• -40%

    ಅವತಾರ

    0

    ಈ  ಪುಸ್ತಕವು ಮಧುರಾ ಕರ್ಣಮ್ ಅವರು ಬರೆದ ಕಥಾಸಂಕಲನ.

    ಅವತಾರ, ಸೌದಾಮಿನಿಯ ರಂಗವಲ್ಲಿ, ಪರಂಪರಾನುಗತ, ಹುಡುಕಿದರಷ್ಟೇ.. ದಾರಿ, ವಿದೇಶಕಾಲ, ಮಾಗುವ ಹೊತ್ತು, ಪ್ರತೀಕಾರ, ಅರ್ಹತೆ, ದ್ವಂದ್ವ, ಬದಲಾಗುವ ಭಾವಚಿತ್ರಗಳು ಮುಂತಾದ ಕಥೆಗಳನ್ನು ಒಳಗೊಂಡಿದೆ.

    Original price was: $1.32.Current price is: $0.79.
    Add to basket
  • -40%

    ಅಮೃತಮಯಿ

    0

    ಅಮೃತಮಯಿ

    ಈ ಪುಸ್ತಕವು ನಿಜವಾದ ಪ್ರೀತಿ,ವಿಶ್ವಾಸಗಳು ಸಿಕ್ಕರೆ ಹೇಗೆ ಜೀವನದಲ್ಲಿ ಮುಂದೆ ಬರಬಹುದು, ಬರಡು ಭೂಮಿಯಲ್ಲೂ ಹಸಿರು ಹು‍ಟ್ಟುತ್ತದೆ,

    ಎಂಬುದನ್ನು ಡಾ. ಅನುರಾಧಾ ಕೃಷ್ಣ ಕಟ್ಟಿಯವರು ಕೆಲವು ಕಥೆಗಳ ಮೂಲಕ ವಿವರಿಸಿದ್ದಾರೆ.

    Original price was: $1.44.Current price is: $0.86.
    Add to basket
  • -40%

    ಆರನೇ ಬೆರಳು

    0

    ಆರನೇ ಬೆರಳು

    ಆಶಾ ರಘು ಅವರ ರಚನೆಯ ಕಥಾ ಸಂಕಲನವಾಗಿದೆ.

    Original price was: $2.28.Current price is: $1.37.
    Add to basket
  • -40%

    ಏಪ್ರಿಲ್ ಫೂಲ್

    0

    ಏಪ್ರಿಲ್ ಫೂಲ್

    – ಇದು ಹನುಮಂತ ಹಾಲಿಗೇರಿ ಇವರ ರಚನೆಯ ಕಥಾಸಂಕಲನವಾಗಿದೆ.

    ಹನುಮಂತನ ಸಿಟ್ಟು ಅವನ ಬಾಲಕ್ಕೆ ಬೆಂಕಿ ಇಟ್ಟವರ ಬಗ್ಗೆ ಇದೆ. ಮನುಷ್ಯನನ್ನು ಮಂಗನನ್ನಾಗಿ ಮಾಡಿ ಮೋಜು ನೋಡುತ್ತಾ ದೂರದಿಂಲೇ ಭಜನೆ ಮಾಡುವವರ  ಬಗ್ಗೆ ಇದೆ. ಇದು ಸಿಡಿದು ನಿಲ್ಲುವ ಕ್ರಮ. ಅನಿವಾರ್ಯತೆ ಸೃಷ್ಟಿಸಿಕೊಳ್ಳುವ ಕ್ರಮ. ‘ಏಪ್ರಿಲ್ ಫೂಲ್’ ಒಟ್ಟು ಕಥೆಗಳು ಈ ಹಿನ್ನೆಲೆಯಲ್ಲಿ ಮೂಡಿ ಬಂದಿವೆ.

    Original price was: $1.80.Current price is: $1.08.
    Add to basket
  • -40%

    ಬಾಳಂತಿ ಪುರಾಣ

    0

    ಬಾಳಂತಿ ಪುರಾಣ – ಇದು ಶ್ರೀಕಲಾ ಅವರು ಬರೆದ ಬಾಣಂತನದ ಕಥೆಗಳನ್ನು ಒಳಗೊಂಡಿದೆ.

    Original price was: $1.08.Current price is: $0.65.
    Add to basket
  • -40%

    ಪುಟಪಾಕ

    0

    ಪುಟಪಾಕ
    ಈ ಪುಸ್ತಕವು ಸತ್ಯೇಶ್ ಎನ್. ಬೆಳ್ಳೂರ್ ಅವರು ಬರೆದ ಸಣ್ಣ ಕತೆಗಳನ್ನು ಒಳಗೊಂಡಿದೆ.

    Original price was: $1.44.Current price is: $0.86.
    Add to basket
  • -40%

    ಬಯಲು

    0

    ಬಯಲು
    ಈ ಪುಸ್ತಕವು ವಸಂತಮಾಧವ ಹೆಗಡೆಕಟ್ಟೆ ಅವರು ಬರೆದ ಕಥಾ ಸಂಕಲನವಾಗಿದೆ.

    Original price was: $0.60.Current price is: $0.36.
    Add to basket
  • -100%

    ಕಥೆಗೊಂದು ಕತೆ

    0

    ಕಥೆಗೊಂದು ಕತೆ
    ಈ ಪುಸ್ತಕವು ಶ್ರೀ ಢಾಣಕ ಶಿರೂರು ಅವರ ಕಥಾ ಸಂಕಲನವಾಗಿದೆ.

