• -40%

    ಭಯಮುಕ್ತ ಬದುಕಿನೆಡೆಗೆ…

    0

    ಭಯಮುಕ್ತ ಬದುಕಿನೆಡೆಗೆ…
    ಇಂಗ್ಲಿಶ್ ಮೂಲ: ಸಂತೋಷ್ ನಂಬಿಯಾರ್
    ಕನ್ನಡಾನುವಾದ: ಶೀನಾ ನಾಡೋಳಿ

    ಪ್ರೀತಿ, ಸಂತೋಷ, ಸ್ವಾತಂತ್ರ್ಯ, ಕರುಣೆ ಹಾಗೂ ಕ್ರಿಯಾತ್ಮಕವಾದ ಬದುಕಿಗೆ ಸವೆದ ದಾರಿ ಇಲ್ಲ. ಇದು ಈಗ, ವರ್ತಮಾನದಲ್ಲಿ, ಸಮಯರಹಿತ ಕ್ಷಣದಲ್ಲಿ ಮಾತ್ರ ಸಂಭವಿಸಲು ಸಾಧ್ಯ. ಯೋಚನೆಯ ಚಲನೆ ನಿಂತು ಸುಳ್ಳು ‘ಅಹಂ’ ಕರಗಿದಾಗ ಭಯವು ಇಲ್ಲವಾಗುವುದು…. ಎಂದು ಹೇಳುತ್ತ ನಂಬಿಯಾರ್ ಅವರು ಎಲ್ಲರ ಯೋಚನೆಗಳು ಹೊಸ ದಿಕ್ಕಿನತ್ತ ತೆರೆದುಕೊಳ್ಳುವಂತೆ ಮಾಡುವ ಪ್ರಯತ್ನ ಮಾಡಿದ್ದಾರೆ.

    Original price was: $0.60.Current price is: $0.36.
    Add to basket
  • -40%

    ಅಂತರ್ಮುಖ

    0

    ಅಂತರ್ಮುಖ
    ಜಗತ್ತು ಅನೇಕ ವಿಸ್ಮಯಗಳನ್ನು ತನ್ನೊಳಗೆ ಹುದುಗಿಸಿಕೊಂಡಿದೆ. ವಾಸ್ತವದಲ್ಲಿ ಗೋಚರವಾಗುವ ಸಂಗತಿಗಳೆಲ್ಲವೂ ವಿಸ್ಮಯಕರವೇ ಆಗಿವೆ. ಆದರೆ ಅವುಗಳನ್ನು ನೋಡುವ ಕಣ್ಣು ಮಾತ್ರ ಬೇಕು. ವೀಣಾ ಬನ್ನಂಜೆ ಅವರು ಅಂತಹ ಅನೇಕ ಸೋಜಿಗದ ಸಂಗತಿಗಳನ್ನು ಕಾಣುವ ದೃಷ್ಟಿಯುಳ್ಳವರು. ಇಲ್ಲಿನ ಲೇಖನಗಳಲ್ಲಿ ವಾಸ್ತವದ ಅನೇಕ ಘಟನೆಗಳನ್ನು ಅನುಭಾವದ ವತಿಯಿಂದ ಅಗೋಚರವಾದ ಅಮೂರ್ತದೆಡೆಗೆ ವಿಸ್ತರಿಸಿಕೊಳ್ಳುವ ದಾವಂತವನ್ನು ಕಾಣಬಹುದು. ವೀಣಾ ಅವರ ಬರವಣಿಗೆ ಹಾಗೂ ಚಿಂತನೆಯ ವೈಶಿಷ್ಟ್ಯವನ್ನು ಇಲ್ಲಿನ ಲೇಖನಗಳು ಸ್ಫುಟವಾಗಿ ದಾಖಲಿಸುವ ಕಾವ್ಯಾತ್ಮಕ ರಚನೆಗಳಾಗಿ ಗಮನ ಸೆಳೆಯುತ್ತವೆ.

    Original price was: $0.96.Current price is: $0.58.
    Add to basket
  • -40%

    ರೂಪಾಯಿಕ್ಕೊಂದ ಕವನ

    0

    ರೂಪಾಯಿಕ್ಕೊಂದ ಕವನ 
    ಇಲ್ಲಿಯ ಕವನಗಳು ತಮ್ಮದೇ ಆದ ದಾಟಿಯಲ್ಲಿ ಸಮಾಜಕ್ಕೆ ಕಿವಿಮಾತು. ಮಾಮಿರ್ಕವಾಗಿ ಚಾಟಿ ಏಟನ್ನು ನೀಡುವದರ ಜೊತೆಗೆ ಸಮಾಜ ತಿದ್ದುವ ಕೆಲಸವನ್ನು ಮಾಡಿದ್ದು ಕಂಡು ಬರುತ್ತದೆ. ಮುಂಬೈ ದಾಳಿ ತಿರುಗೇಟು ನಾನು ಮತ್ತು ನನ್ನ ಮನಸು ಈ ಕವಿತೆಗಳು ಮತ್ತು ಸ್ಥಿತಿಯನ್ನು ಯಥಾವತ್ತಾಗಿ ಚಿತ್ರಿಸಿದ್ದು ಬಿಸಿರೊಟ್ಟಿ ಕವನ ಆಸೆಯನ್ನು ಪೂರೈಸಿಕೊಳ್ಳಲು ಸಮಯ ಅಡ್ಡ ಗೊಡೆಯಾಗಿ ನಿಂತು ನಮಗೆ ಅನುದಿನದ ಬದುಕಿನಲ್ಲಿ ಹೇಗೆ ಛೇಡಿಸುತ್ತದೆ ಎಂದು ಮಾರ್ಮಿಕವಾಗಿ ಬರೆದಿದ್ದಾರೆ.
    ಕಾಲ ಎನ್ನುವ ಕವನದಲ್ಲಿ ಕಾಲ ಎಂದೂ ಯಾರೂ ಹೇಳಿದರೂ ನಿಲ್ಲದೇ ಓಡುವ  ಎಂದೂ ನಿಲ್ಲದ ಕಾಲನ ಆಟವನ್ನು ತುಂಬಾ ಚೆನ್ನಾಗಿ ಚಿತ್ರಿಸಲಾಗಿದೆ.

    Original price was: $0.72.Current price is: $0.43.
    Add to basket
  • -40%

    ಕಾತರ

    0

    ಕಾತರ
    ಕವನ ಸಂಕಲನ
    ಶ್ರೀಯುತ ನಜೀರ ಚಂದಾವರ ಅವರ ‘ಕಾತರ’ ಕವನ ಸಂಕಲನ ತುಂಬಾ ವರ್ಷದ ಹಿಂದೆಯೇ ಪ್ರಕಟಗೊಂಡಿದ್ದು, ಇದು ಅವರ ಕಾಲೇಜು ಜೀವನದಲ್ಲಿ ಬರೆದಿದ್ದು.  ತಾವು ಕಂಡ ಸಮಾಜದ ಅಂಕುಡೊಂಕನ್ನೆ ತಮ್ಮ ಕವನದಲ್ಲಿ ದಾಖಲಿಸಿದ್ದಾರೆ. 

