ಅಕ್ಷರ ಜೋಡಣೆ, ಪುಸ್ತಕ ವಿನ್ಯಾಸಗಳಲ್ಲೇ ತೊಡಗಿ ಹಲವಾರು ವರ್ಷಗಳೇ ಕಳೆದು ಹೋಗಿವೆ. ನಾವು ವಿನ್ಯಾಸಗೊಳಿಸಿದ ಪುಸ್ತಕಗಳನ್ನು ಕಂಡಾಗಲೆಲ್ಲ ಒಂದು ತೆರನ ಖುಷಿ. ಪುಸ್ತಕಗಳನ್ನು ಕಂಡಾಗ ಅವುಗಳ ವಿನ್ಯಾಸಗಳನ್ನು ಪರಿಶೀಲಿಸುವುದು ಅಭ್ಯಾಸ. ಹೊಸ ಹೊಸ ವಿನ್ಯಾಸಗಳ ಪುಸ್ತಕಗಳನ್ನು ನೋಡಿದಾಗ ಸಂತೋಷವಾಗುತ್ತದೆ. ನೋಡಿದ ಪುಸ್ತಕಗಳನ್ನು ನೆನಪಿನಲ್ಲಿಟ್ಟುಕೊಂಡು ವಿಶಿಷ್ಟವಾದ ಪುಸ್ತಕಗಳನ್ನು ರೂಪಿಸುವುದು ಹಾಗೂ ಅವುಗಳು ಇನ್ನಷ್ಟು ಸುಂದರವಾಗುವಂತೆ ಮಾಡಬೇಕೆಂಬ ಕಾಳಜಿಯನ್ನು ಪ್ರೀತಿಯಿಂದ ಮಾಡುತ್ತ ಬಂದಿದ್ದೇವೆ. ಹಲವಾರು ಪುಟಗಳ ಪುಸ್ತಕಗಳನ್ನು ಕಡಿಮೆ ಅವಧಿಯಲ್ಲಿ ರೂಪಿಸಬೇಕಾದ ಅನಿವಾರ್ಯತೆಯ ನಡುವೆಯೂ ಹಗಲಿರುಳು ಶ್ರಮಿಸಿದ್ದೇವೆ. ಈ ನಮ್ಮ ಶ್ರಮವನ್ನು ಕುರಿತಂತೆ ಮೆಚ್ಚುಗೆ ಸೂಚಿಸಿದವರು ಹಲವರು. ನೀವೇ ಯಾಕೆ ಪುಸ್ತಕ ಪ್ರಕಟಿಸಬಾರದು? ಎಂದು ಪ್ರಶ್ನಿಸಿದವರು ಮತ್ತೆ ಕೆಲವರು. ಹಾಗೆ ಹಲವರ, ಕೆಲವರ ಅಭಿಪ್ರಾಯಗಳು ನಮ್ಮಲ್ಲಿ ಘನೀಭವಿಸಿ ಪುಸ್ತಕ ಪ್ರಕಾಶನದ ಕೆಲಸಕ್ಕೆ ಮುಂದಾಗಿದ್ದೇವೆ.

  • -40%

    ನೋಡಿರಿ ಧರ್ಮಜ ಫಲುಗುಣಾದಿಗಳು

    0

    ಯಕ್ಷಗಾನರಂಗದಲ್ಲಿ ಶಂಭು ಹೆಗಡೆ ಅಪರೂಪದ ವ್ಯಕ್ತಿ. ಮೇಳದ ಬಗೆಗೆ, ತಮ್ಮ ಮೇಳದ ಕಲಾವಿದರ ಬಗೆಗೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನ, ಸುದ್ದಿ, ಫೋಟೋ ಇತ್ಯಾದಿಗಳನ್ನು ಸಂಗ್ರಹಿಸಿಡುವ ಪ್ರವೃತ್ತಿಯುಳ್ಳವರು. ಅದೇ ಪ್ರವೃತ್ತಿಯು ಶಿವಾನಂದ ಹೆಗಡೆಯವರಲ್ಲೂ ಮುಂದುವರೆದಿದೆ. ಈ ಸಂಗ್ರಹದ ರಾಶಿಯಿಂದ ಆಯ್ದ ಲೇಖನಗಳನ್ನೆಲ್ಲಾ ಪ್ರಕಟಿಸುವುದೆಂದರೆ ಸಾವಿರಾರು ಪುಟಗಳೇ ಆದಾವು. ಹಾಗಾಗಿ ಅವುಗಳಿಂದ ಆಯ್ದ ಕೆಲವು ಲೇಖನಗಳನ್ನು ಮಾತ್ರ ಈ ಪುಸ್ತಕದಲ್ಲಿ ಪ್ರಕಟಿಸಲಾಗಿದೆ.

     
    ಯಕ್ಷಗಾನ ಚರಿತ್ರ್ರೆಯ ದೃಷ್ಟಿಯಿಂದ ಈ ತೆರನಾದ ಪುಸ್ತಕಕ್ಕೆ ಮಹತ್ವವಿದೆ. ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳು ಅಧ್ಯಯನಾಸಕ್ತರಿಗೆ ಪ್ರಯೋಜನಕಾರಿಗಳಾಗಿದ್ದರೂ ಅವುಗಳನ್ನು ಅರಸುವುದು ಶ್ರಮದಾಯಕ. ಆದರೆ ಪುಸ್ತಕ ರೂಪದಲ್ಲಿ ಬಂದರೆ ಸುಲಭವಾಗಿ ಲಭಿಸುತ್ತದೆ. ಅಧ್ಯಯನ ಮಾಡುವವರ ಶ್ರಮ, ಹಣ ಎರಡರ ಉಳಿತಾಯವೂ ಆಗುತ್ತದೆ. ಹಾಗಾಗಿ ಅಲ್ಲಲ್ಲಿ ಚದುರಿಕೊಂಡಿದ್ದ ಲೇಖನಗಳನ್ನು ಒಂದೆಡೆಗೆ ತರುವ ಪ್ರಯತ್ನ ಈ ಪುಸ್ತಕ.
     
    ಶಿವರಾಮ ಕಾರಂತರು, ಲಂಕೇಶ್, ತದ್ದಲಸೆ ಶರ್ಮಾ, ಲೈಫ್ 360 ಪತ್ರಿಕೆಯ ಬಿ.ಗಣಪತಿ ಹೀಗೆ ಹಿರಿಯ-ಕಿರಿಯ ಲೇಖಕರ ಬರವಣಿಗೆಯ ಗುಚ್ಛವೇ “ನೋಡಿರಿ ಧರ್ಮಜ ಫಲುಗುಣಾದಿಗಳು”
    Original price was: $1.44.Current price is: $0.86.
    Add to basket
  • -20%

    ಕಂಪನಿ ನಾಟಕ ಅರ್ಥಾತ್ ವೃತ್ತಿರಂಗಭೂಮಿ

    0

    ಕಂಪನಿ ನಾಟಕ ಅರ್ಥಾತ್ ವೃತ್ತಿರಂಗಭೂಮಿ

    ವೃತ್ತಿರಂಗಭೂಮಿಯ ತಲಸ್ಪರ್ಶಿಯಾದ ಅಧ್ಯಯನಗಳು ಕನ್ನಡದಲ್ಲಿ ವಿರಳ. ಹಾಗಿರುವಲ್ಲಿ ವೃತ್ತಿರಂಗಭೂಮಿಯು ಬೆಳೆದುಬಂದ ಬಗೆಗೆ ಅಧಿಕೃತ ಮಾಹಿತಿಗಳನ್ನು  ಇರಿಸಿಕೊಂಡು ಮಾಡಿದ ಈ ಅಧ್ಯಯನ ಮುಖ್ಯವಾಗುತ್ತದೆ. ಸ್ವತಹ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಶ್ರೀ ಪ್ರಕಾಶ ಗರುಡರು ರಂಗಭೂಮಿಯ ಏಳುಬೀಳುಗಳನ್ನು ಹತ್ತಿರದಿಂದ ಬಲ್ಲವರು. ಅವುಗಳನ್ನು ಮುಖ್ಯ ಆಕರವಾಗಿಸಿ ಐತಿಹಾಸಿಕವಾಗಿ ವೃತ್ತಿ ರಂಗಭೂಮಿಯ ಬೆಳವಣಿಗೆಯನ್ನು ಅವುಗಳ ವಿವಿಧ ಅಯಾಮಗಳನ್ನು ಗುರುತಿಸುವ ಪ್ರಯತ್ನ ಈ ಪುಸ್ತಕದಲ್ಲಿದೆ. ಹಾಗಾಗಿ ಈ ಬರೆಹ ವೃತ್ತಿರಂಗಭೂಮಿಯ ಸಂದರ್ಭದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