    Original price was: $1.44.Current price is: $0.00.
    Add to basket
  • -40%

    ಮಾಯಿಯ ಮುಖಗಳು

    0

    ಮಾಯಿಯ ಮುಖಗಳು

    ರಾಘವೇಂದ್ರ ಪಾಟೀಲರು ಬರೆದಂತಹ ಈ ಕಥೆಗಳು ಮನುಷ್ಯನ ನಿತ್ಯದ ಎಚ್ಚರದ ಲೋಕಕ್ಕೆ ಸಂಭಧಿಸಿದ್ದರೇ ಇನ್ನೊಂದು ಅಗಮ್ಯ ಅಘೋಚರವಾದದ್ದು. ಹಾಗೆ ಉತ್ತರ ಕರ್ನಾಟಕದ ಆಡು ಭಾಷೆಯ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.

    Original price was: $1.56.Current price is: $0.94.
    Add to basket
  • -40%

    ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ

    0

    ಶ್ರೀ ಎಸ್. ದಿವಾಕರ್ ಅವರು “ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ’’ ಎಂಬ ಹೆಸರಿನಲ್ಲಿ ಜಗತ್ತಿನ ಅತಿ ಸಣ್ಣಕತೆಗಳನ್ನು ಸಂಗ್ರಹಿಸಿದ್ದಾರೆ. ಸುಮಾರು ೬೬ ಕತೆಗಳನ್ನು ಒಳಗೊಂಡಿರುವ ಈ ಹೊತ್ತಿಗೆ ಫ್ರಾನ್ಸ್, ರಷ್ಯಾ, ಪೋರ್ಚುಗೀಸ್, ಸ್ಪ್ಯಾನಿಶ್, ಅಮೆರಿಕ, ಸ್ವಿಡನ್, ದಕ್ಷಿಣ ಆಫ್ರಿಕಾ, ಅರ್ಜೆಂಟೀನಾ, ಇಸ್ರೆಲ್, ಗ್ರೀಸ್, ಹಂಗೇರಿ ಇನ್ನೂ ಹಲವಾರು ದೇಶಗಳ ಲೇಖಕರ ಕತೆಗಳನ್ನು ಕನ್ನಡಕ್ಕೆ ತಂದಿರುವುದು ಲೇಖಕರ ಎಲ್ಲ ಭಾಷೆಯ, ಎಲ್ಲ ಕಾಲದ, ಎಲ್ಲ ರೀತಿಯ ಬರಹಗಳ ಆಸಕ್ತಿಯನ್ನು ತಿಳಿಸುವಂತದ್ದು.

    Original price was: $1.92.Current price is: $1.15.
    Add to basket
  • -40%

    ದೇಸಗತಿ

    0

    ದೇಸಗತಿ ಇದು ಶ್ರೀ ರಾಘವೇಂದ್ರ ಪಾಟೀಲರು ಬರೆದ ಕಥೆಗಳನ್ನೊಳಗೊಂಡಿದೆ. ಇದು ದೇಸಿ ಕಥೆಗಳಾಗಿವೆ. ಇವುಗಳಲ್ಲಿ ಹಳ್ಳಿಯ ಭಾಷೆ, ಜೀವನ ಅಡಕವಾಗಿದೆ.

    Original price was: $1.56.Current price is: $0.94.
    Add to basket
  • -40%

    ಕೇರಳ ಕಾಂತಾಸಮ್ಮಿತ

    0

    ಶ್ರೀಮತಿ ಕಮಲಾ ಹೆಮ್ಮಿಗೆ ಅವರು ಭಾಷಾಂತರಿಸಿದ ಮಲೆಯಾಳಂ ಕತೆಗಳ ಸಂಕಲನ “ಕೇರಳ ಕಾಂತಾಸಮ್ಮಿತ”. ಯಾವದೇ ಸಂಸ್ಕೃತಿಯ ಅತ್ಯಂತ ಸೂಕ್ಷ್ಮ ಸೂಚಕವನ್ನು (cultural index) ಗುರುತಿಸಿಕೊಳ್ಳಬೇಕೆನ್ನುವುದಾದರೆ ಆ ಸಂಸ್ಕೃತಿಯ ಸ್ತ್ರೀಸಂವೇದನೆ, ಸ್ತ್ರೀ-ಪ್ರಜ್ಞೆಗೆ ಹೋಗಬೇಕಾಗುತ್ತದೆ. ಯಾಕೆಂದರೆ, ಸ್ತ್ರೀಯರು ನಿಜವಾದ ಅರ್ಥದಲ್ಲಿ ಸಂಸ್ಕೃತಿಯ ಕಷ್ಟೋಡಿಯನ್ ಆಗಿರುತ್ತಾರೆ. ಸ್ತ್ರೀ ಸಂವೇದನೆಯ ಅಭಿವ್ಯಕ್ತಿ ಮಾಧ್ಯಮಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವುದರಿಂದ ಆಯಾ ಸಂಸ್ಕೃತಿಯ ಆರೋಗ್ಯ-ಅನಾರೋಗ್ಯ, ತೃಪ್ತಿ-ಅತೃಪ್ತಿ, ಸುಭಗತೆ-ತಳಮಳ, ಸಮತೋಲ-ಅಸಮತೋಲಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಕಮಲಾ ಹೆಮ್ಮಿಗೆಯವರು ತಮ್ಮ ಈ – “ಕೇರಳ ಕಾಂತಾಸಮ್ಮಿತ” ಸಂಕಲನದಲ್ಲಿ, ಇಪ್ಪತ್ತನೆಯ ಶತಮಾನದ ಮಲೆಯಾಳೀ ಭಾಷೆಯ ಮಹತ್ವದ ಮಹಿಳಾ ಕಥೆಗಳನ್ನು ಸಂಗ್ರಹಿಸಿ ಕೊಡುವ ಮೂಲಕ ಮಲೆಯಾಳೀ ಸಂಸ್ಕೃತಿಯಲ್ಲಿನ `ಸ್ತ್ರೀ ಸಂವೇದನಾ ಸಂಚಯ’(mass of feminine conscience)ವನ್ನು ಸೃಷ್ಟಿಮಾಡಿ ಕೊಟ್ಟಿದ್ದಾರೆ.