    Original price was: $1.08.Current price is: $0.65.
    Add to basket
  • -40%

    ಝೆನ್ ವೀರ ಹೈಕು

    0

    ಝೆನ್ ವೀರ ಹೈಕು
    ಹೈಕುಗಳಲ್ಲಿ ಶ್ರೀ ಚನ್ನವೀರ ಶರಣರ ಶ್ರೀನುಡಿಗಳು
    ‘ಶ್ರೀನುಡಿ’ಗಳಲ್ಲಿಯ ೨೦೦ ವಿಚಾರಗಳನ್ನು ಇಲ್ಲಿ ಎತ್ತಿಕೊಂಡು ಅವುಗಳನ್ನು ಹೈಕುಗಳಲ್ಲಿ ಬರೆಯಲಾಗಿದೆ.  ಉದ್ಬೋಧ ಕೃತಿಯಾದ ‘ಝೆನ್ ವೀರ ಹೈಕು’ ಡಾ.ಸರಜೂ ಕಾಟ್ಕರ್ ಅವರಿಂದ ರಚಿತವಾಗಿದೆ. ಝೆನ್ ಕಥಾ ಸಾಹಿತ್ಯವು ವಿಷಿಕ್ಷ್ಟವಾದದ್ದು. ಇಲ್ಲಿ ಗುರುಶಿಷ್ಯರ ಸಂಭಾಷಣೆ ನಡೆಯುತ್ತದೆ. ಗುರುವಾದವನು ಶಿಷ್ಯನ ತಲೆಯಲ್ಲಿ ವಿಚಾರಗಳೆಂಬ ಹುಳುಗಳನ್ನು ಬಿಡುತ್ತಾನೆ . ಶಿಷ್ಯ  ಅದನ್ನು ಹೇಗಾದ್ರೂ ಅರ್ಥೈಸಿಕೊಳ್ಳಬಹುದು. ವಿಚಾರಗಳೆಂಬ ಹುಳುಗಳು ಸದಾಕಾಲ ಶಿಷ್ಯನ ತಲೆಯನ್ನು ತಿನ್ನುತ್ತಲೇ ಇರುತ್ತವೆ. ಅವನು ಅರ್ಥೈಸಿಕೊಂಡಷ್ಟು ಗುರುವಿನ ಸೂತ್ರರೂಪಿ ನಿರ್ವಚನಗಳು ವಿಸ್ತಾರವನ್ನು ಪಡ್ದೆದುಕೊಳ್ಳುತ್ತಾ ಹೋಗುತ್ತವೆ. ಹೀಗೆಂದು ಬಗೆದು ಹಿರಿಯರಾದ ಡಾ.ಸರಜೂ ಕಾಟ್ಕರ್ ‘ಹೈಕು’ ಪ್ರಕಾರದಲ್ಲಿ ಚನ್ನವೀರ ಶರಣರ ಶ್ರೀನುಡಿಗಳಿಗೆ ಹೊಸ ಉಡುಗೆಯನ್ನು  ತೊಡಿಸಿದ್ದಾರೆ. ಚನ್ನವೀರ ಶರಣರನ್ನು ಝೇನ್ ವೀರ ಶರಣರೆಂದು ಪರಿಭಾವಿಸಿದ್ದಾರೆ. 

    Original price was: $0.72.Current price is: $0.43.
    Add to basket
  • -50%

    ಸಮಾಹಿತ-ಶಿಶಿರ ಸಂಚಿಕೆ ೨೦೧೬

    0

    ಸಮಾಹಿತ
    ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.

    Original price was: $1.20.Current price is: $0.60.
    Add to basket
  • -40%

    ಬದುಕಲು ಅರ್ಹತೆ ಬೇಕು

    0

    ಬದುಕಲು ಅರ್ಹತೆ ಬೇಕು
    (ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರು ನೀಡಿದ ಪ್ರವಚನಗಳ ಸಾರ ಸಂಗ್ರಹ)
    ಒಂದು ಸಾಮಾನ್ಯ  ಸಂಸ್ಥೆಯ  ಸದಸ್ಯತ್ವವನ್ನು ಪಡೆಯಲು, ಒಂದು ಶಾಲೆಯನ್ನು  ಸೇರಲು , ಗಳಿಸಲು ಒಂದು ನೌಕರಿಯನ್ನು  ಪಡೆಯಲು . ಅವುಗಳಿಗೆ ತಕ್ಕ ಅರ್ಹತೆಯನ್ನು  ಪಡೆಯಬೇಕು.  ಹಾಗೆ ಅರ್ಹತೆ ಇದೆ ಎಂದು ಹೇಳುವ ಪ್ರವೇಶ ಪತ್ರವನ್ನು ತುಂಬಿ ಕೊಡಬೇಕು. ಅಗಾ ಸದಸ್ಯತ್ವ ಕೊಡಬೇಕೆ ಬೇಡವೇ ? ಶಾಲೆಗೆ ಸೆರಿಸಿಕೊಳ್ಳಬೇಕೆ ಬೇಡವೇ ? ನೌಕರಿಗೆ ಅರ್ಹನೆ ಎಂದು ವಿಚಾರಿಸುತ್ತಾರೆ. ಅಂಥದ್ದರಲ್ಲಿ ಭೂಮಿಯ ಮೇಲೆ ಹುಟ್ಟಿ ಬಂಡ ಮೇಲೆ, ಇಲ್ಲಿ ಬದುಕಲು ಅರ್ಹತೆಯನ್ನು  ಪಡೆಯಲು ಪ್ರವೇಶಪತ್ರ ಬೇಡವೇ ?

    Original price was: $0.84.Current price is: $0.50.
    Add to basket
  • -19%

    ಉಘೇ ಉಘೇ

    0

    ಉಘೇ ಉಘೇ
    ಕಥಾ ಸಂಕಲನ
    ನನಗೆ ಬರೆಯುವುದಕ್ಕಿಂತಲೂ ಓದುವುದೇ ಇವತ್ತಿಗೂ ಹೆಚ್ಚು ಇಷ್ಟದ ವಿಷಯ. ಆದರೂ ಬಿಡುವು ಸಿಕ್ಕಾಗಲೆಲ್ಲಾ ನನ್ನ ತಲೆಯಲ್ಲಿ ವರ್ಷಗಟ್ಟಲೇ ಗಿರಕಿ ಹೊಡೆಯುವ ಕಥೆಗಳನ್ನು ಬರೆದೆ. ಅದರಲ್ಲಿ ‘ಟ್ಯೂಷನ್ ಫೀ’ ಎಂಬ ಕತೆ ನನಗೆ ಒಂದು ಬಹುಮಾನವನ್ನು ಮತ್ತು ಅಪಾರ ಜನಮನ್ನಣೆಯನ್ನು ತಂದು ಕೊಟ್ಟಿತು. ಈ ಕತೆಯಿಂದ ನಾನು ಕತೆಗಾರ ಎಂದು ಗುರುತಿಸಿಕೊಳ್ಳಲು ಸಾಧ್ಯವಾಯಿತು. ಮತ್ತಷ್ಟು ಉತ್ತಮ ಕತೆಗಳನ್ನು ಬರೆಯಬೇಕೆಂಬ ಹಂಬಲದಿಂದಲೇ ಬಹುತೇಕ ಎಲ್ಲಾ ಉತ್ತಮ ಕನ್ನಡ ಮತ್ತು ಇಂಗ್ಲೀಷ್ ಕತೆಗಾರರನ್ನು ಸಾಧ್ಯವಾದಷ್ಟು ಓದಿಕೊಂಡೆ. ಅದರ ಫಲವೇ ಈ ಸಂಕಲನ.
    -ಗುಬ್ಬಚ್ಚಿ ಸತೀಶ್

