• -40%

    ಕಥೆ ಹೇಳುವೆ ಬಾ ಕಂದ

    0

    ಕಥೆ ಹೇಳುವೆ ಬಾ ಕಂದ
    ಈ ಪುಸ್ತಕವು ಹಲವಾರು ಕಥೆಗಳನ್ನು ಒಳಗೊಂಡಿದೆ. ಆ ಕಥೆಗಳೆಂದರೆ :
    ಬುದ್ಧಿವಂತ ಬದರಿ, ನರಿಯ ಸೇಡು, ಹಸಿರು ಚಿನ್ನ, ಮುಯ್ಯಿಗೆ ಮುಯ್ಯಿ, ಕುಸ್ತಿ ಕಲಿತ ಆಮೆ, ಮಂಗೂಸ್ ಮತ್ತು ಹಾವು, ರೈತ ರಾಮಣ್ಣ,  ಪಾಠ ಕಲಿತ ಒಂಟೆ,  ನರಿಯ ಮೋಸ,ಸೊಂಬೇರಿ ಮೊಲ, ಸಿಂಹದ ಜನ್ಮ ದಿನ, ಮೂರ್ಖ ನಾಯಿಗಳು, ಬೆಲೆಯಿಲ್ಲದ ಧನ್ಯತೆ, ವ್ಯಾಪಾರಿಯ ಸಾಕ್ಷಿ, ದೇವರು ಮತ್ತು ಮಾನವ, ಕಪ್ಪೆ ವೈದ್ಯನಾಥ, ಮೇಕೆಯ ಉಪದೇಶ,  ದೇವರು ಕರುಣಾಮಯ, ಕಪ್ಪೆಗಳ ಜಗಳ, ಚಿನ್ನದ ವಿಗ್ರಹ, ಸಂಗೀತಗಾರ ತೋಳ, ಬುದ್ಧಿವಂತ ಕತ್ತೆ, ಸತತ ಪ್ರಯತ್ನದ ಫಲ, ತಾಳ್ಮೆಯ ಫಲ, ದೇವರು ಕೊಟ್ಟ ವರ, ಬುದ್ಧಿವಂತ ಕಲಾವಿದ, ಮೇಧಾವಿ ನ್ಯಾಯಾಧೀಶ, ಪಕ್ಷಿಯ ಉಪಕಾರ, ನರಿಯ ಪುನರ್ಜನ್ಮ, ಮೂರ್ಖ ಸ್ನೇಹಿತರು, ಕುಂಬಾರನ ಪ್ರಾರ್ಥನೆ, ಹೂದಳ ಮತ್ತು ಮುಳ್ಳು, ಪಕ್ಷಿಗಳಿಗೆ ವೈದ್ಯ,  ಕೆಟ್ಟದ್ದು ಮಾಡಬಾರದು,  ಕುತಂತ್ರಿ ಕಾಗೆ, ಬುದ್ಧಿವಂತ ವ್ಯಾಪಾರಿ, ಎದೆಗಾರಿಕೆ, ಕನಸುಗಳು ನಿಜವಾಗುವುವೇ?, ನಂಬಿ ಕೆಟ್ಟ ಕರಿಯಣ್ಣ, ಇಲಿಯ ಚಾತುರ್ಯ, ದೇವರನ್ನು ದೂಷಿಸಬೇಡ,  ಸಮಯಕ್ಕೆ ತಕ್ಕ ನುಡಿ, ಸೋಮಾರಿ ಹಕ್ಕಿಗಳು, ಮ್ಯಾಜಿಕ್ ಗಂಗಾಳ, ಕತ್ತೆ ಜಂಭ, ಕೋತಿಗೇಕೆ ಉಪದೇಶ?, ಸತ್ತ ಮೊಸಳೆ, ಚಿಟ್ಟೆಯ ಹಿರಿಮೆ, ಕುಂಟು ನಾಯಿ, ಎರಡು ಕಪ್ಪೆಗಳು,  ಆನೆಯ ಉದ್ದ ಸೊಂಡಿಲು,ರಾಜಕುಮಾರಿಗೆ ಒಲಿದ ಹಕ್ಕಿ, ಆನೆಯ ಹಲ್ಲು, ನರಿಯ ಉಡುಗೊರೆ, ಪಂಜರದ ಕೋತಿ, ಮೂರ್ಖ ಕಪ್ಪೆ, ನರಿಯ ಉಪಾಯ, ಮುಯ್ಯಿಗೆ ಮುಯ್ಯಿ, ಸಿಂಹದ ಪ್ರೀತಿ.

    Original price was: $0.60.Current price is: $0.36.
    Add to basket
  • -40%

    ಅಂತರಂಗಯಾನ

    0

    ಅಂತರಂಗಯಾನ
    ಹೈಕುಗಳು ಸಹೃದಯರ ಹೃದಯವನ್ನು ಹಾಯ್ದು ಒಳನುಗ್ಗಿ ಚಿರವಾಗಿ ಅಲ್ಲೇ ಸೆರೆಯಾಗಿರಬಲ್ಲವು. ಏಕೆಂದರೆ ಇಲ್ಲಿನ ಕಾವ್ಯದ ವಿಚಾರಗಳಿಗೆ ಭಾವನೆಗಳಿಗೆ ಕಾಲವನ್ನು ಮೀರಿ ನಿಲ್ಲುವ ಸತ್ಯದ ಸ್ಪರ್ಶಗುಣವಿದೆ.
    ಈ ಕೃತಿಯಲ್ಲಿನ ವಿಷಯ ವ್ಯಾಪ್ತಿಯ ಹರಹು ತುಂಬ ವಿಶಾಲವಾದುದು. ಸೃಷ್ಟಿಯಲ್ಲಿನ ಪ್ರಕೃತಿ ಪರಿಸರದಿಂದ ಮೊದಲ್ಗೊಂಡು ದಿನಬಳಕೆಯ ಅತ್ಯಂತ ಪರಿಚಿತ ಸಾಮಾನ್ಯ ಸಂಗತಿಗಳವರೆಗೂ ಈ ಹೈಕುಗಳು ನಮ್ಮೊಂದಿಗೆ ಆಪ್ತವಾಗಿ ಸಂಭಾಷಿಸುತ್ತವೆ. ಊದುಕಡ್ಡಿ,, ಇರುವೆ, ಸೌಟು, ಕುಕ್ಕರ್, ಸಾಬೂನುಗುಳ್ಳೆ, ಗಾಳಿಪಟ…. ಕಡೆಗೆ ಸೋಪಿನಲ್ಲಿ ಸಿಕ್ಕ ಕೂದಲೆಳೆ… ಅದೇನೇ ಇರಲಿ, ಇವೆಲ್ಲ ಯಾವುದೊ ತತ್ವವೊಂದನ್ನು ಬಿಂಬಿಸುವ ಸತ್ವಶಾಲಿ ಸಾಲುಗಳಾಗಿ ಪರಿಣಮಿಸಿಬಿಡುತ್ತವೆ. ಅತಿಬಳಕೆಯಿಂದಾಗಿ ಗಮನಕ್ಕೇ ಬಾರದ ವಿಷಯವಸ್ತು ಕೂಡ ಇಲ್ಲಿ ಓದುಗನ ಗಮನ ಸೆಳೆದು ಸೃಷ್ಟಿವೈಚಿತ್ರ್ಯಕ್ಕೆ ನನ್ನ ನಮನ ಸಲ್ಲಿಸಿಬಿಡುತ್ತದೆ. ಇದು ನಿಜಕ್ಕೂ ಕವಯತ್ರಿಯಲ್ಲಿರುವ ಕಾವ್ಯ ಕೈಚಳಕವೇ ಸರಿ!

    Original price was: $0.60.Current price is: $0.36.
    Add to basket
  • -40%

    ಕೊರವಂಜಿಯ ಪಡುವಣ ಯಾತ್ರೆ

    0

    ಅರುವತ್ತರ ದಶಕದ ಆದಿಭಾಗದಲ್ಲಿ ರಾಶಿಯವರು ಒಂದು ವೈದ್ಯಕೀಯ ತಂಡದೊಂದಿಗೆ ರಷ್ಯಾ ಹಾಗೂ ಯೂರೋಪ್ ದೇಶಗಳ ಪ್ರವಾಸವನ್ನು ಕೈಗೊಂಡರು. ಪ್ರವಾಸದ ಉದ್ದೇಶ ಆ ದೇಶಗಳ ವೈದ್ಯಕೀಯ ವಿಧಿವಿಧಾನಗಳ ಅಧ್ಯಯನವಾದರೂ ರಾಶಿಯವರ ತುಂಟ ಮನಸ್ಸು ಅಲ್ಲಿನ ಜನಜೀವನದ ವೈಚಿತ್ರ್ಯಗಳನ್ನು ನೋಡಿ ತನ್ಮೂಲಕ ನಗೆಯನ್ನು  ಹೊಮ್ಮಿಸುವ ಅವಕಾಶವನ್ನು  ಕಂಡುಕೊಂಡಿತು. ಆ ಪ್ರಕ್ರಿಯೆಯ ಫಲಶ್ರುತಿಯೇ  ‘ಕೊರವಂಜಿಯ ಪಡುವಣ ಯಾತ್ರೆ’.