    Original price was: $3.12.Current price is: $1.87.
    Add to basket
  • -40%

    ಓ ಹೆನ್ರಿ ಕಥೆಗಳು

    0

    ವಿಲಿಯಂ ಸಿಡ್ನೆ ಪೋರ್ಟರ್ (1862-1910) ಅಮೇರಿಕೆಯ ಅತ್ಯಂತ ಪ್ರಸಿದ್ಧ ಸಣ್ಣ ಕಥೆಗಳ ಲೇಖಕ. ಅವನ ಕಾವ್ಯನಾಮ ಓ-ಹೆನ್ರಿ. ಆತ ಆರುನೂರಕ್ಕೂ ಹೆಚ್ಚು ಕಥೆಗಳನ್ನು ರಚಿಸಿದ ಪ್ರತಿಭಾವಂತ. ಅವನು ಹಣದ ದುರುಪಯೋಗ ಮಾಡಿದ ಅಪರಾಧಕ್ಕಾಗಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವಾಗ ಕಥೆಗಳನ್ನು ಬರೆಯಲು ಪ್ರಾರಂಭಿಸಿದ. ಓ-ಹೆನ್ರಿಯ ಕಥೆಗಳ ವಿಶೇಷತೆ ಹಾಗೂ ಹೆಗ್ಗುರುತೆಂದರೆ ಅವುಗಳ ಆಶ್ಚರ್ಯಕರವಾದ ಅಂತ್ಯ. ಅವನ ಕಥೆಗಳಲ್ಲಿ ಕಂಡುಬರುವ ಅನಿರೀಕ್ಷಿತ ಬದಲಾವಣೆಗಳು ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುತ್ತವೆ. ಓ-ಹೆನ್ರಿಯ ಕಥೆಗಳು ಅಮೇರಿಕೆಯ ಸಾಮಾನ್ಯ ಹಾಗೂ ಅತಿಸಾಮಾನ್ಯ ಜನರ ಅಪೇಕ್ಷೆಗಳನ್ನು, ಆಕಾಂಕ್ಷೆಗಳನ್ನು, ಹತಾಶೆಗಳನ್ನು, ಸಂಭ್ರಮಗಳನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸುತ್ತವೆ. ಪ್ರತಿಯೊಂದು ಕಥೆಯೂ ಮನುಷ್ಯ ಸ್ವಭಾವದ ಒಳನೋಟಗಳನ್ನು ನೀಡುತ್ತ, ಆ ಸ್ವಭಾವ, ಬದುಕಿನ ಅನಿವಾರ್ಯ ಹೋರಾಟಗಳ ಫಲಶೃತಿಗಳಾದ ಪ್ರೀತಿ, ದ್ವೇಷ, ಬಡತನ, ಆತ್ಮಗೌರವ, ಮೋಸ, ಅಪರಾಧಗಳಿಂದ ಬದಲಾಗುವುದನ್ನು ಹೃದಯಕ್ಕೆ ಮುಟ್ಟುವಂತೆ ತಲುಪಿಸುತ್ತದೆ. ಈ ಕಥಾಸಂಕಲನದಲ್ಲಿ ಓ ಹೆನ್ರಿಯ ಪ್ರಾತಿನಿಧಿಕ ಇಪ್ಪತ್ತು ಅನುವಾದಿತ ಕಥೆಗಳಿವೆ.

    Original price was: $1.92.Current price is: $1.15.
    Add to basket
  • -40%

    ಸಾವಿನ ಸೆರಗಿನಲ್ಲಿ

    0

    ನಿವೃತ್ತ ಪೋಲೀಸ್ ಮಹಾನಿರ್ದೇಶಕರಾದ ಡಾ. ಡಿ. ವಿ. ಗುರುಪ್ರಸಾದರು “ಸಾವಿನ ಸೆರಗಿನಲ್ಲಿ” ಎಂಬ ಕುತೂಹಲಕಾರಿ ಕೃತಿಯನ್ನು ರಚಿಸಿದ್ದಾರೆ. ಮರಣದಂಡನೆಗೀಡಾದ ಪ್ರತಿಯೊಬ್ಬ ಕೈದಿಯನ್ನು ಜೈಲಿನಲ್ಲಿ ಸಂದರ್ಶನ ಮಾಡಿ ಅಪರಾಧಿಗಳ ಮನಸ್ಸಿನ ಒಳಸುರುಳಿಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟು ಪಾಪಿಗಳ ಲೋಕಕ್ಕೆ ಕ್ಷ-ಕಿರಣವನ್ನು ಬೀರಿದ್ದಾರೆ. ಒಟ್ಟು 14 ಕತೆಗಳು ಇಲ್ಲಿ ನಿರೂಪಿಸಿದ್ದಾರೆ.