    Original price was: $0.72.Current price is: $0.58.
    Add to basket
  • -25%

    ಕೊರವಂಜಿ-ಏಪ್ರಿಲ್ ೧೯೪೫

    0

    ಕೊರವಂಜಿ ಏಪ್ರಿಲ್  ೧೯೪೫ :
    ತಿಳಿನಗೆಯ ಮಾಸಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಕುಹಕಿಡಿಗಳು
    ಉರಿಗಾಳು -ಡಾ|| ಖಾರೆ
    ದಿಂಬಾಸನೆ -ಶ್ರೀ. ಜ.ರಾ.ಶ್ರೀ
    ದೊಂಗಲುನ್ನಾರು ಜಾಗ್ರತ
    ಗಿರಾಕಿ -ಪಾಟಾಳಿ
    ಪ್ರಶ್ನೆಗೆ ಉತ್ತರ -“ಕುವೆಂಪು” ಪ್ರಚೋದಿತ.
    ಬ್ಲೇಡುಗಳು -ಎನ್ . ಪ್ರಹ್ಲಾದರಾವ್.
    ಆಸ್ಪತ್ರೆ ವರಾಂಡಾದಲ್ಲಿ
    ಅನರ್ಥಕೋಶ -ಖಾರಾಂಶ
    ನಾಡೀಹಬ್ಬ
    ಜೀವನ್ ಸುಪ್ತ -ನಾ.ಕ.
    ಬೋರಮ್ಮನ ಶಿಪಾರಸ್ಸು
    ನವೀನ ಗಾದೆಗಳು
    ಆಧುನಿಕ ಕವನರಚನೆ
    ಯುದ್ಧಾನಂತರದ ನನ್ನ ಯೋಜನೆ
    ಕಾಫಿಮನೆ
    ಸಭಿಕರ ಸಂಘ -ಪಾರಾಳಿ
    ಹೊಸ ಉತ್ಸವಗಳು
    ಕಾಯಕಲ್ಪ -ಎನ್ ಪ್ರಹ್ಲಾದರಾವ್.
    ಒಲೆಗೊಂದು ಓಲೆ
    ಮದುವೆ ಮನೆ ಡಿನ್ನರ್
    ಇಂದ್ರನ ಸೋಲು -ಬಿ ಪು
    ಸಹಾನು ಭೂತಿ -ಗೋಡಂಬಿ.
    ಯಾಲಕ್ಕಿ -‘ಶನಿ’
    ರಂಗಪ್ಪ ಮತ್ತು ರಾವಣಭಾತ್ -ಬೀರಣ್ಣ
    ನಮ್ಮ ಮನೆಯ ಸಣ್ಣ ಪಾಪ -ಭದ್ರ
    ವಾಕ್ಚಿತ್ರದ ವಾರ್ಷಿಕ ಸಂಚಿಕೆ

    Original price was: $0.24.Current price is: $0.18.
    Add to basket
  • -40%

    ಅಂಬೇಡ್ಕರ್ ದೃಷ್ಟಿಯಲ್ಲಿ ದಲಿತರು ಮತ್ತು ಮತಾಂತರ

    0

    ಅಂಬೇಡ್ಕರ್ ದೃಷ್ಟಿಯಲ್ಲಿ ದಲಿತರು ಮತ್ತು ಮತಾಂತರ
    ಇಲ್ಲಿನ ಲೇಖನಗಳಲ್ಲಿ ದಲಿತರ ಸಮಕಾಲೀನ ಸಮಸ್ಯೆಗಳನ್ನು ಆತ್ಮೀಯವಾಗಿ ವಿಶ್ಲೇಷಿಸಿಲಾಗಿದೆ. ದಲಿತರ ಸಮಸ್ಯೆಗಳು ಮೇಲ್ನೋಟಕ್ಕೆ ತೋರುವುದಕ್ಕಿಂತಲೂ ಭಿನ್ನವಾಗಿ ಅವುಗಳ ಅಂತರ್ಯವನ್ನು ಶೋಧಿಸಿರುವಲ್ಲಿ ಲೇಖಕರ ಸಾಮಾಜಕ ಕಾಳಜಿ ಸ್ಪಷ್ಟವಾಗುತ್ತದೆ. ಅಂಬೇಡ್ಕರ್ ಚಿಂತನೆಯನ್ನು ಮತ್ತು ದಲಿತ ಲೋಕವನ್ನು ಚಾರಿತ್ರಿಕ ಹಿನ್ನಲೆಯಲ್ಲಿ ವಿಶ್ಲೇಷಿಸುತ್ತ ಮತಾಂತರದ ಒಳ ಹೊರಗುಗಳನ್ನು ಸೂಕ್ಷ್ಮವಾಗಿ ಇಲ್ಲಿನ ಬರವಣಿಗೆಗಳಲ್ಲಿ ಓದುಗರ ಮುಂದಿಡಲಾಗಿದೆ. ದಲಿತ ಸಂಸ್ಕತಿಯನ್ನು ಕೇಂದ್ರೀಕರಿಸಿ ಬರೆದ ಇಲ್ಲಿನ ಲೇಖನಗಳು ಕನ್ನಡ ವಿಚಾರ ಪ್ರಪಂಚದಲ್ಲಿ ಹೊಸ ತಿಳುವಳಿಕೆಯನ್ನು ಮೂಡಿಸುವಲ್ಲಿ ಸಶಕ್ತವಾಗಿದೆ.

    Original price was: $2.40.Current price is: $1.44.
    Add to basket
  • -40%

    ತೇರು

    0

    ತೇರು ಕೃತಿಯನ್ನು ನಾವು ನೀಳ್ಗತೆಯಂತೆಯೂ ನೋಡಬಹುದು. ಅಥವಾ ಅದನ್ನು ಒಂದು ಜಾನಪದ / ಜನಾಂಗಿಕ ಅಧ್ಯಯನದಂತೆಯೂ ನೋಡಬಹುದು.
    ತೇರು ಕೃತಿಯೂ ಧರಮನಟ್ಟಿ ದೇಸಗತಿಯ ಸ್ಥಾಪನೆಯ ಕಾಲದಿಂದಲೇ ಪ್ರಾರಂಭ ವಾಗುತ್ತದೆ. ಹೊಸ ದೇಸಾಯಿ ಧರಮನಟ್ಟಿಯಲ್ಲಿ ತನ್ನ `ಮನೆ ದೇವರಾದ’ ವಿಠ್ಠಲನ ಒಂದು ಭವ್ಯ ದೇವಾಲಯವನ್ನು ಕಟ್ಟಿಸುತ್ತಾನೆ. ಹೊನ್ನ ಕಳಸದ, ಬೃಹತ್ ಕಲ್ಲಿನ ಚಕ್ರಗಳ, ಆ ದೇವಾಲಯದ ತೇರು ಇಡೀ ದೇಸಗತಿಯ ಪ್ರತಿಷ್ಠೆಯ ಸಂಕೇತ.