    Original price was: $1.02.Current price is: $0.61.
    Add to basket
  • -40%

    ಮೃಗಶಿರ

    0

    ಮೃಗಶಿರ
    ‘ಮೃಗಶಿರ’ ಒಂದು ಸಣ್ಣಕಥೆಗಳ ಸಂಕಲನ, ಇದರಲ್ಲಿ ಕಂಡುಬರುವ ಬೋರವ್ವ, ಮಲ್ಲಿ, ಶಾರಿ, ಉಮಾಪತಿರಾಯ ಇವರೆಲ್ಲಾ ನಮ್ಮ ಸಮಾಜದಲ್ಲಿ ಎಲ್ಲೆಲ್ಲಿಯೂ ಕಾಣಸಿಗುವ ವ್ಯಕ್ತಿಗಳು. ಇವರೆಲ್ಲರ ನಡುವಳಿಕೆ, ಮೇಲು ನೋಟಕ್ಕೆ ‘ನಾಗರಿಕ’ ನಡುವಳಿಕೆಯಾದರೂ, ಹಿನ್ನೆಲೆಯಲ್ಲಿ ಕಾಡಿನ ಪ್ರಾಣಿಗಳ ಪಶುಸಹಜ ನಡುವಳಿಕೆಗಳನ್ನು ಮನುಷ್ಯ ಮಾನಸಿಕವಾಗಿ ಅನುಸರಿಸುತ್ತಿದ್ದಾನೋ ಎಂಬ ಸಂಶಯ     ಬರುವಂತೆ ಅವುಗಳ ನಡುವಣ ಸಾಮ್ಯತೆಯನ್ನು ರಾ.ಶಿ.ಯವರು ಈ ಪುಸ್ತಕದಲ್ಲಿ ನಮ್ಮ ಮುಂದಿಟ್ಟಿದ್ದಾರೆ. ಈ ಪುಸ್ತಕದಲ್ಲಿನ ಹತ್ತು ಹನ್ನೆರಡು ಕಥೆಗಳು ಓದುಗರ  ಆಸಕ್ತಿಯನ್ನು ಉಳಿಸಿಕೊಳ್ಳುತ್ತಲೇ, ಪ್ರಾಣಿಲೋಕದ ನಡುವಳಿಕೆ ಇಂದಿಗೂ ಮಾನವನ ಸುಪ್ತ ಮನಸ್ಸಿನಲ್ಲಿ ಎಷ್ಟು ಭದ್ರವಾಗಿ ನೆಲೆಯೂರಿಗೆ ಎಂಬ ಸಂಗತಿಯನ್ನು ಬಹು ಸ್ಪಷ್ಟವಾಗಿ ತೋರಿಸಿಕೊಡುತ್ತೇವೆ. ಕಥೆಗಳ ಕೊನೆಯಲ್ಲಿ ರಾ.ಶಿ ಯವರು ಬರೆದಿರುವ ಸುದೀರ್ಘ ಪ್ರಸ್ತಾವನೆ, ಮನುಕುಲಕೆ ವಿಕಾಸ ಹಾಗೂ ಮನಸ್ಸಿನ ವಿವಿಧ ವ್ಯಾಪಾರಗಳ ಬಗ್ಗೆ ಹೇಳುವುದಾರೆ,  ‘ವಿಚಾರ ಪ್ರಚೋದನೆಳು ಮಹತ್ಕಾರ್ಯಕ್ಕೆ ಇಷ್ಟೊಂದು ಪರಿಣಾಮಕಾರಿಯಾಗಿ ಲಲಿತ ಸಾಹಿತ್ಯದ ಬಳಕೆಯಾಗುವುದು ಎಂದಾದರೊಮ್ಮೆ’ ಈ ಕಾರಣದಿಂದ ಈ ಕೃತಿ ಅಮೂಲ್ಯವಾದದ್ದು. 

    Original price was: $1.08.Current price is: $0.65.
    Add to basket
  • -40%

    ಚೌಕಟ್ಟಿನಾಚೆ

    0

    ಚೌಕಟ್ಟಿನಾಚೆ
    ಕಥಾ ಸಂಕಲನ
    ಉಮೇಶ್ ದೇಸಾಯಿ ಆಧುನಿಕ ಕಾಲದ ತಲ್ಲಣಗಳನ್ನು ಕತೆಗಳ ಮೂಲಕ ಹಿಡಿಯಲು ಹೊರಡುತ್ತಾರೆ. ಅವರದು ಅಪಾರ್ಟ್ ಮೆಂಟು ಬದುಕಿನ ಅಪರೂಪದ ಕಥಾ ಪ್ರಪಂಚ. ಅಪಾರ್ಟುಮೆಂಟು ಬದುಕು ಅನ್ನುವ ಪದವೇ ನಗರಾಧುನಿಕ ಜೀವನಶೈಲಿಯನ್ನೂ ಅದರ ಏಕತಾನತೆ, ಒತ್ತಡ ಮತ್ತು ಏಕಾಂತಗಳನ್ನು ಸೂಚಿಸುತ್ತದೆ. ನಗರ ಜೀವನದ ಅತಿದೊಡ್ಡ ಸಂಕಟವೆಂದರೆ ಏಕಾಂತ, ಕಡಿದ ಕೊಂಡಿಗಳು, ಚದುರಿದ ಸಂಬಂಧಗಳು ಮತ್ತು ಬೆಸೆಯಲಾಗದ ಮನಸ್ಸುಗಳು ಎಂಬುದನ್ನು ಹೇಳುವಂಥ ಅನೇಕ ಕತೆಗಳು ಈ ಸಂಕಲನದಲ್ಲಿವೆ.

    Original price was: $1.44.Current price is: $0.86.
    Add to basket
  • -40%

    ಜ್ಞಾನವೃಕ್ಷ

    0

    ಜ್ಞಾನವೃಕ್ಷ
    (ಜೀವನ ಮತ್ತು ಬದುಕು)
    ಜೀವನ ಸಹಜ ಪ್ರಕೃತಿಯಾದರೆ ಬದುಕು ಸಂಸ್ಕಾರದಿಂದ ರೂಪುಗೊಂಡ ಪ್ರತಿಮೆ. ಧಾರ್ಮಿಕ,  ಸಾಮಾಜಿಕ, ವೈಜ್ಞಾನಿಕ, ಭೌತಿಕವೇ ಮೊದಲಾದ ಅನೇಕ ವಿಷಯಗಳನ್ನು ಕೈಗೆತ್ತಿಕೊಂಡು ಹಿಂದೂ, ಮುಸ್ಲಿಮ್ ಕ್ರಿಶ್ಚಿಯನ್, ಸಿಖ್, ಪಾರ್ಸಿ ಮುಂತಾದ ಜನಾಂಗಗಳಿಗೆ ಸಂಬಂಧಿಸಿದ ಗ್ರಂಥಗಳ ಜೊತೆಗೆ ತುಲನಾತ್ಮಕ ಅಧ್ಯಯನದಿಂದ ತಮ್ಮ ಪ್ರಬಂಧಗಳನ್ನು ಮಂಡಿಸುತ್ತಾರೆ. ಈ ಬಹುಮುಖ ಅಧ್ಯಯನ ಇಂದಿನ ಸಮಾಜಕ್ಕೆ ಬದುಕಿನ ಕನ್ನಡಿಯಾಗಿ ಬಾಳಿನ ಮುನ್ನುಡಿಯಾಗಿ ಓದುಗರನ್ನು ಮುನ್ನಡೆಸಲು ಸಹಾಯಕವಾಗಿದೆ.  ‘ಉಪವಾಸದ ಹಿನ್ನೆಲೆಯಲ್ಲಿ ಏಕಾದಶಿಯ ಮಹತ್ವ’ವನ್ನು ನಾನಾ ಬಗೆಯಾಗಿ ವಿಶ್ಲೇಷಿಸಿದ್ದಾರೆ.