    Original price was: $2.40.Current price is: $1.44.
    Add to basket
  • -40%

    ಚಿತ್ತ ಚಿತ್ತಾರ

    0

    ಈ ಕೃತಿಯು ಶ್ರೀಮತಿ ಮಾಲತಿ ಮುದಕವಿಯವರು ಬರೆದ ಕಥೆಗಳನ್ನು ಒಳಗೊಂಡಿದೆ. ಮಹಿಳೆಯರ ಜೀವನದ ವಾಸ್ತವ ಚಿತ್ರಣ, ಬದಲಾದ ಪರಿಸ್ಥಿತಿಯಲ್ಲಿಯೂ ಮುಂದೆ ಸಾಗಿದ ಗಂಡು-ಹೆಣ್ಣಿನಲ್ಲಿಯ ತಾರತಮ್ಯ, ಹೆಣ್ಣಿನ ಅಸಹಾಯಕ ಸ್ಥಿತಿ, ಅಸ್ತಿತ್ವಕ್ಕೆ ಬಂದ ಹೊಸ ಸಮಸ್ಯೆಗಳು – ಇವೆಲ್ಲವುಗಳಿಗೆ ಪ್ರಸ್ತುತ ಕಥಾ ಸಂಕಲನವು ತನ್ನದೇ ಆದ ವಿಶಿಷ್ಟ ಕನ್ನಡಿಯನ್ನು ಹಿಡಿಯುತ್ತದೆ.

    Original price was: $1.20.Current price is: $0.72.
    Add to basket
  • -40%

    A Bond so Sacred

    0

    A Bond So Sacred tells the story of Raman, a satyagrahi, who adopts Kokila, an orphan.

    Original price was: $5.40.Current price is: $3.24.
    Add to basket
  • -40%

    ಟಕ್ ಟಿಕ್ ಪೆನ್ನು

    0

    ಟಕ್ ಟಿಕ್ ಪೆನ್ನು
    ಟಕ್ ಟಿಕ್ ಪೆನ್ನು ಈ ಪುಸ್ತಕವು ಶ್ರೀ ನರೇಂದ್ರ ಪೈ ಅವರು ಬರೆದ ಕಥೆಗಳನ್ನು ಒಳಗೊಂಡಿದೆ.

    Original price was: $0.48.Current price is: $0.29.
    Add to basket
  • -40%

    ಮೀಸೆ ಮಾವ

    0

    ಮೀಸೆ ಮಾವ

    ಮೀಸೆ ಮಾವ- ಶ್ರೀ ಭಾಸ್ಕರ ಹೆಗಡೆಯವರ ಕಥಾಸಂಕಲನ .

    Original price was: $1.56.Current price is: $0.94.
    Add to basket
  • -40%

    ತುಕ್ಕಪ್ಪಾ ಮಾಸ್ತರ

    0

    ತುಕ್ಕಪ್ಪಾ ಮಾಸ್ತರ
    (ಕತೆಗಳು)

    ಶ್ರೀ ಚಂದ್ರಕಾಂತ ಕುಸನೂರ

    ಈ ಕೃತಿಯು ಶ್ರೀ ಚಂದ್ರಕಾಂತ ಕುಸನೂರರ ೮ ವಿಭಿನ್ನ ಕತೆಗಳನ್ನು ಒಳಗೊಂಡಿದೆ.

    Original price was: $1.20.Current price is: $0.72.
    Add to basket
  • -52%

    ಮೊಲೆವಾಲು ನಂಜಾಗಿ

    0

    ಮೊಲೆವಾಲು ನಂಜಾಗಿ

    ಕತೆಗಳು

    ಶ್ರೀ ಮಲ್ಲಿಕಾರ್ಜುನ ಹಿರೇಮಠ

    ‘‘ಮೊಲೆವಾಲು ನಂಜಾಗಿ….’’ ಎಂಬ ಈ ಕಥಾ ಸಂಕಲನದ ತಲೆ ಬರಹವನ್ನು ಅವರು ಬಸವಣ್ಣನವರ ಒಂದು ವಚನದಿಂದ ಆಯ್ದುಕೊಂಡಿದ್ದಾರೆ. ಅಲ್ಲದೆ ಆ ಹೆಸರಿನ ಕಥೆಯೊಂದು ಈ ಸಂಕಲನದ ಕೇಂದ್ರದಲ್ಲಿಯೇ ಇದೆ. ‘‘ಅವನತಿ’’ ಕಥೆಯು ಮೇಲ್ನೋಟಕ್ಕೆ ಒಂದು ಗ್ರಾಮೀಣ ಪ್ರದೇಶದಲ್ಲಿಯ ಕಾಲೇಜಿನಲ್ಲಿ ನಡೆಯುವ ವಿದ್ಯಮಾನದಂತೆ ತೋರುತ್ತದೆ. ‘‘ತಯಾರಿ’’ ಕಥೆಯು  ಹೆಚ್ಚು ಜಟಿಲವಾಗಿದ್ದು ಕಥೆಯು ಸ್ತ್ರೀ ಕೇಂದ್ರಿತವಾಗಿದೆ. ವಿಧವೆಯೊಬ್ಬಳು ಮರುಮದುವೆಯಾಗಿದ್ದಾಳೆ. ಅವಳ ಮನೆಯವರ ವಿರೋಧದಿಂದಾಗಿ ಮತ್ತು ಗಂಡನ ತಂದೆ-ತಾಯಿಗಳಿಗೆ ಈ ಮದುವೆ ಸ್ವೀಕೃತವಾಗಿಲ್ಲವಾದುದರಿಂದ, ಪ್ರೀತಿಯ ಆಧಾರವೊಂದರಲ್ಲಿಯೇ ಅವರು ಬಾಳಬೇಕಾಗಿದೆ. ಆದರೆ ಪ್ರೀತಿಯೊಂದೇ ಆಧಾರವಾಗಿ ಬಾಳಬೇಕಿದ್ದ ಮಹಿಳೆಯು ತನ್ನ ಗಂಡನನ್ನೇ ಅರ್ಥಾತ್ ತನ್ನ ಪ್ರೀತಿಯನ್ನೇ ಕಳೆದುಕೊಂಡಾಗ ಬದುಕಲು ಅವಳು ಮಾಡಿಕೊಳ್ಳಬೇಕಾದ ಸಿದ್ಧತೆಯೇ ಈ ಕಥೆಯ ವಸ್ತು. ಸಂಕಲನದ ಕೊನೆಯ ಕಥೆ ‘‘ಮಾಗಿ’’ ಸ್ವಲ್ಪ ದೀರ್ಘವಾದ ಕತೆಯೆ. ಮೂವರು ಮಿತ್ರರು ಒಂದು ಪ್ರವಾಸದಲ್ಲಿ ತಮ್ಮನ್ನೇ ತಾವು ಗುರುತಿಸಿಕೊಳ್ಳುವ ವಿಧಾನವನ್ನು ಕುರಿತು  ಕಥೆಯು ಚಿಂತಿಸುತ್ತದೆ. 