    Original price was: $3.12.Current price is: $2.50.
    Add to basket
  • -20%

    ಸಾವಿತ್ರಿಬಾಯಿ ಫುಲೆ

    0

    ಸಾವಿತ್ರಿಬಾಯಿ ಫುಲೆ:

    ಸಾವಿತ್ರಿಬಾಯಿ ಫುಲೆ ಈ ಕಾದಂಬರಿಯು ಜ್ಯೋತಿಬಾ ಫುಲೆಯವರ ಧರ್ಮಪತ್ನಿಯಾದ ಸಾವಿತ್ರಿಬಾಯಿ ಫುಲೆಯವರ ಜೀವನ ಹಾಗೂ ಅವರು ಮಾಡಿದ ಸಾಮಾಜಿಕ ಸೇವೆಗಳ ಚಿತ್ರಣವನ್ನು ಒಳಗೊಂಡಿದೆ.

    Original price was: $1.80.Current price is: $1.44.
    Add to basket
  • -20%

    ಗೌರೀಪುರ

    0

    ಗೌರೀಪುರ:

    ಗೌರೀಪುರ ಕಾದಂಬರಿಯು ನಗರದ ಜೀವನ, ಅಲ್ಲಿಯ ತಲ್ಲಣಗಳು, ಧಾವಂತ, ಹಳ್ಳಿಯ ಜೀವನ ಶೈಲಿ, ಅಲ್ಲಿಯ ಆತ್ಮೀಯತೆ ಇವುಗಳನ್ನು. ಹನ್ನೆರಡು, ಹದಿಮೂರು ವರ್ಷದ ಯುವ ಬಾಲಕನ ಕಣ್ಣಿನಿಂದ ನಗರವನ್ನು ಹಾಗೂ ಹಳ್ಳಿಯನ್ನು ನೋಡುವ ತಂತ್ರವು ಇಲ್ಲಿದೆ.

    Original price was: $1.20.Current price is: $0.96.
    Add to basket
  • -20%

    ಜಗದ್ವಂದ್ಯ ಭಾರತಂ

    0

    ಜಗದ್ವಂದ್ಯ ಭಾರತಂ:

    ಜಗದ್ವಂದ್ಯ ಭಾರತಂ ಇದು ಭಾರತದ ಬಾವುಟದ ಕಥೆಯಾಗಿದೆ.

    Original price was: $2.16.Current price is: $1.73.
    Add to basket
  • -40%

    ಜಗದ್ವಂದ್ಯ ಭಾರತಂ

    0

    ಜಗದ್ವಂದ್ಯ ಭಾರತಂ ಇದು ರಾಜಶೇಖರ ಮಠಪತಿ (ರಾಗಂ) ಅವರು ಬರೆದಂತಹ ಭಾರತದ ಬಾವುಟದ ಕುರಿತು ರಚಿಸಿದ ಕಾದಂಬರಿ.

    Original price was: $2.16.Current price is: $1.30.
    Add to basket
  • -40%

    ಗೌರೀಪುರ

    0

    ಗೌರೀಪುರ ಕಾದಂಬರಿಯು ನಗರದ ಜೀವನ, ಅಲ್ಲಿಯ ತಲ್ಲಣಗಳು, ಧಾವಂತ, ಹಳ್ಳಿಯ ಜೀವನ ಶೈಲಿ, ಅಲ್ಲಿಯ ಆತ್ಮೀಯತೆ ಇವುಗಳನ್ನು. ಹನ್ನೆರಡು, ಹದಿಮೂರು ವರ್ಷದ ಯುವ ಬಾಲಕನ ಕಣ್ಣಿನಿಂದ ನಗರವನ್ನು ಹಾಗೂ ಹಳ್ಳಿಯನ್ನು ನೋಡುವ ತಂತ್ರವು ಇಲ್ಲಿದೆ.

    Original price was: $1.20.Current price is: $0.72.
    Add to basket
  • -40%

    ಸಾವಿತ್ರಿಬಾಯಿ ಫುಲೆ

    0

    ಸಾವಿತ್ರಿಬಾಯಿ ಫುಲೆ ಈ ಕಾದಂಬರಿಯು ಜ್ಯೋತಿಬಾ ಫುಲೆಯವರ ಧರ್ಮಪತ್ನಿಯಾದ ಸಾವಿತ್ರಿಬಾಯಿ ಫುಲೆಯವರ ಜೀವನ ಹಾಗೂ ಅವರು ಮಾಡಿದ ಸಾಮಾಜಿಕ ಸೇವೆಗಳ ಚಿತ್ರಣವನ್ನು ಒಳಗೊಂಡಿದೆ.

    Original price was: $1.80.Current price is: $1.08.
    Add to basket
  • -40%

    ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು

    0

    ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು
    ಪ್ರೊ. ಪಿ. ಶ್ರೀಕೃಷ್ಣ ಭಟ್
    ಪ್ರೊ.ಪಿ.ಕೃಷ್ಣ ಭಟ್ಟರ ‘ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು’ ಕನ್ನಡ ವಿದ್ವತ್ ಪರಂಪರೆಯನ್ನು ನೆನಪಿಸುವ ಕೃತಿ. ಇದರಲ್ಲಿ ವ್ಯಾಕರಣದ ಜಟಿಲ ಸಮಸ್ಯೆಗಳನ್ನು ಸರಳವಾಗಿ ವಿವರಿಸಲಾಗಿದೆ. ಸಂಸ್ಕೃತದ ಪ್ರಭಾವವನ್ನು ಕನ್ನಡದ ಸ್ವಂತಿಕೆಯನ್ನು ಸ್ಪಷ್ಟವಾಗಿ ಗುರುತಿಸಿ ವಿವರಿಸುವ ಕೃತಿಗಳು ಕನ್ನಡದಲ್ಲಿ ವಿರಳ. ವ್ಯಾಕರಣ ಶಾಸ್ತ್ರಗಳು ಕಾಲಾತೀತಾದ ವಿಚಾರಗಳೆಂಬಂತೆ ಅಧ್ಯಯನ  ಕ್ಷೇತ್ರದಿಂದ ಮರೆಯಾಗುತ್ತಿವೆ.  ಭಾಷಾ ಕಲಿಕೆಗಾಗಲಿ, ಸಾಹಿತ್ಯ ಓದಿಗಾಗಲಿ ವ್ಯಾಕರಣದ ಹಂಗಿಲ್ಲದಿರಬಹುದು. ಆದರೆ ಹಳಗನ್ನಡ ಕಾವ್ಯಗಳನ್ನು ಓದಿ ಭಾಷೆಯ ವೈಶಿಷ್ಟ್ಯವನ್ನು ಅರ್ಥೈಸಿಕೊಳ್ಳಬೇಕಾದರೆ ವ್ಯಾಕರಣ ವಿಶೇಷವನ್ನು ತಿಳಿದಿರಬೇಕಾದುದು ಅವಶ್ಯ. ಭಾಷೆಯ ಹಾಗೂ ಸಾಹಿತ್ಯದ ಇತಿಹಾಸದಲ್ಲಿ ವ್ಯಾಕರಣಕ್ಕೆ ಈ ನೆಲೆಯಿಂದ ಪ್ರಾಶಸ್ತ್ಯವಿದೆ. ಕನ್ನಡ ವ್ಯಾಕರಣ ಪರಂಪರೆಯನ್ನು ಸ್ಪಷ್ಟವಾಗಿ ತಿಳಿಸುವ ಆಕರಗ್ರಂಥವಾಗಿ ಇದು ಗಮನ ಸೆಳೆಯುತ್ತದೆ. ಆಳವಾದ ಅಧ್ಯಯನ, ಖಚಿತವಾದ ತಿಳುವಳಿಕೆ, ಅಗಾಧವಾದ ಪಾಂಡಿತ್ಯದಿಂದ ಸ್ಫುರಿಸಿದ ಪರಂಪರಾಗತ ವ್ಯಾಕರಣ ವಿಚಾರಗಳನ್ನು ಸಮಕಾಲೀನ ಭಾಷಾಭಿತ್ತಿಯಲ್ಲಿ ಅಭಿವ್ಯಕ್ತಗೊಳಿಸಿದ ಸರಳ ನಿರೂಪಣೆಯ ಈ ಗ್ರಂಥ ಕನ್ನಡ ಅಧ್ಯಯನ ಕ್ಷೇತ್ರಕ್ಕೊಂದು ಅನನ್ಯ ಕೊಡುಗೆಯಾಗಿದೆ.