    Original price was: $1.30.Current price is: $0.78.
    Add to basket
  • -40%

    ಕರ್ಮ

    0

    ಕರ್ಮ
    ಭೌತಿಕವಾಗಿಯೂ ಪಾರಮಾರ್ಥಿಕವಾಗಿಯೂ ಶ್ರದ್ಧೆ ಮತ್ತು ನಂಬಿಕೆಯ ನಡುವಿನ ವ್ಯತ್ಯಾಸ ಇದ್ದೇ ಇದೆ. ಈ  ವ್ಯತ್ಯಾಸವನ್ನು ಪ್ರಾಯೋಗಿಕವಾಗಿ ಈ ಕೃತಿಯಲ್ಲಿ ಚರ್ಚಿಸಲಾಗಿದೆ.
    ಪ್ರಸ್ತುತ ನಗರ ಸಮಾಜದಲ್ಲಿನ ವ್ಯಕ್ತಿ ತನ್ನ ತಂದೆಯ ಸಾವಿನ ನಂತರ ತನ್ನ ಊರಿಗೆ ಅಪ್ಪನ ಕ್ರಿಯೆ ಮಾಡಲು ಹೋಗಿ ಆ ಅಪರಕ್ರಿಯೆಯ ದಿನಗಳಲ್ಲಿ ಸಂಭವಿಸುವ ತೊಳಲಾಟ, ಭೂತ, ವರ್ತಮಾನಗಳ ಜಗ್ಗಾಟ,  ಬಂಧಗಳ ಮನೋ ವ್ಯಾಪಾರ ಇವೆಲ್ಲವನ್ನೂ ಸಮಕಾಲೀನ ಶೈಲಿಯಲ್ಲಿ ಕಟ್ಟಿಕೊಟ್ಟಿರುವ ಕಾದಂಬರಿ ಕರ್ಮ. ಬಿಡುಗಡೆಯಾದ ಎರಡೇ ವರ್ಷದಲ್ಲಿ ನಾಲ್ಕು ಮುದ್ರಣಗಳನ್ನು ಕಂಡಿರುವ ಈ ಕೃತಿ ಅಪಾರ ಜನಮನ್ನಣೆ ಮತ್ತು ತಾತ್ವಿಕ ಚರ್ಚೆಯನ್ನು ಸಾಹಿತ್ಯ ವಲಯದಲ್ಲಿ ಹುಟ್ಟುಹಾಕಿದೆ. ನಾಟಕಕಾರ ಮತ್ತು ಕಾದಂಬರಿಕಾರರಾದ ಕರಣಂ ಪವನ್ ಪ್ರಸಾದರ ಮೊದಲ ಕಾದಂಬರಿಯಿದು.

    Original price was: $1.62.Current price is: $0.97.
    Add to basket
  • -40%

    ಮಠದ ಹೋರಿ ಮತ್ತು ಈವರೆಗಿನ ಕತೆಗಳು

    0

    ಮಠದ ಹೋರಿ ಮತ್ತು ಈವರೆಗಿನ ಕತೆಗಳು
    ಕತೆಗಾರನ ಮಾತಿನಲ್ಲಿ ಹನುಮಂತ ಹಾಲಿಗೇರಿ ಹೇಳಿಕೊಂಡಿರುವಂತೆ “ಇಲ್ಲಿನ ಎಲ್ಲ ಕತೆಗಳು ನಮ್ಮೂರು ಸೀಮೆಯಲ್ಲಿ ನೆಡಯುವಂಥವೆ. ಕಥೆ ನನ್ನೊಳಗಡೆ ಹುಟ್ಟುವುದಿಲ್ಲ . ದಿನನಿತ್ಯದ ಬದುಕಿನಲ್ಲಿ ಸಂಭವಿಸಿ, ನನ್ನೊಳಗೆ ಬೆಳೆದು ಕಥೆಯಾಗಿ ಹರಡಿಕೊಳ್ಳುತ್ತದೆ. ನನ್ನೂರು ಸೀಮೆಯಲ್ಲಿ ಇಲ್ಲಿನ ಪಾತ್ರಗಳೆಲ್ಲವೂ ಇನ್ನೂ ಜೀವಂತವಾಗಿವೆ. ಕಥೆಗಳಲ್ಲಿ ಅವುಗಳ ಸಂಕಷ್ಟ ಒಂದು ತಹಬಂದಿಗೆ ಬಂದಿದ್ದರೂ ಬದುಕಿನಲಿ ಇನ್ನೂ ಮುಂದುವರಿದೇ ಇದೆ.
    ಓದುಗನಿಗೆ ಮನರಂಜನೆ ನೀಡುವುದಕ್ಕಾಗಿ ನನ್ನಂಥವರು ಕಥೆ ಕಟ್ಟುವುದಿಲ್ಲ. ಈ ಕತೆಗಳನ್ನು ಓದುವವರ ಮನದಲ್ಲಿ ರಂಜನೆ ಹುಟ್ಟುವುದಕ್ಕಿಂತಲೂ ತಳಮಳ ಹುಟ್ಟಿದರೆ, ಚಿಂತೆನೆಗ ಹಚ್ಚಿದರೆ ಅಷ್ಟರಮಟ್ಟಿಗೆ ಈ ಕತೆಗಳು ಸಾರ್ಥಕ್ಕೆ ಕಂಡಂತೆ.”

    Original price was: $2.88.Current price is: $1.73.
    Add to basket
  • -40%

    ವಿವಕ್ಷಾ

    0

    ವಿವಕ್ಷಾ
    ಕಳೆದ ಒಂದು ದಶಕದಿಂದ ಗಂಭೀರವಾದ ಸಂಶೋಧನೆಯನ್ನು ಕೈಗೊಂಡ ಡಾ.ಲಲಿತ ಕೆ.ಪಿ.ಅವರು ತಮ್ಮ ಡಾಕ್ಟರೇಟ್ ಪದವಿ ಪಡೆಯುವ ಮೊದಲು ‘ವಿವಕ್ಷಾ’ . ಕೊಡಗಿನ ಮೂಲೆ ಮೂಲೆಗಳಲ್ಲಿ ಓಡಾಡಿ ಸಂಗ್ರಹಿಸಿದ ಮೌಖಿಕ ಆಕರಗಳನ್ನು  ಪ್ರಕಟಗೊಂಡ ಸಂಶೋಧನಾ ಕ್ರತಿಗಳ ಹಾಗೂ ಪ್ರಚಲಿತದಲ್ಲಿರುವ ಸೈದ್ಧಾಂತಿಕ ಪರಿಪೇಕ್ಷ್ಯಗಳ ಜೊತಗೆ ತುಲನೆ ಮಾಡಿ ಕೊಡಗಿನ ಸಾಹಿತ್ಯ, ಜಾನಪದ,ಚರಿತ್ರೆ, ಭಾಷಾ ವಿಜ್ಞಾನಕ್ಕೆ ಸಂಬಂಧಿಸಿದಂತಹ ಉತ್ಕೃಷ್ಠ ಮಾಹಿತಿಗಳನ್ನು ಡಾ.ಲಲಿತ ಅವರು  ಸೈದ್ಧಾಂತಿಕರಿಸಿದ್ದಾರೆ. ಭಾಷೆ ಹಾಗೂ ಸಮಾಜ ವಿಜ್ಞಾನಗಳ ಅಧ್ಯಯನಗಳಲ್ಲಿ ತೊಡಗಿಸಿಕೊಂಡ ಸಂಶೋಧಕರಿಗೆ ಈ ಕೃತಿ ಭಿನ್ನವಾದ ಒಳನೋಟಗಳನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. 