    Original price was: $2.04.Current price is: $1.22.
    Add to basket
  • -40%

    ತಂದೆಯ ಕಣ್ಣಲ್ಲಿ  ಪಂ. ಭೀಮಸೇನ ಜೋಶಿ

    0

    ತಂದೆಯ ಕಣ್ಣಲ್ಲಿ  ಪಂ. ಭೀಮಸೇನ ಜೋಶಿ
    ಈ ಮನೋಹರ ಗ್ರಂಥಮಾಲೆ ೧೯೫೮ – ೬೦ ರಲ್ಲಿ ಗ್ರಂಥಮಾಲೆಯು ನಡೆದು ಬಂದ ದಾರಿ ಸಂಪುಟಗಳನ್ನು ಪ್ರಕಟಿಸಿತ್ತು. ಈ ವ್ಯಕ್ತಿಚಿತ್ರ ೩ ನೇ ಸಂಪುಟದಲ್ಲಿ ಪ್ರಕಟವಾಗಿತ್ತು.ಸುಮಾರು ೫೦ ವರ್ಷಗಳ ನಂತರ ಪಂ.ಭೀಮಸೇನ ಜೋಷಿಯವರು ಮುಗಿಲೆತ್ತರಕ್ಕೆ ಬೆಳೆದು “ಭಾರತ  ರತ್ನ” ಪ್ರಶಸ್ತಿಯನ್ನು ಅಲಂಕರಿಸಿದ ಮೇಲೆ ಅವರ ಬಗ್ಗೆ ಸಾಕಷ್ಟು ಲೇಖನಗಳು ಪ್ರಕಟವಾಗತೊಡಗಿದವು.  ಪಂ.ಭೀಮಸೇನ ಜೋಷಿಯವರು ೨೪ ಜನೇವರಿ ೨೦೧೧ ರಂದು ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಹೀಗಾಗಿ ಅವರಿಗೆ ಶ್ರದ್ಧಾಂಜಲಿ ರೂಪದಲ್ಲಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ.

    Original price was: $0.48.Current price is: $0.29.
    Add to basket
  • -20%

    ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ…

    0

    ರೆಕ್ಕೆ ಬಿಚ್ಚಿ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಸಮಯದಲ್ಲಿ . ಬೇಡನ ಬಣ ಗುರಿ ಜೀವನ್ಮರಣದ ಹೋರಾಟದಲ್ಲಿ ಸಿಲುಕಿದರೂ, ಆತ್ಮವಿಶ್ವಾಸದಿಂದ, ಹಲವು ಅಮೃತ ಹಸ್ತಗಳ ಪ್ರೀತಿಯ ಶುಶ್ರೂಷೆ, ಹರಕೆ-ಹಾರೈಕೆಗಳಿಂದ ಮತ್ತೆ ಬಾನಿಗೆ ಹಾರುವ ಹಕ್ಕಿಯ ಕಥೆಯಂತೆ ಈ ಪುಸ್ತಕದ ಲೇಖಕಿಯ ಜೀವನಗಾಥೆ. ಕ್ಯಾನ್ಸರ್ ಎಂಬ ವ್ಯಾಘ್ರನನ್ನು ತನ್ನ ಛಲದಿಂದ ಎದುರಿಸಿ ಹಿಮ್ಮೆಟ್ಟಿದ ಪುಣ್ಯಕೋಟಿಯ ಕಥೆಯೂ ಹೌದು.

    Original price was: $1.20.Current price is: $0.96.
    Add to basket
  • -20%

    ಭಾವದ ಅಂಬಾರಿ

    0

    ಭಾವದ ಅಂಬಾರಿ
    ‘ಭಾವದ ಅಂಬಾರಿ’ ಎಂಬುದು ಅವರ ಒಂಬತ್ತು ಕಥೆಗಳ ಸಂಕಲನ. ಇದರಲ್ಲಿನ ಕೆಲವು ಕಥೆಗಳು ‘ಮಂಗಳ’, ‘ಕರ್ಮವೀರ’ ದಂಥ ವಾರಪತ್ರಿಕೆಗಳಲ್ಲಿ, ‘ಅಡ್ವೈಸರ್’ನಂಥ ಮಾಸಪತ್ರಿಕೆಯಲ್ಲಿ ಈಗಾಗಲೇ ಬೆಳಕು ಕಂಡಿವೆ. ಹೀಗಾಗಿ ಅವರು ಉದಯೋನ್ಮುಖ ಕಥೆಗಾರರಾಗಿಯೂ ಹೊಮ್ಮುತ್ತಿರುವುದನ್ನು ದಾಖಲಿಸಿದ್ದಾರೆ. ಅವರ ಈ ಸಂಕಲನ ಇದಕ್ಕೆ ಇನ್ನೊಂದು ಸಾಕ್ಷಿಯನ್ನು ಒದಗಿಸಿದೆ.

    Original price was: $1.20.Current price is: $0.96.
    Add to basket
  • -40%

    ಕಲಬುರ್ಗಿ ನೆನಪು

    0

    ಕಲಬುರ್ಗಿ ನೆನಪು
    ನಾಡಿನ ಹಿರಿಯ ಸಂಶೋಧಕರಾಗಿದ್ದ ದಿವಂಗತ ಡಾ.ಎಂ.ಎಂ.ಕಲಬುರ್ಗಿ ಅವರನ್ನು ಸ್ಮರಿಸಿಕೊಳ್ಳುವ ನಿಮಿತ್ಯವಾಗಿ ಅಕ್ಟೋಬರ್ ೪ ೨೦೧೫ ರಂದು ಏರ್ಪಡಿಸಿದ್ದ ವಿಚಾರ ಸಂಕೀರ್ಣದಲ್ಲಿ ಮಂಡಿಸಿದ ಪ್ರಬಂಧಗಳು  ಇದರಲ್ಲಿವೆ. ಕಲಬುರ್ಗಿ ಅವರು ಮಾಡಿದ ಕೆಲಸವನ್ನು ವಿವಿಧ ಕ್ಷೇತ್ರದ ವಿದ್ವಾಂಸರು ಅಭ್ಯಾಸ ಪೂರ್ಣ ಪ್ರಬಂಧಗಳ ಜೊತೆಗೆ ಇನ್ನೂ ಕೆಲವು ಪ್ರಬಂಧಗಳನ್ನು ಸೇರಿಸಿ ಈ ಗ್ರಂಥ ಹೊರತರಲಾಗಿದೆ.