    Original price was: $3.60.Current price is: $2.16.
    Add to basket
  • -40%

    ವಿವಕ್ಷಾ

    0

    ವಿವಕ್ಷಾ
    ಕಳೆದ ಒಂದು ದಶಕದಿಂದ ಗಂಭೀರವಾದ ಸಂಶೋಧನೆಯನ್ನು ಕೈಗೊಂಡ ಡಾ.ಲಲಿತ ಕೆ.ಪಿ.ಅವರು ತಮ್ಮ ಡಾಕ್ಟರೇಟ್ ಪದವಿ ಪಡೆಯುವ ಮೊದಲು ‘ವಿವಕ್ಷಾ’ . ಕೊಡಗಿನ ಮೂಲೆ ಮೂಲೆಗಳಲ್ಲಿ ಓಡಾಡಿ ಸಂಗ್ರಹಿಸಿದ ಮೌಖಿಕ ಆಕರಗಳನ್ನು  ಪ್ರಕಟಗೊಂಡ ಸಂಶೋಧನಾ ಕ್ರತಿಗಳ ಹಾಗೂ ಪ್ರಚಲಿತದಲ್ಲಿರುವ ಸೈದ್ಧಾಂತಿಕ ಪರಿಪೇಕ್ಷ್ಯಗಳ ಜೊತಗೆ ತುಲನೆ ಮಾಡಿ ಕೊಡಗಿನ ಸಾಹಿತ್ಯ, ಜಾನಪದ,ಚರಿತ್ರೆ, ಭಾಷಾ ವಿಜ್ಞಾನಕ್ಕೆ ಸಂಬಂಧಿಸಿದಂತಹ ಉತ್ಕೃಷ್ಠ ಮಾಹಿತಿಗಳನ್ನು ಡಾ.ಲಲಿತ ಅವರು  ಸೈದ್ಧಾಂತಿಕರಿಸಿದ್ದಾರೆ. ಭಾಷೆ ಹಾಗೂ ಸಮಾಜ ವಿಜ್ಞಾನಗಳ ಅಧ್ಯಯನಗಳಲ್ಲಿ ತೊಡಗಿಸಿಕೊಂಡ ಸಂಶೋಧಕರಿಗೆ ಈ ಕೃತಿ ಭಿನ್ನವಾದ ಒಳನೋಟಗಳನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. 

    Original price was: $1.20.Current price is: $0.72.
    Add to basket
  • -40%

    ಸ್ತ್ರೀ ಎಂದರೆ ಅಷ್ಟೇ ಸಾಕೆ

    0

    ಸ್ತ್ರೀ ಎಂದರೆ ಅಷ್ಟೇ ಸಾಕೆ
    ವಿಚಾರ ವಿಮರ್ಶಾ ಲೇಖನಗಳು
    ಡಾ. ಎಚ್ ಎಲ್ ಪುಷ್ಪ ಅವರ ‘ಸ್ತ್ರೀ ಅಂದರೆ ಅಷ್ಟೇ ಸಾಕೆ’ ಕೃತಿಯು ಸ್ತ್ರೀಕೇಂದ್ರಿತ ಬರವಣಿಗೆಯಾಗಿದ್ದು, ಅವರೇ ಹೇಳುವಂತೆ ಇಲ್ಲಿನ ಲೇಖನಗಳು ಬೇರೆ ಬೇರೆ ಸಂದರ್ಭ ಗಳಲ್ಲಿ ಸಿದ್ಧವಾಗಿವೆ. ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಲೇಖನಗಳು, ಆಡಿದ ಮಾತುಗಳ ಲೇಖನ ರೂಪಗಳೆಲ್ಲವೂ ಈ ಕೃತಿಯಲ್ಲಿ ಸೇರಿವೆ. 
    ಸ್ತ್ರೀ ಸಂವೇದನೆ, ಚಿಂತನೆ, ಸಾಹಿತ್ಯದ ಮೇಲಿನ ಚರ್ಚೆ, ವಿಮರ್ಶೆಗಳು ಮದ್ದು ಹುಡುಕುವುದಕ್ಕಿಂತ ಹೆಚ್ಚು ಕುಂದು ಕೇರುವುದರಲ್ಲೇ ನಿರತವಾಗಿವೆ. ಆದ್ರೆ ಎಚ್ ಎಲ್ ಪುಷ್ಪ ಅವರಿಗೆ ಕುಂದು ಕೇರುವುದರಿಂದ ಜಾಡ್ಯ ಹರಿಯುವುದಿಲ್ಲ ಎಂದು ಖಚಿತವಾಗಿ ತಿಳಿದಂತಿದೆ. ಹಾಗಾಗಿ ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಓದುವಾಗ ಈವರೆಗಿನ ಉಸಿರು ಬಿಗಿತದಿಂದ ಬಿಡುಗಡೆಗೊಂಡ ಅನುಭವವಾಗುತ್ತದೆ.
    ಬೆಡಗಿನ ವಚನಕಾರ್ತಿಯರಿಂದ ಮೊದಲಗೊಂಡು ಬಿ ಟಿ ಜಾಹ್ನವಿಯವರೆಗೆ, ಕಾರಂತರ ಮೈಮನಗಳ ಕಡಲ ಸುಳಿಯಿಂದ ಹಿಡಿದು ಮಹಾದೇವರ ದೇವನೂರಿನ ಸ್ತ್ರೀ ಬಯಲಿನವರೆಗೆ ಕನ್ನಡ ಸಾಹಿತ್ಯ ಶರಧಿಯ ಹಿರಿ-ಕಿರಿಯ ಬಂದರುಗಳಲ್ಲೆಲ್ಲಾ ಲಿಂಗಭೇಧವಿಲ್ಲದೆ ಲಂಗರು ಹಾಕಿ ಈವರೆಗೂ ಅವರಿವರು ಕಾಣದ್ದನ್ನು ಕಣ್ಣಿಗೆ ತುಂಬಿಕೊಂಡು ಯಾವ ಯಗಟು-ಒಗಟುಗಳಿಲ್ಲದೆ ಮಾಡಿದ ಪಕ್ಕಾ ಸಿದಾಸಾದ ಸಿರಿವಂತ ಮಂಡನೆ ಇಲ್ಲಿದೆ.ದತ್ತ ಓದು, ಪಕ್ವನೋಟ, ಪಕ್ಷಪಾತ, ವಕೀಲಿಗಳಿಲ್ಲದ ಇಲ್ಲಿಯ ದಿಟ್ಟ ಬರಹಗಳು ಅನನ್ಯ ಒಳನೋಟದಿಂದಾಗಿ ಓದುಗರನ್ನು ತಟ್ಟುತ್ತವೆ.