    Original price was: $1.20.Current price is: $0.72.
    Add to basket
  • -40%

    ಸ್ತ್ರೀ ಎಂದರೆ ಅಷ್ಟೇ ಸಾಕೆ

    0

    ಸ್ತ್ರೀ ಎಂದರೆ ಅಷ್ಟೇ ಸಾಕೆ
    ವಿಚಾರ ವಿಮರ್ಶಾ ಲೇಖನಗಳು
    ಡಾ. ಎಚ್ ಎಲ್ ಪುಷ್ಪ ಅವರ ‘ಸ್ತ್ರೀ ಅಂದರೆ ಅಷ್ಟೇ ಸಾಕೆ’ ಕೃತಿಯು ಸ್ತ್ರೀಕೇಂದ್ರಿತ ಬರವಣಿಗೆಯಾಗಿದ್ದು, ಅವರೇ ಹೇಳುವಂತೆ ಇಲ್ಲಿನ ಲೇಖನಗಳು ಬೇರೆ ಬೇರೆ ಸಂದರ್ಭ ಗಳಲ್ಲಿ ಸಿದ್ಧವಾಗಿವೆ. ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಲೇಖನಗಳು, ಆಡಿದ ಮಾತುಗಳ ಲೇಖನ ರೂಪಗಳೆಲ್ಲವೂ ಈ ಕೃತಿಯಲ್ಲಿ ಸೇರಿವೆ. 
    ಸ್ತ್ರೀ ಸಂವೇದನೆ, ಚಿಂತನೆ, ಸಾಹಿತ್ಯದ ಮೇಲಿನ ಚರ್ಚೆ, ವಿಮರ್ಶೆಗಳು ಮದ್ದು ಹುಡುಕುವುದಕ್ಕಿಂತ ಹೆಚ್ಚು ಕುಂದು ಕೇರುವುದರಲ್ಲೇ ನಿರತವಾಗಿವೆ. ಆದ್ರೆ ಎಚ್ ಎಲ್ ಪುಷ್ಪ ಅವರಿಗೆ ಕುಂದು ಕೇರುವುದರಿಂದ ಜಾಡ್ಯ ಹರಿಯುವುದಿಲ್ಲ ಎಂದು ಖಚಿತವಾಗಿ ತಿಳಿದಂತಿದೆ. ಹಾಗಾಗಿ ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಓದುವಾಗ ಈವರೆಗಿನ ಉಸಿರು ಬಿಗಿತದಿಂದ ಬಿಡುಗಡೆಗೊಂಡ ಅನುಭವವಾಗುತ್ತದೆ.
    ಬೆಡಗಿನ ವಚನಕಾರ್ತಿಯರಿಂದ ಮೊದಲಗೊಂಡು ಬಿ ಟಿ ಜಾಹ್ನವಿಯವರೆಗೆ, ಕಾರಂತರ ಮೈಮನಗಳ ಕಡಲ ಸುಳಿಯಿಂದ ಹಿಡಿದು ಮಹಾದೇವರ ದೇವನೂರಿನ ಸ್ತ್ರೀ ಬಯಲಿನವರೆಗೆ ಕನ್ನಡ ಸಾಹಿತ್ಯ ಶರಧಿಯ ಹಿರಿ-ಕಿರಿಯ ಬಂದರುಗಳಲ್ಲೆಲ್ಲಾ ಲಿಂಗಭೇಧವಿಲ್ಲದೆ ಲಂಗರು ಹಾಕಿ ಈವರೆಗೂ ಅವರಿವರು ಕಾಣದ್ದನ್ನು ಕಣ್ಣಿಗೆ ತುಂಬಿಕೊಂಡು ಯಾವ ಯಗಟು-ಒಗಟುಗಳಿಲ್ಲದೆ ಮಾಡಿದ ಪಕ್ಕಾ ಸಿದಾಸಾದ ಸಿರಿವಂತ ಮಂಡನೆ ಇಲ್ಲಿದೆ.ದತ್ತ ಓದು, ಪಕ್ವನೋಟ, ಪಕ್ಷಪಾತ, ವಕೀಲಿಗಳಿಲ್ಲದ ಇಲ್ಲಿಯ ದಿಟ್ಟ ಬರಹಗಳು ಅನನ್ಯ ಒಳನೋಟದಿಂದಾಗಿ ಓದುಗರನ್ನು ತಟ್ಟುತ್ತವೆ.

    Original price was: $2.40.Current price is: $1.44.
    Add to basket
  • -40%

    ಕಂಪನಿ ನಾಟಕ ಅರ್ಥಾತ್ ವೃತ್ತಿರಂಗಭೂಮಿ

    0

    ಕಂಪನಿ ನಾಟಕ ಅರ್ಥಾತ್ ವೃತ್ತಿರಂಗಭೂಮಿ

    ವೃತ್ತಿರಂಗಭೂಮಿಯ ತಲಸ್ಪರ್ಶಿಯಾದ ಅಧ್ಯಯನಗಳು ಕನ್ನಡದಲ್ಲಿ ವಿರಳ. ಹಾಗಿರುವಲ್ಲಿ ವೃತ್ತಿರಂಗಭೂಮಿಯು ಬೆಳೆದುಬಂದ ಬಗೆಗೆ ಅಧಿಕೃತ ಮಾಹಿತಿಗಳನ್ನು  ಇರಿಸಿಕೊಂಡು ಮಾಡಿದ ಈ ಅಧ್ಯಯನ ಮುಖ್ಯವಾಗುತ್ತದೆ. ಸ್ವತಹ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಶ್ರೀ ಪ್ರಕಾಶ ಗರುಡರು ರಂಗಭೂಮಿಯ ಏಳುಬೀಳುಗಳನ್ನು ಹತ್ತಿರದಿಂದ ಬಲ್ಲವರು. ಅವುಗಳನ್ನು ಮುಖ್ಯ ಆಕರವಾಗಿಸಿ ಐತಿಹಾಸಿಕವಾಗಿ ವೃತ್ತಿ ರಂಗಭೂಮಿಯ ಬೆಳವಣಿಗೆಯನ್ನು ಅವುಗಳ ವಿವಿಧ ಅಯಾಮಗಳನ್ನು ಗುರುತಿಸುವ ಪ್ರಯತ್ನ ಈ ಪುಸ್ತಕದಲ್ಲಿದೆ. ಹಾಗಾಗಿ ಈ ಬರೆಹ ವೃತ್ತಿರಂಗಭೂಮಿಯ ಸಂದರ್ಭದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

    Original price was: $3.12.Current price is: $1.87.
    Add to basket
  • -40%

    ನೋಡಿರಿ ಧರ್ಮಜ ಫಲುಗುಣಾದಿಗಳು

    0

    ಯಕ್ಷಗಾನರಂಗದಲ್ಲಿ ಶಂಭು ಹೆಗಡೆ ಅಪರೂಪದ ವ್ಯಕ್ತಿ. ಮೇಳದ ಬಗೆಗೆ, ತಮ್ಮ ಮೇಳದ ಕಲಾವಿದರ ಬಗೆಗೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನ, ಸುದ್ದಿ, ಫೋಟೋ ಇತ್ಯಾದಿಗಳನ್ನು ಸಂಗ್ರಹಿಸಿಡುವ ಪ್ರವೃತ್ತಿಯುಳ್ಳವರು. ಅದೇ ಪ್ರವೃತ್ತಿಯು ಶಿವಾನಂದ ಹೆಗಡೆಯವರಲ್ಲೂ ಮುಂದುವರೆದಿದೆ. ಈ ಸಂಗ್ರಹದ ರಾಶಿಯಿಂದ ಆಯ್ದ ಲೇಖನಗಳನ್ನೆಲ್ಲಾ ಪ್ರಕಟಿಸುವುದೆಂದರೆ ಸಾವಿರಾರು ಪುಟಗಳೇ ಆದಾವು. ಹಾಗಾಗಿ ಅವುಗಳಿಂದ ಆಯ್ದ ಕೆಲವು ಲೇಖನಗಳನ್ನು ಮಾತ್ರ ಈ ಪುಸ್ತಕದಲ್ಲಿ ಪ್ರಕಟಿಸಲಾಗಿದೆ.

     
    ಯಕ್ಷಗಾನ ಚರಿತ್ರ್ರೆಯ ದೃಷ್ಟಿಯಿಂದ ಈ ತೆರನಾದ ಪುಸ್ತಕಕ್ಕೆ ಮಹತ್ವವಿದೆ. ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳು ಅಧ್ಯಯನಾಸಕ್ತರಿಗೆ ಪ್ರಯೋಜನಕಾರಿಗಳಾಗಿದ್ದರೂ ಅವುಗಳನ್ನು ಅರಸುವುದು ಶ್ರಮದಾಯಕ. ಆದರೆ ಪುಸ್ತಕ ರೂಪದಲ್ಲಿ ಬಂದರೆ ಸುಲಭವಾಗಿ ಲಭಿಸುತ್ತದೆ. ಅಧ್ಯಯನ ಮಾಡುವವರ ಶ್ರಮ, ಹಣ ಎರಡರ ಉಳಿತಾಯವೂ ಆಗುತ್ತದೆ. ಹಾಗಾಗಿ ಅಲ್ಲಲ್ಲಿ ಚದುರಿಕೊಂಡಿದ್ದ ಲೇಖನಗಳನ್ನು ಒಂದೆಡೆಗೆ ತರುವ ಪ್ರಯತ್ನ ಈ ಪುಸ್ತಕ.
     
    ಶಿವರಾಮ ಕಾರಂತರು, ಲಂಕೇಶ್, ತದ್ದಲಸೆ ಶರ್ಮಾ, ಲೈಫ್ 360 ಪತ್ರಿಕೆಯ ಬಿ.ಗಣಪತಿ ಹೀಗೆ ಹಿರಿಯ-ಕಿರಿಯ ಲೇಖಕರ ಬರವಣಿಗೆಯ ಗುಚ್ಛವೇ “ನೋಡಿರಿ ಧರ್ಮಜ ಫಲುಗುಣಾದಿಗಳು”
    Original price was: $1.44.Current price is: $0.86.
    Add to basket
  • -40%

    ಊರು ಸುಟ್ಟರೂ ಹನುಮಪ್ಪ ಹೊರಗ….