    Original price was: $1.62.Current price is: $0.97.
    Add to basket
  • -21%

    ಬೆಳದಿಂಗಳು ಮತ್ತು ಮಳೆ

    0

    ಬೆಳದಿಂಗಳು ಮತ್ತು ಮಳೆ
    ‘ಐದು ನಿಮಿಷದಲ್ಲಿ ಐದು ಕತೆಗಳು, ಊಹಿಸಲಾಗದ ಅಂತ್ಯಗಳು’ – ದಟ್ಸ್ ಕನ್ನಡ ಡಾಟ್ ಕಾಂ
    ಈ ಸಂಕಲನದಲ್ಲಿ ಜೀವನದ ಸಮಗ್ರ ಮತ್ತು ಪರಿಪಕ್ವವಾದ ಮನೋಭಾವನೆ ಮೂಡಿಬಂದಿರುವುದನ್ನು ಕಾಣಬಹುದಾಗಿದೆ. ಇಲ್ಲಿನ ಕಥೆಗಳಲ್ಲಿ ವಿರಳ, ವಿಷಾದ, ಸೂಕ್ಷ್ಮ ಸಂವೇದನಾಶೀಲ ಜೀವನದರ್ಶನ ಪಡೆಯಬಹುದು. ಇಲ್ಲಿಯ ಚುಟುಕು ಕಥೆಗಳು ಕೆಲವೇ ಕ್ಷಣದಲ್ಲಿ ಓದಬಹುದಾದರೂ ಇಡೀ ದಿನ ಯೋಚಿಸುವಂತೆ ಮಾಡುತ್ತವೆ.
    ಈ ಕಥೆಗಳಲ್ಲಿ ಸಾಮಾಜಿಕ ಕಾಳಜಿಯ ಸ್ಪರ್ಶ, ಪ್ರಗತಿಪರ ಚಿಂತನೆಗಳ ಮನೋಭಾವನೆ, ಪ್ರಕೃತಿ ಬಗೆಗಿನ ಒಲವು ಮತ್ತು ಸಮಕಾಲೀನ ವಿದ್ಯಮಾನಗಳ ಅಂತರ್ಗತದೃಷ್ಟಿ, ಗತಕಾಲದ ನೆನಪು ಪ್ರಸ್ತುತ ವ್ಯವಸ್ಥೆಯ ಕೈಗನ್ನಡಿಯಾಗಿ ಮೂಡಿಬಂದಿವೆ.

    Original price was: $0.48.Current price is: $0.38.
    Add to basket
  • -25%

    ಕೊರವಂಜಿ-ಮೇ ೧೯೪೫

    0

    ಕೊರವಂಜಿ ಮೇ ೧೯೪೫ :
    ತಿಳಿನಗೆಯ ಮಾಸಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
    ಕುಹಕಿಡಿಗಳು
    ಹುರಿಗಾಳು
    ಕನಸಿನ ಕಥೆ – ಕಾ .ನಾ ಶೇಷಗಿರಿರಾವ್
    ಸಣ್ ಫಯಾಸ್ಕೊ
    ಜನಸಂದಣಿ ಚಲಿಸಿತು –ಎಸ್.ವೆಂಕಟೇಶ
    ಎಚ್ಚರಿಕೆ –ಅನುಮಾನಿ
    ಸಮಸ್ಯೆಗಳು
    ಕೂಶ್ಮಾಂಡ ಪುರಾಣ – ಪಾಠಾಳಿ
    ನವೀನ ಗಾದೆಗಳ
    ಬಾಡಿ ಲೈನ್
    ಅನರ್ಥಕೋಶ – ಖಾರಾಂತ
    ಎರತ – ಕೃಷ್ಣಸ್ವಾಮಿ
    ದ್ವಾರಪಾಲಕ – ಎಸ್.ಪಿ.ರೇವಣ್ಣ
    ಭಾವಿಗೆ ಬಿದ್ದ ಸಾವಿತ್ರಿ ಬಾಯಿ – ಶ್ರೀ ರುದ್ರಮ್ಮ
    ಬಾಲಬೋಧೆ
    ಕ್ಷಮೆ ಕೇಳಬೇಕಾದ ಸಂದರ್ಭಗಳು
    ಗೊತ್ತಾಯ್ತೊ ನಾ ಹೇಳಿದ್ದು
    ಶಸ್ತ್ರಾಸ್ತ್ರ ಶಾಸನ – ಎಸ್ ವೆಂಕಟೇಶ

    Original price was: $0.24.Current price is: $0.18.
    Add to basket
  • -40%

    ಶ್ರೀ ಉತ್ತರಾದಿಮಠ

    0

    ಶ್ರೀ ಉತ್ತರಾದಿಮಠ  :

    ಶ್ರೀ ಮಜ್ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲಮಹಾ ಸಂಸ್ಥಾನ, ಸರ್ವಜ್ಞ ಪೀಠ – ಶ್ರೀ ಉತ್ತರಾದಿಮಠ ಸಂಕ್ಷಿಪ್ತ ಪರಿಚಯ ಈ ಕೃತಿಯಲ್ಲಿದೆ. ಇದನ್ನು ಕೃಷ್ಣ ಕೊಲ್ಹಾರಕುಲಕರ್ಣಿ ಅವರು ರಚಿಸಿದ್ದಾರೆ.

    Original price was: $0.84.Current price is: $0.50.
    Add to basket
  • -40%

    ಗದುಗಿನ ನಾರಾಯಣರಾವ ಹುಯಿಲಗೋಳ

    0

    ಗದುಗಿನ ಹುಯಿಲಗೋಳ ನಾರಾಯಣರಾವ
    ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ‘ ನಾಡಗೀತೆ ಖ್ಯಾತಿಯ ಶ್ರೀ ಹುಯಿಲಗೋಳ ನಾರಾಯಣರಾವ ಕರ್ನಾಟಕದ ಏಕೀಕರಣ ಚಳುವಳೀಯಲ್ಲಿ ಮನದುಂಭಿ ಪಾಲುಗೊಂಡು ಕನ್ನಡ ಭಾಷೆಯ ಅಭಿವೃದ್ದಿ ಹಾಗೂ ಕನ್ನಡಿಗರಲ್ಲಿ ಸ್ವಂತಿಕೆಯ ಬಗೆಗೆ ಅಭಿಮಾನ ಮೂಡಿಸುವ ಅಭಿಯಾನದಲ್ಲಿ ಬಹುವಿಧಿಯಾಗಿ ಶ್ರಮಿಸಿದರು. ನಾಟಕಗಳನ್ನು ಬರೆದು ಆಡಿಸಿದರು. ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ನಾಟಕಗಳ ರಚನೆಯಲ್ಲಿ ಮೊದಲಿಗರಾಗಿ ನಾಟಕಗಳ ಮೂಲಕ ಜನಜಾಗೃತಿ ಮಾಡಿದರು. ಶಿಕ್ಷಣ ಪ್ರಸಾರಕ್ಕೆ ಬುನಾದಿ ಹಾಕಿಕೊಡುವಲ್ಲಿ ಪ್ರೇರಕಶಕ್ತಿಯಾದರು . ಗಾಂಧೀಜಿಯವರ ತತ್ವಾದರ್ಶಗಳನ್ನು ತಮ್ಮ ಬದುಕಿನಲ್ಲಿ ಅಂತರ್ಗತಿಸಿಕೊಂಡು ಕರ್ನಾಟಕದ ಏಕೀಕರಣ ಆಂದೋಲನದಲ್ಲಿ ತಮ್ಮ ಪಾಲಿನ ಕರ್ತವ್ಯವನ್ನು ಕಾಯಾ-ವಾಚ-ಮನಸಾ ಮಾಡಿ ವಂದ್ಯರಾಗಿದ್ದಾರೆ.