    Original price was: $2.40.Current price is: $1.44.
    Add to basket
  • -40%

    ಕಂಪನಿ ನಾಟಕ ಅರ್ಥಾತ್ ವೃತ್ತಿರಂಗಭೂಮಿ

    0

    ಕಂಪನಿ ನಾಟಕ ಅರ್ಥಾತ್ ವೃತ್ತಿರಂಗಭೂಮಿ

    ವೃತ್ತಿರಂಗಭೂಮಿಯ ತಲಸ್ಪರ್ಶಿಯಾದ ಅಧ್ಯಯನಗಳು ಕನ್ನಡದಲ್ಲಿ ವಿರಳ. ಹಾಗಿರುವಲ್ಲಿ ವೃತ್ತಿರಂಗಭೂಮಿಯು ಬೆಳೆದುಬಂದ ಬಗೆಗೆ ಅಧಿಕೃತ ಮಾಹಿತಿಗಳನ್ನು  ಇರಿಸಿಕೊಂಡು ಮಾಡಿದ ಈ ಅಧ್ಯಯನ ಮುಖ್ಯವಾಗುತ್ತದೆ. ಸ್ವತಹ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಶ್ರೀ ಪ್ರಕಾಶ ಗರುಡರು ರಂಗಭೂಮಿಯ ಏಳುಬೀಳುಗಳನ್ನು ಹತ್ತಿರದಿಂದ ಬಲ್ಲವರು. ಅವುಗಳನ್ನು ಮುಖ್ಯ ಆಕರವಾಗಿಸಿ ಐತಿಹಾಸಿಕವಾಗಿ ವೃತ್ತಿ ರಂಗಭೂಮಿಯ ಬೆಳವಣಿಗೆಯನ್ನು ಅವುಗಳ ವಿವಿಧ ಅಯಾಮಗಳನ್ನು ಗುರುತಿಸುವ ಪ್ರಯತ್ನ ಈ ಪುಸ್ತಕದಲ್ಲಿದೆ. ಹಾಗಾಗಿ ಈ ಬರೆಹ ವೃತ್ತಿರಂಗಭೂಮಿಯ ಸಂದರ್ಭದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

    Original price was: $3.12.Current price is: $1.87.
    Add to basket
  • -40%

    ನೋಡಿರಿ ಧರ್ಮಜ ಫಲುಗುಣಾದಿಗಳು

    0

    ಯಕ್ಷಗಾನರಂಗದಲ್ಲಿ ಶಂಭು ಹೆಗಡೆ ಅಪರೂಪದ ವ್ಯಕ್ತಿ. ಮೇಳದ ಬಗೆಗೆ, ತಮ್ಮ ಮೇಳದ ಕಲಾವಿದರ ಬಗೆಗೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನ, ಸುದ್ದಿ, ಫೋಟೋ ಇತ್ಯಾದಿಗಳನ್ನು ಸಂಗ್ರಹಿಸಿಡುವ ಪ್ರವೃತ್ತಿಯುಳ್ಳವರು. ಅದೇ ಪ್ರವೃತ್ತಿಯು ಶಿವಾನಂದ ಹೆಗಡೆಯವರಲ್ಲೂ ಮುಂದುವರೆದಿದೆ. ಈ ಸಂಗ್ರಹದ ರಾಶಿಯಿಂದ ಆಯ್ದ ಲೇಖನಗಳನ್ನೆಲ್ಲಾ ಪ್ರಕಟಿಸುವುದೆಂದರೆ ಸಾವಿರಾರು ಪುಟಗಳೇ ಆದಾವು. ಹಾಗಾಗಿ ಅವುಗಳಿಂದ ಆಯ್ದ ಕೆಲವು ಲೇಖನಗಳನ್ನು ಮಾತ್ರ ಈ ಪುಸ್ತಕದಲ್ಲಿ ಪ್ರಕಟಿಸಲಾಗಿದೆ.

     
    ಯಕ್ಷಗಾನ ಚರಿತ್ರ್ರೆಯ ದೃಷ್ಟಿಯಿಂದ ಈ ತೆರನಾದ ಪುಸ್ತಕಕ್ಕೆ ಮಹತ್ವವಿದೆ. ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳು ಅಧ್ಯಯನಾಸಕ್ತರಿಗೆ ಪ್ರಯೋಜನಕಾರಿಗಳಾಗಿದ್ದರೂ ಅವುಗಳನ್ನು ಅರಸುವುದು ಶ್ರಮದಾಯಕ. ಆದರೆ ಪುಸ್ತಕ ರೂಪದಲ್ಲಿ ಬಂದರೆ ಸುಲಭವಾಗಿ ಲಭಿಸುತ್ತದೆ. ಅಧ್ಯಯನ ಮಾಡುವವರ ಶ್ರಮ, ಹಣ ಎರಡರ ಉಳಿತಾಯವೂ ಆಗುತ್ತದೆ. ಹಾಗಾಗಿ ಅಲ್ಲಲ್ಲಿ ಚದುರಿಕೊಂಡಿದ್ದ ಲೇಖನಗಳನ್ನು ಒಂದೆಡೆಗೆ ತರುವ ಪ್ರಯತ್ನ ಈ ಪುಸ್ತಕ.
     
    ಶಿವರಾಮ ಕಾರಂತರು, ಲಂಕೇಶ್, ತದ್ದಲಸೆ ಶರ್ಮಾ, ಲೈಫ್ 360 ಪತ್ರಿಕೆಯ ಬಿ.ಗಣಪತಿ ಹೀಗೆ ಹಿರಿಯ-ಕಿರಿಯ ಲೇಖಕರ ಬರವಣಿಗೆಯ ಗುಚ್ಛವೇ “ನೋಡಿರಿ ಧರ್ಮಜ ಫಲುಗುಣಾದಿಗಳು”
    Original price was: $1.44.Current price is: $0.86.
    Add to basket
  • -40%

    ಚಂದ್ರಶೇಖರ ಕಂಬಾರರ ಕಾವ್ಯಭಾಷೆ

    0

    ಚಂದ್ರಶೇಖರ ಕಂಬಾರರ ಕಾವ್ಯಭಾಷೆ

    ಸಾಹಿತ್ಯದಲ್ಲಿ ಭಾಷೆಗೆ ವಿಶಿಷ್ಟವಾದ ಸ್ಥಾನವಿದೆ. ಭಾಷೆಯನ್ನು ಸಾಹಿತ್ಯದಿಂದ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಅದು ಅಭಿನ್ನ. ಏಕೆಂದರೆ ಸಾಹಿತ್ಯ ಸಂಭವಿಸುವುದು ಭಾಷೆಯ ಮೂಲಕವೇ. ಸಹೃದಯರು ಗ್ರಹಿಸುವ ವಸ್ತು, ಭಾಷೆಯ ಮೂಲಕವೇ ವಿಶಿಷ್ಟವಾದ ಅರ್ಥವನ್ನು ಪಡೆದುಕೊಂಡು ಸೃಷ್ಟಿಯಾಗುತ್ತದೆ. ಭಾಷೆಯ ಮೂಲಕವೇ ಕಾವ್ಯ ವಸ್ತುವಿನ ಸೂಕ್ಷ್ಮವಿನ್ಯಾಸಗಳು, ಪದರುಗಳು, ಭಾವಗಳು, ಸೂಕ್ಷ್ಮಕಂಪನಗಳು, ವೈವಿಧ್ಯ ಪೂರ್ಣವಾಗಿ ಪ್ರಕಟವಾಗುತ್ತವೆ. ಕಾವ್ಯಭಾಷೆ ಎನ್ನುವುದು ವ್ಯಾವಹಾರಿಕ ಭಾಷೆಗಿಂತ ಭಿನ್ನವಾದುದು. ಕಾವ್ಯಭಾಷೆಗಿರುವ ಸೂಕ್ಷ್ಮಸ್ತರಗಳು ವ್ಯಾವಹಾರಿಕ ಭಾಷೆಯಲ್ಲಿ ಕಾಣಿಸುವುದಿಲ್ಲ. ಕಾವ್ಯಭಾಷೆ ಖಾಸಗಿಯಾಗುತ್ತ ಅದು ಕವಿಯ ಒಳಜಗತ್ತಿಗೆ ಸಹೃದಯರನ್ನು ಒಯ್ದುಬಿಡುತ್ತದೆ. ಕನ್ನಡ ಕಾವ್ಯಲೋಕದಲ್ಲಿ ಭಾಷೆಯನ್ನು ಸಮರ್ಥವಾಗಿ ಬಳಸಿದ ಕವಿಗಳಲ್ಲಿ ಕಂಬಾರರು ಪ್ರಮುಖರು.
    ಕಂಬಾರರು, ಬೇಂದ್ರೆ, ಬೆಟಗೇರಿ ಅವರ ಪ್ರಭಾವವನ್ನು ಪಡೆದುಕೊಳ್ಳುತ್ತಲೇ ಕ್ರಮೇಣ ಆ ಪ್ರಭಾವದಿಂದ ಮುಕ್ತರಾಗಿ ಭಿನ್ನಮಾರ್ಗ ಹಿಡಿದರು; ಬೆಳೆದರು. ಭಾಷೆ, ಛಂದಸ್ಸು, ವಸ್ತು, ಪ್ರತಿಮೆ ಎಲ್ಲವೂ ಕಂಬಾರರ ಕಾವ್ಯದಲ್ಲಿ ಭಿನ್ನವಾಯಿತು.