    Original price was: $1.80.Current price is: $0.86.
    Add to basket
  • -29%

    Time Renewed !

    0

    A Scientific Thriller

    Original price was: $0.83.Current price is: $0.59.
    Add to basket
  • -40%

    ಮಹಾಪ್ರಸ್ಥಾನ

    0

    ಮಹಾಪ್ರಸ್ಥಾನ

    ಒಬ್ಬಳೇ ಹಿಂದೆ ಹಿಂದೆ ಅನುಸರಿಸುತ್ತಾ, ಪಾಂಡವರು ಮುಂದೆ ಮುಂದೆ ಸರಿಯುತ್ತಾ, ಇವಳ ಹೃದಯಾಳದ ನೋವಿನ ಪಾತಾಳಗರಡಿಯ ದರ್ಶನದಲ್ಲಿ ನನಗೆ ಅನೇಕ ತಾತ್ತ್ವಿಕ ಪ್ರಶ್ನೆಗಳನ್ನು ಎತ್ತಿ, ಆಯಾಮಗಳನ್ನು ವಿವರಿಸುವ ಅವಕಾಶವೂ ಲಭ್ಯವಾಯ್ತು. ಏನು ಈ “ಸಶರೀರಸ್ವರ್ಗಪ್ರಾಪ್ತಿ” ಎಂದರೆ? ಧರ್ಮಜ ಹಾಗೆ ಆಶಿಸಿದ್ದು ಯುಕ್ತವೇ? ತಮ್ಮಂದಿರಿಗೆ, ಪತ್ನಿಗೆ ಬಲಾತ್ಕಾರ ‘ಆರೋಹಣವೇ?’ “ಎಲ್ಲಿಗೆ” ಎಂದರೆ, ತಿಳಿಯದವರಿಗೆ “ಸ್ವರ್ಗಾರೋಹಣದ ಬಲಾತ್ಕಾರವೇಕೆ? ಅದು ಅವರಿಗೆ ಸಾಧ್ಯವೂ ಆಗಲಿಲ್ಲವೆಂದಾದರೆ, ಧರ್ಮಜನಿಗೆ ಮುಂಚೆ ಏಕೆ ತಿಳಿಯಲಿಲ್ಲ? ಮೂಲ ಮಹಾಭಾರತದಲ್ಲಿ ಈ ಯಾವುದೂ ಸ್ಪಷ್ಟ ಉತ್ತರ ಪಡೆದಿಲ್ಲ. ನಮಗೆ, ಇಂದಿನವರಿಗೆ ಪ್ರಶ್ನೆ ತೀರುವುದಿಲ್ಲ! ಹೇಗೆ ಬಗೆಹರಿಸುವುದು? ಈ ದಿಸೆಯಲ್ಲೇ ಇಲ್ಲಿ ಕಥೆ, ಅದರ ಸೂತ್ರ ನಡೆಯುತ್ತದೆ.