    Original price was: $0.30.Current price is: $0.18.
    Add to basket
  • -40%

    ಮಂಕರು ಬೆಪ್ಪರು

    0

    ಮಂಕರು ಬೆಪ್ಪರು
    “ಮಂಕರು ಬೆಪ್ಪರು” ಎಂಬ ಈ ನಗೆ ಸಂಕಲನ ರಾ.ಶಿ.ಯವರ “ತುಟಿ ಮೀರಿದುದು” ಹಾಗೂ “ನಗು ಸರಸಿ ಅಪ್ಸರೆಯರು” ಇವುಗಳಿಂದ ಆಯ್ದ ಲೇಖನಗಳ ಸಂಗ್ರಹ.
    ಈ ಬರಹಗಳು ರಾ.ಶಿ.ಯವರ ಹಾಸ್ಯಪ್ರಜ್ಞೆಯ ಒಂದು ಮುಖ.

    Original price was: $1.14.Current price is: $0.68.
    Add to basket
  • -40%

    ಆಚಾರ್ಯ ಪ್ರಹಸನ  ಮತ್ತು  ಏನ್ ಹುಚ್ಚೂರೀ….

    0

    ಆಚಾರ್ಯ ಪ್ರಹಸನ  ಮತ್ತು  ಏನ್ ಹುಚ್ಚೂರೀ….
    ಆಚಾರ್ಯ ಪ್ರಹಸನ  ಮತ್ತು ಏನ್ ಹುಚ್ಚುರೀ ಇವು ಎರಡು  ನಾಟಕಗಳಾಗಿದ್ದು , ಇವೆರಡು ನಾಟಕಗಳಿಗೆ ಪ್ರೇರಣೆ ಫ್ರೆಂಚ್ ಪ್ರಹಸನಕಾರ ಮೊಲಿಯರನದ್ದು. ‘ಆಚಾರ್ಯ  ಪ್ರಹಸನ’ವು  ಮೋಲಿಯರನ ‘ಲೆ ತಾರ್ ತೂಫ್’ ನಾಟಕದಿಂದಲೂ. ‘ಏನ್ ಹುಚ್ಚೂರೀ….’ ನಾಟಕವು ‘ಬೂರ್ಜ್ವಾ ದಿ ಜಂಟಲ್ ಮನ್’ ನಾಟಕದಿಂದಲೂ ಪ್ರಭಾವಿತವಾಗಿವೆ.  ಈ ಎರಡು ನಾಟಕಗಳನ್ನು ಅಭಿನಯಿಸುವುದು ಸುಲಭವಲ್ಲ. ನಾಟಕಕಾರ ಹಾಗೂ ನಿರ್ದೇಶಕರ ಮೇಲೆ ಕಲಾತ್ಮಕ ನಿರ್ಬಂಧ ಹೇರ ಬಲ್ಲ ಕೃತಿಗಳಿವು.

    Original price was: $1.44.Current price is: $0.86.
    Add to basket
  • -40%

    ರಾಘವೇಂದ್ರ ಖಾಸನೀಸ ಸಮಗ್ರ

    0

    ರಾಘವೇಂದ್ರ ಖಾಸನೀಸ ಸಮಗ್ರ
    ರಾಘವೇಂದ್ರ ಖಾಸನೀಸರು ಕನ್ನಡದ ಅತ್ಯಂತ ಮಹತ್ವದ ಕಥೆಗಾರರಲ್ಲಿ ಒಬ್ಬರು. ಸಾಮಾನ್ಯವಾಗಿ ಎಲ್ಲ ಪ್ರಾತಿನಿಧಿಕ ಕಥಾ ಸಂಗ್ರಹಗಳಲ್ಲಿ ಅವರ ಕಥೆಗಳು ಕಾಣಿಸಿಕೊಳ್ಳುವವು. ಕೆಲವೇ ಕಥೆಗಳನ್ನು ಬರೆದರೂ ಖಾಸನೀಸರು ಸಣ್ಣ ಕಥೆಯ ಪ್ರಕಾರದ ಸಾಧ್ಯತೆಗಳನ್ನು ಸೊರೆಗೊಂಡಿದ್ದಾರೆ ಅಷ್ಟೇ ಅಲ್ಲದೆ ಅವುಗಳನ್ನು ಆಶ್ಚರ್ಯಕರವಾಗಿ ವಿಸ್ತರಿಸಿದ್ದಾರೆ. ಅವರ ಚಿಂತನೆ ಸ್ವರೂಪ ಹಾಗೂ ಅವರ ಕಥೆಗಳ ಬಂಧ ಅವ್ರಿಗೆಯೇ ವಿಶಿಷ್ಟವಾದವುಗಳು. ಈ ಕೃತಿಯಲ್ಲಿ ಖಾಸನೀಸರ ೧೬ ಪ್ರಕಟಿತ ಕಥೆಗಳು ಮತ್ತು ೭ ಅಪ್ರಕಟಿತ ಕಥೆಗಳು ಸೇರಿವೆ. ಇವುಗಳನ್ನು ಡಾ. ಜಿ.ಎಸ್ ಅಮೂರ ಹಾಗೂ ಡಾ. ರಮಾಕಾಂತ ಜೋಶಿ ಸಮರ್ಥವಾಗಿ ಸಂಪಾದನೆ ಮಾಡಿದ್ದಾರೆ.