    Original price was: $1.44.Current price is: $0.86.
    Add to basket
  • -40%

    ಸುಪ್ರಸಿದ್ಧ ಭಾಷಣಗಳು

    0

    ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ
    ಸುಪ್ರಸಿದ್ಧ ಭಾಷಣಗಳು
    ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಮಾಡಿದ ೨೯ ಭಾಷಣಗಳ ಸಂಕಲನವಿದು. ಈ ಸಂಗ್ರಹದಲ್ಲಿ ಬಾಬಾಸಾಹೇಬರು ಆರಂಭದಲ್ಲಿ ಮಾಡಿದ ಹಲಕೆಲ ಭಾಷಣಗಳ ಜೊತೆಗೆ ಅವರು ಸಾರಾನಾಥದಲ್ಲಿ ಮಾಡಿದ ಐತಿಹಾಸಿಕ ಕೊನೆಯ ಭಾಷಣವೂ ಅಡಕವಾಗಿದೆ. ಅವರ ಮಾತುಗಳಲ್ಲಿ ಅವರಿಗೆ ದಲಿತರ ಬಗ್ಗೆ ಇದ್ದ ಕಳಕಳಿ, ಪ್ರೀತಿ ಹಾಗೂ ಅಸ್ವಸ್ಥತೆ(restlessness) ಗೊತ್ತಾಗುತ್ತದೆ. ಬೌದ್ಧ ಧರ್ಮವನ್ನು ಆಳವಾಗಿ ಅಭ್ಯಾಸ ಮಾಡಿದ ಬಾಬಾಸಾಹೇಬರು ತಮ್ಮ ಭಾಷಣಗಳಲ್ಲಿ ಅದರ ತಿರುಳನ್ನು ಹೇಳಿದ್ದಾರೆ.

    Original price was: $1.44.Current price is: $0.86.
    Add to basket
  • -40%

    ಯಕ್ಷಗಾನ ಸ್ಥಿತ್ಯಂತರ

    0

    ಯಕ್ಷಗಾನ ಸ್ಥಿತ್ಯಂತರ
    (ಸಂಶೋಧನ ಲೇಖನಗಳು)
    ಯಕ್ಷಗಾನವು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬರಲು ಸಾಂಸ್ಕೃತಿಕವಾಗಿ ಹತ್ತು ಹಲವು ಕಾರಣಗಳಿವೆ. ಈ ಸ್ಥಿತ್ಯಂತರಗಳನ್ನು ಶೈಕ್ಷಣಿಕ ಶಿಸ್ತು ಹಾಗೂ ವಿಮರ್ಶಾತ್ಮಕ ಒಳನೋಟಗಳಿಂದ ಇಲ್ಲಿನ ಲೇಖನಗಳು ದಾಖಲಿಸಿವೆ. ಯಕ್ಷಗಾನದ ಕುರಿತಂತೆ ಬಂದಿರುವ ಬರವಣಿಗೆಗಳಿಗೆ  ವಿನೂತನ ಆಯಾಮವನ್ನು ನೀಡಬಲ್ಲ ಆಲೋಚನೆಗಳು ಪ್ರಸ್ತುತ ಗ್ರಂಥದ ಲೇಖನಗಳಲ್ಲಿ ಹರಳುಗೊಂಡಿವೆ. 

    Original price was: $2.40.Current price is: $1.44.
    Add to basket
  • -40%

    ತೋಟಿಯ ಮಗ

    0

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ತಗಳಿ ಶಿವಶಂಕರ ಪಿಳ್ಳೆ ಅವರ ಮಲಯಾಳಂ ಕಾದಂಬರಿಯ ಕನ್ನಡಾನುವಾದ
    ತೋಟಿಯ ಮಗ
    ಮೋಹನ ಕುಂಟಾರ್
    ತೋಟಿಯುಡೆ ಮಗನ್  ಕಾದಂಬರಿಯು ತಗಳಿ ಶಿವಶಂಕರ ಪಿಳ್ಳೆಯವರ ಬಹುಮುಖ್ಯ ಕಾದಂಬರಿಗಳಲ್ಲಿ ಒಂದು. ಅದನ್ನು ಕುಂಟಾರ್ ಅವರು ಮೂಲ ಸಾಂಸ್ಕೃತಿಕ ಸನ್ನಿವೇಶಕ್ಕೆ ಧಕ್ಕೆಬಾರದಂತೆ ಕನ್ನಡದಲ್ಲಿ ಸಂವಹನ ಸುಲಭವಾಗಿ ಅನುವಾದ ಮಾಡಿದ್ದಾರೆ.

    Original price was: $1.44.Current price is: $0.86.
    Add to basket
  • -40%

    ಮೆಲುದನಿ

    0

    ಮೆಲುದನಿ
    ಡಾ. ಪುರುಷೋತ್ತಮ ಬಿಳಿಮಲೆಯವರ ಓದು ಎಷ್ಟು ವ್ಯಾಪಕವಾದುದು ಎಂಬುದಕ್ಕೆ ಇಲ್ಲಿನ ಲೇಖನಗಳು ಹಾಗೂ ಮುನ್ನುಡಿಗಳೇ ಸಾಕ್ಷಿ ನುಡಿಯುತ್ತವೆ. ಹಿರಿಯ-ಕಿರಿಯ ಬರಹಗಾರರು ಎಂಬ ಭೇದವಿಲ್ಲದೆ ಎಲ್ಲರನ್ನೂ ಓದುವ, ಓದಿದುರ ಬಗೆಗೆ ನಾಲ್ಕು ಮಾತು ಬರೆದು ಗುಣಾವಗುಣಗಳನ್ನು ನಿರ್ದಾಕ್ಷಿಣ್ಯವಾಗಿ ಹೇಳುವ ಪ್ರಾಮಾಣಿಕ ನಿಷ್ಠೆ ಇಲ್ಲಿನ ಲೇಖನಗಳಲ್ಲಿ ವ್ಯಕ್ತವಾಗಿದೆ. ಸಾಹಿತ್ಯ, ಜಾನಪದ ವಲಯಗಳಲ್ಲಿ ಪ್ರಮುಖ ಚಿಂತಕರೂ ಬರಹಗಾರರೂ ಆದ ಡಾ. ಬಿಳಿಮಲೆಯವರ ಮುನ್ನುಡಿಗಳಲ್ಲಿ ಬರಹಗಾರರು ಸಾಗುವ ದಿಕ್ಕನ್ನು ಖಚಿತವಾಗಿ ತೆರೆದು ತೋರಿಸುವ ಗುಣವಿದೆ. ಎಲ್ಲವನ್ನು ವಸ್ತುನಿಷ್ಠವಾಗಿ ಪರಿಗ್ರಹಿಸುವ ದೃಷ್ಟಿಕೋನವೊಂದು ಇಲ್ಲಿ ಗಮನಸೆಳೆಯುತ್ತದೆ. 

    Original price was: $2.40.Current price is: $1.44.
    Add to basket
  • -40%

    ದಲಿತರ ಮೇಲಿನ ದೌರ್ಜನ್ಯ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳು

    0

    ದಲಿತರ ಮೇಲಿನ ದೌರ್ಜನ್ಯ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳು
    ಇಲ್ಲಿನ ಲೇಖನಗಳಲ್ಲಿ ದಲಿತರ ಸಮಕಾಲೀನ ಸಮಸ್ಯೆಗಳನ್ನು ಆತ್ಮೀಯವಾಗಿ ವಿಶ್ಲೇಷಿಸ ಲಾಗಿದೆ. ದಲಿತರ ಸಮಸ್ಯೆಗಳು ಮೇಲ್ನೋಟಕ್ಕೆ ತೋರುವುದಕ್ಕಿಂತಲೂ ಭಿನ್ನವಾಗಿ ಅವುಗಳ ಆಂತರ್ಯವನ್ನು ಶೋಧಿಸಿರುವಲ್ಲಿ ಲೇಖಕರ ಸಾಮಾಜಿಕ ಕಾಳಜಿ ಸ್ಪಷ್ಟವಾಗುತ್ತದೆ. ಅಂಬೇಡ್ಕರ್ ಚಿಂತನೆಯನ್ನು ಮತ್ತು ದಲಿತ ಲೋಕವನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತ ಮತಾಂತರದ ಒಳ ಹೊರಗುಗಳನ್ನು ಸೂಕ್ಷ್ಮವಾಗಿ ಇಲ್ಲಿನ ಬರವಣಿಗೆಗಳಲ್ಲಿ ಓದುಗರ ಮುಂದಿಡಲಾಗಿದೆ. ದಲಿತ ಸಂಸ್ಕೃತಿಯನ್ನು ಕೇಂದ್ರೀಕರಿಸಿ ಬರೆದ ಇಲ್ಲಿನ ಲೇಖನಗಳು ಕನ್ನಡ ವಿಚಾರ ಪ್ರಪಂಚದಲ್ಲಿ ಹೊಸ ತಿಳುವಳಿಕೆಯನ್ನು ಮೂಡಿಸುವಲ್ಲಿ ಸಶಕ್ತವಾಗಿವೆ.