    Original price was: $1.80.Current price is: $1.08.
    Add to basket
  • -40%

    ಅಮೀನಪುರದ ಸಂತೆ

    0

    ಅಮೀನಪುರದ ಸಂತೆ
    ಕಥಾ ಸಂಕಲನ

    ಕನ್ನಡ ರಂಗಭೂಮಿಯ ವೈವಿಧ್ಯಗಳನ್ನು ಹೆಚ್ಚಿಸಿದ್ದಾರೆ. ಮಾಸ್ತಿ, ಅನಂತಮೂರ್ತಿ, ತೇಜಸ್ವಿ, ಕುಂ.ವೀರಭದ್ರಪ್ಪ ಮೊದಲಾದವರು ಸಣ್ಣಕತೆಗಳ ಆಳ, ವಿಸ್ತಾರವನ್ನು ಗಮನಾರ್ಹವಾಗಿ ವಿಸ್ತರಿಸಿದ್ದಾರೆ. ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯಗಳೆಂಬ ಘಟ್ಟಗಳ ಮೂಲಕ ಹಾದು ಬಂದ ಕನ್ನಡ ಸಾಹಿತ್ಯವು ಈ ಶತಮಾನದ ಅಂಚಿನಲ್ಲಿ ಮತ್ತೆ ಹೊಸತನಕ್ಕಾಗಿ ಹಾತೊರೆಯುತ್ತಿದೆ. ಮಲ್ಲಿಕಾರ್ಜುನ ಹಿರೇಮಠರವರ ‘ಅಮೀನಪುರದ ಸಂತೆ’ಯಲ್ಲಿ ಅಂತಹ ಹೊಸ ಬಗೆಯ ತುಡಿತ ವೊಂದಿರುವುದನ್ನು ಪ್ರಸ್ತುತ ಪ್ರಬಂಧದಲ್ಲಿ ಗುರುತಿಸಲು ಪ್ರಯತ್ನಿಸಲಾಗಿದೆ.

    Original price was: $0.84.Current price is: $0.50.
    Add to basket
  • -40%

    ಶ್ರೀ ಭಾಗವತ ಕಥಾ ಪ್ರಪಂಚ

    0

    ಶ್ರೀ ಭಾಗವತ ಕಥಾ ಪ್ರಪಂಚ

    ಶ್ರೀ ಭಾಗವತಧಾರಾತೀರ್ಥ ವಾಹಿನಿ

    ಈ “ಶ್ರೀ ಭಾಗವತ ಧಾರಾತೀರ್ಥವಾಹಿನೀ-ಶ್ರೀ ಭಾಗವತ ಕಥಾ ಪ್ರಪಂಚ” ಗ್ರಂಥದ ಪ್ರಕೃತ ಸಂಪುಟದ ಬಹುಭಾಗವನ್ನು ನಾನು ಬರೆದೇ ೧೬- ಅಥವಾ ೧೮ ವರ್ಷಗಳಾಗಿರಬೇಕು. ಮೊದಲ ಭಾಗಕ್ಕೆ ಸೇರ್ಪಡೆಯಾಗಬೇಕಿದ್ದ ಇನ್ನಷ್ಟನ್ನು ಇದೀಗ ಸೇರಿಸಿ ಒಂದು ರೂಪಕ್ಕೆ ತಂದು, ನನ್ನ ಮಿತ್ರ ಶ್ರೀ ಸುಬ್ರಹ್ಮಣ್ಯ ಅವರ ಪ್ರಕಾಶನದಿಂದ ಪ್ರಕಟಿಸಿ ನಿಮ್ಮ ಕೈ ಸೇರುವಂತೆ ಮಾಡಲಾಗಿದೆ. “ಈ ಗ್ರಂಥ ಏಕೆ ಇಷ್ಟು ತಡವಾಯಿತು? ಇದರಲ್ಲೇನಿದೆ? ಇದರ ಅವಶ್ಯಕತೆಯೇನು?” ಎಂಬ ಬಗೆಗೆ ನಾಲ್ಕು ಮಾತು ವಿವರಣೆ ಅವಶ್ಯವಾಗುತ್ತದೆ.
    “ಶ್ರೀಕೃಷ್ಣಾವತಾರ” (ಎರಡು ಭಾಗಗಳು) ಬರೆದಾಗಿತ್ತು. ಮೊದಲನೆಯದು ಭಾಗವತ ದಶಮಸ್ಕಂಧದ ಪೂರ್ವಾರ್ಧದ ಕಾದಂಬರೀಕರಣ, ಕಥಾರೂಪ ನಿವೇದನೆಯಾಗಿದ್ದು “ತರಂಗ” ವಾರಪತ್ರಿಕೆಯಲ್ಲಿ ಪ್ರಕಟವಾಗಲು ವಾರಾವಾರಾ ಕಂತಿನಲ್ಲಿ ಬರುವಂತೆ ಬರೆಯಲಾಗಿದ್ದು ಪ್ರಕಟವೂ ಆಯಿತು.

    Original price was: $4.20.Current price is: $2.52.
    Add to basket
  • -40%

    ಅತಿಥಿ ದೇವೋ ಭವ

    0

    ಅತಿಥಿ ದೇವೋ ಭವ
    (ಅತಿಥಿಯ ರಸಪ್ರಸಂಗಗಳು)