    Original price was: $3.00.Current price is: $1.80.
    Add to basket
  • -25%

    ಕೊರವಂಜಿ-ಸಪ್ಟೆಂಬರ್ ೧೯೪೩

    0

    ಕೊರವಂಜಿ  : ಸೆಪ್ಟೆಂಬರ್ 1943

    ತಿಳಿ ನಗೆಯ ಮಾಸಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಕುಹಕಿಡಿಗಳು
    ಸುರಸುರಬತ್ತಿ
    ನವೀನ ಗಾದೆಗಳು
    ಬಾಧಕವಿಲ್ಲ
    ತುಲಸೀ ದಳ
    ತಮ್ಮಯ್ಯನ ಎಮ್ಮೆಗಳು  – ಎಸ್. ವೀ. ವೀ. ಕೃತಂ
    ದಕ್ಷಿಣದ ಸುಂದರಿ   – ವಸುದೇವ ಭೂಪಾಲಂ
    ರಾಮ ಶಬ್ದ   – ಶ್ರೀಮತಿ ಮೀನಾಬಾಯಿ
    ಭಾವನಿಗೊಂದು ಉತ್ತರ
    ಜಹನಾರ   – ಪಾಟಾಳಿ
    ಗುಮಾಸ್ತೆ ಲಾವಣಿ   – ಇಂದಾಗೆ ಈಶ್ವರಯ್ಯ
    ಎಲ್ಲರೂ ಜ್ಯೋತಿಷ್ಯ ಓದಿದರೆ…  – ಕೇಫ
    ಗುರುಶಿಷ್ಯ   – ನಾ. ಕಸ್ತೂರಿ
    ಡಾ|| ಕ್ವಿಟ್   – ನಾ. ಕಸ್ತೂರಿ

    Original price was: $0.24.Current price is: $0.18.
    Add to basket
  • -25%

    ಕೊರವಂಜಿ-ಅಗಸ್ಟ್ ೧೯೪೩

    0

    ಕೊರವಂಜಿ : ಅಗಸ್ಟ್ 1943

    ತಿಳಿ ನಗೆಯ ಮಾಸಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಕುಹಕಿಡಿಗಳು
    ಹುರಿಗಾಳು
    ಚಿತ್ರ – ಕನ್ನಡ
    ಪ್ರ ಶ್ನೋ ತ್ತ ರ ಕಾ ಲ
    ನವೀನ ಗಾದೆಗಳು
    ಭದ್ರಾವತಿ ಕುದುರೆ
    ಶುಂಠೈಯ್ಯನ ಶೂರತ್ವ
    ಪೀ ಸೀ ಎಂ ಆಶುಕವಿ.
    ಹಿಂದೂಸ್ಥಾನದಲ್ಲಿ   –  ಕಾರಂತ.
    ನಾನು ಹೊತ್ತ ತಲೆ   – ಎನ್. ಕೆ. ಪಾಟಾಳಿ.
    ರೀಡಿಂಗ್ ರೂಂ  – ಕಂಠಿ
    ಲಿಂಗಿಗೊಂದು ಸೀರೆ   – ಮೆಕಾನಿಕ್ ಮರಿಸಾಮಿ.
    “ಶುನಕಾನುಭವಂ”   – ಎಂ. ವಿ. ನಾ.
    ಕೆಂಪುವಸ್ತ್ರ
    ರಸವಿದ್ಯೆ   – ಕಾರಂತ.
    ನಾನೂ ಕತೆಗಾರ  – ರಾ. ಪಾ. ಶಿರೋಳ.
    ಮುಂದೇನು ದಾರಿ?  – ಪು. ಪುರಂಧರ.

    Original price was: $0.24.Current price is: $0.18.
    Add to basket
  • -40%

    ಹೂವು, ಒಡಕಲು ಬಿಂಬ ಮತ್ತು ಇತರ ನಾಟಕಗಳು

    0

    ಹೂವು, ಒಡಕಲು ಬಿಂಬ ಮತ್ತು ಇತರ ನಾಟಕಗಳು:
    “ಹೂವು, ಒಡಕಲು ಬಿಂಬ” ಗಿರೀಶ ಕಾರ್ನಾಡ ಅವರು ಗ್ರಂಥಮಾಲೆಗಾಗಿ ರಚಿಸಿದ ನಾಟಕಗಳ ಸಂಕಲನ. ಇದರಲ್ಲಿ ಹೂವು (ಭಾಷಣ ರೂಪಕ), ಒಡಕಲು ಬಿಂಬ (ನಾಟಕ), ಮಾನಿಷಾದ (ನಾಟಕ) ಮತ್ತು ಮಹೇಶ ಎಲಕುಂಚವಾರ ಅವರ ಎರಡು ಅನುವಾದಿತ ನಾಟಕಗಳು “ವಾಸಾಂಸಿ ಜೀರ್ಣಾನಿ” ಮತ್ತು “ಧರ್ಮ ಪುತ್ರ” ಸೇರಿವೆ.

    Original price was: $1.44.Current price is: $0.86.
    Add to basket
  • -40%

    ಸೋಮಾರಿ ಓಲ್ಯಾ

    0

    ಸೋಮಾರಿ ಓಲ್ಯಾ
    (ಮಕ್ಕಳ ನಾಟಕ)
    ಸುಮಾರು ಏಳೆಂಟು ವರ್ಷದೊಳಗಿನ ಮಕ್ಕಳಿಗಾಗಿ ಹತ್ತುವರ್ಷಗಳ ಹಿಂದೆ ಬರೆದ ನಾಟಕವಿದು. The Lost Ring ಎಂಬ ಪುಟ್ಟ ಪದ್ಯದಿಂದ ಪ್ರೇರಿತವಾದದ್ದು. ರಚನೆಯಲ್ಲಿ ಕೆಲ ಜನಪ್ರಿಯ ಮಕ್ಕಳ ಕಥೆಗಳ ಬಿಡಿ ನೇಸಲುಗಳೂ ಸೇರಿವೆ.

    Original price was: $0.30.Current price is: $0.18.
    Add to basket
  • -40%

    ಸುಂದರ ಭೂಮಿ

    0

    ಸುಂದರ ಭೂಮಿ
    (ಕವನ ಸಂಕಲನ)
    ಈ ಕವನಗಳಲ್ಲಿ ತಿಳಿಹಾಸ್ಯವಿದೆ, ಆಳವಾದ ಚಿಂತನ ಮಂಥನಗಳಿವೆ, ಎದೆ ತಲುಪಿ ಮನವರಳಿಸುವ ಸೂಕ್ಷ್ಮ ಸಂವೇದನಾ ಭಾವನೆಗಳಿವೆ, ಸಮಾಜ, ದೇಶದ ಭವಿಷ್ಯದ ಕುರಿತ ದುಗುಡ ಇದೆ, ಸ್ವಾರ್ಥಿಗಳ, ಆಷಾಢಭೂತಿಗಳ ವಿಡಂಬನೆಯಿದೆ. ಕೆಲವೇ ಸಾಲುಗಳಲ್ಲಿ ಓದುಗನನ್ನು ಸುದೀರ್ಘ ಚಿಂತನೆಗೆ ಹಚ್ಚಿ, ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸುವ ಗುಣ ಈ ಕವನಗಳಲ್ಲಿವೆ.