    Original price was: $1.20.Current price is: $0.72.
    Add to basket
  • -40%

    ಬಹುರೂಪ

    0

    ಬಹುರೂಪ
    ಡಾ. ಪುರುಷೋತ್ತಮ ಬಿಳಿಮಲೆಯವರು ಅಂಕಣದ ಮೂಲಕ ಹರಿಯಬಿಟ್ಟ ನಿರಂತರ ಅನುಭವ, ಆಲೋಚನೆಗಳ ಬರಹಗಳು ಒಂದೆಡೆ ಈ ಕೃತಿಯಲ್ಲಿ ದಾಖಲಾಗಿದೆ. ಸ್ಥಳೀಯತೆಯ ಸಂಸ್ಕೃತಿ ಮತ್ತು ಬದುಕಿನ ಆರಂಭದ ದಿನಗಳ ಅನುಭವದ ಮೂಲಕ ನಾಡನ್ನು ದೇಶವನ್ನು ಮತ್ತು ವಿಶ್ವವನ್ನು ಕಾಣುವ ದೃಷ್ಟಿಕೋನ; ಮೌಖಿಕ ಸಂಸ್ಕೃತಿಯನ್ನು ತಳದಲ್ಲಿ ಮತ್ತು ಕೇಂದ್ರದಲ್ಲಿ ಇಟ್ಟುಕೊಂಡು ಅದರ ಮೂಲಕ ಪುರಾಣ ಮತ್ತು ಶಿಷ್ಟಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದು; ಯಕ್ಷಗಾನ ರಂಗಭೂಮಿಯ ಆಕೃತಿಯ ಮೂಲಕ ರಾಷ್ಟ್ರೀಯ ಮತ್ತು ವಿಶ್ವದ ರಂಗಭೂಮಿ ಕಲೆಗಳನ್ನು ಅಭ್ಯಾಸ ಮಾಡುವುದು; ಭಾಷೆ ಮತ್ತು ನಾಡಿನ ಅನನ್ಯತೆಯನ್ನು ಸ್ಥಾಪಿಸಲು ನಿರ್ದಿಷ್ಟ ಯೋಜನೆಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು; ಜಾತೀಯತೆ ಮತ್ತು ಕೋಮುವಾದಗಳು ಜನಪದ ಸಂಸ್ಕೃತಿಯ ಮೇಲೆ ನಡೆಸುತ್ತಿರುವ ಧಾಳಿಯನ್ನು ಸಂಸ್ಕೃತಿಯ ಒಳಗಿನಿಂದಲೇ ಪ್ರತಿರೋಧಿಸುವುದು; ಪರಂಪರೆಯ ಸಂಸ್ಕೃತಿಯನ್ನು ಗಲೀಜು ಮಾಡುವ ಆಧುನಿಕತೆಯ ಹುನ್ನಾರಗಳನ್ನು ಬಯಲು ಮಾಡುವುದು-ಇವೆಲ್ಲವನ್ನೂ ತಾಳಮದ್ದಲೆಯ ಅರ್ಥಗಾರಿಕೆಯಂತೆ ಹರಿಕತೆಯ ಪ್ರವಚನದಂತೆ ತುಂಬ ಆಪ್ತವಾಗಿ ಸ್ವಾರಸ್ಯಕರವಾಗಿ ಅನುಭವ ಕಥನ ಮತ್ತು ಗ್ರಂಥ ಪಠನಗಳ ಉಪಕತೆಗಳೊಂದಿಗೆ ಓದುಗರ ಜೊತೆಗೆ ಹಂಚಿಕೊಳ್ಳುವುದು. ಇದು ‘ಬಿಳಿಮಲೆ ಬಹುರೂಪ’ದ ಆಂಜನೇಯ ಶಕ್ತಿ.

    Original price was: $2.40.Current price is: $1.44.
    Add to basket
  • -40%

    ಮಾಟದೊಳಗಣ ನೋಟ

    0

    ಮಾಟದೊಳಗಣ ನೋಟ
    (ಶಿಲ್ಪಕಲೆ ಕುರಿತ ಬರೆಹಗಳು)
    ವಿಭಿನ್ನ ಮಾಧ್ಯಮಗಳ ಶಿಲ್ಪಕಲೆಗಳು ಭಾರತೀಯ ಸಂಸ್ಕೃತಿಯ ಅವಿಸ್ಮರಣೀಯ ಕುರುಹುಗಳು. ಹಾಗಾಗಿ ಸಮಕಾಲೀನ ದಿನಗಳಲ್ಲಿಯೂ ಸಾಂಪ್ರದಾಯಿಕ ಶಿಲ್ಪ ಕಲೆಗಳ ಬಗೆಗೆ ಪ್ರೀತಿ, ಆರಾಧನಾಭಾವ ಉಳಿದುಕೊಂಡಿದೆ. ಸಾಂಪ್ರದಾಯಿಕ ಶಿಲ್ಪ ಕಲೆಗಳ ರಚನಾ ವಿಧಾನ, ಹಿನ್ನೆಲೆ, ಅರ್ಥ, ಸ್ವರೂಪ ಇವುಗಳನ್ನು ಉಳಿಸಿಕೊಂಡು ಬಂದಿರುವ ಮನುಷ್ಯನ ನಂಬಿಕೆಗಳು ಇತ್ಯಾದಿಗಳೆಲ್ಲ “ಮಾಟದೊಳಗಣ ನೋಟ” ಪುಸ್ತಕದ ಲೇಖನಗಳಲ್ಲಿ ದಾಖಲಾಗಿವೆ.

    Original price was: $1.44.Current price is: $0.86.
    Add to basket
  • -40%

    ನಾದದ ನವನೀತ

    0

    ನಾದದ ನವನೀತ
    ಬೇಂದ್ರೆಯವರ ಕಾವ್ಯವನ್ನು ಕುರಿತಂತೆ ಆಳವಾದ ಅಧ್ಯಯನದಿಂದ ರೂಪುಗೊಂಡ ಲೇಖನಗಳು ಪುಸ್ತಕದಲ್ಲಿ ಅಡಕವಾಗಿವೆ. ನಾದದ ನವನೀತದಲ್ಲಿ ಹೊರಹೊಮ್ಮುವ ಭಾವಗೀತದ ಬಗೆಗಿನ ಬೇಂದ್ರೆಯವರ ಕಾವ್ಯತತ್ವವನ್ನು ವಿಸ್ತರಿಸುವ ಇಲ್ಲಿನ ಬರವಣಿಗೆ ಯಾವುದೇ ಕಾವ್ಯಾಭ್ಯಾಸಿಗೆ ಉಪಯುಕ್ತವಾಗಿದೆ. ಬೇಂದ್ರೆಯವರ ಕಾವ್ಯ ಮಥಿಸಿದಷ್ಟು ನವನೀತವಾಗಿ ಭಾವ, ಅರ್ಥ, ಗ್ರಾಹ್ಯವಾಗುವ ಪರಿ ವಿಸ್ಮಯಕಾರಿಯಾಗಿದೆ ಎಂಬುದನ್ನು ಪ್ರಸ್ತುತ ಕೃತಿಯ ಓದು ಖಚಿತ ಪಡಿಸುತ್ತದೆ.

    Original price was: $1.92.Current price is: $1.15.
    Add to basket
  • -40%

    ಬರಿ ನಿದ್ದೆಯಲ್ಲವೊ ಅಣ್ಣಾ!