    ಸ್ವಾಮಿರಾವ ಕುಲಕರ್ಣಿಯವರ  `ಅತಿಥಿ ದೇವೋ ಭವ’ ಎಂಬ ಅತಿಥಿಯ ಅನುಭವಗಳ ರಸಪ್ರಸಂಗಗಳ ಕುರಿತಾಗಿ ಬರೆದ ಪ್ರಬಂಧಗಳ ಸಂಕಲನ.
    “ಕನ್ನಡ ಸಾಹಿತ್ಯದಲ್ಲಿ ಇದೊಂದು ಹೊಸ ಪ್ರಯೋಗದ ಅಪರೂಪದ ಸಾಹಿತ್ಯ ಪ್ರಕಾರವಾಗಿದೆ.” ೧೯೯೮ರಲ್ಲಿ ಪ್ರಕಟವಾದ ನನ್ನ `ರಂಗನಾಟಕದ ರಸಪ್ರಸಂಗಳು’- ರಂಗಾನುಭವದ ಕಿರುಲೇಖನಗಳ ಕೃತಿಯ ಬಗ್ಗೆ ಹಿರಿಯ ಸಾಹಿತಿ ದಿ. ಡಾ. ಹಾ. ಮಾ. ನಾಯಕರ ಮಾತುಗಳಿವು. ರಂಗಭೂಮಿಯ ಹಿರಿಯರಾದ ಮಾಸ್ಟರ್ ಹಿರಣ್ಣಯ್ಯನವರು “ನಾನೂ ಹಲವು ದಶಕಗಳಿಂದ ನಾಟಕ ಮಾಡತಿದ್ದೀನಿ. ಇಂತಹ ಅನೇಕ ಘಟನೆಗಳು, ಪ್ರಸಂಗಗಳು ನಡೆದಿವೆ. ನಿಮ್ಮ `ರಂಗನಾಟಕಗಳ ರಸಪ್ರಸಂಗಗಳು’ ಓದಿದ ಮೇಲೆ, ನಾನು ಇಂತಹ ಪ್ರಸಂಗಗಳನ್ನು ಬರೆಯದೇ ತಪ್ಪು ಮಾಡಿದೆ ಅನಿಸುತ್ತದೆ.’ ಈರ್ವರು ಹಿರಿಯರ ಈ ಮಾತುಗಳೇ `ಅತಿಥಿ ದೇವೋಭವ’ ಬರಹಕ್ಕೆ ಮೂಲ ಪ್ರೇರಣೆಯಾಗಿವೆ.

    Original price was: $0.84.Current price is: $0.50.
    Add to basket
  • -40%

    ಮ್ಯೂಟೇಶನ್

    0

    ಮ್ಯೂಟೇಶನ್
    (ಕಥಾಸಂಕಲನ)

    ಇದು ‘ಆರಾಮಕುರ್ಚಿ ಮತ್ತು ಕತೆಗಳು’ ನಂತರದ, ನನ್ನ ಎರಡನೆಯ ಕಥಾಸಂಕಲನವಾಗಿದೆ. ಈ ಕತೆಗಳನ್ನು ಬೇರೆ ಬೇರೆ ಕಾಲಘಟ್ಟದಲ್ಲಿ ಬರೆಯಲಾಗಿದೆ. ಸಣ್ಣಕತೆಗಳು ನನ್ನನ್ನು ತಿಳಿಗೊಳಿಸುತ್ತಾ ಬಂದಿವೆ. ಬರೆದಾದ ಮೇಲೆ ಅವುಗಳಲ್ಲಿ ನನ್ನ ಮುಖ ನೋಡುತ್ತಾ ಸಂತೋಷಪಟ್ಟಿದ್ದೇನೆ. ಅಲ್ಲಿ ಕಂಡ ಇತರ ಮುಖಗಳು ಕೂಡ ಅಚ್ಚರಿ ಹುಟ್ಟಿಸಿವೆ. ಬರೆಯುವ ಕ್ರಿಯೆಯೇ ನನ್ನನ್ನು ನಾನು ಶುದ್ಧೀಕರಿಸಿಕೊಳ್ಳುವ ಕ್ರಿಯೆಯಾಗಿದೆ. ಬರೆದಾದ ಮೇಲೆ ಅದು ಮೂಡಿಸುವ ಪ್ರಸನ್ನತೆ ಬಿಡುಗಡೆಯ ಭಾಗ್ಯ ಕೊಟ್ಟಿದೆ. ನಾಟಕ, ಕಾವ್ಯ ಸಾಹಿತ್ಯದ ಪ್ರಮುಖ ಅಂಗಗಳಾದರೂ ಕೂಡ, ಕತೆ-ಕಾದಂಬರಿ ಮಾತ್ರ ಪೂರ್ಣದೇಹಿಗಳಂತೆ ಕಂಡಿವೆ. ಬಹುತೇಕ ಓದುಗರು ಸಣ್ಣಕತೆಗಳಿಗೆ ಭೇಟಿಕೊಡುವಷ್ಟು, ಉಳಿದ ಪ್ರಕಾರಗಳಿಗೆ ಭೇಟಿ ಕೊಡಲಾರರು. ಸಣ್ಣಕತೆಯ, ಸಣ್ಣದೆನ್ನುವ ಭಾವನೆಯೇ ಮನುಷ್ಯನ ಸಾವನ್ನು ನೆನಪಿಸುತ್ತಿರಬಹುದು! ಹುಟ್ಟು ಸಾವಿನ ಮಧ್ಯದ ಬದುಕು ಬರಿ ಸಣ್ಣ ಕತೆಯಾಗಿರಬಹುದು! ಹೀಗಾಗಿ ಓದುಗರಿಗೆ ಇದರ ಬಗ್ಗೆ ವಿಲಕ್ಷಣವಾದ ಸೆಳೆತವಿದೆ.