    Original price was: $0.72.Current price is: $0.43.
    Add to basket
  • -40%

    ಮುಖಾಂತರ

    0

    ಮುಖಾಂತರ
    ‘ಮುಖಾಂತರ’ ಸಾವಧಾನದ ಲಯದಲ್ಲಿ ನಿರೂಪಿತವಾಗಿರುವ ಕಾದಂಬರಿ. ಇತ್ತೀಚೆಗೆ ಅಪರೂಪವಾಗುತ್ತಿರುವ ಈ ಲಯವೇ ಈ ಕಾದಂಬರಿಯ ಆಶಯ ಆಕೃತಿಯನ್ನು ರೂಪಿಸಿದೆ. ಹೀಗಾಗಿ ವೇಗಕ್ಕೆ ದಕ್ಕದ ಅನೇಕ ಸೂಕ್ಷ್ಮಗಳು ಈ ಕಾದಂಬರಿಯ ಬಂಧದಲ್ಲಿ ಸಹಜವೆಂಬಂತೆ ಸೇರಿಕೊಂಡಿವೆ. ದಟ್ಟ ಜೀವನಾನುಭವದ ಹೆಣಿಗೆಯಲ್ಲಿ ಸಿದ್ಧವಾಗಿರುವ ‘ಮುಖಾಂತರ’ದಲ್ಲಿ ಮೊಗಸಾಲೆಯವರು ಒಂದು ಕುಟುಂಬದ ಕತೆಯನ್ನು ಹೇಳುತ್ತಲೇ ನಾಡಿನ ಜಗತ್ತಿನ ವಿದ್ಯಮಾನಗಳನ್ನು  ಹಾಸು ಹೊಕ್ಕಾಗಿ ಸೇರಿಸಿದ್ದಾರೆ. ಸ್ಥಳೀಯ ಸತ್ವವನ್ನು ಒಳಗೊಳ್ಳುತ್ತಲೇ ಜಾಗತಿಕ ಆಗು ಹೋಗುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ‘ಮುಖಾಂತರ’ದ ವಿಸ್ತಾರ ಬೆರಗು ಮೂಡಿಸುತ್ತದೆ.
    ಸಂಬಂಧಗಳ ಜಟಿಲತೆ, ಸ್ತ್ರೀ ಜಗತ್ತಿನ ತಲ್ಲಣಗಳು, ಆಸ್ತಿ ಅಧಿಕಾರದ ದರ್ಪ, ಅಂತಃಕರಣ ಜಗತ್ತಿನ ಆರ್ದ್ರತೆ. ಜಾಗತೀಕರಣ ಕಬಂಧ ಬಾಹು, ಆಕಸ್ಮಿಕಗಳು ಬದುಕನ್ನು ರೂಪಿಸುವ ವಿಸ್ಮಯ, ವರ್ಗ ಸಂಘರ್ಷ ಅನಿಯಂತ್ರಿತ ಆಕರ್ಷಣೆಯ ಸ್ವರೂಪ. ಈ ಎಲ್ಲವನ್ನೂ ಮೀರಿದ ನಿರ್ಲಿಪ್ತತೆ ಹೀಗೆ ಹಲವು ನೆಲೆಗಳನ್ನು ಒಳಗೊಂಡಿದೆ.

    Original price was: $6.60.Current price is: $3.96.
    Add to basket
  • -40%

    ಸಂಗೀತ ಸಮ್ಮೋಹಿನಿ

    0

    ಸಂಗೀತ ಸಮ್ಮೋಹಿನಿ :
    (ವೈಜ್ಞಾನಿಕ ಕಾದಂಬರಿ)

    ೨೦೨೦ರ ಸುಮಾರಿಗೆ ಕಂಪ್ಯೂಟರ್ ವಿಜ್ಞಾನ ಸ್ಥಿತ್ಯಂತರ ಪಡೆಯುತ್ತದೆ. ದ್ವಿಮಾನ (ಬೈನರಿ) ಬದಲು ತ್ರಿಮಾನ ಪದ್ಧತಿಯನ್ನು ಅಳವಡಿಸಿದಾಗ ಕಂಪ್ಯೂಟರುಗಳು ಸೃಜನಾತ್ಮಕತೆಯನ್ನು ಮೈಗೂಡಿಸಿಕೊಳ್ಳುತ್ತವೆ . ಮನುಷ್ಯರೊಂದಿಗೆ ಪೈಪೋಟಿಗಿಳಿಯುತ್ತವೆ. ಸಂಗೀತ ಕ್ಷೇತ್ರವು ಇದಕ್ಕೆ ಹೊರತಾಗುವುದಿಲ್ಲ. ಒಂದು ಡೂರೋ ‘ಸಮ್ಮೋಹಿನಿ‘ ರಾಗವನ್ನು ಸೃಷ್ಟಿಸಿ ಪ್ರಸ್ತುತಪಡಿಸುತ್ತದೆ. ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆಯ ಕಂಪನಗಳನ್ನೆಬ್ಬಿಸುವ ಕಾದಂಬರಿ.

    Original price was: $0.96.Current price is: $0.58.
    Add to basket
  • -40%

    ಗಿರೀಶ ಕಾರ್ನಾಡ ಹಾಗೂ ಭಾರತೀಯ ರಂಗಭೂಮಿ

    0

    ಗಿರೀಶ ಕಾರ್ನಾಡ ಹಾಗೂ ಭಾರತೀಯ ರಂಗಭೂಮಿ :
    (ನಾಟಕಗಳ ವಿಮಶಾತ್ಮಕ ಅಧ್ಯಯನ)
    ಕನ್ನಡದ ಹಿರಿಯ ಸ್ವೋಪಜ್ಞ ವಿಮರ್ಶಕರಲ್ಲಿ ಒಬ್ಬರಾದ ಡಾ.ಜಿ.ಎಸ್.ಅಮೂರ ಅವರು ಗಿರೀಶ ಕಾರ್ನಾಡರ ಬಾನುಲಿ ನಾಟಕ ‘ಮಾ ನಿಷಾದ’ ವೂ ಸೇರಿದಂತೆ ಎಲ್ಲ ಹನ್ನೆರೆಡು ನಾಟಕಗಳ ಕೂಲಂಕಷ ಅಧ್ಯಯನ ಕೈಗೊಂಡು ಈ ಕೃತಿಯನ್ನು ರಚಿಸಿದ್ದಾರೆ.
    ಕಾರ್ನಾಡರ ನಾಟಕಗಳ ಮೇಲೆ ಇತಿಹಾಸ, ಪುರಾಣ, ವೇದ, ಪಾಶ್ಚಾತ್ಯ ಹಾಗು ಪೌರ್ವಾತ್ಯ ರಂಗಭೂಮಿಗಳ ನಾಟಕಕಾರ, ಸಮಕಾಲೀನ ಸಂದರ್ಭದ ಪ್ರೇರಣೆ ಪ್ರಭಾವಗಳನ್ನು ಈ ನಾಟಕಗಳ ಸಾಧ್ಯತೆ ಹಾಗೂ ಮಿತಿಗಳು ಇತ್ಯಾದಿಗಳನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿ ವಿಮರ್ಶಿಸಿದ್ದಾರೆ.
    ಇದು ಕಾರ್ನಾಡರ ನಾಟಕಗಳ ಓದುಗರಿಗೆ, ವಿಶೇಷ ಅಧ್ಯಯನ ಮಾಡುವ ಅಭ್ಯಾಸಿಗಳಿಗೆ ದಿಕ್ಸೂಚಿಯಾಗಬಲ್ಲ ಅಪರೂಪದ ವಿಮರ್ಶಾತ್ಮಕ ಕೃತಿಯಾಗಿದೆ.

    Original price was: $1.80.Current price is: $1.08.
    Add to basket