    0

    ಊರು ಸುಟ್ಟರೂ ಹನುಮಪ್ಪ ಹೊರಗ….
    ಹೊಸ ನಾಟಕಗಳು ಬರುತ್ತಿಲ್ಲವೆಂಬ ಅಳುಕನ್ನು ಅಳಿಸಬಲ್ಲ ಯುವ ಕತೆಗಾರರು ನಾಟಕ ರಚನೆಯತ್ತ ಮುಖ ಮಾಡಿರುವುದು ನಿಜಕ್ಕೂ ಸಂತಸದ ಸಂಗತಿ. ಈಗಾಗಲೇ ಕತೆಗಾರರು ಎಂದೇ ಹೆಸರಾಗಿರುವ ಗೆಳೆಯ ಹನಮಂತ ಹಾಲಿಗೇರಿಯವರ ಊರು ಸುಟ್ಟರೂ ಹನುಮಪ್ಪ ನಾಟಕವನ್ನು ಆಟಮಾಟ ತಂಡದ ಅಡ್ಯಾಟಕ್ಕೆ ಮಾಡಬೇಕೆಂದುಕೊಂಡಾಗ ತಂಡದ ಎಲ್ಲಾ ಸಾಧ್ಯತೆಗಳಿಗೆ ಹೊಂದಿಕೊಳ್ಳುವಂತೆ ನಾಟಕದ ವಿನ್ಯಾಸದಲ್ಲಿ ಬದಲಾವಣೆ ಮಾಡಿಕೊಟ್ಟರು.
    ಎರಡು ಊರುಗಳ ನಡುವಿನ ಜಗಳ ನಾಟಕೀಯವಾದ ಹತ್ತಾರು ಘಟಣೆಗಳನ್ನು ಕಥಾಹಂದರದಲ್ಲಿ ಎಳೆದುಕೊಂಡಿದೆ. ಆದರೆ ಜಗಳಕ್ಕೆ ಕಾರಣನಾದ ದೇವರು ಮಾತ್ರ ವಾಸ್ತವದ ಪ್ರತಿನಿಧಿಯಾಗಿದ್ದಾನೆ. ಎಲ್ಲಿ ಪ್ರೀತಿ ಇರುತ್ತದೋ ಅಲ್ಲಿ ದ್ವೇಷ ಹುಟ್ಟಿಕೊಳ್ಳುತ್ತದೆ. ನಮ್ಮದು ಎಂದು ಗೆರೆಹಾಕಿಕೊಂಡು ಗಡಿ ಗುರುತಿಸಿಕೊಂಡಲ್ಲಿ ಇನ್ನೊಬ್ಬರದು ಎಂಬ ದ್ವೇಷದ, ಅಸಡ್ಡೆಯ, ತಿರಸ್ಕಾರದ ನೋಟವೂ ಹುಟ್ಟಿಕೊಳ್ಳುತ್ತದೆ. ಪ್ರತಿಯೊಂದು ಸೀಮೆಯಲ್ಲೂ ಊರಿನ ಹಕ್ಕಿಗಾಗಿ ಎರಡೂರ ಸೀಮೆಗಳ ನಡುವೆ ಸಣ್ಣದೊಂದು ಜಗಳವಿದ್ದೆ ಇರುತ್ತದೆ.

    Original price was: $1.20.Current price is: $0.72.
    Add to basket
  • -40%

    ಚಂದ್ರಶೇಖರ ಕಂಬಾರರ ಕಾವ್ಯಭಾಷೆ

    0

    ಚಂದ್ರಶೇಖರ ಕಂಬಾರರ ಕಾವ್ಯಭಾಷೆ

    ಸಾಹಿತ್ಯದಲ್ಲಿ ಭಾಷೆಗೆ ವಿಶಿಷ್ಟವಾದ ಸ್ಥಾನವಿದೆ. ಭಾಷೆಯನ್ನು ಸಾಹಿತ್ಯದಿಂದ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಅದು ಅಭಿನ್ನ. ಏಕೆಂದರೆ ಸಾಹಿತ್ಯ ಸಂಭವಿಸುವುದು ಭಾಷೆಯ ಮೂಲಕವೇ. ಸಹೃದಯರು ಗ್ರಹಿಸುವ ವಸ್ತು, ಭಾಷೆಯ ಮೂಲಕವೇ ವಿಶಿಷ್ಟವಾದ ಅರ್ಥವನ್ನು ಪಡೆದುಕೊಂಡು ಸೃಷ್ಟಿಯಾಗುತ್ತದೆ. ಭಾಷೆಯ ಮೂಲಕವೇ ಕಾವ್ಯ ವಸ್ತುವಿನ ಸೂಕ್ಷ್ಮವಿನ್ಯಾಸಗಳು, ಪದರುಗಳು, ಭಾವಗಳು, ಸೂಕ್ಷ್ಮಕಂಪನಗಳು, ವೈವಿಧ್ಯ ಪೂರ್ಣವಾಗಿ ಪ್ರಕಟವಾಗುತ್ತವೆ. ಕಾವ್ಯಭಾಷೆ ಎನ್ನುವುದು ವ್ಯಾವಹಾರಿಕ ಭಾಷೆಗಿಂತ ಭಿನ್ನವಾದುದು. ಕಾವ್ಯಭಾಷೆಗಿರುವ ಸೂಕ್ಷ್ಮಸ್ತರಗಳು ವ್ಯಾವಹಾರಿಕ ಭಾಷೆಯಲ್ಲಿ ಕಾಣಿಸುವುದಿಲ್ಲ. ಕಾವ್ಯಭಾಷೆ ಖಾಸಗಿಯಾಗುತ್ತ ಅದು ಕವಿಯ ಒಳಜಗತ್ತಿಗೆ ಸಹೃದಯರನ್ನು ಒಯ್ದುಬಿಡುತ್ತದೆ. ಕನ್ನಡ ಕಾವ್ಯಲೋಕದಲ್ಲಿ ಭಾಷೆಯನ್ನು ಸಮರ್ಥವಾಗಿ ಬಳಸಿದ ಕವಿಗಳಲ್ಲಿ ಕಂಬಾರರು ಪ್ರಮುಖರು.
    ಕಂಬಾರರು, ಬೇಂದ್ರೆ, ಬೆಟಗೇರಿ ಅವರ ಪ್ರಭಾವವನ್ನು ಪಡೆದುಕೊಳ್ಳುತ್ತಲೇ ಕ್ರಮೇಣ ಆ ಪ್ರಭಾವದಿಂದ ಮುಕ್ತರಾಗಿ ಭಿನ್ನಮಾರ್ಗ ಹಿಡಿದರು; ಬೆಳೆದರು. ಭಾಷೆ, ಛಂದಸ್ಸು, ವಸ್ತು, ಪ್ರತಿಮೆ ಎಲ್ಲವೂ ಕಂಬಾರರ ಕಾವ್ಯದಲ್ಲಿ ಭಿನ್ನವಾಯಿತು.

    Original price was: $1.44.Current price is: $0.86.
    Add to basket
  • -40%

    ಸುಪ್ರಸಿದ್ಧ ಭಾಷಣಗಳು

    0

    ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ
    ಸುಪ್ರಸಿದ್ಧ ಭಾಷಣಗಳು
    ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಮಾಡಿದ ೨೯ ಭಾಷಣಗಳ ಸಂಕಲನವಿದು. ಈ ಸಂಗ್ರಹದಲ್ಲಿ ಬಾಬಾಸಾಹೇಬರು ಆರಂಭದಲ್ಲಿ ಮಾಡಿದ ಹಲಕೆಲ ಭಾಷಣಗಳ ಜೊತೆಗೆ ಅವರು ಸಾರಾನಾಥದಲ್ಲಿ ಮಾಡಿದ ಐತಿಹಾಸಿಕ ಕೊನೆಯ ಭಾಷಣವೂ ಅಡಕವಾಗಿದೆ. ಅವರ ಮಾತುಗಳಲ್ಲಿ ಅವರಿಗೆ ದಲಿತರ ಬಗ್ಗೆ ಇದ್ದ ಕಳಕಳಿ, ಪ್ರೀತಿ ಹಾಗೂ ಅಸ್ವಸ್ಥತೆ(restlessness) ಗೊತ್ತಾಗುತ್ತದೆ. ಬೌದ್ಧ ಧರ್ಮವನ್ನು ಆಳವಾಗಿ ಅಭ್ಯಾಸ ಮಾಡಿದ ಬಾಬಾಸಾಹೇಬರು ತಮ್ಮ ಭಾಷಣಗಳಲ್ಲಿ ಅದರ ತಿರುಳನ್ನು ಹೇಳಿದ್ದಾರೆ.

    Original price was: $1.44.Current price is: $0.86.
    Add to basket
  • -40%

    ಜಯ

    0

    ಮಹಾಭಾರತದ ಬೃಹತ್ ಕಥೆಯನ್ನು ಸಂಗ್ರಹವಾಗಿ ನಿರೂಪಿಸಿರುವ ಈ ಕಥನ ತನ್ನ ಅಚ್ಚುಕಟ್ಟಾದ ನಿರೂಪಣೆ, ಚಕಮಕಿಯಂತೆ ಮಿಂಚುವ ಚುರುಕಾದ ಸಂಭಾಷಣೆಗಳಿಂದ ಆಕರ್ಷಕವಾಗಿ, ಸವೇಗವಾಗಿ ಕಥೆಯನ್ನು ನಡೆಸಿಕೊಂಡು ಹೋಗುತ್ತದೆ. ಕಥೆಗಳನ್ನು ಸಂಗ್ರಹಿಸಿ ಹೇಳಿದ್ದರೂ, ಅವುಗಳ ನಾಟ್ಯಾಯಮಾನತೆ ಎದ್ದುಕಾಣುತ್ತದೆ. ಇದೆಲ್ಲ ಪಟ್ಟನಾಯಕರು ಸಿದ್ಧಹಸ್ತ ಕತೆಗಾರರು ಎಂಬುದಕ್ಕೆ ಸಾಕ್ಷಿಯಾಗಿದೆ.