    0

    ಬರಿ ನಿದ್ದೆಯಲ್ಲವೊ ಅಣ್ಣಾ!
    ವಿಷಯ-ವಿಚಾರ-ವಿಮರ್ಶೆ-ವಿಡಂಬನೆ-ವಿನೋದ
    ಡಾ. ಬಿ ಎಂ ಪುಟ್ಟಯ್ಯನವರ ‘ಬರಿ ನಿದ್ರೆಯಲ್ಲವೊ ಅಣ್ಣಾ!’ ಕೃತಿ ಸುತ್ತಮುತ್ತಲಿನ ಸಮಾಜದ ಜೊತೆ ಒಡನಾಟದಿಂದ ರೂಪುಗೊಂಡ ಬರವಣಿಗೆ. ಇಲ್ಲಿನ ಬರವಣಿಗೆ ಗಂಭೀರವಾದ ವಿಷಯವನ್ನು ವೈನೋದಿಕವಾಗಿ ನೋಡುವ ದೃಷ್ಟಿಕೋನದಿಂದಾಗಿ ಓದುಗರನ್ನು ಸೆಳೆಯುತ್ತವೆ. ಇಲ್ಲಿನ ಅನುಭವಗಳು ಎಲ್ಲರದೂ ಆಗಿದೆ. ಆದರೆ ಅದನ್ನು ನೋಡುವ ದೃಷ್ಟಿಕೋನದಿಂದಾಗಿ ಇಲ್ಲಿನ ಬರೆಹ ಅನನ್ಯವಾಗಿ ಓದುಗರಲ್ಲಿ ತಕ್ಷಣ ನಗೆಯುಕ್ಕಿಸುತ್ತವೆ. ಹಾಗೆಯೇ ಚಿಂತನೆಗೂ ಗುರಿಮಾಡುತ್ತವೆ ಎನ್ನುವುದೇ ವಿಶೇಷ.

    Original price was: $1.92.Current price is: $1.15.
    Add to basket
  • -40%

    ಜುಲೈ 22 1947

    0

    ಜುಲೈ ೨೨ ೧೯೪೭
    ಡಾ. ಸರಜೂ ಕಾಟ್ಕರ್
    ದೇಶಪ್ರೇಮವನ್ನು ಮನದಲ್ಲಿ ತುಂಬಿಕೊಂಡು ಜೀವನಪೂರ್ತಿ ನಿಷ್ಠಾವಂತರಾಗಿ ಬಾಳುವ ಅನೇಕರು ದೇಶದಲ್ಲಿರಬಹುದು. ಎಲೆಮರೆಯ ಕಾಯಂತೆ ಬದುಕಿದ ಸತ್ಯಪ್ಪನಂತಹ ದೇಶಭಕ್ತನ ಆದರ್ಶವನ್ನು ಕೇಂದ್ರ ಪ್ರಜ್ಞೆಯಾಗಿಟ್ಟುಕೊಂಡು ಮೂರು ತಲೆಮಾರುಗಳ ಕಥನವನ್ನು ಚಿತ್ರಿಸುವ ಕಾದಂಬರಿ ಇದು. ಇದರಲ್ಲಿ ಮೂರು ತಲೆಮಾರುಗಳ ಸಾಮಾಜಿಕ, ರಾಜಕೀಯ ಇತಿಹಾಸವೂ ಆನುಷಂಗಿಕವಾಗಿ ದಾಖಲಾಗಿದ್ದು, ಇದು ಕೇವಲ ಸತ್ಯಪ್ಪನ ಕತೆ ಮಾತ್ರವಾಗುಳಿಯದೆ ತಲೆಮಾರುಗಳ ನಡುವೆ ದೇಶನಿಷ್ಠೆಯ ಬಗೆಗಿನ ಸಂಘರ್ಷದ ಕತೆಯೂ ಆಗಿದೆ.

    Original price was: $1.20.Current price is: $0.72.
    Add to basket
  • -40%

    ಬಾಜೀರಾವ್ ಮಸ್ತಾನಿ

    0

    ಬಾಜೀರಾವ್ ಮಸ್ತಾನಿ
    ಡಾ. ಸರಜೂ ಕಾಟ್ಕರ್
    ಬಾಜೀರಾವ್ ಮಸ್ತಾನಿ ಒಂದು ಅದ್ಭುತವಾದ ಪ್ರೇಮದ ಕಥೆ. ಪುಣೆಯಲ್ಲಿ ಮಸ್ತಾನಿ ಮಹಲ್ ಎಂಬ ವಾಸ್ತು ಇದ್ದರೂ ಇತಿಹಾಸದ ಅಧಿಕೃತ ದಾಖಲೆಯಲ್ಲಿ ಎಲ್ಲೂ ಮಸ್ತಾನಿಯ ಉಲ್ಲೇಖವೇ ಬರುವುದಿಲ್ಲ. ಬಾಜೀರಾವ್ ನಿಂದ ಆಕೆಗೆ ಆದ ಮಗ ಸಮಶೇರ ಬಹಾದ್ದೂರ ಪಾನೀಪತ್ ದಲ್ಲಿ ನಡೆದ ಯುದ್ಧದಲ್ಲಿ ಕೊಲ್ಲಲ್ಪಟ್ಟ ಎಂದು ಹೇಳುವ ಇತಿಹಾಸ ಮಸ್ತಾನಿಯ ಬಗ್ಗೆ ಜಾಣ ಮೌನ ತೋರಿಸುತ್ತದೆ. ಆದರೆ ಲೋಕ ಸಾಹಿತ್ಯದಲ್ಲಿ, ಜಾನಪದ ಕಥಾ ಕಥನಗಳಲ್ಲಿ ಅಲ್ಲಲ್ಲಿ ಬಾಜೀರಾವ್-ಮಸ್ತಾನಿಯರ ಕಥೆ ಉಲ್ಲೇಖಿಸಲ್ಪಡುತ್ತದೆ.

    Original price was: $1.44.Current price is: $0.86.
    Add to basket
  • -40%

    ಭಯಮುಕ್ತ ಬದುಕಿನೆಡೆಗೆ…

    0

    ಭಯಮುಕ್ತ ಬದುಕಿನೆಡೆಗೆ…
    ಇಂಗ್ಲಿಶ್ ಮೂಲ: ಸಂತೋಷ್ ನಂಬಿಯಾರ್
    ಕನ್ನಡಾನುವಾದ: ಶೀನಾ ನಾಡೋಳಿ

    ಪ್ರೀತಿ, ಸಂತೋಷ, ಸ್ವಾತಂತ್ರ್ಯ, ಕರುಣೆ ಹಾಗೂ ಕ್ರಿಯಾತ್ಮಕವಾದ ಬದುಕಿಗೆ ಸವೆದ ದಾರಿ ಇಲ್ಲ. ಇದು ಈಗ, ವರ್ತಮಾನದಲ್ಲಿ, ಸಮಯರಹಿತ ಕ್ಷಣದಲ್ಲಿ ಮಾತ್ರ ಸಂಭವಿಸಲು ಸಾಧ್ಯ. ಯೋಚನೆಯ ಚಲನೆ ನಿಂತು ಸುಳ್ಳು ‘ಅಹಂ’ ಕರಗಿದಾಗ ಭಯವು ಇಲ್ಲವಾಗುವುದು…. ಎಂದು ಹೇಳುತ್ತ ನಂಬಿಯಾರ್ ಅವರು ಎಲ್ಲರ ಯೋಚನೆಗಳು ಹೊಸ ದಿಕ್ಕಿನತ್ತ ತೆರೆದುಕೊಳ್ಳುವಂತೆ ಮಾಡುವ ಪ್ರಯತ್ನ ಮಾಡಿದ್ದಾರೆ.