    Original price was: $0.84.Current price is: $0.50.
    Add to basket
  • -40%

    ಕಾಲು ದಾರಿಯ ಕಥನಗಳು

    0

    ಕಾಲು ದಾರಿಯ ಕಥನಗಳು
    (ಜಾನಪದ-ಜೀವನ-ಕಥನ)

    ಶ್ರೀ ಕೃಷ್ಣಮೂರ್ತಿ ಹನೂರು ಇವರ `ಕಾಲು ದಾರಿಯ ಕಥನಗಳು’ (ಜಾನಪದ-ಜೀವನ-ಕಥನ) ಕೃತಿಯನ್ನು ಚಂದಾದಾರರಿಗೆ ತಲುಪಿಸಲು ಸಂತೋಷವಾಗುತ್ತಿದೆ. ಶ್ರೀ ಹನೂರು ಅವರು ತಮ್ಮ ಜೀವನದ ಅಮೂಲ್ಯ ಭಾಗವನ್ನು ಜಾನಪದ ಜೀವನದೊಂದಿಗೆ ಕಳೆದು, ಅದು ನಶಿಸಿ ಹೋಗದಂತೆ ತಮ್ಮ ಅಕ್ಷರ ಸಾಹಿತ್ಯದ ಮೂಲಕ ಕೊನೆಯವರೆಗೂ ಉಳಿಯುವಂತೆ ನೋಡಿಕೊಂಡಿದ್ದಾರೆ. ಅವರಿಗೆ ಕನ್ನಡ ಸಾಹಿತ್ಯ ಋಣಿಯಾಗಿರಬೇಕು.

    Original price was: $3.12.Current price is: $1.87.
    Add to basket
  • -40%

    ಮಲೆನಾಡಿನ ರೋಚಕ ಕತೆಗಳು

    0

    ಮಲೆನಾಡಿನ ರೋಚಕ ಕತೆಗಳು
    (ಸುಧಾ ಧಾರಾವಾಹಿ `ಕಾಫಿನಾಡಿನ ಕಿತ್ತಳೆ’ಯ ಪರಿಷ್ಕೃತ ಮುದ್ರಣ)
    ಶತಮಾನದಲ್ಲಿ ಇದ್ದಕ್ಕಿದ್ದಂತೆ ಚಿಗುರೊಡೆದು ದಿಕ್ಕು ದಿಕ್ಕುಗಳಲ್ಲಿ ಹರಡತೊಡಗಿತು. ಅದರಲ್ಲೂ ತೀರ ಇತ್ತೀಚಿನ ಕಂಪ್ಯೂಟರ್, ಮೊಬೈಲ್ ಮತ್ತು ಇಂಟರ್ ನೆಟ್ ಗಳು ಕ್ರಾಂತಿಯನ್ನೇ ಮಾಡಿದವು. ನಮ್ಮ ಭೂಮಂಡಲದ ಒಳಗಿರುವ ದೇಶಗಳು ನಮಗೀಗ ನೆರೆಮನೆಗಳಾಗಿವೆ. ನಾವೀಗ ಇಪ್ಪತ್ತೊಂದನೆ ಶತಮಾನದ ಹೊಸ್ತಿಲಲ್ಲಿದ್ದೇವೆ. ನಾವು ಅಂದರೆ ಮಧ್ಯ ವಯಸ್ಸು ದಾಟಿದವರು ಕಳೆದ ಶತಮಾನದ ಮತ್ತು ಮುಂದಿನ ಆಧುನಿಕ ಜನಾಂಗದ ನಡುವಿನ ಕೊಂಡಿಗಳಾಗಿದ್ದೇವೆ. ಬಹಳಷ್ಟು ಹಳೆಯ ಸಂಗತಿಗಳು ನಮ್ಮೊಂದಿಗೇ ಅಳಿಸಿ ಹೋಗಲಿವೆ. ಏಕೆಂದರೆ ಈಗಿನ ಮಕ್ಕಳು ಮೊಬೈಲ್ ಮತ್ತು ಕಂಪ್ಯೂಟರುಗಳನ್ನು ಕೈಯಲ್ಲಿ ಹಿಡಿದೇ ಎಂಬಂತೆ ಜನ್ಮ ತಾಳುತ್ತಿದ್ದಾರೆ. ನಡೆದೇ ಶಾಲೆಗೆ ಹೋಗುವ, ಮನೆಗಳಿಗೆ ಹೋಗಿ ಸಂಗತಿ ತಿಳಿಸುವ, ಪತ್ರ ಮುಖೇನ ವಿಷಯ ರವಾನಿಸುವ, ಟೆಲಿಗ್ರಾಂ ಕಳಿಸುವ ಕಾಲವಿತ್ತು ಎನ್ನುವುದರ ಅರಿವೇ ಇಲ್ಲದಂತೆ ಬೆಳೆಯುತ್ತಿದ್ದಾರೆ ಈಗಿನ ಮಕ್ಕಳು. ಈಗೊಂದು ನಲವತ್ತು ವರ್ಷಗಳ ಹಿಂದಿನ ದಶಕದ ಕಾಲಘಟ್ಟದಲ್ಲಿ ಹೀಗೆಲ್ಲಾ ಇತ್ತು ಎಂದರೆ ನಂಬಲಾಗದ ಸ್ಥಿತಿ ಅವರದು! ಅಂಥವರಿಗೆ `ಮಲೆನಾಡು ಎಂದರೆ ಹೇಗಿರುತ್ತದೆ? ಆಗಿನ ನಮ್ಮ ಬದುಕು ಹೇಗಿತ್ತು? ಅದರೊಳಗೂ ಯಾವೆಲ್ಲಾ ರೋಚಕ ಸಂಗತಿಗಳಿರುತ್ತಿದ್ದವು ಎನ್ನುವುದು ತಿಳಿಯುವುದಾದರೂ ಹೇಗೆ?’ ಇದರಲ್ಲಿ ವಿವರಿಸಿದ ಘಟನೆಗಳ ಚಿತ್ರಣದಿಂದ ಅದರ ಬಗ್ಗೆ ಒಂದು ಸ್ಪಷ್ಟ ಕಲ್ಪನೆ ಬರಬಹುದು.

    Original price was: $1.56.Current price is: $0.94.
    Add to basket