    Original price was: $7.81.Current price is: $4.68.
    Add to basket
  • -40%

    ಯಕ್ಷಗಾನ ಸ್ಥಿತ್ಯಂತರ

    0

    ಯಕ್ಷಗಾನ ಸ್ಥಿತ್ಯಂತರ
    (ಸಂಶೋಧನ ಲೇಖನಗಳು)
    ಯಕ್ಷಗಾನವು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬರಲು ಸಾಂಸ್ಕೃತಿಕವಾಗಿ ಹತ್ತು ಹಲವು ಕಾರಣಗಳಿವೆ. ಈ ಸ್ಥಿತ್ಯಂತರಗಳನ್ನು ಶೈಕ್ಷಣಿಕ ಶಿಸ್ತು ಹಾಗೂ ವಿಮರ್ಶಾತ್ಮಕ ಒಳನೋಟಗಳಿಂದ ಇಲ್ಲಿನ ಲೇಖನಗಳು ದಾಖಲಿಸಿವೆ. ಯಕ್ಷಗಾನದ ಕುರಿತಂತೆ ಬಂದಿರುವ ಬರವಣಿಗೆಗಳಿಗೆ  ವಿನೂತನ ಆಯಾಮವನ್ನು ನೀಡಬಲ್ಲ ಆಲೋಚನೆಗಳು ಪ್ರಸ್ತುತ ಗ್ರಂಥದ ಲೇಖನಗಳಲ್ಲಿ ಹರಳುಗೊಂಡಿವೆ. 

    Original price was: $2.40.Current price is: $1.44.
    Add to basket
  • -40%

    ತೋಟಿಯ ಮಗ

    0

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ತಗಳಿ ಶಿವಶಂಕರ ಪಿಳ್ಳೆ ಅವರ ಮಲಯಾಳಂ ಕಾದಂಬರಿಯ ಕನ್ನಡಾನುವಾದ
    ತೋಟಿಯ ಮಗ
    ಮೋಹನ ಕುಂಟಾರ್
    ತೋಟಿಯುಡೆ ಮಗನ್  ಕಾದಂಬರಿಯು ತಗಳಿ ಶಿವಶಂಕರ ಪಿಳ್ಳೆಯವರ ಬಹುಮುಖ್ಯ ಕಾದಂಬರಿಗಳಲ್ಲಿ ಒಂದು. ಅದನ್ನು ಕುಂಟಾರ್ ಅವರು ಮೂಲ ಸಾಂಸ್ಕೃತಿಕ ಸನ್ನಿವೇಶಕ್ಕೆ ಧಕ್ಕೆಬಾರದಂತೆ ಕನ್ನಡದಲ್ಲಿ ಸಂವಹನ ಸುಲಭವಾಗಿ ಅನುವಾದ ಮಾಡಿದ್ದಾರೆ.

    Original price was: $1.44.Current price is: $0.86.
    Add to basket
  • -50%

    ಸಮಾಹಿತ- ವಸಂತ್ ಸಂಚಿಕೆ ೨೦೧೬

    0

    ಸಮಾಹಿತ
    ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.

    Original price was: $1.20.Current price is: $0.60.
    Add to basket
  • -40%

    ಮನನ

    0

    ಮನನ
    ಮನನದಲ್ಲಿನ ಪ್ರಬಂಧಗಳು ಹೊಸತನದಿಂದ ಕೂಡಿವೆ. ನಮ್ಮ ಸಮಾಜದ ಸಂಸ್ಕೃತಿಯಲ್ಲಿ ಅನೂಚಾನವಾಗಿ ಬಂದ ಹಲವು ನುಡಿಗಟ್ಟುಗಳು, ಸಂಪ್ರದಾಯಗಳನ್ನು ಮುಕ್ತ ಮನಸ್ಸು ಹಾಗೂ ತಾರ್ಕಿಕ ದೃಷ್ಟಿಯಿಂದ ಅವಲೋಕಿಸಿ, ಅವುಗಳ ಹಿನ್ನೆಯಲ್ಲಿರಬಹುದಾದ ಸತ್ಯಾಂಶಗಳನ್ನು ಹೆಕ್ಕಿ ತೆರೆಯುವುದು ಈ ಪ್ರಬಂಧಮಾಲೆಯ ಉದ್ದೇಶ. ಕಾಲ ಭೈರವ ಎಂಬ ಪುಟ್ಟ ಪ್ರಬಂಧದಲ್ಲಿ ಅವರು ಕಾಲದ ವೈಜ್ಞಾನಿಕ ಸ್ವರೂಪವನ್ನು ಸಾಮಾನ್ಯ ಜನರಿಗೆ ತಿಳಿಯುವ ಭಾಷೆಯಲ್ಲಿ ವಿವರಿಸಿದ್ದಾರೆ. ಶಕುನಗಳಲ್ಲಿನ ನಂಬಿಕೆಯಾಗಲೀ, ನಗುವಿನಂತಹ ಸಹಜ ಪ್ರಕ್ರಿಯೆಯಾಗಲೀ ರಾಶಿಯವರ ಚಿಂತನೆಯ ಮೂಸೆಯಲ್ಲಿ ಕರಗಿ ಹೊರಬರುವಾಗ ಅಪ್ಪಟ ಅಪರಂಜಿಯ ಹೊಳಹನ್ನು ಪಡೆಯುವ ಚಮತ್ಕಾರವನ್ನು ಇಲ್ಲಿ ಕಾಣಬಹುದು. ಅನೇಕ ಕೌತುಕಮಯ ವೈಜ್ಞಾನಿಕ ಚಿಂತನೆಗಳನ್ನು ನಮ್ಮ ಸನಾತನ ಧರ್ಮದ ಒರೆಗಲ್ಲಿನಲ್ಲಿ ತೀಡಿ ಮನನಯೋಗ್ಯವಾದ ಸಾಮ್ಯಗಳನ್ನು ರಾಶಿಯವರು ಈ ಪುಸ್ತಕದಲ್ಲಿ ಓದುಗರಿಗೆ ಉಣಬಡಿಸಿದ್ದಾರೆ.

    Original price was: $1.08.Current price is: $0.65.
    Add to basket
  • -40%

    ಮೆಲುದನಿ

    0

    ಮೆಲುದನಿ
    ಡಾ. ಪುರುಷೋತ್ತಮ ಬಿಳಿಮಲೆಯವರ ಓದು ಎಷ್ಟು ವ್ಯಾಪಕವಾದುದು ಎಂಬುದಕ್ಕೆ ಇಲ್ಲಿನ ಲೇಖನಗಳು ಹಾಗೂ ಮುನ್ನುಡಿಗಳೇ ಸಾಕ್ಷಿ ನುಡಿಯುತ್ತವೆ. ಹಿರಿಯ-ಕಿರಿಯ ಬರಹಗಾರರು ಎಂಬ ಭೇದವಿಲ್ಲದೆ ಎಲ್ಲರನ್ನೂ ಓದುವ, ಓದಿದುರ ಬಗೆಗೆ ನಾಲ್ಕು ಮಾತು ಬರೆದು ಗುಣಾವಗುಣಗಳನ್ನು ನಿರ್ದಾಕ್ಷಿಣ್ಯವಾಗಿ ಹೇಳುವ ಪ್ರಾಮಾಣಿಕ ನಿಷ್ಠೆ ಇಲ್ಲಿನ ಲೇಖನಗಳಲ್ಲಿ ವ್ಯಕ್ತವಾಗಿದೆ. ಸಾಹಿತ್ಯ, ಜಾನಪದ ವಲಯಗಳಲ್ಲಿ ಪ್ರಮುಖ ಚಿಂತಕರೂ ಬರಹಗಾರರೂ ಆದ ಡಾ. ಬಿಳಿಮಲೆಯವರ ಮುನ್ನುಡಿಗಳಲ್ಲಿ ಬರಹಗಾರರು ಸಾಗುವ ದಿಕ್ಕನ್ನು ಖಚಿತವಾಗಿ ತೆರೆದು ತೋರಿಸುವ ಗುಣವಿದೆ. ಎಲ್ಲವನ್ನು ವಸ್ತುನಿಷ್ಠವಾಗಿ ಪರಿಗ್ರಹಿಸುವ ದೃಷ್ಟಿಕೋನವೊಂದು ಇಲ್ಲಿ ಗಮನಸೆಳೆಯುತ್ತದೆ. 

