮಾತನಾಡಾಬಲ್ಲ ಬದುಕಿನ ಮಾದರಿಗಳನ್ನೇ ಅದು ಹಲವು ಮಗ್ಗುಲುಗಳಿಂದ ನೋಡಲು ಬಯಸುತ್ತದೆ. ಈ ನಿರ್ದಿಷ್ಟ ಮಾದರಿಯನ್ನು ಅದು ಈಗಾಗಲೆ ಮತ್ತೆ ಮತ್ತೆ ನೋಡಲಾಗಿರುವ ದೃಷ್ಟಿಕೋನದಾಚೆಗೆ ವಿಸ್ತರಿಸಲು ತೀವ್ರವಾಗಿ ಹಂಬಲಿಸುತ್ತದೆ. ಹೆಣ್ಣಿನ ಘರ್ಷಣೆಗಳ ಮೂಲ ಒಳಗಿನದೇ ಹೊರಗಿನದೇ ಅಥವಾ ಅವುಗಳ ಒಳಹೊರಗುಗಳನ್ನು ಮೂರ್ತವಾಗಿ ಬೇರ್ಪಡಿಸುವುದಾದರೂ ಸಾಧ್ಯವಿದೆಯೇ ಎಂದು ಆತಂಕ ಮತ್ತು ಆರ್ತತೆಗಳೆರಡೂ ಬೆರೆತೆ ಸ್ಥಿತಿಯಲ್ಲಿ ಇವರ ಬಹುಪಾಲು ಕಥೆಗಳಿವೆ.

    Original price was: $1.32.Current price is: $0.79.
    Add to basket
  • -40%

    ಶ್ರೀನಿವಾಸ ಕಲ್ಯಾಣ

    0

    ಶ್ರೀನಿವಾಸ ಕಲ್ಯಾಣ –

    ತಿರುಪತಿಯ ವೆಂಕಟಪ್ಪನ ಒಕ್ಕಲಿನವರಿಗೆ ಪ್ರತಿ ನವರಾತ್ರಿಯಲ್ಲಿ ‘ಶ್ರೀನಿವಾಸ ಕಲ್ಯಾಣ’ ಓದುವುದು, ಕೇಳುವುದು ಒಂದು ನಿಯಮ. ಪುರೋಹಿತರು ಬಂದು ಪುರಾಣವನ್ನು ಹೇಳುತ್ತಿದ್ದರು. ನೌಕರಿಗೆಂದು ನಗರಗಳಿಗೆ ವಲಸೆ ಬಂದ ನಂತರ ಪುರೋಹಿತರ ಕೆಲಸವನ್ನು ಯಜಮಾನನೇ ಮಾಡಬೇಕಾಯಿತು. ಅಂಥ ಸಂದರ್ಭದಲ್ಲಿ, ಸಮಯಕ್ಕೆ ಅನುಕೂಲವಾಗುವಂತೆ ಸಂಪ್ರದಾಯವನ್ನು ಉಳಿಸಿಕೊಂಡು ಬರುವಲ್ಲಿಯ ಪ್ರಯತ್ನದ ಫಲ ಈ ‘ಶ್ರೀನಿವಾಸ ಕಲ್ಯಾಣ’ ಕಿರು ಪುಸ್ತಿಕೆ.

    Original price was: $0.60.Current price is: $0.36.
    Add to basket
  • -40%

    ಅಬ್ಬಾಲಕ್ಕ ಅಜ್ಜೀಮನೆಗೆ ಹೋಗಿದ್ದು

    0

    ಅಬ್ಬಾಲಕ್ಕ ಅಜ್ಜೀಮನೆಗೆ ಹೋಗಿದ್ದು
    (ಮಕ್ಕಳ ಕತೆಗಳು)
    ವೈದೇಹಿಯವರು ಮಕ್ಕಳನ್ನು ಎದುರಿಗೆ ಕುಡ್ರಿಸಿಕೊಂಡು ಹೇಳಿದಂತಿರುವ  ಈ ಕಥೆಗಳು ಆಕರ್ಷಕ ಶೈಲಿ ನಾಟಕೀಯ ನಿರೂಪಣೆಗಳ ಮೂಲಕ ಮಕ್ಕಳ ಕಥೆಗಳು ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿವೆ.  ಈ ಕಥೆಗಳು ಮಕ್ಕಳಿಗಷ್ಟೇ ಅಲ್ಲದೆ ದೊಡ್ಡವರಿಗೂ ಸಂತೋಷ ನೀಡುತ್ತವೆ.  ನಿರಸವಾದ ನೀತಿ ಕಥೆಗಳಿಂದ ತುಂಬಿರುವ ಕನ್ನಡದ ಮಕ್ಕಳ ಕಥೆಗಳಿಗಿಂತ ಇವು ವಿಭಿನ್ನವಾಗಿವೆ.

    Original price was: $0.84.Current price is: $0.50.
    Add to basket
  • -40%

    ತುಘಲಕ್

    0

    ಇದು ಗಿರೀಶ ಕಾರ್ನಾಡರ ಎರಡನೆಯ ನಾಟಕ. ಈ ನಾಟಕದ ಕಥಾವಸ್ತು ಐತಿಹಾಸಿಕವಾಗಿದ್ದರೂ ಇದರ ಉದ್ದೇಶ ಇತಿಹಾಸದ ಚಿತ್ರಣವಲ್ಲ. ತುಘಲಕ್ ವಂಶದ ಹುಚ್ಚ ಮುಹಮ್ಮದನ ಅರಾಜಕತೆಯ ಆಳ್ವಿಕೆಯೇ ನಾಟಕದ ಕಾರ್ಯಪರಂಪರೆಯಗಿದ್ದರೂ ತೋರಿಸುವ ಕೃತಿಯಲ್ಲ. ಮನುಷ್ಯ ದೇವತ್ವದ ಕನಸನ್ನು ಕಾಣುವ ಪಶುವಾಗಿರುವದೇ ಇಲ್ಲಿಯ ಮೂಲಭೂತವಾದ ಸಮಸ್ಯೆಯಾಗಿದೆ. ಈ ಸಮಸ್ಯೆ ಹುಟ್ಟಿಸುವ ಅನೇಕ ಮಾನವೀಯ ಅನರ್ಥಗಳಿಗೆ ಮುಹಮ್ಮದ ಪ್ರಳಯ ಕೇಂದ್ರವಾಗಿದ್ದಾನೆ.

    Original price was: $1.20.Current price is: $0.72.
    Add to basket