    Original price was: $0.60.Current price is: $0.36.
    Add to basket
  • -40%

    ಅಂತರ್ಮುಖ

    0

    ಅಂತರ್ಮುಖ
    ಜಗತ್ತು ಅನೇಕ ವಿಸ್ಮಯಗಳನ್ನು ತನ್ನೊಳಗೆ ಹುದುಗಿಸಿಕೊಂಡಿದೆ. ವಾಸ್ತವದಲ್ಲಿ ಗೋಚರವಾಗುವ ಸಂಗತಿಗಳೆಲ್ಲವೂ ವಿಸ್ಮಯಕರವೇ ಆಗಿವೆ. ಆದರೆ ಅವುಗಳನ್ನು ನೋಡುವ ಕಣ್ಣು ಮಾತ್ರ ಬೇಕು. ವೀಣಾ ಬನ್ನಂಜೆ ಅವರು ಅಂತಹ ಅನೇಕ ಸೋಜಿಗದ ಸಂಗತಿಗಳನ್ನು ಕಾಣುವ ದೃಷ್ಟಿಯುಳ್ಳವರು. ಇಲ್ಲಿನ ಲೇಖನಗಳಲ್ಲಿ ವಾಸ್ತವದ ಅನೇಕ ಘಟನೆಗಳನ್ನು ಅನುಭಾವದ ವತಿಯಿಂದ ಅಗೋಚರವಾದ ಅಮೂರ್ತದೆಡೆಗೆ ವಿಸ್ತರಿಸಿಕೊಳ್ಳುವ ದಾವಂತವನ್ನು ಕಾಣಬಹುದು. ವೀಣಾ ಅವರ ಬರವಣಿಗೆ ಹಾಗೂ ಚಿಂತನೆಯ ವೈಶಿಷ್ಟ್ಯವನ್ನು ಇಲ್ಲಿನ ಲೇಖನಗಳು ಸ್ಫುಟವಾಗಿ ದಾಖಲಿಸುವ ಕಾವ್ಯಾತ್ಮಕ ರಚನೆಗಳಾಗಿ ಗಮನ ಸೆಳೆಯುತ್ತವೆ.

    Original price was: $0.96.Current price is: $0.58.
    Add to basket
  • -40%

    ಕಾತರ

    0

    ಕಾತರ
    ಕವನ ಸಂಕಲನ
    ಶ್ರೀಯುತ ನಜೀರ ಚಂದಾವರ ಅವರ ‘ಕಾತರ’ ಕವನ ಸಂಕಲನ ತುಂಬಾ ವರ್ಷದ ಹಿಂದೆಯೇ ಪ್ರಕಟಗೊಂಡಿದ್ದು, ಇದು ಅವರ ಕಾಲೇಜು ಜೀವನದಲ್ಲಿ ಬರೆದಿದ್ದು.  ತಾವು ಕಂಡ ಸಮಾಜದ ಅಂಕುಡೊಂಕನ್ನೆ ತಮ್ಮ ಕವನದಲ್ಲಿ ದಾಖಲಿಸಿದ್ದಾರೆ. 

    Original price was: $1.08.Current price is: $0.65.
    Add to basket
  • -40%

    ಝೆನ್ ವೀರ ಹೈಕು

    0

    ಝೆನ್ ವೀರ ಹೈಕು
    ಹೈಕುಗಳಲ್ಲಿ ಶ್ರೀ ಚನ್ನವೀರ ಶರಣರ ಶ್ರೀನುಡಿಗಳು
    ‘ಶ್ರೀನುಡಿ’ಗಳಲ್ಲಿಯ ೨೦೦ ವಿಚಾರಗಳನ್ನು ಇಲ್ಲಿ ಎತ್ತಿಕೊಂಡು ಅವುಗಳನ್ನು ಹೈಕುಗಳಲ್ಲಿ ಬರೆಯಲಾಗಿದೆ.  ಉದ್ಬೋಧ ಕೃತಿಯಾದ ‘ಝೆನ್ ವೀರ ಹೈಕು’ ಡಾ.ಸರಜೂ ಕಾಟ್ಕರ್ ಅವರಿಂದ ರಚಿತವಾಗಿದೆ. ಝೆನ್ ಕಥಾ ಸಾಹಿತ್ಯವು ವಿಷಿಕ್ಷ್ಟವಾದದ್ದು. ಇಲ್ಲಿ ಗುರುಶಿಷ್ಯರ ಸಂಭಾಷಣೆ ನಡೆಯುತ್ತದೆ. ಗುರುವಾದವನು ಶಿಷ್ಯನ ತಲೆಯಲ್ಲಿ ವಿಚಾರಗಳೆಂಬ ಹುಳುಗಳನ್ನು ಬಿಡುತ್ತಾನೆ . ಶಿಷ್ಯ  ಅದನ್ನು ಹೇಗಾದ್ರೂ ಅರ್ಥೈಸಿಕೊಳ್ಳಬಹುದು. ವಿಚಾರಗಳೆಂಬ ಹುಳುಗಳು ಸದಾಕಾಲ ಶಿಷ್ಯನ ತಲೆಯನ್ನು ತಿನ್ನುತ್ತಲೇ ಇರುತ್ತವೆ. ಅವನು ಅರ್ಥೈಸಿಕೊಂಡಷ್ಟು ಗುರುವಿನ ಸೂತ್ರರೂಪಿ ನಿರ್ವಚನಗಳು ವಿಸ್ತಾರವನ್ನು ಪಡ್ದೆದುಕೊಳ್ಳುತ್ತಾ ಹೋಗುತ್ತವೆ. ಹೀಗೆಂದು ಬಗೆದು ಹಿರಿಯರಾದ ಡಾ.ಸರಜೂ ಕಾಟ್ಕರ್ ‘ಹೈಕು’ ಪ್ರಕಾರದಲ್ಲಿ ಚನ್ನವೀರ ಶರಣರ ಶ್ರೀನುಡಿಗಳಿಗೆ ಹೊಸ ಉಡುಗೆಯನ್ನು  ತೊಡಿಸಿದ್ದಾರೆ. ಚನ್ನವೀರ ಶರಣರನ್ನು ಝೇನ್ ವೀರ ಶರಣರೆಂದು ಪರಿಭಾವಿಸಿದ್ದಾರೆ. 

    Original price was: $0.72.Current price is: $0.43.
    Add to basket
  • -40%

    ಅಂಬೇಡ್ಕರ್ ದೃಷ್ಟಿಯಲ್ಲಿ ದಲಿತರು ಮತ್ತು ಮತಾಂತರ

    0

    ಅಂಬೇಡ್ಕರ್ ದೃಷ್ಟಿಯಲ್ಲಿ ದಲಿತರು ಮತ್ತು ಮತಾಂತರ
    ಇಲ್ಲಿನ ಲೇಖನಗಳಲ್ಲಿ ದಲಿತರ ಸಮಕಾಲೀನ ಸಮಸ್ಯೆಗಳನ್ನು ಆತ್ಮೀಯವಾಗಿ ವಿಶ್ಲೇಷಿಸಿಲಾಗಿದೆ. ದಲಿತರ ಸಮಸ್ಯೆಗಳು ಮೇಲ್ನೋಟಕ್ಕೆ ತೋರುವುದಕ್ಕಿಂತಲೂ ಭಿನ್ನವಾಗಿ ಅವುಗಳ ಅಂತರ್ಯವನ್ನು ಶೋಧಿಸಿರುವಲ್ಲಿ ಲೇಖಕರ ಸಾಮಾಜಕ ಕಾಳಜಿ ಸ್ಪಷ್ಟವಾಗುತ್ತದೆ. ಅಂಬೇಡ್ಕರ್ ಚಿಂತನೆಯನ್ನು ಮತ್ತು ದಲಿತ ಲೋಕವನ್ನು ಚಾರಿತ್ರಿಕ ಹಿನ್ನಲೆಯಲ್ಲಿ ವಿಶ್ಲೇಷಿಸುತ್ತ ಮತಾಂತರದ ಒಳ ಹೊರಗುಗಳನ್ನು ಸೂಕ್ಷ್ಮವಾಗಿ ಇಲ್ಲಿನ ಬರವಣಿಗೆಗಳಲ್ಲಿ ಓದುಗರ ಮುಂದಿಡಲಾಗಿದೆ. ದಲಿತ ಸಂಸ್ಕತಿಯನ್ನು ಕೇಂದ್ರೀಕರಿಸಿ ಬರೆದ ಇಲ್ಲಿನ ಲೇಖನಗಳು ಕನ್ನಡ ವಿಚಾರ ಪ್ರಪಂಚದಲ್ಲಿ ಹೊಸ ತಿಳುವಳಿಕೆಯನ್ನು ಮೂಡಿಸುವಲ್ಲಿ ಸಶಕ್ತವಾಗಿದೆ.

    Original price was: $2.40.Current price is: $1.44.
    Add to basket