    Original price was: $2.40.Current price is: $1.44.
    Add to basket
  • -40%

    ದಲಿತರ ಮೇಲಿನ ದೌರ್ಜನ್ಯ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳು

    0

    ದಲಿತರ ಮೇಲಿನ ದೌರ್ಜನ್ಯ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳು
    ಇಲ್ಲಿನ ಲೇಖನಗಳಲ್ಲಿ ದಲಿತರ ಸಮಕಾಲೀನ ಸಮಸ್ಯೆಗಳನ್ನು ಆತ್ಮೀಯವಾಗಿ ವಿಶ್ಲೇಷಿಸ ಲಾಗಿದೆ. ದಲಿತರ ಸಮಸ್ಯೆಗಳು ಮೇಲ್ನೋಟಕ್ಕೆ ತೋರುವುದಕ್ಕಿಂತಲೂ ಭಿನ್ನವಾಗಿ ಅವುಗಳ ಆಂತರ್ಯವನ್ನು ಶೋಧಿಸಿರುವಲ್ಲಿ ಲೇಖಕರ ಸಾಮಾಜಿಕ ಕಾಳಜಿ ಸ್ಪಷ್ಟವಾಗುತ್ತದೆ. ಅಂಬೇಡ್ಕರ್ ಚಿಂತನೆಯನ್ನು ಮತ್ತು ದಲಿತ ಲೋಕವನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತ ಮತಾಂತರದ ಒಳ ಹೊರಗುಗಳನ್ನು ಸೂಕ್ಷ್ಮವಾಗಿ ಇಲ್ಲಿನ ಬರವಣಿಗೆಗಳಲ್ಲಿ ಓದುಗರ ಮುಂದಿಡಲಾಗಿದೆ. ದಲಿತ ಸಂಸ್ಕೃತಿಯನ್ನು ಕೇಂದ್ರೀಕರಿಸಿ ಬರೆದ ಇಲ್ಲಿನ ಲೇಖನಗಳು ಕನ್ನಡ ವಿಚಾರ ಪ್ರಪಂಚದಲ್ಲಿ ಹೊಸ ತಿಳುವಳಿಕೆಯನ್ನು ಮೂಡಿಸುವಲ್ಲಿ ಸಶಕ್ತವಾಗಿವೆ.

    Original price was: $1.20.Current price is: $0.72.
    Add to basket
  • -25%

    ಅಪರಂಜಿ-ನವೆಂಬರ್ ೧೯೮೪

    0

    ಅಪರಂಜಿ ೧೯೮೪ ನವಂಬರ್ ತಿಳಿನಗೆಯ ಕಾರಂಜಿ

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ೧೯೮೪ ನವಂಬರ್
    ತ್ರಿವಿಕ್ರಮೆ
    ಅಪರಂಜಿ ಕಿಡಿ
    ತಲೆ ತಪ್ಪಿಸಿಕೊಂಡೆ
    ಅಪರಂಜಿಗೆ ನಮೋ ಎಂದು
    ಕೊರವಂಜಿ, ಅಪರಂಜಿ
    ಹಸ್ತಾಕ್ಷರ
    ವಿರಾಟ ಭವನ
    ಚಿನ್ನದ ಲೂಟ
    ಕ್ಯೂ ರಾಣಿ
    ಇದನ್ನು ಕೇಳಿದ್ದೀರಾ……………….
    ವಿದ್ಯಾರ್ಥಿಗಳು ಮೇಷ್ಟರನ್ನು ಹೊಡೆಯಬಹುದೆ?
    ಎರಡು ಕನಸುಗಳು
    ಲವ್ ಮ್ಯಾರೇಜ್

    Original price was: $0.24.Current price is: $0.18.
    Add to basket
  • -40%

    ಬಹುರೂಪ

    0

    ಬಹುರೂಪ
    ಡಾ. ಪುರುಷೋತ್ತಮ ಬಿಳಿಮಲೆಯವರು ಅಂಕಣದ ಮೂಲಕ ಹರಿಯಬಿಟ್ಟ ನಿರಂತರ ಅನುಭವ, ಆಲೋಚನೆಗಳ ಬರಹಗಳು ಒಂದೆಡೆ ಈ ಕೃತಿಯಲ್ಲಿ ದಾಖಲಾಗಿದೆ. ಸ್ಥಳೀಯತೆಯ ಸಂಸ್ಕೃತಿ ಮತ್ತು ಬದುಕಿನ ಆರಂಭದ ದಿನಗಳ ಅನುಭವದ ಮೂಲಕ ನಾಡನ್ನು ದೇಶವನ್ನು ಮತ್ತು ವಿಶ್ವವನ್ನು ಕಾಣುವ ದೃಷ್ಟಿಕೋನ; ಮೌಖಿಕ ಸಂಸ್ಕೃತಿಯನ್ನು ತಳದಲ್ಲಿ ಮತ್ತು ಕೇಂದ್ರದಲ್ಲಿ ಇಟ್ಟುಕೊಂಡು ಅದರ ಮೂಲಕ ಪುರಾಣ ಮತ್ತು ಶಿಷ್ಟಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದು; ಯಕ್ಷಗಾನ ರಂಗಭೂಮಿಯ ಆಕೃತಿಯ ಮೂಲಕ ರಾಷ್ಟ್ರೀಯ ಮತ್ತು ವಿಶ್ವದ ರಂಗಭೂಮಿ ಕಲೆಗಳನ್ನು ಅಭ್ಯಾಸ ಮಾಡುವುದು; ಭಾಷೆ ಮತ್ತು ನಾಡಿನ ಅನನ್ಯತೆಯನ್ನು ಸ್ಥಾಪಿಸಲು ನಿರ್ದಿಷ್ಟ ಯೋಜನೆಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು; ಜಾತೀಯತೆ ಮತ್ತು ಕೋಮುವಾದಗಳು ಜನಪದ ಸಂಸ್ಕೃತಿಯ ಮೇಲೆ ನಡೆಸುತ್ತಿರುವ ಧಾಳಿಯನ್ನು ಸಂಸ್ಕೃತಿಯ ಒಳಗಿನಿಂದಲೇ ಪ್ರತಿರೋಧಿಸುವುದು; ಪರಂಪರೆಯ ಸಂಸ್ಕೃತಿಯನ್ನು ಗಲೀಜು ಮಾಡುವ ಆಧುನಿಕತೆಯ ಹುನ್ನಾರಗಳನ್ನು ಬಯಲು ಮಾಡುವುದು-ಇವೆಲ್ಲವನ್ನೂ ತಾಳಮದ್ದಲೆಯ ಅರ್ಥಗಾರಿಕೆಯಂತೆ ಹರಿಕತೆಯ ಪ್ರವಚನದಂತೆ ತುಂಬ ಆಪ್ತವಾಗಿ ಸ್ವಾರಸ್ಯಕರವಾಗಿ ಅನುಭವ ಕಥನ ಮತ್ತು ಗ್ರಂಥ ಪಠನಗಳ ಉಪಕತೆಗಳೊಂದಿಗೆ ಓದುಗರ ಜೊತೆಗೆ ಹಂಚಿಕೊಳ್ಳುವುದು. ಇದು ‘ಬಿಳಿಮಲೆ ಬಹುರೂಪ’ದ ಆಂಜನೇಯ ಶಕ್ತಿ.

    Original price was: $2.40.Current price is: $1.44.
    Add to basket
  • -40%

    ಮಾಟದೊಳಗಣ ನೋಟ

    0

    ಮಾಟದೊಳಗಣ ನೋಟ
    (ಶಿಲ್ಪಕಲೆ ಕುರಿತ ಬರೆಹಗಳು)
    ವಿಭಿನ್ನ ಮಾಧ್ಯಮಗಳ ಶಿಲ್ಪಕಲೆಗಳು ಭಾರತೀಯ ಸಂಸ್ಕೃತಿಯ ಅವಿಸ್ಮರಣೀಯ ಕುರುಹುಗಳು. ಹಾಗಾಗಿ ಸಮಕಾಲೀನ ದಿನಗಳಲ್ಲಿಯೂ ಸಾಂಪ್ರದಾಯಿಕ ಶಿಲ್ಪ ಕಲೆಗಳ ಬಗೆಗೆ ಪ್ರೀತಿ, ಆರಾಧನಾಭಾವ ಉಳಿದುಕೊಂಡಿದೆ. ಸಾಂಪ್ರದಾಯಿಕ ಶಿಲ್ಪ ಕಲೆಗಳ ರಚನಾ ವಿಧಾನ, ಹಿನ್ನೆಲೆ, ಅರ್ಥ, ಸ್ವರೂಪ ಇವುಗಳನ್ನು ಉಳಿಸಿಕೊಂಡು ಬಂದಿರುವ ಮನುಷ್ಯನ ನಂಬಿಕೆಗಳು ಇತ್ಯಾದಿಗಳೆಲ್ಲ “ಮಾಟದೊಳಗಣ ನೋಟ” ಪುಸ್ತಕದ ಲೇಖನಗಳಲ್ಲಿ ದಾಖಲಾಗಿವೆ.

    Original price was: $1.44.Current price is: $0.86.
    Add to basket
  • -40%

    ನಾದದ ನವನೀತ

    0

    ನಾದದ ನವನೀತ
    ಬೇಂದ್ರೆಯವರ ಕಾವ್ಯವನ್ನು ಕುರಿತಂತೆ ಆಳವಾದ ಅಧ್ಯಯನದಿಂದ ರೂಪುಗೊಂಡ ಲೇಖನಗಳು ಪುಸ್ತಕದಲ್ಲಿ ಅಡಕವಾಗಿವೆ. ನಾದದ ನವನೀತದಲ್ಲಿ ಹೊರಹೊಮ್ಮುವ ಭಾವಗೀತದ ಬಗೆಗಿನ ಬೇಂದ್ರೆಯವರ ಕಾವ್ಯತತ್ವವನ್ನು ವಿಸ್ತರಿಸುವ ಇಲ್ಲಿನ ಬರವಣಿಗೆ ಯಾವುದೇ ಕಾವ್ಯಾಭ್ಯಾಸಿಗೆ ಉಪಯುಕ್ತವಾಗಿದೆ. ಬೇಂದ್ರೆಯವರ ಕಾವ್ಯ ಮಥಿಸಿದಷ್ಟು ನವನೀತವಾಗಿ ಭಾವ, ಅರ್ಥ, ಗ್ರಾಹ್ಯವಾಗುವ ಪರಿ ವಿಸ್ಮಯಕಾರಿಯಾಗಿದೆ ಎಂಬುದನ್ನು ಪ್ರಸ್ತುತ ಕೃತಿಯ ಓದು ಖಚಿತ ಪಡಿಸುತ್ತದೆ.

    Original price was: $1.92.Current price is: $1.15.
    Add to basket
  • -40%

    ಬರಿ ನಿದ್ದೆಯಲ್ಲವೊ ಅಣ್ಣಾ!

    0

    ಬರಿ ನಿದ್ದೆಯಲ್ಲವೊ ಅಣ್ಣಾ!
    ವಿಷಯ-ವಿಚಾರ-ವಿಮರ್ಶೆ-ವಿಡಂಬನೆ-ವಿನೋದ
    ಡಾ. ಬಿ ಎಂ ಪುಟ್ಟಯ್ಯನವರ ‘ಬರಿ ನಿದ್ರೆಯಲ್ಲವೊ ಅಣ್ಣಾ!’ ಕೃತಿ ಸುತ್ತಮುತ್ತಲಿನ ಸಮಾಜದ ಜೊತೆ ಒಡನಾಟದಿಂದ ರೂಪುಗೊಂಡ ಬರವಣಿಗೆ. ಇಲ್ಲಿನ ಬರವಣಿಗೆ ಗಂಭೀರವಾದ ವಿಷಯವನ್ನು ವೈನೋದಿಕವಾಗಿ ನೋಡುವ ದೃಷ್ಟಿಕೋನದಿಂದಾಗಿ ಓದುಗರನ್ನು ಸೆಳೆಯುತ್ತವೆ. ಇಲ್ಲಿನ ಅನುಭವಗಳು ಎಲ್ಲರದೂ ಆಗಿದೆ. ಆದರೆ ಅದನ್ನು ನೋಡುವ ದೃಷ್ಟಿಕೋನದಿಂದಾಗಿ ಇಲ್ಲಿನ ಬರೆಹ ಅನನ್ಯವಾಗಿ ಓದುಗರಲ್ಲಿ ತಕ್ಷಣ ನಗೆಯುಕ್ಕಿಸುತ್ತವೆ. ಹಾಗೆಯೇ ಚಿಂತನೆಗೂ ಗುರಿಮಾಡುತ್ತವೆ ಎನ್ನುವುದೇ ವಿಶೇಷ.

    Original price was: $1.92.Current price is: $1.15.
    Add to basket
  • -25%

    ಅಪರಂಜಿ-ಅಗಸ್ಟ್ ೧೯೮೪

    0

    ಅಪರಂಜಿ ಅಗಸ್ಟ್ ೧೯೮೪ ತಿಳಿನಗೆಯ ಕಾರಂಜಿ

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
    ಸಂಸ್ಕೃತ ನಗೆಹನಿ
    ಅಪರಂಜಿ ಕಿಡಿ
    ಕೇಶಾವಾಕ್ಯಮಿದಂ ಸರ್ವಮ
    ಮಂದಾರ
    ಗುರ್ಸಿ ಮತ್ತು ಕಾಲಾಸಿಂಗ್
    ನವ ಕನ್ನಡದ ಕೈಗನ್ನಡಿ
    ಅರಮನೆಯಲ್ಲಿ ಕೈಲಾಸಂ
    ಯಾತ್ರಿಕರ ಪತ್ರ
    ಯಾರಿಗೂ ಹೇಳೋಣುಬ್ಯಾಡ
    ಪಥ್ಯಪಾಲನೆ
    ಇನ್ನೊಂದು ನಗೆಹನಿ

    Original price was: $0.24.Current price is: $0.18.
    Add to basket
  • -40%

    ಜುಲೈ 22 1947

    0

    ಜುಲೈ ೨೨ ೧೯೪೭
    ಡಾ. ಸರಜೂ ಕಾಟ್ಕರ್
    ದೇಶಪ್ರೇಮವನ್ನು ಮನದಲ್ಲಿ ತುಂಬಿಕೊಂಡು ಜೀವನಪೂರ್ತಿ ನಿಷ್ಠಾವಂತರಾಗಿ ಬಾಳುವ ಅನೇಕರು ದೇಶದಲ್ಲಿರಬಹುದು. ಎಲೆಮರೆಯ ಕಾಯಂತೆ ಬದುಕಿದ ಸತ್ಯಪ್ಪನಂತಹ ದೇಶಭಕ್ತನ ಆದರ್ಶವನ್ನು ಕೇಂದ್ರ ಪ್ರಜ್ಞೆಯಾಗಿಟ್ಟುಕೊಂಡು ಮೂರು ತಲೆಮಾರುಗಳ ಕಥನವನ್ನು ಚಿತ್ರಿಸುವ ಕಾದಂಬರಿ ಇದು. ಇದರಲ್ಲಿ ಮೂರು ತಲೆಮಾರುಗಳ ಸಾಮಾಜಿಕ, ರಾಜಕೀಯ ಇತಿಹಾಸವೂ ಆನುಷಂಗಿಕವಾಗಿ ದಾಖಲಾಗಿದ್ದು, ಇದು ಕೇವಲ ಸತ್ಯಪ್ಪನ ಕತೆ ಮಾತ್ರವಾಗುಳಿಯದೆ ತಲೆಮಾರುಗಳ ನಡುವೆ ದೇಶನಿಷ್ಠೆಯ ಬಗೆಗಿನ ಸಂಘರ್ಷದ ಕತೆಯೂ ಆಗಿದೆ.

    Original price was: $1.20.Current price is: $0.72.
    Add to basket
  • -40%

    ಬಾಜೀರಾವ್ ಮಸ್ತಾನಿ

    0

    ಬಾಜೀರಾವ್ ಮಸ್ತಾನಿ
    ಡಾ. ಸರಜೂ ಕಾಟ್ಕರ್
    ಬಾಜೀರಾವ್ ಮಸ್ತಾನಿ ಒಂದು ಅದ್ಭುತವಾದ ಪ್ರೇಮದ ಕಥೆ. ಪುಣೆಯಲ್ಲಿ ಮಸ್ತಾನಿ ಮಹಲ್ ಎಂಬ ವಾಸ್ತು ಇದ್ದರೂ ಇತಿಹಾಸದ ಅಧಿಕೃತ ದಾಖಲೆಯಲ್ಲಿ ಎಲ್ಲೂ ಮಸ್ತಾನಿಯ ಉಲ್ಲೇಖವೇ ಬರುವುದಿಲ್ಲ. ಬಾಜೀರಾವ್ ನಿಂದ ಆಕೆಗೆ ಆದ ಮಗ ಸಮಶೇರ ಬಹಾದ್ದೂರ ಪಾನೀಪತ್ ದಲ್ಲಿ ನಡೆದ ಯುದ್ಧದಲ್ಲಿ ಕೊಲ್ಲಲ್ಪಟ್ಟ ಎಂದು ಹೇಳುವ ಇತಿಹಾಸ ಮಸ್ತಾನಿಯ ಬಗ್ಗೆ ಜಾಣ ಮೌನ ತೋರಿಸುತ್ತದೆ. ಆದರೆ ಲೋಕ ಸಾಹಿತ್ಯದಲ್ಲಿ, ಜಾನಪದ ಕಥಾ ಕಥನಗಳಲ್ಲಿ ಅಲ್ಲಲ್ಲಿ ಬಾಜೀರಾವ್-ಮಸ್ತಾನಿಯರ ಕಥೆ ಉಲ್ಲೇಖಿಸಲ್ಪಡುತ್ತದೆ.

    Original price was: $1.44.Current price is: $0.86.
    Add to basket